ಆ್ಯಪ್ನಗರ

ಸೋಲಿನಿಂದ ನೋವಾಗಿದೆ; ಶ್ರೇಷ್ಠ ಪ್ರದರ್ಶನ ನೀಡಿದ್ದೇನೆ: ಸಿಂಧೂ

ಭಾರತದ ಅಗ್ರಮಾನ್ಯ ಮಹಿಳಾ ಬ್ಯಾಡ್ಮಿಂಟನ್ ಪಟು ಮಗದೊಂದು ಫೈನಲ್ ಮುಖಾಮುಖಿಯಲ್ಲಿ ಸೋಲು ಅನುಭವಿಸಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್‌ನಲ್ಲಿ ಸೋತು ಚಿನ್ನ ಕೈತಪ್ಪಿದ್ದ ಸಿಂಧೂಗೆ ಬಳಿಕ ವಿಶ್ವ ಚಾಂಪಿಯನ್ಸ್ ಮತ್ತು ಇತ್ತೀಚೆಗಷ್ಟೇ ಸಾಗಿದ ಸೂಪರ್ ಸಿರೀಸ್ ಫೈನಲ್ಸ್ ಟೂರ್ನಿಯಲ್ಲೂ ಅಂತಿಮ ಹಣಾಹಣಿಯಲ್ಲಿ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

TIMESOFINDIA.COM 27 Dec 2017, 4:22 pm
ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಮಹಿಳಾ ಬ್ಯಾಡ್ಮಿಂಟನ್ ಪಟು ಮಗದೊಂದು ಫೈನಲ್ ಮುಖಾಮುಖಿಯಲ್ಲಿ ಸೋಲು ಅನುಭವಿಸಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್‌ನಲ್ಲಿ ಸೋತು ಚಿನ್ನ ಕೈತಪ್ಪಿದ್ದ ಸಿಂಧೂಗೆ ಬಳಿಕ ವಿಶ್ವ ಚಾಂಪಿಯನ್ಸ್ ಮತ್ತು ಇತ್ತೀಚೆಗಷ್ಟೇ ಸಾಗಿದ ಸೂಪರ್ ಸಿರೀಸ್ ಫೈನಲ್ಸ್ ಟೂರ್ನಿಯಲ್ಲೂ ಅಂತಿಮ ಹಣಾಹಣಿಯಲ್ಲಿ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.
Vijaya Karnataka Web losing close finals hurt but i gave my best pv sindhu
ಸೋಲಿನಿಂದ ನೋವಾಗಿದೆ; ಶ್ರೇಷ್ಠ ಪ್ರದರ್ಶನ ನೀಡಿದ್ದೇನೆ: ಸಿಂಧೂ


ಇದೀಗ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ 22ರ ಹರೆಯದ ಭಾರತೀಯ ಬ್ಯಾಡ್ಮಿಂಟನ್ ತಾರೆ ಸಿಂಧೂ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಖಂಡಿತವಾಗಿಯೂ ಸೋಲು ನೋವು ತಂದಿದೆ. ಆದರೂ ನಿಕಟ ಪೈಪೋಟಿ ಒಡ್ಡಿ ಸೋತಿರುವುದಕ್ಕೆ ಯಾವುದೇ ಬೇಸರವಿಲ್ಲ. ನನ್ನ ಶ್ರೇಷ್ಠ ಪ್ರದರ್ಶನವನ್ನೇ ನೀಡಿದ್ದೇನೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಸಿಂಧೂ ಬಗ್ಗೆ ಪ್ರತ್ರಿಕೆಯ ನೀಡಿದ ಕೋಚ್ ಪುಲ್ಲೇಲ ಗೋಪಿಚಂದ್, ದುಬೈ ಸೂಪರ್ ಸಿರೀಸ್ ಫೈನಲ್ಸ್‌ನಲ್ಲಿ ಗುಂಪು ಹಂತದಲ್ಲಿ ಅಜೇಯ ಓಟ ಮುಂದುವರಿಸಿದ್ದ ಸಿಂಧೂಗೆ ಫೈನಲ್‌ನಲ್ಲಿ ಎದುರಾಗಿರುವ ಏಕಮಾತ್ರ ಸೋಲಿನಿಂದ ತುಲನೆ ಮಾಡಬಾರದು ಎಂದರು.

ಈ ವೇಳೆಯಲ್ಲಿ ಸ್ವಲ್ಪ ಭಾವುಕರಾದ ಸಿಂಧೂ, ತಮ್ಮ ಹೆತ್ತವರು ಮಾಡಿದ ತ್ಯಾಗದಿಂದಲೇ ನಾನೀಗ ಈ ಹಂತಕ್ಕೆ ತಲುಪಿದ್ದೇನೆ ಎಂದಿದ್ದಾರೆ.

ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ. ಆದರೆ ನನ್ನ ಹೆತ್ತವರು ನನ್ನ ಬೆಂಬಲಕ್ಕೆ ನಿಂತರು ಎಂದು ತಮ್ಮ ಬಾಲ್ಯ ಕಾಲದ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌