ಹೊಸದಿಲ್ಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ವಿರುದ್ಧ ಶನಿವಾರ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಬಾಕ್ಸಿಂಗ್ ಟ್ರಯಲ್ಸ್ನಲ್ಲಿ ಸೋತ ಹೈದರಾಬಾದ್ ಮೂಲದ ಬಾಕ್ಸರ್ ನಿಖತ್ ಜರೀನ್ ಭಾನುವಾರ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ, ''ನನ್ನ ಹೋರಾಟ ವ್ಯವಸ್ಥೆ ವಿರುದ್ಧವೇ ಹೊರತು ಮೇರಿ ಕೋಮ್ ಅಥವಾ ಭಾರತೀಯ ಬಾಕ್ಸಿಂಗ್ ಒಕ್ಕೂಟದ ವಿರುದ್ಧವಾಗಿರಲಿಲ್ಲ,'' ಎಂದು ಹೇಳಿದ್ದಾರೆ.
''ಇಂತಹ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಅಂದುಕೊಂಡಿರಲಿಲ್ಲ. ಕ್ರೀಡಾ ಸಚಿವರಿಗೆ ಪತ್ರ ಬರೆದಿರುವುದಕ್ಕೆ ಮೇರಿ ಕೋಮ್ ಅಷ್ಟೊಂದು ಸಿಟ್ಟು ಮಾಡಿಕೊಳ್ಳುತ್ತಾರೆ ಎಂದೂ ಊಹಿಸಿರಲಿಲ್ಲ. ಅವರು ಎಲ್ಲವನ್ನೂ ವೈಯುಕ್ತಿವಾಗಿ ತೆಗೆದುಕೊಂಡಿದ್ದಾರೆ. ಅದು ಅವರ ಆಯ್ಕೆ. ನಾನು ಅದರ ಬಗ್ಗೆ ಏನೂ ಹೇಳಲಾರೆ. ಆದರೆ, ನನ್ನ ಹೋರಾಟ ನ್ಯಾಯಯುತವಾದ ಟ್ರಯಲ್ಸ್ ನಡೆಸುವ ಬಗ್ಗೆಯಾಗಿತ್ತು. ಸರಿಯಾಗಿ ಟ್ರಯಲ್ಸ್ ನಡೆಸಿದ ಬಳಿಕ ಆಯ್ಕೆ ಮಾಡಿ ಎಂದು ಒತ್ತಾಯಿಸುತ್ತಿದ್ದೆ. ನಾನು ಮೇರಿ ಕೋಮ್ ವಿರುದ್ಧ ಸೋತಿರಬಹುದು. ಆದರೆ ಹಲವರ ಹೃದಯ ಗೆದ್ದಿದ್ದೇನೆ. ತೆಲಂಗಾಣ ಬಾಕ್ಸಿಂಗ್ ಸಂಸ್ಥೆಯವರು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಗೆ ದೂರು ನೀಡುವಂತೆ ತಿಳಿಸಿದರು. ಆದರೆ, ನಾನು ಟ್ರಯಲ್ಸ್ ಮುಗಿದ ಅಧ್ಯಾಯ ಎಂದು ಹೇಳಿದ್ದೇನೆ,'' ಎಂದರು.
ಮುಂದಿನ ವರ್ಷ ಫೆಬ್ರವರಿಯಲ್ಲಿ ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಹಣಾಹಣಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಮಹಿಳಾ ಬಾಕ್ಸರ್ ಆಯ್ಕೆಗಾಗಿ ಶನಿವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿಅರ್ಹತಾ ಟ್ರಯಲ್ಸ್ ಆಯೋಜಿಸಲಾಗಿತ್ತು. ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಅನುಭವಿ ಬಾಕ್ಸರ್ ಮೇರಿ ಕೋಮ್ ಜಯ ಗಳಿಸಿದ್ದಾರೆ.
ನಿಖತ್ ಜರೀನ್ಗೆ ಪಂಚ್ ನೀಡಿದ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ ಕ್ವಾಲಿಫೈಯರ್ಗೆ ಲಗ್ಗೆ!
ಮೇರಿ ಕೋಮ್ ಮತ್ತು ನಿಖತ್ ಜರೀನ್ ನಡುವಣ 51 ಕೆ.ಜಿ ವಿಭಾಗದ ಅಂತಿಮ ಸುತ್ತಿನ ಸೆಣಸಾಟ ಆ ಜನ್ಮ ವೈರಿಗಳ ನಡುವಣ ಕಾದಾಟದಂತಿತ್ತು. ಕಳೆದ ಆರು ತಿಂಗಳಿಂದ ಸಾರ್ವಜನಿಕವಾಗಿ ಪರಸ್ಪರ ವಾಕ್ಸಮರ ನಡೆಸುತ್ತಾ ಬಂದಿದ್ದ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಹಾಗೂ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಜರೀನ್ ಶನಿವಾರ ಬಾಕ್ಸಿಂಗ್ ರಿಂಗ್ನಲ್ಲಿ ಸ್ಪರ್ಧಿಗಳಂತೆ ಕಾಣಲಿಲ್ಲ. ಸಾಮ್ರಾಜ್ಯ ಸ್ಥಾಪಿಸಲು ಹೊರಟ ವೀರ ವನಿತೆಯರಂತೆ ಕಂಡುಬಂದರು. ಬಾಕ್ಸಿಂಗ್ ಅಖಾಡ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತು. ಯುದ್ಧದಲ್ಲಿಅಪಾರ ಅನುಭವಿ ಮೇರಿ ಕೈ ಮೇಲಾಯಿತು. ಜರೀನ್ 1-9 ಅಂಕಗಳ ಭಾರೀ ಅಂತರದಿಂದ ಸೋತು ನಿರಾಸೆಯಿಂದ ಅಖಾಡದಿಂದ ನಿರ್ಗಮಿಸಿದರು.
ಈ ಗೆಲುವಿನೊಂದಿಗೆ ಚೀನಾ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ನಲ್ಲಿ ಕಾದಾಡುವ ಅರ್ಹತೆಯನ್ನು ಮೇರಿ ಕೋಮ್ ತಮ್ಮದಾಗಿಸಿಕೊಂಡರು. ಭಾರತೀಯ ಬಾಕ್ಸಿಂಗ್ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಶನಿವಾರ ಅರ್ಹತಾ ಸುತ್ತಿನ ಸ್ಪರ್ಧೆಯ ವೇಳೆ ರಿಂಗ್ನ ಒಳಗೆ ಹಾಗೂ ಹೊರಗೆ ದೊಡ್ಡ ಮಟ್ಟದ ವಾಕ್ಸಮರ ನಡೆಯಿತು.
ಕೊನೆರು ಹಂಪಿ ಮುಡಿಗೆ ವಿಶ್ವ ಮುಕುಟ; ವಿಶ್ವ ಚಾಂಪಿಯನ್ ಪಟ್ಟ ಜಯಿಸಿದ ಭಾರತದ ಎರಡನೇ ಚೆಸ್ ಪಟು
ಫಲಿತಾಂಶದ ಬಳಿಕ ಹೈದರಾಬಾದ್ ಮೂಲದ ನಿಖತ್ ಜರೀನ್ ಅವರ ತಂಡದ ಸಿಬ್ಬಂದಿ ಅಳುವುದೊಂದೇ ಬಾಕಿಯಿತ್ತು. ಮಾತಿನ ಸಮರ, ಕಚ್ಚಾಟ, ಪರಸ್ಪರ ದೂಷಣೆ, ಪ್ರತಿಧಿಭಟನೆ ಎಲ್ಲವೂ ನಡೆಯಿತು. ಮೇರಿ ಕೋಮ್ ಎದುರಾಳಿ ಜರೀನ್ ಅವರನ್ನು ಮನಸೋಇಚ್ಛೆ ಹೀಗಳೆದರು. ತುಚ್ಛವಾಗಿ ಕಂಡರು. ಕೋಮ್ ಅವರ ವರ್ತನೆ ಬಗ್ಗೆ ಜರೀನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಗಳ ಬಿಡಿಸಿದ ಅಜಯ್ ಸಿಂಗ್ ಮೇರಿ ಕೋಮ್ ಪಂದ್ಯ ಗೆದ್ದ ಬಳಿಕ ರಿಂಗ್ನ ಹೊರಗೂ ಜರೀನ್ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಇದನ್ನು ವಿರೋಧಿಸಿ ತೆಲಂಗಾಣ ಬಾಕ್ಸಿಂಗ್ ಸಮಿತಿಯ ಪ್ರತಿನಿಧಿ ಎ.ಪಿ. ರೆಡ್ಡಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ಮಧ್ಯಪ್ರವೇಶ ಮಾಡಿ ಎಲ್ಲಧಿರನ್ನೂ ಸಮಾಧಾನಗೊಳಿಸಿದರು.
''ಇಂತಹ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಅಂದುಕೊಂಡಿರಲಿಲ್ಲ. ಕ್ರೀಡಾ ಸಚಿವರಿಗೆ ಪತ್ರ ಬರೆದಿರುವುದಕ್ಕೆ ಮೇರಿ ಕೋಮ್ ಅಷ್ಟೊಂದು ಸಿಟ್ಟು ಮಾಡಿಕೊಳ್ಳುತ್ತಾರೆ ಎಂದೂ ಊಹಿಸಿರಲಿಲ್ಲ. ಅವರು ಎಲ್ಲವನ್ನೂ ವೈಯುಕ್ತಿವಾಗಿ ತೆಗೆದುಕೊಂಡಿದ್ದಾರೆ. ಅದು ಅವರ ಆಯ್ಕೆ. ನಾನು ಅದರ ಬಗ್ಗೆ ಏನೂ ಹೇಳಲಾರೆ. ಆದರೆ, ನನ್ನ ಹೋರಾಟ ನ್ಯಾಯಯುತವಾದ ಟ್ರಯಲ್ಸ್ ನಡೆಸುವ ಬಗ್ಗೆಯಾಗಿತ್ತು. ಸರಿಯಾಗಿ ಟ್ರಯಲ್ಸ್ ನಡೆಸಿದ ಬಳಿಕ ಆಯ್ಕೆ ಮಾಡಿ ಎಂದು ಒತ್ತಾಯಿಸುತ್ತಿದ್ದೆ. ನಾನು ಮೇರಿ ಕೋಮ್ ವಿರುದ್ಧ ಸೋತಿರಬಹುದು. ಆದರೆ ಹಲವರ ಹೃದಯ ಗೆದ್ದಿದ್ದೇನೆ. ತೆಲಂಗಾಣ ಬಾಕ್ಸಿಂಗ್ ಸಂಸ್ಥೆಯವರು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಗೆ ದೂರು ನೀಡುವಂತೆ ತಿಳಿಸಿದರು. ಆದರೆ, ನಾನು ಟ್ರಯಲ್ಸ್ ಮುಗಿದ ಅಧ್ಯಾಯ ಎಂದು ಹೇಳಿದ್ದೇನೆ,'' ಎಂದರು.
ಮುಂದಿನ ವರ್ಷ ಫೆಬ್ರವರಿಯಲ್ಲಿ ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಹಣಾಹಣಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಮಹಿಳಾ ಬಾಕ್ಸರ್ ಆಯ್ಕೆಗಾಗಿ ಶನಿವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿಅರ್ಹತಾ ಟ್ರಯಲ್ಸ್ ಆಯೋಜಿಸಲಾಗಿತ್ತು. ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಅನುಭವಿ ಬಾಕ್ಸರ್ ಮೇರಿ ಕೋಮ್ ಜಯ ಗಳಿಸಿದ್ದಾರೆ.
ನಿಖತ್ ಜರೀನ್ಗೆ ಪಂಚ್ ನೀಡಿದ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ ಕ್ವಾಲಿಫೈಯರ್ಗೆ ಲಗ್ಗೆ!
ಮೇರಿ ಕೋಮ್ ಮತ್ತು ನಿಖತ್ ಜರೀನ್ ನಡುವಣ 51 ಕೆ.ಜಿ ವಿಭಾಗದ ಅಂತಿಮ ಸುತ್ತಿನ ಸೆಣಸಾಟ ಆ ಜನ್ಮ ವೈರಿಗಳ ನಡುವಣ ಕಾದಾಟದಂತಿತ್ತು. ಕಳೆದ ಆರು ತಿಂಗಳಿಂದ ಸಾರ್ವಜನಿಕವಾಗಿ ಪರಸ್ಪರ ವಾಕ್ಸಮರ ನಡೆಸುತ್ತಾ ಬಂದಿದ್ದ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಹಾಗೂ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಜರೀನ್ ಶನಿವಾರ ಬಾಕ್ಸಿಂಗ್ ರಿಂಗ್ನಲ್ಲಿ ಸ್ಪರ್ಧಿಗಳಂತೆ ಕಾಣಲಿಲ್ಲ. ಸಾಮ್ರಾಜ್ಯ ಸ್ಥಾಪಿಸಲು ಹೊರಟ ವೀರ ವನಿತೆಯರಂತೆ ಕಂಡುಬಂದರು. ಬಾಕ್ಸಿಂಗ್ ಅಖಾಡ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತು. ಯುದ್ಧದಲ್ಲಿಅಪಾರ ಅನುಭವಿ ಮೇರಿ ಕೈ ಮೇಲಾಯಿತು. ಜರೀನ್ 1-9 ಅಂಕಗಳ ಭಾರೀ ಅಂತರದಿಂದ ಸೋತು ನಿರಾಸೆಯಿಂದ ಅಖಾಡದಿಂದ ನಿರ್ಗಮಿಸಿದರು.
ಈ ಗೆಲುವಿನೊಂದಿಗೆ ಚೀನಾ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ನಲ್ಲಿ ಕಾದಾಡುವ ಅರ್ಹತೆಯನ್ನು ಮೇರಿ ಕೋಮ್ ತಮ್ಮದಾಗಿಸಿಕೊಂಡರು. ಭಾರತೀಯ ಬಾಕ್ಸಿಂಗ್ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಶನಿವಾರ ಅರ್ಹತಾ ಸುತ್ತಿನ ಸ್ಪರ್ಧೆಯ ವೇಳೆ ರಿಂಗ್ನ ಒಳಗೆ ಹಾಗೂ ಹೊರಗೆ ದೊಡ್ಡ ಮಟ್ಟದ ವಾಕ್ಸಮರ ನಡೆಯಿತು.
ಕೊನೆರು ಹಂಪಿ ಮುಡಿಗೆ ವಿಶ್ವ ಮುಕುಟ; ವಿಶ್ವ ಚಾಂಪಿಯನ್ ಪಟ್ಟ ಜಯಿಸಿದ ಭಾರತದ ಎರಡನೇ ಚೆಸ್ ಪಟು
ಫಲಿತಾಂಶದ ಬಳಿಕ ಹೈದರಾಬಾದ್ ಮೂಲದ ನಿಖತ್ ಜರೀನ್ ಅವರ ತಂಡದ ಸಿಬ್ಬಂದಿ ಅಳುವುದೊಂದೇ ಬಾಕಿಯಿತ್ತು. ಮಾತಿನ ಸಮರ, ಕಚ್ಚಾಟ, ಪರಸ್ಪರ ದೂಷಣೆ, ಪ್ರತಿಧಿಭಟನೆ ಎಲ್ಲವೂ ನಡೆಯಿತು. ಮೇರಿ ಕೋಮ್ ಎದುರಾಳಿ ಜರೀನ್ ಅವರನ್ನು ಮನಸೋಇಚ್ಛೆ ಹೀಗಳೆದರು. ತುಚ್ಛವಾಗಿ ಕಂಡರು. ಕೋಮ್ ಅವರ ವರ್ತನೆ ಬಗ್ಗೆ ಜರೀನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಗಳ ಬಿಡಿಸಿದ ಅಜಯ್ ಸಿಂಗ್ ಮೇರಿ ಕೋಮ್ ಪಂದ್ಯ ಗೆದ್ದ ಬಳಿಕ ರಿಂಗ್ನ ಹೊರಗೂ ಜರೀನ್ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಇದನ್ನು ವಿರೋಧಿಸಿ ತೆಲಂಗಾಣ ಬಾಕ್ಸಿಂಗ್ ಸಮಿತಿಯ ಪ್ರತಿನಿಧಿ ಎ.ಪಿ. ರೆಡ್ಡಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ಮಧ್ಯಪ್ರವೇಶ ಮಾಡಿ ಎಲ್ಲಧಿರನ್ನೂ ಸಮಾಧಾನಗೊಳಿಸಿದರು.