ಆ್ಯಪ್ನಗರ

ದತ್ತಿಗಾಗಿ ಯದುವೀರ್‌ ವಿಶ್ವ 10ಕೆಯಲ್ಲಿ ಓಟ

ದೂರದ ಓಟಗಾರರ ದೈಹಿಕ ಕ್ಷಮತೆ ಸಾಬೀತುಪಡಿಸುವ ವಿಶ್ವ 10ಕೆ ಬೆಂಗಳೂರು ಓಟ 11ನೇ ಆವೃತ್ತಿ ಇದೇ 27ರಂದು ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

Vijaya Karnataka 23 May 2018, 8:25 am
ಬೆಂಗಳೂರು: ದೂರದ ಓಟಗಾರರ ದೈಹಿಕ ಕ್ಷಮತೆ ಸಾಬೀತುಪಡಿಸುವ ವಿಶ್ವ 10ಕೆ ಬೆಂಗಳೂರು ಓಟ 11ನೇ ಆವೃತ್ತಿ ಇದೇ 27ರಂದು ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
Vijaya Karnataka Web Yaduveer


ದಕ್ಷಿಣ ಭಾರತದ ಅತಿದೊಡ್ಡ ಏಕೈಕ ದತ್ತಿ ನಿಧಿ ಸಂಗ್ರಹ ಕೂಟವಾಗಿ ರೂಪುಗೊಂಡಿರುವ ವಿಶ್ವ 10ಕೆ, ಪ್ರಸಕ್ತ ಸಾಲಿನಲ್ಲಿ ದತ್ತಿ ನಿಧಿಯನ್ನು 4 ಕೋಟಿ ರೂ. ಹೆಚ್ಚಿಸಿದ್ದು, 2008ರಿಂದ ಈವರೆಗೆ ಒಟ್ಟು 33.89 ಕೋಟಿ ರೂ. ಹೆಚ್ಚಿಸಿಗೊಂಡಿದೆ. ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಇದೇ ಮೊದಲ ಬಾರಿ ವಿಶ್ವ 10ಕೆ ಓಟದಲ್ಲಿ ದತ್ತಿ ನಿಧಿ ಸಂಗ್ರಹಕ್ಕಾಗಿ ಪಾಲ್ಗೊಳ್ಳುತ್ತಿರುವುದು ಈ ಬಾರಿಯ ಮತ್ತೊಂದು ವಿಶೇಷವಾಗಿದೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ.

ಇವರಲ್ಲದೆ ಹಲವು ಸರಕಾರೇತರ ಸಂಸ್ಥೆಗಳು ವಿವಿಧ ಸಾಮಾಜಿಕ ಕಾರ್ಯಗಳಿಗೆ ನಿಧಿ ಸಂಗ್ರಹಕ್ಕಾಗಿ ವಿಶ್ವ 10ಕೆ ಓಟವನ್ನು ವೇದಿಕೆಯಾಗಿ ಪರಿಗಣಿಸಿದ್ದು, ಈ ಬಾರಿ 70ಕ್ಕೂ ಅಧಿಕ ಎನ್‌ಜಿಒ ಸಂಸ್ಥೆಗಳು ಕೂಟದ ಲಾಭ ಪಡೆಯಲಿವೆ. 24 ಕಂಪೆನಿಗಳ 43 ತಂಡಗಳು, ಸುಮಾರು 300 ದತ್ತಿ ಸಂಗ್ರಾಹಗಾರರು ಹಾಗೂ 4ಸಾವಿರಕ್ಕೂ ಅಧಿಕ ದಾನಿಗಳು ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌