ಆ್ಯಪ್ನಗರ

ಗ್ಯಾಲರಿಯಲ್ಲಿ ಯುವತಿಯನ್ನು ಚುಡಾಯಿಸಿದ ಚೆನ್ನೈ ಅಭಿಮಾನಿ

ಭಾರತೀಯ ಕ್ರೀಡೆಗೆ ಅತ್ಯಂತ ಅವಮಾನಕರ ಘಟನೆಯೊಂದರಲ್ಲಿ ಪ್ರಸ್ತುತ ಸಾಗುತ್ತಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯ ವೇಳೆ ಯುವತಿಯೊಬ್ಬರನ್ನು ಚೆನ್ನೈ ಅಭಿಮಾನಿಗಳು ಚುಡಾಯಿಸಿದ ಘಟನೆ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 24 Nov 2017, 6:07 pm
ಚೆನ್ನೈ: ಭಾರತೀಯ ಕ್ರೀಡೆಗೆ ಅತ್ಯಂತ ಅವಮಾನಕರ ಘಟನೆಯೊಂದರಲ್ಲಿ ಪ್ರಸ್ತುತ ಸಾಗುತ್ತಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯ ವೇಳೆ ಯುವತಿಯೊಬ್ಬರನ್ನು ಚೆನ್ನೈ ಅಭಿಮಾನಿಗಳು ಚುಡಾಯಿಸಿದ ಘಟನೆ ನಡೆದಿದೆ.
Vijaya Karnataka Web neufc female fan heckled by chennaiyin supporters
ಗ್ಯಾಲರಿಯಲ್ಲಿ ಯುವತಿಯನ್ನು ಚುಡಾಯಿಸಿದ ಚೆನ್ನೈ ಅಭಿಮಾನಿ


ಏನಿದು ಘಟನೆ?
ಚೆನ್ನೈ ಎಫ್‌ಸಿ ಮತ್ತು ನಾರ್ತ್ಈಸ್ಟ್ ಯುನೈಟೆಡ್ ನಡುವಣ ಪಂದ್ಯ ಚೆನ್ನೈನ ಜವಹಾರ್‌ಲಾಲ್ ನೆಹ್ರೂ ಮೈದಾನದಲ್ಲಿ ಬುಧವಾರದಂದು ಆಯೋಜಿಸಲಾಗಿತ್ತು. ಈ ಪಂದ್ಯವನ್ನು 3-0 ಗೋಲುಗಳ ಅಂತರದಿಂದ ಚೆನ್ನೈ ತಂಡವು ನಾರ್ತ್‌ಈಸ್ಟ್ ವಿರುದ್ಧ ಗೆಲುವು ದಾಖಲಿಸಿತ್ತು.

ಆದರೆ ನಾರ್ತ್‌ಈಸ್ಟ್ ತಂಡದ ಬೆಂಬಲಕ್ಕಾಗಿ ಸ್ಟೇಡಿಯಂಗೆ ಆಗಮಸಿದ್ದ ಯುವತಿಯರನ್ನು ಚೆನ್ನೈ ಅಭಿಮಾನಿಗಳು ಚುಡಾಯಿಸಿರುವ ಘಟನೆ ನಡೆದಿದೆ. ಆತಿಥಿ ದೇವೋ ಭವ ಎಂಬ ಸಂಪ್ರದಾಯವನ್ನು ಪಾಲಿಸುವ ನಮ್ಮ ಭಾರತದಲ್ಲಿ ಸ್ತ್ರೀಯರ ವಿರುದ್ಧ ಅಸಭ್ಯ ವರ್ತನೆಗೆ ಮಗದೊಂದು ನೈಜ ಉದಾಹರಣೆ ಇದಾಗಿದೆ.

Is this how you treat visiting fans @ChennaiyinFC @Supermachans ?? pic.twitter.com/XP5l6nA4el — Khalid Mahmood (@TheReal_Khalid) November 23, 2017 ಮಹಿಳೆಯ ವಿರುದ್ಧ ಅಸಭ್ಯ ವರ್ತನೆಯನ್ನು ತೋರಿರುವ ಚೆನ್ನೈ ಅಭಿಮಾನಿಗಳು ನೀಚ ಶಬ್ದಗಳನ್ನು ಬಳಕೆ ಮಾಡಿದ್ದರು. ಈ ಸಂಬಂಧ ಟ್ವಿಟರ್ ಪೋಸ್ಟ್ ವೈರಲ್ ಆಗಿ ಹರಡುತ್ತಿದೆ.

ಚೆನ್ನೈ ತಂಡವನ್ನು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ನಾರ್ತ್‌ಈಸ್ಟ್ ತಂಡದ ಮಾಲಿಕತ್ವವನ್ನು ಜಾನ್ ಅಬ್ರಹಾಂ ಹೊಂದಿದ್ದಾರೆ. ಅಲ್ಲದೆ ಯುವತಿಯನ್ನು ಖಾಸಗಿಯಾಗಿ ಭೇಟಿಯಾಗಿ ಕ್ಷೇಮ ವಿಚಾರಿಸುವುತಾಗಿ ಜಾನ್ ಅಬ್ರಹಾಂ ಹೇಳಿದ್ದಾರೆ.

ಪ್ರಸ್ತುತ ಘಟನೆಯನ್ನು ಇತ್ತಂಡಗಳ ಮಾಲಿಕರು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಇತಂಹ ಮತ್ತೆ ಎದುರಾಗಲಿ ಹಾಗೂ ತಪ್ಪಿತ್ತಸ್ಥರಿಗೆ ಕಠಿಣ ಶಿಕ್ಷೆ ದೊರಕಲಿ ಎಂಬುದು ನೈಜ ಅಭಿಮಾನಿಗಳ ಆಶಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌