ಆ್ಯಪ್ನಗರ

ಸಿಂಗಾಪುರ ಓಪನ್‌ ಸೂಪರ್‌ ಸೀರಿಸ್‌: ಶ್ರೀಕಾಂತ್‌ ಮಣಿಸಿ ಪದಕ ಗೆದ್ದ ಪ್ರಣೀತ್‌

ಪ್ರತಿಷ್ಠಿತ ಸಿಂಗಾಪುರ ಓಪನ್‌ ಸೂಪರ್‌ ಸೀರಿಸ್‌ ಪುರುಷರ ಸಿಂಗಲ್ಸ್‌ ಫೈನಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್‌ ಅವರನ್ನು ಮಣಿಸಿ ಸಾಯಿ ಪ್ರಣೀತ್‌ ಪದಕ ಗಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 16 Apr 2017, 2:53 pm
ಸಿಂಗಾಪುರ: ಪ್ರತಿಷ್ಠಿತ ಸಿಂಗಾಪುರ ಓಪನ್‌ ಸೂಪರ್‌ ಸೀರಿಸ್‌ ಪುರುಷರ ಸಿಂಗಲ್ಸ್‌ ಫೈನಲ್ಸ್‌ನಲ್ಲಿ ಭಾನುವಾರ ಕಿಡಂಬಿ ಶ್ರೀಕಾಂತ್‌ ಅವರನ್ನು ಮಣಿಸಿ ಬಿ ಸಾಯಿ ಪ್ರಣೀತ್‌ ಪದಕ ಗಳಿಸಿದ್ದಾರೆ.
Vijaya Karnataka Web praneeth beats srikanth to win singapore open super series title
ಸಿಂಗಾಪುರ ಓಪನ್‌ ಸೂಪರ್‌ ಸೀರಿಸ್‌: ಶ್ರೀಕಾಂತ್‌ ಮಣಿಸಿ ಪದಕ ಗೆದ್ದ ಪ್ರಣೀತ್‌


54 ನಿಮಿಷಗಳ ಆಟದಲ್ಲಿ 17-21, 21-17, 21-12 ಸೆಟ್‌ಗಳಲ್ಲಿ ಶ್ರೀಕಾಂತ್‌ ಅವರನ್ನು ಪ್ರಣೀತ್‌ ಮಣಿಸಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಬ್ಬರು ಭಾರತೀಯರು ಸೂಪರ್‌ ಸೀರೀಸ್‌ನಲ್ಲಿ ಆಡಿ ಫೈನಲ್‌ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಇಲ್ಲಿನ ಸಿಂಗಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವದ ಮಾಜಿ ನಂ.3 ಆಟಗಾರ ಶ್ರೀಕಾಂತ್‌ 21-13, 21-14 ನೇರ ಗೇಮ್‌ಗಳಿಂದ ವಿಶ್ವದ 26ನೇ ರ‍್ಯಾಂಕಿನ ಇಂಡೊನೇಷ್ಯಾದ ಅಂಥೋನಿ ಸಿನಿಸುಕಾ ಗಿಂಟಿಂಗ್‌ ವಿರುದ್ಧ 42 ನಿಮಿಷಗಳಲ್ಲಿ ಸುಲಭ ಜಯ ಗಳಿಸಿದ್ದರು. ಈ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಮೂರನೇ ಬಾರಿ ಸೂಪರ್‌ ಸೀರೀಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದರು. ಶ್ರೀಕಾಂತ್‌ 2014ರ ಚೀನಾ ಸೂಪರ್‌ ಸೀರೀಸ್‌ ಪ್ರೀಮಿಯರ್‌ ಮತ್ತು 2015ರ ಇಂಡಿಯಾ ಸೂಪರ್‌ ಸೀರೀಸ್‌ ಗೆಲ್ಲುವ ಜತೆಗೆ ರಿಯೊ ಒಲಿಂಪಿಕ್ಸ್‌ನ ಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದರು.

ವಿಶ್ವ ರ‍್ಯಾಂಕಿಂಗಿನಲ್ಲಿ 29ನೇ ಸ್ಥಾನದ ಶ್ರೀಕಾಂತ್‌ ವಿರುದ್ಧ 30ನೇ ರ‍್ಯಾಂಕ್ನ ಪ್ರಣೀತ್‌ ಗೆಲುವು ಸಾಧಿಸಿದ್ದಾರೆ. ಹೈದರಾದಾದ್‌ನ ಆಟಗಾರರು ಇದುವರೆಗೆ ಎದುರಾಗಿದ್ದ 5 ಪಂದ್ಯಗಳಲ್ಲಿ , 4 ಪಂದ್ಯಗಳಲ್ಲಿ ಪ್ರಣೀತ್‌ ಗೆದ್ದರೆ ಒಂದು ಪಂದ್ಯದಲ್ಲಿ ಶ್ರೀಕಾಂತ್‌ ಗೆದ್ದಿದ್ದರು. ಇತ್ತೀಚೆಗೆ ಲಖನೌದಲ್ಲಿ ನಡೆದ ಸೈಯದ್‌ ಮೋದಿ ಗ್ರ್ಯಾನ್‌ ಪ್ರಿನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದ ವೇಳೆ ವೇಳೆ ಪ್ರಣೀತ್‌ ಗೆಲುವಿನ ನಗೆ ಬೀರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌