ಆ್ಯಪ್ನಗರ

ಅಜ್ಲಾನ್‌ ಶಾ ಕಪ್‌ಗೆ ಭಾರತ ತಂಡ ಪ್ರಕಟ

ಈ ತಿಂಗಳ ಕೊನೆಯ ವಾರ ಮಲೇಷ್ಯಾದಲ್ಲಿ ನಡೆಯುವ 28ನೇ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಗೆ ಬುಧವಾರ 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.

PTI 7 Mar 2019, 5:00 am
ಹೊಸದಿಲ್ಲಿ: ಈ ತಿಂಗಳ ಕೊನೆಯ ವಾರ ಮಲೇಷ್ಯಾದಲ್ಲಿ ನಡೆಯುವ 28ನೇ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಗೆ ಬುಧವಾರ 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.
Vijaya Karnataka Web several key players injured manpreet to lead young indian team in azlan shah cup
ಅಜ್ಲಾನ್‌ ಶಾ ಕಪ್‌ಗೆ ಭಾರತ ತಂಡ ಪ್ರಕಟ


ಪ್ರಮುಖ ಆಟಗಾರರು ಗಾಯಾಳುಗಳಾಗಿ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿದಿರುವುದರಿಂದ ಎಳೆಯ ಪ್ರತಿಭಾವಂತ ಆಟಗಾರರಿಗೆ ಅವಕಾಶ ದಕ್ಕಿದೆ. ಮಿಡ್‌ಫೀಲ್ಡರ್‌ ಮನ್‌ಪ್ರೀತ್‌ ಸಿಂಗ್‌ ತಂಡದ ನಾಯಕನಾದರೆ, ಡಿಫೆಂಡರ್‌ ಸುರೇಂದರ್‌ ಕುಮಾರ್‌ ಉಪನಾಯಕ.

ಮಾರ್ಚ್‌ 23ರಿಂದ 30ರ ತನಕ ಮಲೇಷ್ಯಾದ ಇಪೊದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ, ಆತಿಥೇಯ ಮಲೇಷ್ಯಾ, ಕೆನಡಾ, ಕೊರಿಯಾ, ದ.ಆಫ್ರಿಕಾ ಹಾಗೂ ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಜಪಾನ್‌ ತಂಡಗಳು ಪಾಲ್ಗೊಳ್ಳಲಿವೆ.

ಮಾ.23ರಂದು ಜಪಾನ್‌ ವಿರುದ್ಧದ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿರುವ ಭಾರತ ಪುರುಷರ ತಂಡ ಅನುಭವಿ ಫಾರ್ವರ್ಡ್‌ಗಳಾದ ಎಸ್‌.ವಿ.ಸುನಿಲ್‌, ಆಕಾಶದೀಪ್‌ ಸಿಂಗ್‌, ರಮಣದೀಪ್‌ ಸಿಂಗ್‌ ಮತ್ತು ಲಲಿತ್‌ ಉಪಾಧ್ಯಾಯ, ಡಿಫೆಂಡರ್‌ಗಳಾದ ರೂಪಿಂದರ್‌ ಪಾಲ್‌ ಸಿಂಗ್‌ ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಮಿಡ್‌ಫೀಲ್ಡರ್‌ ಚಿಂಗ್ಲೆನ್‌ಸಾನಾ ಸಿಂಗ್‌ ಸೇವೆ ಕಳೆದುಕೊಳ್ಳಲಿದೆ. ಇವರೆಲ್ಲರೂ ಗಾಯಾಳುಗಳಾಗಿ ವಿಶ್ರಾಂತಿಗೆ ಮೊರೆಹೋಗಿದ್ದಾರೆ.

ತಂಡದ ವಿವರ : ಗೋಲ್‌ಕೀಪರ್‌ಗಳು : ಪಿ.ಆರ್‌.ಶ್ರೀಜೇಶ್‌, ಕೃಷ್ಣನ್‌ ಬಿ ಪಾಠಕ್‌.
ಡಿಫೆಂಡರ್‌ಗಳು : ಗುರಿಂದರ್‌ ಸಿಂಗ್‌, ಸುರೇಂದರ್‌ ಕುಮಾರ್‌ (ಉಪನಾಯಕ), ವರುಣ್‌ ಕುಮಾರ್‌, ಬೀರೇಂದ್ರ ಲಾಕ್ರಾ, ಅಮಿತ್‌ ರೋಹಿದಾಸ್‌, ಕೊಥಾಜಿತ್‌ ಸಿಂಗ್‌ ಕೆ.
ಮಿಡ್‌ಫೀಲ್ಡರ್‌ಗಳು : ಹಾರ್ದಿಕ್‌ ಸಿಂಗ್‌, ನೀಲಕಂಠ ಶರ್ಮಾ, ಸುಮಿತ್‌, ವಿವೇಕ್‌ ಸಾಗರ್‌ ಪ್ರಸಾದ್‌, ಮನ್‌ಪ್ರೀತ್‌ ಸಿಂಗ್‌ (ನಾಯಕ).
ಫಾರ್ವರ್ಡ್ಸ್: ಮನ್‌ದೀಪ್‌ ಸಿಂಗ್‌, ಸಿಮ್ರಂಜೀತ್‌ ಸಿಂಗ್‌, ಗುರ್ಜಂತ್‌ ಸಿಂಗ್‌, ಶಿಲಾನಂದ್‌ ಲಾಕ್ರಾ, ಸುಮಿತ್‌ ಕುಮಾರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌