ಸಾಯ್ ಇನ್ನು ಕ್ರೀಡಾ ಭಾರತ
ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಸಾಯ್ ಅಧಿಕಾರಿಗಳ ನಡುವೆ ಹೊಸದಿಲ್ಲಿಯ ಶಾಸ್ತ್ರಿ ಭವನದಲ್ಲಿ ನಡೆದ ಸಭೆಯ ವೇಳೆ 'ಕ್ರೀಡಾ ಭಾರತ' ಎಂದು ಹೆಸರು ಬದಲಾಯಿಸಲು ಅಧಿಕೃತವಾಗಿ ಒಪ್ಪಿಗೆ ಸೂಚಿಸಲಾಗಿದೆ.
Vijaya Karnataka 13 Feb 2019, 5:00 am
ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ಕ್ರೀಡಾ ಪ್ರಾಧಿಕಾರ ಅಥವಾ ಸಾಯ್ಗೆ 'ಕ್ರೀಡಾ ಭಾರತ' (ಸ್ಪೋರ್ಟ್ಸ್ ಇಂಡಿಯಾ) ಎಂದು ಮರುನಾಮಕರಣ ಮಾಡಲಾಗಿದೆ.
ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಸಾಯ್ ಅಧಿಕಾರಿಗಳ ನಡುವೆ ಹೊಸದಿಲ್ಲಿಯ ಶಾಸ್ತ್ರಿ ಭವನದಲ್ಲಿ ನಡೆದ ಸಭೆಯ ವೇಳೆ 'ಕ್ರೀಡಾ ಭಾರತ' ಎಂದು ಹೆಸರು ಬದಲಾಯಿಸಲು ಅಧಿಕೃತವಾಗಿ ಒಪ್ಪಿಗೆ ಸೂಚಿಸಲಾಗಿದೆ. ಹೆಸರು ಬದಲಾವಣೆಯಾಗಿರುವ ಕುರಿತು ನೋಂದಾಯಿಸಿಕೊಳ್ಳಲು ಸುತ್ತೋಲೆ ಹೊರಡಿಸುವುದು ಮಾತ್ರ ಬಾಕಿ ಉಳಿದಿದೆ.
ಈ ಮಧ್ಯೆ, ಇದೇ ಫೆಬ್ರವರಿ 20ರಿಂದ 28ರ ತನಕ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಐಎಸ್ಎಸ್ಎಫ್ ರೈಫಲ್/ಪಿಸ್ತೂಲ್ ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಉದ್ದೇಶಿಸಿರುವ ಪಾಕಿಸ್ತಾನ ಶೂಟರ್ಗಳಿಗೆ ವೀಸಾ ನೀಡಲು ಒಪ್ಪಿಗೆ ದೊರೆತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇದರೊಂದಿಗೆ ವಿಶ್ವಕಪ್ನಲ್ಲಿ ಪಾಕ್ ಶೂಟರ್ಗಳ ಪಾಲ್ಗೊಳ್ಳುವಿಕೆ ಬಗ್ಗೆ ತಲೆದೋರಿದ್ದ ಗೊಂದಲಕ್ಕೆ ತೆರೆಬಿದ್ದಂತಾಗಿದೆ.
ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಸಾಯ್ ಅಧಿಕಾರಿಗಳ ನಡುವೆ ಹೊಸದಿಲ್ಲಿಯ ಶಾಸ್ತ್ರಿ ಭವನದಲ್ಲಿ ನಡೆದ ಸಭೆಯ ವೇಳೆ 'ಕ್ರೀಡಾ ಭಾರತ' ಎಂದು ಹೆಸರು ಬದಲಾಯಿಸಲು ಅಧಿಕೃತವಾಗಿ ಒಪ್ಪಿಗೆ ಸೂಚಿಸಲಾಗಿದೆ. ಹೆಸರು ಬದಲಾವಣೆಯಾಗಿರುವ ಕುರಿತು ನೋಂದಾಯಿಸಿಕೊಳ್ಳಲು ಸುತ್ತೋಲೆ ಹೊರಡಿಸುವುದು ಮಾತ್ರ ಬಾಕಿ ಉಳಿದಿದೆ.
ಈ ಮಧ್ಯೆ, ಇದೇ ಫೆಬ್ರವರಿ 20ರಿಂದ 28ರ ತನಕ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಐಎಸ್ಎಸ್ಎಫ್ ರೈಫಲ್/ಪಿಸ್ತೂಲ್ ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಉದ್ದೇಶಿಸಿರುವ ಪಾಕಿಸ್ತಾನ ಶೂಟರ್ಗಳಿಗೆ ವೀಸಾ ನೀಡಲು ಒಪ್ಪಿಗೆ ದೊರೆತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇದರೊಂದಿಗೆ ವಿಶ್ವಕಪ್ನಲ್ಲಿ ಪಾಕ್ ಶೂಟರ್ಗಳ ಪಾಲ್ಗೊಳ್ಳುವಿಕೆ ಬಗ್ಗೆ ತಲೆದೋರಿದ್ದ ಗೊಂದಲಕ್ಕೆ ತೆರೆಬಿದ್ದಂತಾಗಿದೆ.