ಆ್ಯಪ್ನಗರ

ಗೆದ್ದ 25 ಲಕ್ಷ ರೂ. ದಾನ ಮಾಡಿದ ಪಿವಿ ಸಿಂಧು

ಖ್ಯಾತ ಬ್ಯಾಡ್ಮಿಂಟನ್‌ ತಾರೆ, ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ, ಪದ್ಮಶ್ರೀ ಪುರಸ್ಕೃತೆ ಪಿವಿ ಸಿಂಧು ಅವರು ಜನಪ್ರಿಯ ಟಿವಿ ಶೋವೊಂದರಲ್ಲಿ ಗೆದ್ದ ಹಣವನ್ನು ಕ್ಯಾನ್ಸರ್‌ ಆಸ್ಪತ್ರೆಯೊಂದಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

Vijaya Karnataka Web 13 Jan 2018, 12:55 pm
ಹೈದರಾಬಾದ್‌: ಖ್ಯಾತ ಬ್ಯಾಡ್ಮಿಂಟನ್‌ ತಾರೆ, ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ, ಪದ್ಮಶ್ರೀ ಪುರಸ್ಕೃತೆ ಪಿವಿ ಸಿಂಧು ಅವರು ಜನಪ್ರಿಯ ಟಿವಿ ಶೋವೊಂದರಲ್ಲಿ ಗೆದ್ದ ಹಣವನ್ನು ಕ್ಯಾನ್ಸರ್‌ ಆಸ್ಪತ್ರೆಯೊಂದಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿ ಅಪಾರ ಮೆಚ್ಚುಗೆ ಪಡೆದಿದ್ದಾರೆ.
Vijaya Karnataka Web star shuttler donates entire kbc prize money to cancer hospital
ಗೆದ್ದ 25 ಲಕ್ಷ ರೂ. ದಾನ ಮಾಡಿದ ಪಿವಿ ಸಿಂಧು


ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಿ, ಒಟ್ಟು 25 ಲಕ್ಷ ರೂಪಾಯಿಗಳನ್ನು ಗೆದ್ದಿದ್ದಾರೆ. ಬಹುಮಾನವಾಗಿ ಬಂದ ಹಣವನ್ನೆಲ್ಲ ಬಸವತಾರಕಂ ಇಂಡೋ-ಅಮೆರಿಕನ್‌ ಕ್ಯಾನ್ಸರ್‌ ಆಸ್ಪತ್ರೆಗೆ ಸಿಂಧು ದಾನ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಯ ಮುಖ್ಯಸ್ಥರಾಗಿರುವ ಟಾಲಿವುಡ್‌ ನಟ ಬಾಲಯ್ಯ ಅವರಿಗೆ 25 ಲಕ್ಷ ರೂ. ಚೆಕ್‌ನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಸಿಂಧು. ಬ್ಯಾಡ್ಮಿಂಟನ್‌ ಆಟಗಾರ್ತಿಯ ಈ ಸಮಾಜಮುಖಿ ಕಾರ್ಯವನ್ನು ನಟ ಬಾಲಯ್ಯ ಕೊಂಡಾಡಿದ್ದು, ಸಿಂಧು ಅವರ ಕಾರ್ಯ ಇತರರಿಗೂ ಮಾದರಿ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌