ಆ್ಯಪ್ನಗರ

ಕುಸ್ತಿಪಟುಗಳ ಅಭಿಮಾನಿಗಳ ನಡುವೆ ಗುದ್ದಾಟ

ತೀವ್ರ ಖೇದಕರ ಘಟನೆಯೊಂದರಲ್ಲಿ ದೇಶದ ಜನಪ್ರಿಯ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಪರ್ವಿನ್ ರಾಣಾ ಅಭಿಮಾನಿಗಳ ನಡುವೆ ಗುದ್ದಾಟ ನಡೆದಿರುವ ಘಟನೆ ನಡೆದಿದೆ.

TIMESOFINDIA.COM 29 Dec 2017, 5:43 pm
ಹೊಸದಿಲ್ಲಿ: ತೀವ್ರ ಖೇದಕರ ಘಟನೆಯೊಂದರಲ್ಲಿ ದೇಶದ ಜನಪ್ರಿಯ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಪರ್ವಿನ್ ರಾಣಾ ಅಭಿಮಾನಿಗಳ ನಡುವೆ ಗುದ್ದಾಟ ನಡೆದಿರುವ ಘಟನೆ ನಡೆದಿದೆ.
Vijaya Karnataka Web supporters of wrestlers sushil kumar and parveen rana clash after bout
ಕುಸ್ತಿಪಟುಗಳ ಅಭಿಮಾನಿಗಳ ನಡುವೆ ಗುದ್ದಾಟ


ಕೆಡಿ ಜಾಧವ್ ಸ್ಟೇಡಿಯಂನಲ್ಲಿ ಶುಕ್ರವಾರದಂದು ಘಟನೆ ವರದಿಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸುಶೀಲ್ ಮೇಲೆ ಪರ್ವಿನ್ ಹಲ್ಲೆ ಮಾಡಿರುವುದೇ ಕಾರಣ ಎನ್ನಲಾಗಿದೆ.

ಬಳಿಕ ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕಧಾರಿ 34ರ ಹರೆಯದ ಸುಶೀಲ್ ಖಂಡಿಸಿದ್ದು, ಇದು ದುರದೃಷ್ಟಕರ ಎಂದಿದ್ದಾರೆ. ಇಂತಹ ಕೃತ್ಯಗಳಿಗೆ ಕ್ರೀಡೆಯಲ್ಲಿ ಜಾಗವೇ ಇಲ್ಲ ಎಂದಿದ್ದಾರೆ.

74 ಕೆ.ಜಿ ಭಾರ ವಿಭಾಗದಲ್ಲಿ ಜಿತೆಂದರ್ ಕುಮಾರ್ ಮಣಿಸಿರುವ ಸುಶೀಲ್, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2018 ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆಯನ್ನು ಪಡೆದಿದ್ದಾರೆ.

2014 ಕಾಮನ್‌ವೆಲ್ತ್ ಗೇಮ್ಸ್ ಬಳಿಕ ರೆಸ್ಲಿಂಗ್‌ನಿಂದ ದೂರವಿದ್ದ ಸುಶೀಲ್, ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಕಮ್‌ಬ್ಯಾಕ್ ಮಾಡಿಕೊಂಡಿದ್ದರು. ಬಳಿಕ ಕಾಮನ್‌ವೆಲ್ತ್ ರೆಸ್ಲಿಂಗ್ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌