ಆ್ಯಪ್ನಗರ

ತಮಿಳುನಾಡಿನ ಟೇಬಲ್‌ ಟೆನಿಸ್‌ ಆಟಗಾರ ಡಿ. ವಿಶ್ವ ರಸ್ತೆ ಅಪಘಾತಕ್ಕೆ ಬಲಿ!

ಮೇಘಾಲಯದಲ್ಲಿ 83ನೇ ಹಿರಿಯರ ರಾಷ್ಟ್ರೀಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ತಮಿಳುನಾಡಿನಿಂದ ತೆರಳಿದ್ದ ದೀನದಯಾಳನ್‌ ವಿಶ್ವ ಎಂಬ ಯುವ ಆಟಗಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗುವಹಾಟಿಯಿಂದ ಶಿಲ್ಲಾಂಗ್‌ಗೆ ರಸ್ತೆಯ ಮಾರ್ಗದಲ್ಲಿ ಟ್ರಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಅಪಘಾತದಿಂದ ವಿಶ್ವ ಮೃತಪಟ್ಟರೆ, ಟ್ರಕ್‌ ಚಾಲಕ ಸೇರಿದಂತೆ ಹಲವರು ಗಾಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿ ವಿಶ್ವ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷಗೆ ರವಾನಿಸಲಾಗಿದೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Authored byರಮೇಶ ಕೋಟೆ | Vijaya Karnataka Web 18 Apr 2022, 1:13 pm

ಹೈಲೈಟ್ಸ್‌:

  • ತಮಿಳುನಾಡಿನ ದೀನದಯಾಳನ್‌ ವಿಶ್ವ ಮೃತ ಪಟ್ಟ ಟಿನಿಸ್‌ ಆಟಗಾರ.
  • ಗುವಹಾಟಿಯಿಂದ ಶಿಲ್ಲಾಂಗ್‌ಗೆ ತೆರಳುತ್ತಿದ್ದ ವೇಳೆ ನಡೆದಿದ್ದ ಅಪಘಾತ.
  • 83ನೇ ಹಿರಿಯರ ರಾಷ್ಟ್ರೀಯ ಟೇಬಲ್‌ ಟೆನಿಸ್‌ ಟೂರ್ನಿಗೆ ತೆರಳಿದ್ದ ವಿಶ್ವ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Deenadayalan Vishwa
ದೀನ್‌ದಯಾಳನ್‌ ವಿಶ್ವ (ಚಿತ್ರ: ಎಎನ್‌ಐ ಟ್ವಿಟರ್)
ಹೊಸದಿಲ್ಲಿ: ತಮಿಳುನಾಡಿನ ಯುವ ಟೇಬಲ್‌ ಟೆನಿಸ್‌ ಆಟಗಾರ ದೀನದಯಾಳನ್‌ ವಿಶ್ವ ಎಂಬುವವರು ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಿರಿಯರ 83ನೇ ರಾಷ್ಟ್ರೀಯ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಭಾಗವಹಿಸಲು ಗುವಾಹಟಿಯಿಂದ ಶಿಲ್ಲಾಂಗ್‌ಗೆ ರಸ್ತೆ ಮಾರ್ಗದ ಮೂಲಕ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಡಿ ವಿಶ್ವ ಅವರು ತಮಿಳುನಾಡಿನ ತಮಿಝಗ ಟೇಬಲ್ ಟೆನಿಸ್‌ ಅಸೋಸಿಯೇಷನ್‌ ಮೂಲಕ ರಾಜ್ಯ ತಂಡದಲ್ಲಿ ಆಡುವ ಸಲುವಾಗಿ ಮೇಘಾಲಯಕ್ಕೆ ತೆರಳಿದ್ದರು. ಗುವಹಾಟಿಗೆ ಬಂದಿಳಿದ್ದಿ ಅವರು ಇಲ್ಲಿನಿಂದ ಶಿಲ್ಲಾಂಗ್‌ಗೆ ಟ್ರಕ್‌ ಮೂಲಕ ತಮಿಳುನಾಡು ತಂಡ ತೆರಳಿತ್ತು. ಅಪಘಾತದಲ್ಲಿ ಪ್ರವಾಸಿ ವಾಹನದ ಚಾಲಕ ದಿಪಲ್‌ ದಾಸ್‌ ಅವರಿಗೂ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಗುವಹಾಟಿ ವಿಮಾನ ನಿಲ್ದಾಣದಿಂದ ಮಾರುತಿ ಸಿಫ್ಟ್‌ ಡಿಸೈರ್‌ ಕಾರು ಶಿಲ್ಲಾಂಗ್‌ಗೆ ಪ್ರಯಾಣ ಬೆಳೆಸಿತ್ತು. ಎನ್‌ಎಚ್‌ 6 ರಸ್ತೆಯಲ್ಲಿ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ತಿರುವು ಇರುವ ರಸ್ತೆಯಲ್ಲಿ ಅತಿ ವೇಗವಾಗಿ ಟ್ರಕ್‌ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಖೇಲೋ ಇಂಡಿಯಾ 2022: ಪದಕ ಬೇಟೆಗೆ ಕರ್ನಾಟಕದ ಸ್ವಿಮ್ಮರ್ ಶ್ರೀಹರಿ ನಟರಾಜ್ ಸಜ್ಜು!

ಗಾಯಗೊಂಡ ಟ್ರಕ್‌ ಚಾಲಕ ಸೇರಿದಂತೆ ಇತರೆ ಪ್ರಯಾಣಿಕರನ್ನು ಸಮೀಪದ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತಡವಾಗಿ ಅವರನ್ನು ಶಿಲ್ಲಾಂಗ್‌ನಲ್ಲಿರುವ ಇಂದಿರಾ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಅಪಘಾತದಲ್ಲಿ ಮೃತಪಟ್ಟ ಡಿ ವಿಶ್ವ ಎಂಬ ಟೇಬಲ್‌ ಟೆನಿಸ್‌ ಆಟಗಾರನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನಿಕಾ ಬಾತ್ರಾ, ಸತ್ಯನ್‌ ಜ್ಞಾನಶೇಖರನ್‌, ಸುತೀರ್ಥ ಮುಖರ್ಜಿ ಹಾಗೂ ಅಚಂತಾ ಶರತ್‌ ಸೇರಿದಂತೆ ದೇಶದ ಅಗ್ರ ದರ್ಜೆಯ ಟೇಬಲ್‌ ಟೆನಿಸ್‌ ಸ್ಟಾರ್‌ಗಳು 83ನೇ ರಾಷ್ಟ್ರೀಯ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಸೋಮವಾರದಿಂದ ಈ ಮಹತ್ವದ ಟೂರ್ನಿ ಆರಂಭವಾಗಲಿದೆ. ಆದರೆ ಇದೇ ಟೂರ್ನಿಯಲ್ಲಿ ಭಾಗವಹಿಸಬೇಕಾಗಿದ್ದ ತಮಿಳುನಾಡು ಆಟಗಾರನ ಸಾವಿನ ಸುದ್ದಿ ಎಲ್ಲರಿಗೂ ನೋವು ತರಿಸಿದೆ.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌: ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿ ಪ್ರಭುತ್ವ!

100ಕ್ಕೂ ಹೆಚ್ಚಿನ ಟೇಬಲ್ ಟೆನಿಸ್‌ ಆಟಗಾರರು ಮೇಘಾಲಯದ ಶಿಲ್ಲಾಂಗ್‌ನಲ್ಲಿ ತಂಗಿದ್ದಾರೆ. ನಾರ್ಥ್‌-ಈಸ್ಟ್‌ ಹಿಲ್‌ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಒಳಾಂಗಣದಲ್ಲಿ ಈ ಟೂರ್ನಿಯ ಪಂದ್ಯಗಳು ಜರುಗಲಿದೆ.
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌