ಆ್ಯಪ್ನಗರ

ಮಗ ಗೆದ್ದ ಚಿನ್ನದ ಪದಕ ಕೈಯಲ್ಲಿ ಹಿಡಿಯಬೇಕೆಂಬ ಅಪ್ಪನ ಕೊನೆಯಾಸೆ ಕೈಗೂಡಲೇ ಇಲ್ಲ

ದೇಶಕ್ಕೆ ಅಭಿಮಾನ ತಂದ ಮಗನ ಈ ಸಾಧನೆ ಕಂಡು ಹಾಸಿಗೆಯಲ್ಲಿ ಮಲಗಿದ್ದ ಬಡ ತಂದೆ ಕಣ್ಣು ತುಂಬಿ ಬಂದಿತ್ತು. ಕ್ಯಾನ್ಸರ್‌ಗೆ ತುತ್ತಾಗಿ ಬದುಕಿನ ಕೊನೆಕ್ಷಣವನ್ನೆದುರಿಸುತ್ತಿದ್ದ ಆ ಜೀವ ಮಗ ಗೆದ್ದ ಚಿನ್ನದ ಪದಕವನ್ನು ಕೈಯಲ್ಲಿ ಹಿಡಿಯಬೇಕೆಂದು ಆಶಿಸಿತ್ತು.

Times Now 4 Sep 2018, 11:04 am
ಹೊಸದಿಲ್ಲಿ: ದೇಶಕ್ಕೆ ಅಭಿಮಾನ ತಂದ ಮಗನ ಈ ಸಾಧನೆ ಕಂಡು ಹಾಸಿಗೆಯಲ್ಲಿ ಮಲಗಿದ್ದ ಬಡ ತಂದೆ ಕಣ್ಣು ತುಂಬಿ ಬಂದಿತ್ತು. ಕ್ಯಾನ್ಸರ್‌ಗೆ ತುತ್ತಾಗಿ ಬದುಕಿನ ಕೊನೆಕ್ಷಣವನ್ನೆದುರಿಸುತ್ತಿದ್ದ ಆ ಜೀವ ಮಗ ಗೆದ್ದ ಚಿನ್ನದ ಪದಕವನ್ನು ಕೈಯಲ್ಲಿ ಹಿಡಿಯಬೇಕೆಂದು ಆಶಿಸಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸ್ವರ್ಣದೊಂದಿಗೆ ಮಗ ಮನೆಹಾದಿ ಹಿಡಿದಿದ್ದ. ಆದರೆ ಆತ ಮನೆ ತಲುವುವ ಕೆಲ ಗಂಟೆಗಳ ಮುನ್ನ ಅಪ್ಪ ಪರಲೋಕದ ಹಾದಿ ಹಿಡಿದಾಗಿತ್ತು. ಕೊನೆಗೂ ಆ ಬಡತಂದೆಯ ಕೊನೆಯಾಸೆ ಆಸೆಯಾಗಿಯೇ ಉಳಿಯಿತು.
Vijaya Karnataka Web Tejinder Pal


ಇದು ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ತೇಜಿಂದರ್ ಪಾಲ್ (23) ಅವರ ಕರುಣಾಜನಕ ಕಥೆ. ಆಗಸ್ಟ್ 25ರಂದು ನಡೆದ ಕಬ್ಬಿಣದ ಚೆಂಡು (ಶಾಟ್ ಪುಟ್) ಎಸೆಯುವ ಸ್ಪರ್ಧೆಯ ಫೈನಲ್‌ನಲ್ಲಿ ತೇಜಿಂದರ್ ಪಾಲ್ ತೂರ್ 20.75 ಮೀ. ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದರು.

ತಮ್ಮ ಮಗ ಈ ಸಾಧನೆ ಮಾಡುವಷ್ಟು ಎತ್ತರಕ್ಕೆ ಬೆಳೆದು ನಿಲ್ಲಲು ತಂದೆ ಕರಮ್ ಸಿಂಗ್ ಮಾಡಿರುವ ತ್ಯಾಗ ಸಾಕಷ್ಟಿತ್ತು. ಕಳೆದೆರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ತಮ್ಮ ಮಗ ಗೆದ್ದ ಪದಕವನ್ನು ನೋಡಬೇಕೆಂಬುದೇ ಮಹದಾಸೆಯಾಗಿತ್ತು. ಪದಕ ಗೆದ್ದ ತೇಜಿಂದರ್ ದೆಹಲಿ ವಿಮಾನ ನಿಲ್ದಾಣದಲ್ಲಿಳಿದು ಪಂಜಾಬ್‌ನಲ್ಲಿರುವ ತಮ್ಮ ಗ್ರಾಮ ಮೊಗಾ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾಗ ತಂದೆ ಅಗಲಿದರೆಂಬ ಹೃದಯ ಹಿಂಡುವ ಸುದ್ದಿ ಬರಸಿಡಿಲಂತೆ ಬಂದೆರಗಿತು.

ಸಿಂಗ್ ಅವರಿಗೆದುರಾಗಿರುವ ಈ ಸಂಕಟಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಘಾತ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ತೋರಿದೆ.


1994ರಲ್ಲಿ ಮೊಗಾ ಗ್ರಾಮದ ನಿವಾಸಿಗಳಾಗಿದ್ದ ಬಡ ರೈತ ಕುಟುಂಬದಲ್ಲಿ ತೇಜಿಂದರ್ ಜನಿಸಿದ್ದ. ಚಿಕ್ಕ ವಯಸ್ಸಲ್ಲಿ ಕ್ರಿಕೆಟಿಗನಾಗುವ ಕನಸು ಕಂಡಿದ್ದ ತೇಜಿಂದರ್ ಪಾಲ್‌ಗೆ ತಂದೆಯ ಪ್ರೋತ್ಸಾಹ ಕಬ್ಬಿಣದ ಚೆಂಡನ್ನು ಕೈಯಲ್ಲಿ ಹಿಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌