ಆ್ಯಪ್ನಗರ

ಯಶಸ್ವಿಯಾಗಲು ಅಂತಿಮ ಸೋಲನ್ನು ಮರೆಯಬೇಕು: ಗೋಪಿಚಂದ್

ದುಬೈನಲ್ಲಿ ಸಾಗಿದ ಬಿಡಬ್ಲ್ಯುಎಫ್ ವರ್ಲ್ಡ್ ಸೂಪರ್ ಸಿರೀಸ್ ಫೈನಲ್ಸ್ ಟೂರ್ನಿಯಲ್ಲಿ ಭಾರತದ ಅಗ್ರಮಾನ್ಯ ಪಿವಿ ಸಿಂಧೂ ಅವರಿಗೆ ವಿಶ್ವ ನಂ.2 ಆಟಗಾರ್ತಿ ಜಪಾನ್‌ನ ಅಕಾನೆ ಯಮಗೂಚಿ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಎದುರಾದ ಸೋಲಿನ ಬಳಿಕ ಪ್ರತಿಕ್ರಿಯಿಸಿರುವ ಕೋಚ್ ಪುಲ್ಲೇಲ ಗೋಪಿಚಂದ್, ಕ್ರೀಡೆಯಲ್ಲಿ ಯಶಸ್ವಿಯಾಗಲು ಮುಂದುವರಿಯಲು ಅಂತಿಮ ಸೋಲನ್ನು ಮರೆಯಬೇಕು ಎಂದಿದ್ದಾರೆ.

TIMESOFINDIA.COM 20 Dec 2017, 4:27 pm
ನೋಯ್ಡಾ: ದುಬೈನಲ್ಲಿ ಸಾಗಿದ ಬಿಡಬ್ಲ್ಯುಎಫ್ ವರ್ಲ್ಡ್ ಸೂಪರ್ ಸಿರೀಸ್ ಫೈನಲ್ಸ್ ಟೂರ್ನಿಯಲ್ಲಿ ಭಾರತದ ಅಗ್ರಮಾನ್ಯ ಪಿವಿ ಸಿಂಧೂ ಅವರಿಗೆ ವಿಶ್ವ ನಂ.2 ಆಟಗಾರ್ತಿ ಜಪಾನ್‌ನ ಅಕಾನೆ ಯಮಗೂಚಿ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಎದುರಾದ ಸೋಲಿನ ಬಳಿಕ ಪ್ರತಿಕ್ರಿಯಿಸಿರುವ ಕೋಚ್ ಪುಲ್ಲೇಲ ಗೋಪಿಚಂದ್, ಕ್ರೀಡೆಯಲ್ಲಿ ಯಶಸ್ವಿಯಾಗಲು ಮುಂದುವರಿಯಲು ಅಂತಿಮ ಸೋಲನ್ನು ಮರೆಯಬೇಕು ಎಂದಿದ್ದಾರೆ.
Vijaya Karnataka Web to succeed you have to forget your last loss p gopichand
ಯಶಸ್ವಿಯಾಗಲು ಅಂತಿಮ ಸೋಲನ್ನು ಮರೆಯಬೇಕು: ಗೋಪಿಚಂದ್


ಟೈಮ್ಸ್ ಆಫ್ ಇಂಡಿಯಾ ಕಚೇರಿಗೆ ಭೇಟಿ ನೀಡಿದ ನಡೆಸಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಗೋಪಿಚಂದ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಟೂರ್ನಿಯುದ್ಧಕ್ಕೂ ಸಿಂಧೂಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು. ಫೈನಲ್ ಅತ್ಯಂತ ಕಠಿಣವಾಗಿದ್ದು, ಸಿಂಧೂಗೆ ನೆಗಡಿ ಸಮಸ್ಯೆ ಬಾಧಿಸಿತ್ತು. ಅಲ್ಲದೆ ಪಂದ್ಯದ ವೇಳೆ ನಿರಂತರವಾಗಿ ಮೂಗು ಒರೆಸುತ್ತಿದ್ದಳು. ಇವೆಲ್ಲದರ ನಡುವೆಯೂ ಕಠಿಣ ಪೈಪೋಟಿ ನೀಡಿರುವ ಆಕೆಗೆ ಅಭಿನಂದನೆಗೆಳು ಎಂದರು.

ಓರ್ವ ತರಬೇತುದಾರನಾಗಿ ತಮ್ಮ ಜವಾಬ್ದಾರಿ ಕುರಿತು ಉಲ್ಲೇಖಿಸಿರುವ ಗೋಪಿಚಂದ್, ತುರ್ತಾಗಿ ಸೋಲಿನಿಂದ ಮುಂದಕ್ಕೆ ಹೆಜ್ಜೆಯಿಡಲು ಆಟಗಾರರಿಗೆ ನೆರವಾಗುವ ಕುರಿತು ಮಾತನಾಡಿದರು. ಕ್ರೀಡೆಯಲ್ಲಿ ಯಶ ಸಾಧಿಸಲು ಸೋಲನ್ನು ಮರೆತು ಮುಂದಕ್ಕೆ ಸಾಗಬೇಕು. ತಾವೇನು ತಪ್ಪು ಮಾಡಿದ್ದೇವೆ ಎಂಬುದರ ಬಗ್ಗೆ ಕೊರಗಿಸಲು ಅನುವು ಮಾಡಿಕೊಡಬಾರದು. ಮಾನಸಿಕವಾಗಿ ತಾಜಾತನ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಓರ್ವ ಕೋಚ್ ಆಗಿ ನಾನು ನೆರವು ಮಾಡಬೇಕಿದೆ ಎಂದರು.

ಮುಂಬರುವ ಟೂರ್ನಿಗಳ ಬಗ್ಗೆ ಮೆಲುಕು ಹಾಕಿರುವ ಕೋಚ್ ಮುಂದಿನ ವರ್ಷ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, 12 ಸೂಪರ್ ಸಿರೀಸ್, ಇಂಡಿಯನ್ ಜಿಪಿ ಹಾಗೂ ಸೂಪರ್ ಸಿರೀಸ್ ಫೈನಲ್ಸ್ ಟೂರ್ನಿಗಳು ಸೇರಿವೆ. ಆಟಗಾರರು ಇದರತ್ತ ಗಮನ ಕೇಂದ್ರಿಕರಿಸಲು ನೆರವಾಗಬೇಕಿದೆ ಎಂದರು.

ಗೋಪಿಚಂದ್ ಮಾರ್ಗದರ್ಶನದಲ್ಲಿ ಸಿಂಧೂ, ಕಿಡಂಬಿ ಶ್ರೀಕಾಂತ್, ಸೈನಾ ನೆಹ್ವಾಲ್, ಎಚ್‌ಎಸ್ ಪ್ರಣೋಯ್, ಬಿ ಸಾಯ್ ಪ್ರಣೀತ್, ಪರುಪ್ಪಳ್ಳಿ ಕಶ್ಯಪ್, ಸೌರಭ್ ಮತ್ತು ಸಮೀರ್ ವರ್ಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌