1983 ವಿಶ್ವಕಪ್ ಅನಿರೀಕ್ಷಿತ
1983ರ ವಿಶ್ವಕಪ್ ನಮಗೆ ಅನಿರೀಕ್ಷಿತವಾಗಿತ್ತು ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದರು.
Agencies 27 May 2019, 5:00 am
ಲಂಡನ್: 1983ರ ವಿಶ್ವಕಪ್ ನಮಗೆ ಅನಿರೀಕ್ಷಿತವಾಗಿತ್ತು ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದರು.
''ಭಾರತ ತಂಡವು ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಲಂಡನ್ಗೆ ಹೊರಟಾಗ ಕಪ್ ಗೆಲ್ಲುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಮುಂಬಯಿಯಿಂದ ನ್ಯೂಯಾರ್ಕ್ಗೆ ಹೊರಟಿದ್ದ ನಾನು ವಿಶ್ವಕಪ್ಗಾಗಿ ಲಂಡನ್ನಲ್ಲಿ ಇಳಿದಿದ್ದೆ. ಆದರೆ, ನಮ್ಮ ತಂಡದ ನಾಯಕರಾಗಿದ್ದ ಕಪಿಲ್ದೇವ್ ನಮಗೆಲ್ಲರಿಗೂ ವಿಶ್ವಾಸ ತುಂಬಿ ಅಪೂರ್ವ ಸಾಧನೆಗೆ ಕಾರಣರಾದರು,'' ಎಂದು ಹೇಳಿದರು.
''ಆ ಹಿಂದಿನ ಎರಡು ವಿಶ್ವಕಪ್ಗಳಲ್ಲಿ ನಮ್ಮ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಟೆಸ್ಟ್ ಕ್ರಿಕೆಟ್ ಮಾನ್ಯತೆ ಪಡೆಯದ ಶ್ರೀಲಂಕಾದ ಎದುರೇ ಸೋತಿದ್ದೆವು. ಆದರೆ, ಕಪಿಲ್ದೇವ್ ತಾವು ಆಡುವ ಜತೆಗೆ ಉಳಿದ ಆಟಗಾರರಿಗೂ ಪ್ರೋತ್ಸಾಹ ನೀಡಿ ವಿಶ್ವಕಪ್ ಗೆಲುವಿನ ನಮ್ಮ ಕಲ್ಪನೆಯನ್ನು ಬದಲಿಸಿದರು. ಪ್ರತಿಯೊಂದು ಪಂದ್ಯಗಳನ್ನು ಗೆಲ್ಲುತ್ತಾ ಸಾಗಿ, ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ಬರೆದೆವು,'' ಎಂದರು.
''ಭಾರತ ತಂಡವು ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಲಂಡನ್ಗೆ ಹೊರಟಾಗ ಕಪ್ ಗೆಲ್ಲುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಮುಂಬಯಿಯಿಂದ ನ್ಯೂಯಾರ್ಕ್ಗೆ ಹೊರಟಿದ್ದ ನಾನು ವಿಶ್ವಕಪ್ಗಾಗಿ ಲಂಡನ್ನಲ್ಲಿ ಇಳಿದಿದ್ದೆ. ಆದರೆ, ನಮ್ಮ ತಂಡದ ನಾಯಕರಾಗಿದ್ದ ಕಪಿಲ್ದೇವ್ ನಮಗೆಲ್ಲರಿಗೂ ವಿಶ್ವಾಸ ತುಂಬಿ ಅಪೂರ್ವ ಸಾಧನೆಗೆ ಕಾರಣರಾದರು,'' ಎಂದು ಹೇಳಿದರು.
''ಆ ಹಿಂದಿನ ಎರಡು ವಿಶ್ವಕಪ್ಗಳಲ್ಲಿ ನಮ್ಮ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಟೆಸ್ಟ್ ಕ್ರಿಕೆಟ್ ಮಾನ್ಯತೆ ಪಡೆಯದ ಶ್ರೀಲಂಕಾದ ಎದುರೇ ಸೋತಿದ್ದೆವು. ಆದರೆ, ಕಪಿಲ್ದೇವ್ ತಾವು ಆಡುವ ಜತೆಗೆ ಉಳಿದ ಆಟಗಾರರಿಗೂ ಪ್ರೋತ್ಸಾಹ ನೀಡಿ ವಿಶ್ವಕಪ್ ಗೆಲುವಿನ ನಮ್ಮ ಕಲ್ಪನೆಯನ್ನು ಬದಲಿಸಿದರು. ಪ್ರತಿಯೊಂದು ಪಂದ್ಯಗಳನ್ನು ಗೆಲ್ಲುತ್ತಾ ಸಾಗಿ, ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ಬರೆದೆವು,'' ಎಂದರು.