ಆ್ಯಪ್ನಗರ

ಏನಾಗಲಿದೆ ಕ್ರೀಡಾಪಟುಗಳ ರಾಜಕೀಯ ಭವಿಷ್ಯ?

ದೇಶದ ಖ್ಯಾತ ಕ್ರೀಡಾಪುಟಗಳಾದ ಒಲಿಂಪಿಕ್ ಪದಕ ವಿಜೇತ ಯೋಗೇಶ್ವರ್ ದತ್, ಮಾಜಿ ಹಾಕಿ ನಾಯಕ ಸಂದೀಪ್ ಸಿಂಗ್ ಮತ್ತು ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತೆ ಬಬಿತಾ ಫೋಗಟ್ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

Vijaya Karnataka Web 24 Oct 2019, 4:38 pm
ಹೊಸದಿಲ್ಲಿ: ಭಾರತೀಯ ರಾಜಕಾರಣದಲ್ಲಿ ಕ್ರೀಡಾಪಟುಗಳು ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಅನೇಕ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಿಂದ ರಾಜಕೀಯ ರಂಗವನ್ನು ಪ್ರವೇಶ ಮಾಡಿದ್ದಾರೆ.
Vijaya Karnataka Web yogeshwar-babita


ನಿವೃತ್ತಿಯ ಬಳಿಕ ಮಾಜಿ ಶೂಟರ್ ರಾಜವರ್ಧನ್ ಸರ್ ರಾಥೋಡ್ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ರಾಜಕೀಯ ಪ್ರವೇಶಿಸಿ ಹೆಚ್ಚಿನ ಯಶಸ್ಸು ಸಾಧಿಸಿದ್ದರು. ಕೀರ್ತಿ ಅಜಾದ್, ಜಸ್ಪಾಲ್ ರಾಣಾ, ಮೊಹಮ್ಮದ್ ಅಜರುದ್ದೀನ್ ಹಾಗೂ ಗೌತಮ್ ಗಂಭೀರ್ ಸಹ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಹರಿಯಾಣ ಫಲಿತಾಂಶ ಮುಖ್ಯಾಂಶಗಳು: ಜಾಟರ ನಾಡಲ್ಲಿ ಕೈ - ಕಮಲ ಜಟಾಪಟಿ

ಇತ್ತೀಚೆಗಷ್ಟೇ ಒಲಿಂಪಿಕ್ ಪದಕವೀರ ಪದ್ಮಶ್ರೀ ಪ್ರಶಸ್ತಿ ವಿಜೇತ ಯೋಗೇಶ್ವರ್ ದತ್, ಮಾಜಿ ಹಾಕಿ ನಾಯಕ ಸಂದೀಪ್ ಸಿಂಗ್ ಮತ್ತು ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತೆ ಬಬಿತಾ ಫೋಗಟ್ ಬಿಜೆಪಿ ಪಕ್ಷವನ್ನು ಸೇರಿದ್ದರು.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ್ ಬರೋಡಾ ಮತ್ತು ಸಂದೀಪ್ ಸಿಂಗ್ ಪೆಹೋವಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಇನ್ನೊಂದೆಡೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದಿರುವ ಬಬಿತಾ ಪೋಗಟ್, ಹರಿಯಾಣದ ದಾದ್ರಿ ಕ್ಷೇತ್ರದಿಂದ ಅಗ್ನಿ ಪರೀಕ್ಷೆಗಿಳಿದಿದ್ದರು. 2012 ಒಲಿಂಪಿಕ್ ಗೇಮ್ಸ್‌ನಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕ ಸಾಧನೆ ಮಾಡಿದ್ದರು.

ಮಹಾರಾಷ್ಟ್ರ, ಹರಿಯಾಣ ಫಲಿತಾಂಶ: ತೀವ್ರ ಕುತೂಹಲ ಮೂಡಿಸಿದ ಹರಿಯಾಣ ಸರಕಾರ ರಚನೆ ಕಸರತ್ತು

ಚುನಾವಣಾ ಫಲಿತಾಂಶ ಮಾಹಿತಿಗಳ ಪ್ರಕಾರ ಸಂದೀಪ್ ಸಿಂಗ್ ಮಾತ್ರ ಗೆಲುವನ್ನು ಬಾರಿಸಿದ್ದಾರೆ. ಆದರೆ ಬಬಿತಾ ಪೋಗಟ್ ಹಾಗೂ ಯೋಗೇಶ್ವರ್ ದತ್ ಸೋಲಿನ ಕಹಿ ಅನುಭವಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌