ಆ್ಯಪ್ನಗರ

Covid 19: ಮೈಕ್ರೋಸಾಫ್ಟ್‌ ಬಿಲ್‌ ಗೇಟ್ಸ್‌ ಅಭಿಪ್ರಾಯವೇನು?

ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೂನ್‌ ವೇಳೆಗೆ ಕೊರೊನಾ ಬಿಕ್ಕಟ್ಟನ್ನು ಹತೋಟಿಗೆ ತರಬಹುದು ಎಂದು ಮೈಕ್ರೊಸಾಫ್ಟ್‌ ಸಹ-ಸ್ಥಾಪಕ, ಶತಕೋಟ್ಯಧಿಪತಿ ಬಿಲ್‌ ಗೇಟ್ಸ್‌ ಸಿಎನ್‌ಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿಅಭಿಪ್ರಾಯಪಟ್ಟಿದ್ದಾರೆ. ಸಿಎನ್‌ಬಿಸಿಗೆ ನೀಡಿದ ಸುದೀರ್ಘ ಸಂದರ್ಶನದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Vijaya Karnataka Web 21 Apr 2020, 12:59 pm
ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೂನ್‌ ವೇಳೆಗೆ ಕೊರೊನಾ ಬಿಕ್ಕಟ್ಟನ್ನು ಹತೋಟಿಗೆ ತರಬಹುದು ಎಂದು ಮೈಕ್ರೊಸಾಫ್ಟ್‌ ಸಹ-ಸ್ಥಾಪಕ, ಶತಕೋಟ್ಯಧಿಪತಿ ಬಿಲ್‌ ಗೇಟ್ಸ್‌ ಸಿಎನ್‌ಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿಅಭಿಪ್ರಾಯಪಟ್ಟಿದ್ದಾರೆ. ಅವರ ಮಾತುಗಳ ಸಂಕ್ಷಿಪ್ತ ರೂಪ ಇಲ್ಲಿದೆ.
Vijaya Karnataka Web bill gates opinion and suggestions on covid 19 situation and control measures
Covid 19: ಮೈಕ್ರೋಸಾಫ್ಟ್‌ ಬಿಲ್‌ ಗೇಟ್ಸ್‌ ಅಭಿಪ್ರಾಯವೇನು?

ಜಗತ್ತು ಇನ್ನೊಂದು ಸಾಂಕ್ರಾಮಿಕ ಪಿಡುಗಿಗೆ ಸಿದ್ಧವಾಗಿಲ್ಲವೆಂದು 2015ರ ಟೆಡ್‌ ಟಾಕ್‌ನಲ್ಲಿನೀವು ಹೇಳಿದ್ದೀರಿ. ಕೋವಿಡ್‌ -19 ವಿಷಯದಲ್ಲಿಇದು ನಿಜವಾಗಿದೆಯೇ?
ಕೊರೊನಾ ವೈರಸ್‌ ಮಾರಕವಾಗಿದ್ದು, ವ್ಯಾಪಕ ಹರಡುವಿಕೆ ಹೊಂದಿದೆ. ನಾವು ಬಹಳಷ್ಟು ವರ್ಷಗಳಿಂದ ಮಾತನಾಡುತ್ತಿದ್ದ ದುಸ್ವಪ್ನ ಇದಾಗಿದೆ. ಇಂಥ ವೈರಸ್‌ಗಳು ನಮ್ಮ ಪ್ರಯಾಣಗಳಿಂದ ಸಂಪೂರ್ಣವಾಗಿ ಜಾಗತಿಕವಾಗಿ ಬಿಡುತ್ತವೆ. ಕೊಲಿಸಿನ್‌ ಇತ್ಯಾದಿ ಲಸಿಕೆಗಳನ್ನು 2015ರ ಬಳಿಕ ಅತ್ಯಂತ ಕಡಿಮೆ ಪ್ರಮಾಣದಲ್ಲಿಅಭಿವೃದ್ಧಿಪಡಿಸಿದೆವು. ಆಗಲೇ ಇಂಥ ಲಸಿಕೆಗಳ ಅಭಿವೃದ್ಧಿಪಡಿಸುವತ್ತ ಗಮನ ನೀಡಿದ್ದರೆ ಈಗ ಇಂತಹ ತೊಂದರೆ ಆಗುತ್ತಿರಲಿಲ್ಲ.


​ಚೀನಾ ಮುಂತಾದೆಡೆ ಈಗ ಯಾವ ರೀತಿಯ ಕ್ರಮಗಳು ಜರುಗುತ್ತಿವೆ. ಮುಂದೆ ಏನು ಮಾಡಬೇಕು?

ಚೀನಾವು ವುಹಾನ್‌ನಲ್ಲಿ ತೀವ್ರ ಕ್ರಮಗಳನ್ನು ಕೈಗೊಂಡಿತು. ವುಹಾನ್‌ನಲ್ಲಿ ಕೊರನಾ ವೈರಸ್‌ ಹರಡುವಿಕೆ ತಡೆಯಲು ಜನರ ಸಂಚಾರವನ್ನು ಸಂಪೂರ್ಣವಾಗಿ ತಡೆಯಲಾಯಿತು. ಹಾಗಾಗಿ ವೈರಸ್‌ ಅವರ ದೇಶದಲ್ಲಿ ಹರಡಲಿಲ್ಲ. ನೀವು ಗಮನಿಸಿರಬಹುದು. ಚೀನಾದಲ್ಲಿಈಗ ಕೆಲವು ಚಟುವಟಿಕೆಗಳು ಆರಂಭವಾಗಿವೆ. ಅಂಗಡಿಗಳ ಬಾಗಿಲುಗಳನ್ನು ತೆರೆಯಲಾಗಿದೆ. ಮತ್ತೆ ಜನರನ್ನು ಒಗ್ಗೂಡಿಸುವ ಕೆಲಸ ಆರಂಭವಾಗಿದೆ. ಈಗ ಅವರು ಏನು ಮಾಡಿದ್ದೇವೆ ಎಂಬ ಮಾಹಿತಿ ಹಂಚಿಕೊಳ್ಳಬೇಕು. ಯಾಕೆಂದರೆ, ಈಗ ಜಗತ್ತಿನಾದ್ಯಂತ ಕೊರೊನಾ ಹರಡಿದೆ.

​ಪರಿಸ್ಥಿತಿ ಯಾವಾಗ ಸುಧಾರಿಸಬಹುದು?

ದೇಶಾದ್ಯಂತ ನಾವೆಲ್ಲರೂ ಒಂದಾಗಿ ಕ್ರಮಕೈಗೊಂಡರೆ, ಅನುಸರಣೆ ಅತ್ಯುತ್ತಮವಾಗಿದ್ದರೆ, ಗೇಟ್‌ ಫೌಂಡೇಷನ್‌ ಮಾಡಿದಂತಹ ಸೆಲ್ಫ್ ಸ್ವಾಬ್‌ನಂಥ ಟೆಸ್ಟಿಂಗ್‌ ಕಿಟ್‌ ಬಳಸಿ ಜೂನ್‌ ವೇಳೆಗೆ ಕೊಂಚ ಪರಿಸ್ಥಿತಿ ಸುಧಾರಿಸಬಹುದು. ಚೀನಾ, ದಕ್ಷಿಣ ಕೊರಿಯಾ ಮುಂತಾದೆಡೆ ಏನು ಮಾಡಿದರು ಎನ್ನುವುದನ್ನು ಅಧ್ಯಯನ ಮಾಡಿ ನಾವೂ ಅದರಂತೆ ನಡೆಯಬೇಕಿದೆ. ಹೀಗಿದ್ದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು.

​ಜನರಿಗೆ ಆರ್ಥಿಕತೆ ಬಗ್ಗೆ ಭಯ ಇದೆ. ಆರ್ಥಿಕತೆ ಮತ್ತೆ ಮೊದಲಿನಂತೆ ತೆರೆದುಕೊಳ್ಳಬಹುದೇ?

ಸರಕಾರವೂ ಎಲ್ಲವನ್ನು ಸರಿ ಮಾಡಬಹುದು ಎಂದು ಯಾರು ಯೋಚಿಸುವ ಸ್ಥಿತಿ ಇಲ್ಲ. ಆರ್ಥಿಕತೆ ಮೊದಲಿನ ಸ್ಥಿತಿಗೆ ಬರಲು ಸಮಯ ಹಿಡಿಯಬಹುದು. ಶೇ.95ರಷ್ಟು ಗುಣಮುಖರಾಗಿಸುವುದು ಅಥವಾ ಲಸಿಕೆಯನ್ನು ಎಲ್ಲರೂ ಬಳಸುವಂತೆ ಆಗುವ ಮಿರಾಕಲ್‌ ಅಥವಾ ಪವಾಡ ಚಿಕಿತ್ಸಕ ವ್ಯವಸ್ಥೆಗಾಗಿ ಸರಕಾರವೂ ಕಾಯುತ್ತಿದೆ.


Digital Technology: ವರ್ಕ್ ಫ್ರಮ್ ಹೋಮ್ ಎಂದರೆ ಏನು?

​ಮುಂದಿನ ಸಾಂಕ್ರಾಮಿಕ ಪಿಡುಗಿಗೆ ಜಗತ್ತು ಹೇಗೆ ಸಿದ್ಧವಾಗಬೇಕು?

ಸಾಂಕ್ರಾಮಿಕ ರೋಗವೊಂದು ಎದುರಾದ ಒಂದು ತಿಂಗಳ ಬಳಿಕ ರೋಗ ನಿರ್ಣಯ ಮಾಡುವ ವ್ಯವಸ್ಥೆ ರೂಪಗೊಂಡರೆ, ಚಿಕಿತ್ಸೆಯ ವಿಧಾನವು ನಾಲ್ಕು ತಿಂಗಳ ಬಳಿಕ ಲಭ್ಯವಾದರೆ, ಲಸಿಕೆಯು ಒಂದು ವರ್ಷದಲ್ಲಿ ಲಭ್ಯವಾದರೆ ಪರಿಸ್ಥಿತಿ ಹೇಗಿರಬಹುದು ಎಂದು ಒಮ್ಮೆ ಯೋಚನೆ ಮಾಡಿ. ಇಂಥ ಪಿಡುಗು ಘಾತೀಯವಾಗಿ ಹಲವು ಪಟ್ಟು ಹೆಚ್ಚು ಜನರಿಗೆ ಹರಡುತ್ತ ಹೋಗುವುದರಿಂದ ಎಷ್ಟು ಬೇಗ ನಾವು ಕ್ರಮ ಕೈಗೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ವಿಜ್ಞಾನದ ಮೂಲಕ ಏನು ಬೇಕಾದರೂ ಮಾಡಬಹುದು. ಮುಂದಿನ ಪಿಡುಗಿಗೆ ನಾವು ಈಗಿನಿಂದಲೇ ಸಿದ್ಧರಾಗಬೇಕು. ಕಾಯಿಲೆ ಬಂದ ನಂತರ ಔಷಧ ಕಂಡುಹಿಡಿಯುವ ಸ್ಥಿತಿ ಉಂಟಾಗಬಾರದು.


Work From Home: ಲಾಕ್‌ಡೌನ್‌ನಲ್ಲಿ ಮನೆಯೇ ತಂತ್ರಾಲಯ!

​ಜಾಗತಿಕ ನಾಯಕರಿಗೆ ತರಾಟೆ

ಚೀನಾದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ ಕಾಣಿಸಿಕೊಂಡ ತಕ್ಷಣವೇ ಟೆಸ್ಟಿಂಗ್‌ ಮತ್ತು ವೈದ್ಯಕೀಯ ಸಲಕರಣೆಗಳಿಗೆ ಹೂಡಿಕೆ ಮಾಡದ ಜಾಗತಿಕ ನಾಯಕರನ್ನು ಬಿಲ್‌ ಗೇಟ್ಸ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಕೆಲವೇ ಕೆಲವು ದೇಶಗಳಿಗೆ ಮಾತ್ರ ಎ ಶ್ರೇಯಾಂಕ ನೀಡಬಹುದು ಎಂದು ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ದೇಶಗಳು ತಮ್ಮ ದೇಶದ ವೆಂಟಿಲೇಟರ್‌, ಐಸಿಯು ಸಾಮರ್ಥ್ಯವನ್ನು ಪರಿಶೀಲನೆ ಮಾಡಿವೆಯೇ? ಎಂದು ಅವರು ಪ್ರಶ್ನಿಸಿದರು. ನಾವು ಯುದ್ಧಕ್ಕೆ ಸಿದ್ಧರಾಗಲು ರಕ್ಷಣಾ ಪ್ರಾಜೆಕ್ಟ್‌ಗಳನ್ನು ಕೈಗೊಳ್ಳುತ್ತೇವೆ. ಆದರೆ, ಈಗ ಯುದ್ಧಕ್ಕಿಂತ ದೊಡ್ಡ ಆಪತ್ತು ಎದುರಾಗಿದೆ. ಆದರೆ, ನಾವು ಸಿದ್ಧರಾಗಿಲ್ಲ. ನಾವು ಈ ಸಾಂಕ್ರಮಿಕಕ್ಕೆ ಸಿದ್ಧರಾಗಿಲ್ಲ. ಆದರೆ, ಇದು ಮುಂದೆ ಎದುರಾಗುವ ಸಾಂಕ್ರಾಮಿಕ ಪಿಡುಗು ಎದುರಿಸಲು ನಮಗೆ ಪಾಠವಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Digital India: ಲಾಕ್‌ಡೌನ್‌ನಲ್ಲಿ ಬೆಳಕು ನೀಡಿದ ನವೋದ್ಯಮಿಗಳ e-ಲೋಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌