ಆ್ಯಪ್ನಗರ

Instagram Bug: ಚೆನ್ನೈ ಯುವಕನಿಗೆ 20 ಲಕ್ಷ ರೂ. ಬಹುಮಾನ

ವಿವಿಧ ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲಿನ ತೊಂದರೆ, ಲೋಪವನ್ನು ಪತ್ತೆಹಚ್ಚಿದವರಿಗೆ ಕಂಪನಿಗಳು ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸುತ್ತವೆ.

Times Now 20 Jul 2019, 3:13 pm
ಚೆನ್ನೈ ಮೂಲದ ಭದ್ರತಾ ಸಂಶೋಧಕ ಲಕ್ಷ್ಮಣ್ ಮುತ್ತಯ್ಯ ಇತ್ತೀಚೆಗೆ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂನಲ್ಲಿನ ದೋಷವೊಂದನ್ನು ಪತ್ತೆಹಚ್ಚಿ ಕಂಪನಿಗೆ ತಿಳಿಸಿದ್ದಕ್ಕೆ 30,000 ಅಮೆರಿಕನ್ ಡಾಲರ್ (ಅಂದಾಜು 20,67,483 ರೂ.) ಮೊತ್ತವನ್ನು ಬಹುಮಾನವಾಗಿ ಪಡೆದಿದ್ದಾರೆ.
Vijaya Karnataka Web Insta


ಮುತ್ತಯ್ಯ ಇನ್‌ಸ್ಟಾಗ್ರಾಂ ಖಾತೆಯೊಂದನ್ನು ವ್ಯಕ್ತಿಯ ಅರಿವಿಗೆ ಬಾರದಂತೆಯೇ ಹ್ಯಾಕ್ ಮಾಡುವ ಲೋಪವನ್ನು ಪತ್ತೆಹಚ್ಚಿದ್ದರು. ನಂತರ ಕಂಪನಿಗೆ ಈ ಕುರಿತು ಇ ಮೇಲ್ ಮಾಡಿದ್ದರು.

ಆದರೆ ಮೊದಲು ಪ್ರತಿಕ್ರಿಯೆ ಬಾರದಿದ್ದರಿಂದ, ನಂತರ ವಿಡಿಯೋ, ದಾಖಲೆ ಮತ್ತು ಸ್ಕ್ರೀನ್ ಶಾಟ್ ಸಮೇತ ಅವರಿಗೆ ಭದ್ರತಾ ಲೋಪವನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು.

ಇದನ್ನು ಗಮನಿಸಿದ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ, ಬಗ್ ಬೌಂಟಿ ಯೋಜನೆಯಡಿ ಮುತ್ತಯ್ಯಗೆ 30,000 ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ನೀಡಿದೆ.

ಜತೆಗೆ ಸಮಸ್ಯೆಯನ್ನು ಸರಿಪಡಿಸಿದೆ. ಅಲ್ಲದೆ ಅಂತಹ ಸಮಸ್ಯೆ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಂಡಿದೆ ಎಂದು ಇನ್‌ಸ್ಟಾಗ್ರಾಂ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌