ಆ್ಯಪ್ನಗರ

BSNL: ಮುಚ್ಚಿದರೆ ಸರಕಾರಕ್ಕೆ ತೊಂದರೆ

ನಷ್ಟದ ಹಾದಿಯಲ್ಲಿರುವ ಬಿಎಸ್‌ಎನ್‌ಎಲ್ ಅನ್ನು ಮುಚ್ಚುವುದು ಸುಲಭದ ಮಾತಲ್ಲ, ಅದರಿಂದ ಸರಕಾರಕ್ಕೆ ಮತ್ತಷ್ಟು ಹೊರೆಯಾಗುವ ಸಾಧ್ಯತೆಯೇ ಹೆಚ್ಚು.

TNN 7 Jul 2019, 2:46 pm
ಆರ್ಥಿಕ ಬಿಕ್ಕಟ್ಟಿನಲ್ಲಿರುವ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಬಿಎಸ್ಸೆನ್ನೆಲ್‌ನ ಪುನಶ್ಚೇತನಕ್ಕೆ 74,000 ಕೋಟಿ ರೂ.ಗಳ ನೆರವನ್ನು ಸರಕಾರ ನೀಡಲು ಪರಿಶೀಲಿಸುತ್ತಿದೆ. ಇದಕ್ಕೆ ಕಾರಣಗಳೂ ಹಲವು. ಬಿಎಸ್ಸೆನ್ನೆಲ್‌ ಮತ್ತು ಎಂಟಿಎನ್‌ಎಲ್‌ ಅನ್ನು ಸ್ಥಗಿತಗೊಳಿಸಿದರೆ ಸರಕಾರದ ಬೊಕ್ಕಸಕ್ಕೆ 1.2 ಲಕ್ಷ ಕೋಟಿ ರೂ. ಹೊರೆಯಾಗಲಿದೆ.
Vijaya Karnataka Web BSNL


ಹೀಗಾಗಿ ಮುಚ್ಚುವ ತೀರ್ಮಾನ ಸಮಂಜಸವಲ್ಲ. ಬದಲಿಗೆ ಪುನಶ್ಚೇತನಕ್ಕೆ ನೆರವಿನ ಪ್ಯಾಕೇಜ್‌ ನೀಡುವುದು ಉತ್ತಮ ಎಂದು ದೂರಸಂಪರ್ಕ ಇಲಾಖೆ ವಾದಿಸಿದೆ ಎನ್ನಲಾಗಿದೆ. ಬಿಎಸ್ಸೆನ್ನೆಲ್‌ನಿಂದ ಬಂಡವಾಳ ಹಿಂತೆಗೆತಕ್ಕೆ ಮುಂದಾದರೆ, ಹೂಡಿಕೆದಾರರು ಸಿಗುವ ಸಾಧ್ಯತೆ ಕಡಿಮೆ. ಬದಲಿಗೆ ಜಂಟಿ ಸಹಭಾಗಿತ್ವದ ಸಾಧ್ಯತೆಯನ್ನು ಪರಿಶೀಲಿಸುವ ನಿರೀಕ್ಷೆ ಇದೆ.

ಬಿಎಸ್ಸೆನ್ನೆಲ್‌ ಮತ್ತು ಎಂಟಿಎನ್‌ಎಲ್‌ನ ಸಾವಿರಾರು ಮಂದಿ ಉದ್ಯೋಗಿಗಳಿಗೆ ಆಕರ್ಷಕ ವಿಆರ್‌ಎಸ್‌ ಪ್ಯಾಕೇಜ್‌, ವಿಆರ್‌ಎಸ್‌ ಪಡೆಯುವ ಉದ್ಯೋಗಿಗಳಿಗೆ ಹೆಚ್ಚುವರಿ ಶೇ.5ರಷ್ಟು ಪರಿಹಾರ ವಿತರಣೆ, 4ಜಿ ಸ್ಪೆಕ್ಟ್ರಮ್‌ ಮಂಜೂರು, ಬಂಡವಾಳ ನೆರವು ಇತ್ಯಾದಿ ಪ್ರಸ್ತಾಪಗಳು ಪರಿಶೀಲನೆಯಲ್ಲಿವೆ.

ನಷ್ಟದಲ್ಲಿರುವ ಅತಿ ದೊಡ್ಡ ಪಿಎಸ್‌ಯು ಆಗಿರುವ ಬಿಎಸ್ಸೆನ್ನೆಲ್‌ 2019-20ರ ಸಾಲಿನಲ್ಲಿ ಅಂದಾಜು 13,804 ಕೋಟಿ ರೂ. ನಷ್ಟ ದಾಖಲಿಸಿದೆ. ಎಂಟಿಎನ್‌ಎಲ್‌ 3,398 ಕೋಟಿ ರೂ. ನಷ್ಟಕ್ಕೀಡಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌