ಆ್ಯಪ್ನಗರ

ಇಂದಿನಿಂದ ಫೇಸ್‌ಬುಕ್‌ನಲ್ಲಿ ಹೊಸ ನಿಯಮ ಜಾರಿ!..ಏನದು ಗೊತ್ತಾ?

ಕೆಲವು ಸಾಮಾಜಿಕ ಬದಲಾವಣೆಗಳೊಂದಿಗೆ ಫೇಸ್‌ಬುಕ್ ತನ್ನನ್ನು ತಾನು ಬದಲಾಯಿಸಿಕೊಳ್ಳಲು ಮತ್ತು ಬಳಕೆದಾರರನ್ನು ಬದಲಾವಣೆಯ ಭಾಗವಾಗಿಸಲು ಪ್ರಯತ್ನಿಸುತ್ತಿದೆ. ಅದರಲ್ಲೂ ಧರ್ಮ, ರಾಜಕೀಯ, ವಿಳಾಸ ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳು ಅನವಶ್ಯಕವಾಗಿವೆ ಎಂದು ಹೊಸ ಬದಲಾವಣೆಯನ್ನು ತರಲು ಮುಂದಾಗಿದೆ ಎಂದು ತಿಳಿದುಬಂದಿದೆ.

Authored byಭಾಸ್ಕರ್ ಶೆಟ್ಟಿ | Vijaya Karnataka Web 1 Dec 2022, 12:19 pm
ಮೆಟಾ ಒಡೆತನದ ಜನಪ್ರಿಯ ಸಾಮಾಜಿಕ ಜಾಲತಾಣ 'ಫೇಸ್‌ಬುಕ್‌' ಇಂದಿನಿಂದ (ಡಿಸೆಂಬರ್ 1) ಹೊಸ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಇಂದಿನಿಂದ ಧಾರ್ಮಿಕ ಮತ್ತು ರಾಜಕೀಯ ವಿಷಯ ಸೇರಿದಂತೆ ಹಲವಾರು ಮಾಹಿತಿ ಕ್ಷೇತ್ರಗಳನ್ನು ಫೇಸ್‌ಬುಕ್ ಪ್ರೊಫೈಲ್‌ಗಳಿಂದ ತೆಗೆದುಹಾಕಲಾಗುತ್ತಿದ್ದು, ಯಾರದೇ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ ಮತ್ತು ಲೈಂಗಿಕ ಆಸಕ್ತಿಗಳನ್ನು ಸೂಚಿಸುವ ವಿಷಯಗಳು ಇದ್ದರೆ ಅವುಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ ಎಂದು ಫೇಸ್‌ಬುಕ್ ಸಂಸ್ಥೆ ತಿಳಿಸಿದೆ.
Vijaya Karnataka Web ಇಂದಿನಿಂದ ಫೇಸ್‌ಬುಕ್‌ನಲ್ಲಿ ಹೊಸ ನಿಯಮ ಜಾರಿ!..ಏನದು ಗೊತ್ತಾ?


ಕೆಲವು ಸಾಮಾಜಿಕ ಬದಲಾವಣೆಗಳೊಂದಿಗೆ ಫೇಸ್‌ಬುಕ್ ತನ್ನನ್ನು ತಾನು ಬದಲಾಯಿಸಿಕೊಳ್ಳಲು ಮತ್ತು ಬಳಕೆದಾರರನ್ನು ಬದಲಾವಣೆಯ ಭಾಗವಾಗಿಸಲು ಪ್ರಯತ್ನಿಸುತ್ತಿದೆ. ಅದರಲ್ಲೂ ಧರ್ಮ, ರಾಜಕೀಯ, ವಿಳಾಸ ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳು ಅನವಶ್ಯಕವಾಗಿವೆ ಎಂದು ಹೊಸ ಬದಲಾವಣೆಯನ್ನು ತರಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ, ಫೇಸ್‌ಬುಕ್ ಸಂಸ್ಥೆಯ ವಕ್ತಾರರು ಹೇಳುವಂತೆ, ಈ ಹೊಸ ಬದಲಾವಣೆಯು ಫೇಸ್‌ಬುಕ್ ಅಪ್ಲಿಕೇಶನ್ ನ್ಯಾವಿಗೇಟ್ ಮಾಡಲು ಮತ್ತು ಬಳಸಲು ಸುಲಭಗೊಳಿಸುವ ನಮ್ಮ ಪ್ರಯತ್ನಗಳ ಭಾಗವಾಗಿದೆ ಎಂದಷ್ಟೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಫೇಸ್‌ಬುಕ್ ಫ್ರೊಫೈಲ್ ಬಯೋ‌ದಲ್ಲಿ ಹೊಸ ಬದಲಾವಣೆಯು ಡಿಸೆಂಬರ್ 1 ರಿಂದ ಹಂತಹಂತವಾಗಿ ಜಾರಿಗೆ ಬರಲಿದೆ. ಪ್ರೊಫೈಲ್‌ನಿಂದ ಇಂತಹ ಮಾಹಿತಿಯನ್ನು ತೆಗೆಯುವುದರಿಂದ ಖಾತೆಯ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಂದು ಫೇಸ್‌ಬುಕ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ನಾವು ಕೆಲವು ಪ್ರೊಫೈಲ್ ಕ್ಷೇತ್ರಗಳನ್ನು ತೆಗೆದುಹಾಕುತ್ತಿದ್ದೇವೆ. ಇವುಗಳಲ್ಲಿ ಆಸಕ್ತಿ, ಧಾರ್ಮಿಕ ವೀಕ್ಷಣೆಗಳು, ರಾಜಕೀಯ ವೀಕ್ಷಣೆಗಳು ಮತ್ತು ವಿಳಾಸಗಳು ಸೇರಿವೆ. ಉಳಿದಂತೆ ಈ ವಿಷಯಗಳ ಬಗ್ಗೆ ಆರೋಗ್ಯಕರ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲು ಅನುಮತಿ ಇರಲಿದೆ ಎಂದು ಹೇಳಿದ್ದಾರೆ.

Instagram ಮತ್ತು Twitter ನಂತಹ ಇತರೆ ಕೆಲವು ಜನಪ್ರಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಸರಳವಾದ ಬಯೋಗಳನ್ನು ರಚಿಸಲು ಅವಕಾಶ ಇದೆ. ಈ ಫ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ರಾಜಕೀಯ ಅಥವಾ ಧಾರ್ಮಿಕ ದೃಷ್ಟಿಕೋನಗಳಂತಹ ನಿರ್ದಿಷ್ಟ ವಿವರಗಳನ್ನು ಸಲ್ಲಿಸದೆ ತಮ್ಮ ಬಗ್ಗೆ ಸ್ವಲ್ಪ ಮಾಹಿತಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ. ಆದರೆ, ಫೇಸ್‌ಬುಕ್‌ ಒಂದರಲ್ಲೇ ಈ ರೀತಿ ಬಯೋಗಳಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ, ಮತ್ತು ಆಸಕ್ತಿಗಳನ್ನು ಸೂಚಿಸಲು ಆಸ್ಪದವಿತ್ತು. ಈ ಅಪವಾದದಿಂದ ಮುಕ್ತವಾಗಲು ಈಗ ಫೇಸ್‌ಬುಕ್‌ ಹೊಸದೊಂದು ಹೆಜ್ಜೆ ಇರಿಸಿದೆ.
ಲೇಖಕರ ಬಗ್ಗೆ
ಭಾಸ್ಕರ್ ಶೆಟ್ಟಿ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತನಾಗಿ 2022 ಮಾರ್ಚ್‌ನಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮುನ್ನ ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 5 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಮುಖವಾಗಿ ತಂತ್ರಜ್ಞಾನ ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಆಸಕ್ತಿಯ ವಿಷಯಗಳು. ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ನನ್ನ ಮೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌