ಆ್ಯಪ್ನಗರ

ಅಧಿಕೃತವಾದ ಸರ್ಕಾರಿ 'ಟ್ರೂಕಾಲರ್' ವ್ಯವಸ್ಥೆ ತರಲು ಮುಂದಾಗಿದೆ ಸರ್ಕಾರ!

ಕರೆ ಮಾಡುವ ಗ್ರಾಹಕರ ಅಧಿಕೃತ ಮಾಹಿತಿಯನ್ನು ತಿಳಿಸುವಂತಹ ವ್ಯವಸ್ಥೆಯನ್ನು ತರಬೇಕೆಂದು ದೂರಸಂಪರ್ಕ ಇಲಾಖೆಯು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ಗೆ ಮನವಿ ಮಾಡಿದ್ದು, ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯ ಅಥವಾ ಸಂಸ್ಥೆಯ ಅಧಿಕೃತ ಮಾಹಿತಿಯು ದೊರೆಯುವಂತೆ ಇರಬೇಕು ಎಂದು ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Vijaya Karnataka Web 23 May 2022, 11:27 am
ನಮಗೆ ಯಾವ ವ್ಯಕ್ತಿ ಕರೆ ಮಾಡುತ್ತಿದ್ದಾರೆ ಎಂದು ತಿಳಿಸಲು ಪ್ರಯತ್ನಿಸುವ ಟ್ರೂ ಕಾಲರ್ ಆಪ್ ರೀತಿಯಲ್ಲೇ ಅಧಿಕೃತ ವ್ಯವಸ್ಥೆಯೊಂದನ್ನು ತರಲು ದೂರಸಂಪರ್ಕ ಇಲಾಖೆ ಮುಂದಾಗಿದೆ. ಕರೆ ಮಾಡುವ ಗ್ರಾಹಕರ ಅಧಿಕೃತ ಮಾಹಿತಿಯನ್ನು ತಿಳಿಸುವಂತಹ ವ್ಯವಸ್ಥೆಯನ್ನು ತರಬೇಕೆಂದು ದೂರಸಂಪರ್ಕ ಇಲಾಖೆಯು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ಗೆ ಮನವಿ ಮಾಡಿದ್ದು, ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯ ಅಥವಾ ಸಂಸ್ಥೆಯ ಅಧಿಕೃತ ಮಾಹಿತಿಯು ದೊರೆಯುವಂತೆ ಇರಬೇಕು ಎಂದು ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ KYC (Know your customer) ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾದ ಬಗ್ಗೆಯ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
Vijaya Karnataka Web ಅಧಿಕೃತವಾದ ಸರ್ಕಾರಿ ಟ್ರೂಕಾಲರ್ ವ್ಯವಸ್ಥೆ ತರಲು ಮುಂದಾಗಿದೆ ಸರ್ಕಾರ!


ಹೌದು, ಸ್ಪ್ಯಾಮ್‌ ಕರೆಗಳನ್ನು ಮಾಡುವ ವಂಚಕರಿಂದ ಜನರನ್ನು ರಕ್ಷಿಸುವ ಸಲುವಾಗಿ ಹಾಗೂ ಕರೆ ಮಾಡಿರುವ ನಿಖರ ವ್ಯಕ್ತಿ ಯಾರು ಎಂದು ತಿಳಿಸುವ ಸಲುವಾಗಿ ಸರ್ಕಾರವೇ ಸರ್ಕಾರವೇ ಟ್ರೂ-ಕಾಲರ್ ರೀತಿಯ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ವ್ಯವಸ್ಥೆಯು ಜಾರಿಗೆ ಬಂದರೆ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯ ಅಧಿಕೃತ ಹೆಸರು ಕಾಣಿಸಿಕೊಳ್ಳುತ್ತದೆ. ಇದರಿಂದ ಜನರು ವಂಚಕರ ಬಗ್ಗೆ ಎಚ್ಚರ ವಹಿಸಬಹುದು ಎಂದು ದೂರಸಂಪರ್ಕ ಇಲಾಖೆಯು ಅಭಿಪ್ರಾಯಪಟ್ಟಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಸಿರುವ ಟ್ರಾಯ್ ಅಧ್ಯಕ್ಷ ಪಿಡಿ ವಘೇಲಾ ಅವರು, ಈ ಕುರಿತು ಸಮಾಲೋಚನೆ ಒಂದೆರಡು ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಅಂದರೆ, ಇಂತಹದೊಂದು ಅಧಿಕೃತ ವ್ಯವಸ್ಥೆಯನ್ನು ತರುವ ಬಗ್ಗೆ ಅವರು ಕೂಡ ಆಶಯ ವ್ಯಕ್ತಪಡಿಸಿದ್ದಾರೆ.
ಏರ್‌ಟೆಲ್ ನಿಂದ ದೇಶದ ಜನತೆಗೆ ಮತ್ತೊಂದು ಬಿಗ್ ಶಾಕ್!..ಬೆಚ್ಚಿಬಿದ್ದ ಗ್ರಾಹಕರು!
"ನಾವು ಇದೀಗ ಮನವಿಯನ್ನು ಸ್ವೀಕರಿಸಿದ್ದೇವೆ ಮತ್ತು ನಾವು ಶೀಘ್ರದಲ್ಲೇ ಇದರ ಕೆಲಸವನ್ನು ಪ್ರಾರಂಭಿಸುತ್ತೇವೆ. ಯಾರಾದರೂ ಕರೆ ಮಾಡಿದಾಗ KYC ಯ ಪ್ರಕಾರ ಹೆಸರು ಕಾಣಿಸಿಕೊಳ್ಳುತ್ತದೆ" ಎಂದು ವಘೇಲಾ ಅವರು ಹೇಳಿದ್ದಾರೆ. ದೂರಸಂಪರ್ಕ ಇಲಾಖೆ ಮಾನದಂಡಗಳ ಪ್ರಕಾರ, ಟೆಲಿಕಾಂ ಕಂಪನಿಗಳು ತೆಗೆದುಕೊಂಡಿರುವ KYC ದಾಖಲೆಗಳಿಗೆ ಅನುಗುಣವಾಗಿ, ಫೋನ್ ಪರದೆಯ ಮೇಲೆ ಅಧಿಕೃತ ಹೆಸರು ಕಾಣಿಸಿಕೊಳ್ಳುವುದನ್ನು ಈ ವ್ಯವಸ್ಥೆಯು ಸಕ್ರಿಯಗೊಳಿಸುತ್ತದೆ ಎಂದು ವಘೇಲಾ ಅವರು ತಿಳಿಸಿದ್ದಾರೆ. ಇನ್ನು KYC-ಆಧಾರಿತ ಕಾಲರ್ ಗುರುತಿನ ಕಾರ್ಯವಿಧಾನವು ಸ್ಪ್ಯಾಮ್ ಕರೆಗಳು ಮತ್ತು ವಂಚನೆಯ ಹೆಚ್ಚುತ್ತಿರುವ ನಿದರ್ಶನಗಳ ವಿರುದ್ಧ ಬಳಕೆದಾರರನ್ನು ರಕ್ಷಿಸುತ್ತದೆ ಎಂದು ತಜ್ಞರು ಹೇಳಿದ್ದು, ಹೊಸ ವ್ಯವಸ್ಥೆಯನ್ನು ಸ್ವಾಗತಿಸಿದ್ದಾರೆ.

KYC ದಾಖಲೆಗಳಿಗೆ ಅನುಗುಣವಾಗಿ, ಅಂದರೆ ಸಿಮ್ ಖರೀದಿಸಿದಾಗ ಗ್ರಾಹಕರು ಒದಗಿಸುವ ಪ್ರಕಾರ ಕರೆ ಮಾಡುವವರ ಹೆಸರನ್ನು ಗುರುತಿಸಲು ಮತ್ತು ಕರೆ ಸ್ವೀಕರಿಸಿದವರಿಗೆ ತೋರಿಸಲಿ ಸಹಾಯ ಮಾಡುತ್ತದೆ ಮತ್ತು ಕ್ರೌಡ್‌ಸೋರ್ಸಿಂಗ್ ಡೇಟಾದ ಆಧಾರದ ಮೇಲೆ ಕರೆ ಮಾಡುವವರನ್ನು ಗುರುತಿಸುವ ಕೆಲವು ಅಪ್ಲಿಕೇಶನ್‌ಗಳಿಗಿಂತ ಹೆಚ್ಚಿನ ನಿಖರತೆ ಮತ್ತು ಪಾರದರ್ಶಕತೆಯನ್ನು ತರುತ್ತದೆ ಎಂದು ಈ ಕ್ರಮವು ಮಹತ್ವದ್ದಾಗಿದೆ. ಆದರೆ, ಇಲ್ಲಿಯೂ ಸಮಸ್ಯೆ ಎದುರಾಗುವ ಸಂಭವವಿದೆ. ಈ ವ್ಯವಸ್ಥೆಯಿಂದ ಗ್ರಾಹಕರು ತಮ್ಮ ಖಾಸಗಿತವನ್ನು ಕಳೆದುಕೊಳ್ಳುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಇಂತಹದೊಂದು ವ್ಯವಸ್ಥೆಯನ್ನು ಜಾರಿಗೆ ತರುವ ಮುನ್ನ ಸರ್ಕಾರವು ಹಲವು ಮಾರ್ಗಗಳ ಬಗ್ಗೆ ಚಿಂತಿಸಬೇಕು. ಇಲ್ಲದಿದ್ದರೆ ಇದು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌