ಆ್ಯಪ್ನಗರ

Koo App: ಕೂ ಆ್ಯಪ್‌ನಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಆತ್ಮ ನಿರ್ಬಾರ್ ಸ್ಪರ್ಧೆಯಲ್ಲಿ ಕೂ ಆ್ಯಪ್ ಮೊದಲ ಸ್ಥಾನ ಪಡೆದುಕೊಂಡು, ಮೈಕ್ರೋ ಬ್ಲಾಗಿಂಗ್‌ ಕ್ಷೇತ್ರದಲ್ಲೇ ಹೆಸರು ಮಾಡಿದೆ. ಕನ್ನಡದ ಈ ಆ್ಯಪ್ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದೆ.

Vijaya Karnataka 31 Oct 2020, 5:45 pm
ದೇಶದಲ್ಲಿ ಜನಪ್ರಿಯತೆ ಗಳಿಸಿರುವ ಟ್ವಿಟರ್‌ ಮಾದರಿಯ ಮೈಕ್ರೋ ಬ್ಲಾಗಿಂಗ್ ಕನ್ನಡದ ಕೂ ಆ್ಯಪ್‌ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಮುಂದಾಗಿದೆ.
Vijaya Karnataka Web KOO App
KOO


ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಇವರೊಟ್ಟಿಗೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ನಟ ನಿರ್ದೇಶಕ ಜಗದೀಶ್ ಮಲ್ನಾಡ್, ನಟಿ ನೀತು ಶೆಟ್ಟಿ, ನವೀನ್‌ ಕೃಷ್ಣ, ಜಾದೂಗಾರ ಕುದ್ರೋಳಿ ಗಣೇಶ್ ಸೇರಿದಂತೆ ಇತರೆ ನಟ ನಟಿಯರು ಹಾಗೂ ಗಾಯಕರು ಭಾಗವಹಿಸಲಿದ್ದಾರೆ.

ಕೂ ಆ್ಯಪ್ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ‌ ಸಿದ್ಧತೆ ಮಾಡಿಕೊಂಡಿದ್ದೇವೆ. ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಯಲ್ಲಿ ಅಷ್ಟೆ ಸೀಮಿತವಾಗಿಸಬಾರದು. ಹೀಗಾಗಿ ನಮ್ಮ ಸಂಸ್ಥೆ ಕನ್ನಡ ಮಾತೃಭಾಷೆಯಲ್ಲೇ ಜನರು ಭಾವನೆಗಳನ್ನು ಹಂಚಿಕೊಳ್ಳಲು ಟ್ವಿಟರ್ ಮಾದರಿಯಲ್ಲೇ ಕೂ ಆ್ಯಪ್‌ನನ್ನು ಅಭಿವೃದ್ಧಿ ಪಡಿಸಿ, ಲಕ್ಷಾಂತರ ಜನ ಬಳಸುವಂತೆ ಮಾಡಲಾಗಿದೆ. ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹ ಕೂ ಆ್ಯಪ್‌ನ ಬಳಸುವ ಮೂಲಕ ಸ್ವತಃ ಕನ್ನಡಿಗರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದರು.

WhatsApp: ಪ್ರತಿದಿನ 10,000 ಕೋಟಿ ಸಂದೇಶ ವಿನಿಮಯ!

ಇತ್ತೀಚೆಗೆ ಪ್ರಧಾನಿ ಅವರು ಕರೆ ಕೊಟ್ಟ ಆತ್ಮ ನಿರ್ಬಾರ್ ಸ್ಪರ್ಧೆಯಲ್ಲಿ ಕೂ ಆ್ಯಪ್ ಮೊದಲ ಸ್ಥಾನ ಪಡೆದುಕೊಂಡು, ಮೈಕ್ರೋ ಬ್ಲಾಗಿಂಗ್‌ ಕ್ಷೇತ್ರದಲ್ಲೇ ಹೆಸರು ಮಾಡಿದೆ. ಕನ್ನಡದ ಈ ಆ್ಯಪ್ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದೆ. ಪ್ರಸ್ತುತ ಸಾವಿರಕ್ಕೂ ಅಧಿಕ ವೃತ್ತಿ ಕ್ಷೇತ್ರದಲ್ಲಿ ಕೂ ಆ್ಯಪ್ ಬಳಕೆಯಲ್ಲಿದೆ. ಲಕ್ಷಾಂತರ ಜನರು, ಸೆಲೆಬ್ರೆಟಿಗಳು, ರಾಜಕಾರಣಿ, ಕ್ರಿಡಾಪಟುಗಳು ಸಹ ಈ ಆ್ಯಪ್ ಬಳಸುತ್ತಿದ್ದಾರೆ ಎಂದು ಅಪ್ರಮೇಯ ಹೇಳಿದ್ದಾರೆ.

Apple One: ಆ್ಯಪಲ್ ಪ್ರೀಮಿಯಂ ಸೇವೆಗಳ ಪ್ಯಾಕ್ ದೇಶದಲ್ಲಿ ಬಿಡುಗಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌