ಆ್ಯಪ್ನಗರ

Aadhaar: ಮಾಹಿತಿ ಸುರಕ್ಷಿತ ಎಂದ ಜನತೆ

ಕೇಂದ್ರ ಸರಕಾರ ಜಾರಿಗೆ ತಂದು 10 ವರ್ಷ ಕಳೆದ ಬಳಿಕ ಆಧಾರ್‌ ಮೇಲೆ ದೇಶದ ಜನರ ನಂಬಿಕೆ ಎಷ್ಟಿದೆ, ಎಷ್ಟು ಮಂದಿ ಇಂದಿಗೂ ಆಧಾರ್‌ ಸಿಗದೆ ವಂಚಿತರಾಗಿದ್ದಾರೆ, ಯುವ ಭಾರತ ಆಧಾರ್‌ ಕಾರ್ಡ್‌ ಪಡೆಯಲು ಎಷ್ಟು ಹುಮ್ಮಸ್ಸು ತೋರಿಸುತ್ತಿದೆ ಎನ್ನುವ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಜನಸಾಮಾನ್ಯರು ಆಧಾರ್‌ಗೆ ‘ಜೈ’ ಎಂದಿದ್ದಾರೆ.

Vijaya Karnataka Web 10 Dec 2019, 10:55 am
ಕೇಂದ್ರ ಸರಕಾರ ಜಾರಿಗೆ ತಂದು 10 ವರ್ಷ ಕಳೆದ ಬಳಿಕ ಆಧಾರ್‌ ಮೇಲೆ ದೇಶದ ಜನರ ನಂಬಿಕೆ ಎಷ್ಟಿದೆ, ಎಷ್ಟು ಮಂದಿ ಇಂದಿಗೂ ಆಧಾರ್‌ ಸಿಗದೆ ವಂಚಿತರಾಗಿದ್ದಾರೆ, ಯುವ ಭಾರತ ಆಧಾರ್‌ ಕಾರ್ಡ್‌ ಪಡೆಯಲು ಎಷ್ಟು ಹುಮ್ಮಸ್ಸು ತೋರಿಸುತ್ತಿದೆ ಎನ್ನುವ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಜನಸಾಮಾನ್ಯರು ಆಧಾರ್‌ಗೆ ‘ಜೈ’ ಎಂದಿದ್ದಾರೆ.
Vijaya Karnataka Web things and facts to know about aadhaar card and uidai
Aadhaar: ಮಾಹಿತಿ ಸುರಕ್ಷಿತ ಎಂದ ಜನತೆ


​ಆಧಾರ್ ಸುರಕ್ಷಿತ

ಆಧಾರ್‌ ಮಾಹಿತಿ ಹ್ಯಾಕರ್ಸ್‌ಗಳ ಕೈಸೇರಿದೆ. ಆಧಾರ್‌ ವ್ಯವಸ್ಥೆಗೆ ಸೂಕ್ತ ಸೈಬರ್‌ ಭದ್ರತೆ ಇಲ್ಲ ಎಂಬ ಸುದ್ದಿಗಳು ಹಲವು ಬಾರಿ ಹರಿದಾಡಿದರೂ ಕೂಡ ದೇಶದ ಜನರು ಆಧಾರ್‌ ಮೇಲಿಟ್ಟಿರುವ ವಿಶ್ವಾಸ ಕುಂದಿಲ್ಲ ಎಂಬುದು ಗಮನಾರ್ಹ. ದೇಶದ ಶೇ. 95 ರಷ್ಟು ಯುವಕರ ಬಳಿ ಆಧಾರ್‌ ಇದೆ. ಜತೆಗೆ 120 ಕೋಟಿ ಜನರ ಪೈಕಿ ಆಧಾರ್‌ ಹೊಂದಿರುವ ಶೇ. 92 ರಷ್ಟು ಮಂದಿ ಅದರ ಬಳಕೆ ಹಾಗೂ ಅದರ ಅನುಕೂಲತೆಗಳಿಂದ ತೃಪ್ತರಾಗಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

​ರಾಜ್ಯವಾರು ಆಧಾರ್ ಸಮೀಕ್ಷೆ

ಒಮಿಡ್‌ಯಾರ್‌ ನೆಟ್‌ವರ್ಕ್‌ ಇಂಡಿಯಾ ಎಂಬ ಸಂಸ್ಥೆ ನೆರವಿನಿಂದ ಡಾಲಬರ್ಗ್‌ ಎಂಬ ಸಾಮಾಜಿಕ ಸಲಹಾ ಸಂಸ್ಥೆ ನಡೆದ ಮೂರನೇ ವರ್ಷದ ರಾಜ್ಯವಾರು ಆಧಾರ್‌ ಸಮೀಕ್ಷೆ ನಡೆಸಿತ್ತು. ಈ ಸಂದರ್ಭ ವಿವಿಧ ವಯೋಮಾನದ, ವಿವಿಧ ವರ್ಗದ, ಕೆಲಸ ಮಾಡುತ್ತಿರುವ ಜನತೆಯನ್ನು ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಅವರು ನೀಡಿರುವ ಉತ್ತರಗಳ ಪ್ರಕಾರ, ಜನರಿಗೆ ಆಧಾರ್ ಬಗ್ಗೆ ನಂಬಿಕೆಯಿದೆ ಮತ್ತು ಆಧಾರ್ ಮಹತ್ವದ ಬಗ್ಗೆ ಅರಿವಿದೆ ಎಂದು ಕಂಡುಬಂದಿದೆ.

​ಆಧಾರ್ ಬಳಕೆ ಎಲ್ಲೆಲ್ಲಿ ಆಗುತ್ತಿದೆ?

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಪ್ರಕಟಿಸಿರುವ ಆಧಾರ್, ಇಂದು ಬಹುತೇಕ ಕೆಲಸ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಬ್ಯಾಂಕ್ ಖಾತೆ ತೆರೆಯಲು, ಸಿಮ್ ಕಾರ್ಡ್ ಖರೀದಿಗೆ, ಎಲ್‌ಪಿಜಿ ಸಬ್ಸಿಡಿ, ಪಡಿತರ ಚೀಟಿ ಪಡೆಯಲು ಆಧಾರ್ ಕಾರ್ಡ್‌ ಬೇಕಾಗುತ್ತದೆ.

​ಆಧಾರ್ ಅಂಕಿ ಅಂಶ

ಶೇ. 33 ಮಂದಿ ಆಧಾರ್ ವ್ಯವಸ್ಥೆಯಲ್ಲಿ ಮಾಹಿತಿ ತಿದ್ದುಪಡಿ ಗೌಪ್ಯವಾಗಿದೆ ಎಂದಿದ್ದಾರೆ. 1.67 ಲಕ್ಷ ನಾಗರಿಕರು ಆಧಾರ್ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶೇ. 90 ಮಂದಿ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಸಂಖ್ಯೆ ನೀಡುವುದು ಕಾನೂನು ಪ್ರಕಾರ ಕಡ್ಡಾಯ ಎಂದು ತಿಳಿದಿದ್ದಾರೆ. ಶೇ. 77 ಮಂದಿ ಎಂ ಆಧಾರ್, ಕ್ಯೂಆರ್ ಕೋಡ್, ವರ್ಚುವಲ್ ಆಧಾರ್ ಸೌಲಭ್ಯಗಳನ್ನು ಬಳಸಿಲ್ಲ.

​ಆಧಾರ್ ಬಗ್ಗೆ ನಿಮಗೆ ತಿಳಿದಿರಲಿ

2009ರಲ್ಲಿ ಮಹಾರಾಷ್ಟ್ರದ ತೆಂಬ್ಲಿಯಲ್ಲಿ ಮೊದಲ ವಿಶಿಷ್ಟ ಗುರುತಿನ ಚೀಟಿ ಹಂಚಲಾಯಿತು. ಶೇ. 95 ಮಂದಿ ದೇಶದಲ್ಲಿ ಆಧಾರ್ ಹೊಂದಿದ್ದಾರೆ. 7. 5 ಕೋಟಿ ಮಕ್ಕಳಿಗೆ ಆಧಾರ್ ಸಂಖ್ಯೆ ಲಭ್ಯವಾಗಿದೆ. ಶೇ. 30 ಮಂದಿ ನಿರಾಶ್ರಿತರ ಬಳಿ ಆಧಾರ್ ಇಲ್ಲ. ಶೇ. 27 ಮಂದಿ ತೃತೀಯ ಲಿಂಗಿಗಳು ಆಧಾರ್ ಹೊಂದಿಲ್ಲ. ಅಸ್ಸಾಂನಲ್ಲಿ ಶೇ. 90 ಮಂದಿ ಬಳಿ ಆಧಾರ್ ಇಲ್ಲ, ಮೇಘಾಲಯದಲ್ಲಿ ಶೇ. 61 ಮಂದಿಯ ಬಳಿ ಆಧಾರ್ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌