ಆ್ಯಪ್ನಗರ

ಭಾರತೀಯರ ನೆರವಿಗೆ ನಿಂತ Vivo: ಆಮ್ಲಜನಕ ಪೂರೈಕೆಗಾಗಿ 2 ಕೋಟಿ ರೂ. ದೇಣಿಗೆ

ಮಹಾಮಾರಿ ವಿರುದ್ಧದ ಆರೋಗ್ಯ ಬಿಕ್ಕಟ್ಟಿನ ಹೋರಾಟಕ್ಕೆ ಅನೇಕರು ಕೈಜೋಡಿಸುತ್ತಿದ್ದು, ಇದೀಗ ಸ್ಮಾರ್ಟ್ ಫೋನ್ ಬ್ರಾಂಡ್ ವಿವೋ ತನ್ನ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದೆ.

Vijaya Karnataka Web 28 Apr 2021, 9:57 am
ಭಾರತದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಎರಡನೇ ಹಂತದ ಕೋವಿಡ್ ಅಲೆಗೆ ಸಿಲುಕಿರುವ ದೇಶ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಇದರಿಂದ ಹೊರಬರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಮೂಲ ಸೌಕರ್ಯಗಳ ಕೊರತೆ ಉಂಟಾಗಿದೆ. ಹೀಗಾಗಿ ಪ್ರತಿದಿನ ನೂರಾರು ಕೋವಿಡ್ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Vijaya Karnataka Web ಭಾರತೀಯರ ನೆರವಿಗೆ ನಿಂತ Vivo: ಆಮ್ಲಜನಕ ಪೂರೈಕೆಗಾಗಿ 2 ಕೋಟಿ ರೂ. ದೇಣಿಗೆ


ಮಹಾಮಾರಿ ವಿರುದ್ಧದ ಆರೋಗ್ಯ ಬಿಕ್ಕಟ್ಟಿನ ಹೋರಾಟಕ್ಕೆ ಅನೇಕರು ಕೈಜೋಡಿಸುತ್ತಿದ್ದು, ಇದೀಗ ಸ್ಮಾರ್ಟ್ ಫೋನ್ ಬ್ರಾಂಡ್ ವಿವೋ ತನ್ನ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದೆ. ಕೋವಿಡ್ 19ಪರಿಹಾರ ಕಾರ್ಯಗಳಿಗೆ ನೆರವಾಗಲು ಮತ್ತು ವೈದ್ಯಕೀಯಆಮ್ಲಜನಕಪೂರೈಕೆಗೆ ನೆರವಾಗಲು 2 ಕೋಟಿ ರೂ. ದೇಣಿಗೆಯನ್ನು ನೀಡುವುದಾಗಿ ವಿವೋ ಸಂಸ್ಥೆ ಘೋಷಿಸಿದೆ.

ಟೆಲಿಗ್ರಾಂ ನಿಂದ ಬಿಗ್ ಅಪ್ಡೇಟ್: ಬಳಕೆದಾರರಿಗೆ ಬೊಂಬಾಟ್ ಫೀಚರ್ಸ್: ಏನದು?

ಕೊರೊನ ವೈರಸ್ ವಿರುದ್ಧದ ಹೋರಾಟದಲ್ಲಿ, ಜವಾಬ್ದಾರಿಯುತ ಕಾರ್ಪೊರೇಟ್ ಆಗಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವ ಬದ್ಧತೆಯಿಂದ ಈ ದೇಣಿಗೆ ನೀಡುತ್ತಿರುವುದಾಗಿ ವಿವೋ ಇಂಡಿಯಾದ ನಿರ್ದೇಶಕ ನಿಪುಣ್ ಮಾರ್ಯಾ ತಿಳಿಸಿದ್ದಾರೆ.

ಕಳೆದ ವರ್ಷ ಕೂಡ ವಿವೋ ಸಂಸ್ಥೆ ಭಾರತೀಯರ ನೆರವಿಗೆ ಧಾವಿಸಿತ್ತು. 2020 ರಲ್ಲಿ ವಿವೋ 9 ಲಕ್ಷ ಮಾಸ್ಕ್ ಗಳು, 15,000 ಪಿಪಿಇ ಕಿಟ್ ಗಳು ಮತ್ತು 50,000 ಲೀಟರ್ ಸ್ಯಾನಿಟೈಜರ್ ಅನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ದೇಣಿಗೆ ನೀಡಿತ್ತು.

ನಿಮ್ಮ ಸ್ಮಾರ್ಟ್ ಫೋನ್ ಹೆಚ್ಚು ಬಿಸಿ ಆಗುತ್ತಿದ್ದರೆ ಕಡೆಗಣಿಸದಿರಿ: ಈ ಟಿಪ್ಸ್ ಬಳಸಿ

ಇನ್ನೂ ಇತ್ತೀಚೆಗಷ್ಟೆ ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ 135 ಕೋಟಿ ರೂ. ನೆರವು ನೀಡಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅವರು, ಭಾರತದಲ್ಲಿನ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿ ನೋಡಿ ಮನಸ್ಸು ಒಡೆದುಹೋದಂತಾಗಿದೆ. ಗೂಗಲ್ ಈ ಕೂಡಲೇ ಭಾರತಕ್ಕೆ ವೈದ್ಯಕೀಯ ಸರಬರಾಜು, ಹೆಚ್ಚಿನ ಅಪಾಯದಲ್ಲಿರುವ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮತ್ತು ನಿರ್ಣಾಯಕ ಮಾಹಿತಿಯನ್ನು ಹರಡಲು ಸಹಾಯ ಮಾಡುವ ಉದ್ದೇಶದಿಂದ 135 ಕೋಟಿ ರೂ ಅನುದಾನ ನೀಡಲಿದೆ ಎಂದು ಟ್ವೀಟ್ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌