ಆ್ಯಪ್ನಗರ

Whatsapp: ವದಂತಿ ಹಬ್ಬಿಸುವ ಖಾತೆ ಬ್ಲಾಕ್‌

ಮೊದಲ ಹಂತದ ಮತದಾನ ಏಪ್ರಿಲ್‌ 11ರಂದು ಆರಂಭವಾಗಿದ್ದು, ಅಂದಿನಿಂದಲೇ ವಾಟ್ಸಪ್ ನಿಯಂತ್ರಕ ಕ್ರಮಗಳನ್ನು ಚುರುಕುಗೊಳಿಸಿದೆ.

Vijaya Karnataka Web 14 Apr 2019, 11:40 am
ಹೊಸದಿಲ್ಲಿ: ಚುನಾವಣೆಗೆ ಸಂಬಂಧಿಸಿ ವಾಟ್ಸಪ್ ಮೂಲಕ ಸುಳ್ಳು ಸುದ್ದಿ, ಪ್ರಚೋದನಕಾರಿ ಸಂಗತಿ, ವದಂತಿಗಳನ್ನು ಹರಡಿಸುತ್ತಿರುವವರನ್ನು ನಿಯಂತ್ರಿಸಲು ಕ್ರಮ ಆರಂಭವಾಗಿದೆ. ವಾಟ್ಸಪ್ ತನ್ನ ಮೆಸೇಜಿಂಗ್‌ ಸರ್ವಿಸ್‌ನಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ಹರಡುತ್ತಿರುವವರ ಮೊಬೈಲ್‌ ಸಂಖ್ಯೆಯನ್ನು ಬ್ಲಾಕ್‌ ಮಾಡುವುದು ಅಥವಾ ಚಾಟ್ಸ್‌ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವುದು ಇತ್ಯಾದಿ ನಿಯಂತ್ರಣ ಕ್ರಮಗಳನ್ನು ಆರಂಭಿಸಿದೆ.
Vijaya Karnataka Web Whatsapp


ಮೊದಲ ಹಂತದ ಮತದಾನ ಏಪ್ರಿಲ್‌ 11ರಂದು ಆರಂಭವಾಗಿದ್ದು, ಅಂದಿನಿಂದಲೇ ವಾಟ್ಸಪ್ ನಿಯಂತ್ರಕ ಕ್ರಮಗಳನ್ನು ಚುರುಕುಗೊಳಿಸಿದೆ. ಚುನಾವಣಾ ಆಯೋಗದ ಜತೆಗಿನ ಇತ್ತೀಚಿನ ಸಂವಹನದಲ್ಲಿ ಈ ಕುರಿತು ವಿವರ ನೀಡಿದೆ.

ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಆಕ್ಷೇಪಾರ್ಹ ಸಂಗತಿ ಅಥವಾ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವವರ ಮೊಬೈಲ್‌ ಸಂಖ್ಯೆಗಳನ್ನು ಪರಿಗಣಿಸಿ, ತನ್ನ ಚಾಟ್‌ ಸರ್ವಿಸ್‌ ರದ್ದುಪಡಿಸುವುದು ಸೇರಿದಂತೆ ನಿಯಂತ್ರಣ ಕ್ರಮಗಳನ್ನು ವಾಟ್ಸಪ್ ಕೈಗೊಳ್ಳುತ್ತಿದೆ.

ಮೊದಲ ಹಂತದ ಮತದಾನ ಆರಂಭವಾದ 48 ಗಂಟೆಗಳ ಅವಧಿಯಲ್ಲಿ ಫೇಸ್‌ಬುಕ್‌ ಇದುವರೆಗೆ 500 ಆಕ್ಷೇಪಾರ್ಹ ಪೋಸ್ಟ್‌ ಮತ್ತು ಲಿಂಕ್‌ಗಳ ವಿರುದ್ಧ ಕ್ರಮ ತೆಗೆದುಕೊಂಡಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣ ವಲಯದಲ್ಲಿ ಫೇಸ್‌ಬುಕ್‌ ಪೋಸ್ಟ್‌ಗಳ ವಿರುದ್ಧ ಅತಿ ಹೆಚ್ಚು ದೂರುಗಳನ್ನು ಚುನಾವಣಾ ಆಯೋಗ ಸ್ವೀಕರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌