ಆ್ಯಪ್ನಗರ

ಇ-ನ್ಯೂಸ್‌: ವಾಟ್ಸಾಪ್‌ ಸಂಖ್ಯೆ ಬದಲಾವಣೆ

ಸದಾ ಕಾಲ ಫೋನ್‌ ಬಳಸುತ್ತಿರುವಾಗ ಬ್ಯಾಟರಿಯದ್ದೇ ಸಮಸ್ಯೆ. ಈ ಕಾರಣಕ್ಕಾಗಿ ಬ್ಯಾಟರಿ ಬ್ಯಾಂಕ್‌ ಅಥವಾ ಪವರ್‌ ಬ್ಯಾಂಕ್‌ಗಳೆಂಬ ಹೆಸರಿನಲ್ಲಿ ಸಾಕಷ್ಟು ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿವೆ

Vijaya Karnataka Web 2 Apr 2018, 11:54 am
ಈ ಮೊದಲು ನೀವು ಒಂದು ಫೋನ್‌ ನಂಬರ್‌ನಿಂದ ಇನ್ನೊಂದಕ್ಕೆ ಬದಲಾಯಿಸಿದಾಗ, ವಾಟ್ಸಾಪ್‌ ವ್ಯವಸ್ಥೆಯನ್ನು ಕೂಡ ಬದಲಾಯಿಸಿಕೊಳ್ಳುವುದಕ್ಕೆ ತುಂಬ ಸಮಸ್ಯೆಯಾಗುತ್ತಿತ್ತು. ಈ ಕೆಲಸ ಸಮಯ ಹಾಗೂ ಶ್ರಮ ಬೇಡುತ್ತಿತ್ತು. ಈಗದು ನಿವಾರಣೆಯಾಗಿದೆ. ಇನ್ನು ಮುಂದೆ ನೀವು ನಿಮ್ಮ ವಾಟ್ಸಾಪ್‌ ನಂಬರ್‌ ಬದಲಾಯಿಸಿದ ಕೂಡಲೇ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಎಲ್ಲರಿಗೂ ಈ ಸಂಗತಿ ರವಾನೆಯಾಗುತ್ತದೆ. ಆ್ಯಂಡ್ರಾಯ್ಡ್‌ ಬೀಟಾ 2.18.97ರ ಆವೃತ್ತಿಯಿಂದ ನಂತರದ್ದಕ್ಕೆ ಇದು ಕೆಲಸ ಮಾಡಲಿದೆ. ಹಾಗೆಯೇ ಐಒಎಸ್‌, ವಿಂಡೋಸ್‌ ಫೋನ್‌ಗಳಲ್ಲೂ ಕೆಲಸ ಮಾಡಲಿದೆ. ಇದರಲ್ಲಿ, ಎಲ್ಲ ಕಾಂಟ್ಯಾ ಕ್ಟುಗಳಿಗೂ ವಾಟ್ಸಾಪ್‌ ಚೇಂಜ್‌ ಮಾಡಬೇಕೆ ಅಥವಾ ಆಯ್ದ ನಂಬರ್‌ಗಳಿಗೆ ಮಾತ್ರವೇ ಎಂಬ ಆಯ್ಕೆಯೂ ಇದೆ. ಹೊಸ ಸಂಖ್ಯೆಗೆ ಮೈಗ್ರೇಷನ್‌ ಆದ ಬಳಿಕ ಹಳೆಯ ಚಾಟ್‌ಗಳು ಹಾಗೇ ಉಳಿದುಕೊಳ್ಳುತ್ತವೆ. ಈ ಹಿಂದೆ, ಕಳಿಸಿದ ಸಂದೇಶವನ್ನು ಡಿಲೀಟ್‌ ಮಾಡುವ ಸೌಲಭ್ಯದ ಕಾಲಾವಧಿಯನ್ನು ವಾಟ್ಸಾಪ್‌ ಇನ್ನಷ್ಟು ವಿಸ್ತರಿಸಿತ್ತು.
Vijaya Karnataka Web whatsapp number change
ಇ-ನ್ಯೂಸ್‌: ವಾಟ್ಸಾಪ್‌ ಸಂಖ್ಯೆ ಬದಲಾವಣೆ


ಬ್ಯಾಟರಿ ಬ್ಯಾಂಕ್‌

ಸದಾ ಕಾಲ ಫೋನ್‌ ಬಳಸುತ್ತಿರುವಾಗ ಬ್ಯಾಟರಿಯದ್ದೇ ಸಮಸ್ಯೆ. ಈ ಕಾರಣಕ್ಕಾಗಿ ಬ್ಯಾಟರಿ ಬ್ಯಾಂಕ್‌ ಅಥವಾ ಪವರ್‌ ಬ್ಯಾಂಕ್‌ಗಳೆಂಬ ಹೆಸರಿನಲ್ಲಿ ಸಾಕಷ್ಟು ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿವೆ. 1000 mAhನಿಂದ 10 ಸಾವಿರ mAhವರೆಗಿನ ಸಾಮರ್ಥ್ಯ‌ದ ಬ್ಯಾಟರಿಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆದರೆ, ಜೆಬ್ರಾನಿಕ್ಸ್‌ ಹೊರತಂದಿರುವ ಈ ಹೊಸ ಪರ್ವ ಬ್ಯಾಂಕ್‌ನ ಸಾಮರ್ಥ್ಯ‌ 20000 mAh. ಅಂದರೆ ಇದರಲ್ಲಿ ಸಾಮಾನ್ಯ 3 ಸಾವಿರ mAhಸಾಮರ್ಥ್ಯ‌ದ ಬ್ಯಾಟರಿ ಇರುವ ಸ್ಮಾರ್ಟ್‌ಫೋನ್‌ಗಳನ್ನು ನಾಲ್ಕೈದು ಬಾರಿಯಾದರೂ ಪೂರ್ತಿಯಾಗಿ ಚಾರ್ಜ್‌ ಮಾಡಬಲ್ಲಷ್ಟು ಸಾಮರ್ಥ್ಯ‌ವಿದೆ. ಇದು ದೂರದೂರಿಗೆ ಪ್ರಯಾಣ ಮಾಡುವಾಗ, ಚಾರ್ಜರ್‌ ಇಲ್ಲದಿದ್ದರೆ ಅಥವಾ ದೀರ್ಘ ಸಮಯ ಕರೆಂಟ್‌ ಕೊಟ್ಟಾಗಲೆಲ್ಲ ಉಪಯೋಗಕ್ಕೆ ಬರಬಹುದು. ಇದರಲ್ಲಿ ಎಲ್‌ಇಡಿ ಡಿಸ್ಪ್ಲೇ ಇದೆ. ಮೈಕ್ರೋ ಯುಎಸ್‌ಬಿ ಇನ್‌ಪುಟ್‌ ಹಾಗೂ ಎರಡು ಔಟ್‌ಪುಟ್‌ ಪೋರ್ಟ್‌ಗಳಿವೆ. ಜತೆಗೆ ಎಲ್‌ಇಡಿ ಟಾರ್ಚ್‌ ಕೂಡ ಇರುವುದರಿಂದ ಬಹೂಪಯೋಗಿ.

ತಿದ್ದಿಕೊಂಡ ಫೇಸ್‌ಬುಕ್‌

ಫೇಸ್‌ಬುಕ್‌ ಹೆಸರು ಕೆಡಿಸಿಕೊಂಡಿದೆ. ಬಳಕೆದಾರರ ಮಾಹಿತಿಯನ್ನು ಡೇಟಾ ಉತ್ಖನನ ಸಂಸ್ಥೆಗಳಿಗೆ ಮಾರಿಕೊಂಡದ್ದಕ್ಕಾಗಿ ವಿಶ್ವದೆಲ್ಲೆಡೆ ಗ್ರಾಹಕರು ಅದರ ಮೇಲೆ ಸಿಟ್ಟಾಗಿದ್ದಾರೆ. ಭಾರತದಲ್ಲೂ ಕೂಡ, ಚುನಾವಣೆಯಲ್ಲಿ ಜನಾಭಿಪ್ರಾಯ ಮ್ಯಾನಿಪ್ಯುಲೇಟ್‌ ಮಾಡುವ ಯತ್ನದಲ್ಲಿ ಕೈಜೋಡಿಸಿದ್ದಾಗಿ ವರದಿಯಾಗಿದೆ. ಫೇಸ್‌ಬುಕ್‌ ಸ್ಥಾಪಕ ಜುಕರ್‌ಬರ್ಗ್‌ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಗುಡುಗಿದ ಬಳಿಕ, ಜುಕರ್‌ಬರ್ಗ್‌ ಕ್ಷಮೆಯಾಚಿಸಿದ್ದಾರೆ. ಈಗ ಸದ್ಯಕ್ಕೆ, ಆಗಿರುವ ತಪ್ಪನ್ನು ತಿದ್ದಿಕೊಳ್ಳುವ ಕೆಲಸಕ್ಕೆ ಫೇಸ್‌ಬುಕ್‌ ಮುಂದಾಗಿದೆ. ಫೇಸ್‌ಬುಕ್‌ನಲ್ಲಿ ಮುಖ್ಯ ಬಾಧೆ ಟ್ರಾಲ್‌ಗಳದ್ದು. ಸುಳ್ಳು ಹೆಸರು, ಐಡಿಗಳ ಮೂಲಕ ವಂಚಿಸುತ್ತಿರುವ, ಆನ್‌ಲೈನ್‌ ದಾಳಿಗಳನ್ನು ಮಾಡುತ್ತಿರುವ ದೊಡ್ಡದೊಂದು ಸಮೂಹವೇ ಇದೆ. ಜೊತೆಗೆ ಸುಳ್ಳು ಸುದ್ದಿ ಹರಡುವ ಜಾಲ. ಇಂಥವರನ್ನು ಗುರುತಿಸಿ ಕಿತ್ತುಹಾಕುವುದಾಗಿ ಜುಕರ್‌ಬರ್ಗ್‌ ಹೇಳಿದ್ದಾರೆ. ಸುಳ್ಳು ಫೋಟೊಗಳು, ಸುಳ್ಳು ವಿಡಿಯೋಗಳನ್ನು ಪರಿಶೀಲಿಸಿ ಕಿತ್ತುಹಾಕುವುದಾಗಿ, ಫ್ಯಾಕ್ಟ್ಚೆಕ್ಕಿಂಗ್‌ ಮಾಡುವುದಾಗಿ ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌