ಆ್ಯಪ್ನಗರ

ಭಾರತದ ಈ ನಗರಗಳು ಯಾರಿಂದ ತಮ್ಮ ಹೆಸರುಗಳನ್ನು ಪಡೆದವು ಗೊತ್ತಾ?

Authored by ಸೌಮ್ಯ ಟೇಮ್ಕರ್ | Vijaya Karnataka Web 14 Mar 2023, 5:10 pm

PC:Unsplash

ಪ್ರಪಂಚದ ಯಾವುದೇ ಒಂದು ಮೂಲೆಗೆ ಹೋದರು ಆ ಸ್ಥಳ ಅಥವಾ ಪ್ರದೇಶವು ತನ್ನದೇ ಆದ ಹೆಸರನ್ನು ಹೊಂದಿರುತ್ತದೆ. 10 ಕಿ.ಮೀ ಅಂತರದ ಊರುಗಳು ಕೂಡ ವಿಶೇಷವಾದ ಹೆಸರುಗಳನ್ನು ಹೊಂದಿರುತ್ತವೆ. ಇನ್ನು, ಲೇಖನದಲ್ಲಿ ಭಾರತದ ಮುಂಬೈ, ಚಂಡೀಗಢ, ಜೈಪುರ, ಗಾಂಧಿನಗರ, ಭೂಪಾಲ್, ರಾಯ್‌ಪುರ, ತಿರುವನಂತಪುರಂ, ಚೆನ್ನೈ, ಕೋಲ್ಕತ್ತಾ, ಲಕ್ನೋ ಪಟ್ಟಣ ಪ್ರದೇಶಗಳು ಕೆಲವೊಂದು ಪ್ರಭಾವಿ ವ್ಯಕ್ತಿಗಳ ಹೆಸರಿನಿಂದ ಹೆಸರು ಪಡೆದುಕೊಂಡಿವೆ.

ಲೇಖನದಲ್ಲಿ ಅಂತಹ 5 ಪಟ್ಟಣಗಳ ಬಗ್ಗೆ ಮಾಹಿತಿ ನೀಡಲಾಗಿದೆ ಓದಿ.

Vijaya Karnataka Web do you know how these indian cities got their names from
ಭಾರತದ ಈ ನಗರಗಳು ಯಾರಿಂದ ತಮ್ಮ ಹೆಸರುಗಳನ್ನು ಪಡೆದವು ಗೊತ್ತಾ?


ಜೈಪುರ

PC: Unsplash


ರಾಜಸ್ಥಾನದ ಜೈಪುರ್‌ವನ್ನು ಭಾರತದ ಪಿಂಕ್‌ ಸಿಟಿ ಎಂದೇ ಕರೆಯುತ್ತಾರೆ. ಜೈಪುರ ಎಂಬ ಹೆಸರು ಆ ಪ್ರದೇಶದಲ್ಲಿ ಆಳ್ವಿಕೆ ಮಾಡುತ್ತಿದ್ದ ರಾಜ ಮಹರಾಜ್‌ ಜೈ ಸಿಂಗ್‌ ೨ ಅವರ ಹೆಸರಿನಿಂದ ಜೈಪುರ ಎಂಬ ಹೆಸರು ಆ ಪಟ್ಟಣಕ್ಕೆ ಬಂದಿತು.

ಜೈಪುರವು ಅದ್ಭುತವಾದ ಐತಿಹಾಸಿಕ ಸ್ಮಾರಕಗಳಿಗೆ ಪ್ರಖ್ಯಾತಿ ಪಡೆದಿದೆ. ಜೈಪುರ ಹವಾ ಮಹಲ್‌, ಗರ್ಹ್‌ ಗಣೇಶ ದೇವಾಲಯ, ಜಲ್ ಮಹಲ್‌, ಸಿಟಿ ಪ್ಯಾಲೆಸ್‌, ಅಮೀರ್ ಕೋಟೆ, ಜಂತರ್ ಮಂತರ್, ಜೈಗಢ್‌ ಕೋಟೆ, ಬಿರ್ಲಾ ಮಂದಿರ, ಗಲ್ತಾಜಿ, ಗೋವಿಂದ್ ದೇವ್‌ ಜಿ ದೇವಾಲಯ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಗಾಂಧಿನಗರ

PC: Unsplash

ಗುಜರಾತ್‌ನ ರಾಜಧಾನಿಯಾಗಿರುವ ಗಾಂಧಿನಗರವು ಮಹಾತ್ಮ ಗಾಂಧಿಯವರ ಹೆಸರಿನಿಂದ ಗಾಂಧಿನಗರ ಎಂಬ ಹೆಸರು ಪಡೆದುಕೊಂಡಿದೆ. ಇದು ಅಹಮದಾಬಾದ್‌ನಿಂದ ಸುಮಾರು 23 ಕಿಮೀ ದೂರದಲ್ಲಿದೆ.

ಗಾಂಧಿನಗರದಲ್ಲಿ ಅಕ್ಷರಧಾಮ ದೇವಸ್ಥಾನ, ಅದಲಾಜ್ ಸ್ಟೆಪ್‌ವೆಲ್, ಮಕ್ಕಳ ಉದ್ಯಾನವನ, ಸರಿತಾ ಉದ್ಯಾನ, ಫನ್ ವರ್ಲ್ಡ್, ಕುಶಲಕರ್ಮಿ ಗ್ರಾಮ ಸೇರಿದಂತೆ ಇನ್ನು ಅನೇಕ ಪ್ರೇಕ್ಷಣೀಯ ಸ್ಥಳಗಳು ಬಹಳ ಜನಪ್ರಿಯವಾಗಿದೆ.

ಚಂಡೀಗಢ​

PC: Unsplash

ಪಂಜಾಬ್‌ ಹಾಗು ಹರಿಯಾಣದ ರಾಜಧಾನಿಯಾಗಿರುವ ಚಂಡೀಗಢ ಬಹಳ ಜನಪ್ರಿಯ ಪಟ್ಟಣವಾಗಿದೆ. ಚಂಡೀಗಢ ಎಂಬ ಪಟ್ಟಣದ ಹೆಸರು ತಾಯಿ ಚಂಡಿಯ ಹೆಸರಿನಿಂದ ಬಂದಿದೆ. ದೆಹಲಿಯಿಂದ ಸುಮಾರು ೨೬೫ ಕಿ.ಮೀ ದೂರದಲ್ಲಿ ಚಂಡೀಗಢವಿದೆ.

ಚಂಡೀಗಢದಲ್ಲಿ ರಾಕ್ ಗಾರ್ಡನ್, ಸುಖನಾ ಸರೋವರದಲ್ಲಿ ದೋಣಿ ವಿಹಾರ, ಲೀಸರ್ ವ್ಯಾಲಿ ಮತ್ತು ರೋಸ್ ಗಾರ್ಡನ್ ಬಹಳ ಹೆಸರುವಾಸಿ ಪ್ರೇಕ್ಷಣೀಯ ಸ್ಥಳಗಳಾಗಿವೆ. ಏಷ್ಯಾದ ಅತ್ಯಂತ ವಿಸ್ತಾರವಾದ ಗುಲಾಬಿ ಉದ್ಯಾನವನ ಇಲ್ಲಿದೆ.

​​ಮುಂಬೈ​

PC: Unsplash

ಕನಸಿನ ನಗರಿ ಎಂದೇ ಕರೆಯಲಾಗುವ ಮುಂಬೈನ ಹೆಸರು ಮುಂಬಾ ಎಂಬ ದೇವಿಯ ಹೆಸರಿನಿಂದ ಬಂದಿದೆ. ಮುಂಬೈ ಜನನಿಬಿಡ ನಗರವಾಗಿದೆ. ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾಗಿರುವ ಮುಂಬೈನಲ್ಲಿ ಎಲಿಫೆಂಟಾ ಗುಹೆಗಳು, ಮರೈನ್ ಡ್ರೈವ್, ಜುಹು ಬೀಚ್, ಕೊಲಾಬಾ ಕಾಸ್‌ವೇ, ಗೇಟ್‌ವೇ ಆಫ್ ಇಂಡಿಯಾ, ಫಿಲ್ಮ್ ಸಿಟಿ, ಹ್ಯಾಂಗಿಂಗ್ ಗಾರ್ಡನ್ಸ್, ಮೃಗಾಲಯ, ಮ್ಯೂಸಿಯಂ ಇನ್ನು ಅನೇಕ ಪ್ರವಾಸಿ ಆಕರ್ಷಣೆಗಳಿವೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿರುವ ಈ ಬೀಚ್‌ಗಳನ್ನು ನೀವು ಸಂದರ್ಶಿಸಿದ್ದೀರಾ?

ತಿರುವನಂತಪುರಂ

PC:Unsplash

ಕೇರಳ ರಾಜ್ಯದ ರಾಜಧಾನಿಯಾಗಿರುವ ತಿರುವನಂತಪುರಂನ ಹೆಸರು ಅಲ್ಲಿ ನೆಲೆಸಿರುವ ತಿರುವನಂತ ಸ್ವಾಮಿಯಿಂದ ಪಡೆದುಕೊಂಡಿದೆ. ಇಲ್ಲಿ ಅರಮನೆ ವಸ್ತುಸಂಗ್ರಹಾಲಯ, ಅಟ್ಟುಕಲ್ ಭಗವತಿ ದೇವಸ್ಥಾನ, ಪದ್ಮನಾಭಪುರಂ ಅರಮನೆ, ನೇಪಿಯರ್ ಮ್ಯೂಸಿಯಂ, ಪ್ರಿಯದರ್ಶಿನಿ ಬಾಹ್ಯಾಕಾಶ ತಾರಾಲಯ, ವಿಝಿಂಜಂ ರಾಕ್-ಕಟ್ ಗುಹೆ, ತಿರುವನಂತಪುರಂ ಮೃಗಾಲಯ, ವಿಝಿಂಜಂ ಲೈಟ್‌ಹೌಸ್, ಮ್ಯಾಜಿಕ್ ಪ್ಲಾನೆಟ್, ಪದ್ಮನಾಭ ಸ್ವಾಮಿ ಟೆಂಪಲ್, ಪದ್ಮನಾಭ ಸ್ವಾಮಿ ದೇವಾಲಯ ಸೇರಿದಂತೆ ಇನ್ನು ಅನೇಕ ಸ್ಥಳಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಇದನ್ನೂ ಓದಿ: IRCTC ಭಾರತ ನೇಪಾಳ ಅಷ್ಟ ಯಾತ್ರೆ: ಇಷ್ಟು ಕಡಿಮೆ ಬೆಲೆಯಲ್ಲಿ ಮಾಡಬಹುದು ಎಂದರೆ ನಂಬಲು ಕಷ್ಟ ಬಿಡಿ​

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ