ಆ್ಯಪ್ನಗರ

ಭಾರತ: ಈ ಗ್ರಾಮದ ಜನರು ಸಂವಿಧಾನದ ನಿಮಯಗಳನ್ನು ಪಾಲಿಸುವುದಿಲ್ಲವಂತೆ…!

 ಭಾರತದಲ್ಲಿರುವ ಈ ವಿಚಿತ್ರವಾದ ಗ್ರಾಮ ಸಂವಿಧಾನದ ನಿಯಮಗಳನ್ನು ಅನುಸರಿಸುವುದಿಲ್ಲವಂತೆ.

Authored by ಸೌಮ್ಯ ಟೇಮ್ಕರ್ | Vijaya Karnataka Web 16 Feb 2023, 5:26 pm

PC: A.sachit

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿನ ಸಂವಿಧಾನವು ವಿವಿಧ ಜಾತಿ, ಧರ್ಮ ಮತ್ತು ವಿವಿಧ ಭಾಷೆಗಳನ್ನು ಮಾತನಾಡುವ ಜನರಿಗೆ ಸಮಾನವಾಗಿದೆ. ಮುಖ್ಯವಾಗಿ ದೇಶದ ಕಾನೂನು ಸುವ್ಯವಸ್ಥೆಯ ಆಧಾರದ ಮೇಲೆ ನಡೆಯುತ್ತದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಸಂವಿಧಾನದ ಕಾನೂನು, ನಿಯಮಾವಳಿಗಳನ್ನು ಪಾಲಿಸಲೇಬೇಕು.

ಆದರೆ ಭಾರತದ ಒಂದು ಗ್ರಾಮ ಸಂವಿಧಾನದ ಯಾವುದೇ ನಿಯಮಗಳನ್ನು ಪಾಲಿಸುವುದಿಲ್ಲ ಎಂದರೆ ನೀವು ನಂಬಲೇಬೇಕು. ಹಿಂದಿನ ಕಾಲದಲ್ಲಿ ಇದ್ದ ಹಾಗೆ, ಈ ಗ್ರಾಮವು ತನ್ನದೇ ಆದ ನ್ಯಾಯಾಂಗ ಹಾಗು ಕಾರ್ಯಂಗವನ್ನು ಹೊಂದಿದೆ. ಅಷ್ಟಕ್ಕೂ ಆ ವಿಚಿತ್ರವಾದ ಭಾರತದ ಗ್ರಾಮವಾದರು ಯಾವುದು? ಏಕೆ ಅವರು ಸಂವಿಧಾನದ ನಿಯಮಾವಳಿಗಳನ್ನು ಪಾಲಿಸುವುದಿಲ್ಲ ಎಂಬುದನ್ನು ಇಲ್ಲಿ ತಿಳಿಯಿರಿ.

Vijaya Karnataka Web facts about malana village in kannada
ಭಾರತ: ಈ ಗ್ರಾಮದ ಜನರು ಸಂವಿಧಾನದ ನಿಮಯಗಳನ್ನು ಪಾಲಿಸುವುದಿಲ್ಲವಂತೆ…!


ಮಲಾನಾ ಗ್ರಾಮ

PC:Jaypee


ಈ ಮಲಾನಾ ಗ್ರಾಮ ಇರುವುದು ಹಿಮಾಚಲ ಪ್ರದೇಶ ರಾಜ್ಯದ ಕುಲು ಜಿಲ್ಲೆಯಲ್ಲಿ. ಈ ಗ್ರಾಮವು ಸಮುದ್ರಮಟ್ಟದಿಂದ ಸುಮಾರು 12,000 ಅಡಿ ಎತ್ತರದಲ್ಲಿದೆ. ಮಲಾನಾ ಗ್ರಾಮವು ನಿಜಕ್ಕೂ ಪ್ರಕೃತಿಯಿಂದ ಆರ್ಶೀವದಿಸ್ಪಟ್ಟಿದೆ. ಗ್ರಾಮ ಆಳವಾದ ಹಳ್ಳಗಳು ಹಾಗು ಪರ್ವತಗಳಿಂದ ಆವೃತವಾಗಿದೆ.

ಇದು ಭಾರತದ ಅತ್ಯಂತ ವಿಚಿತ್ರವಾದ ಗ್ರಾಮಗಳಲ್ಲಿ ಒಂದು ಎಂದೆನಿಸಿಕೊಂಡಿದೆ. ಇಲ್ಲಿ ಭಾರತೀಯ ಕಾನೂನನ್ನು ಜನರು ಅನುಸರಿಸುವುದಿಲ್ಲ. ಹಳ್ಳಿಗರು ತಮ್ಮದೇ ಆದ ಕೆಲವು ನಿಯಮಗಳನ್ನು ಹಾಗು ಸಂಸತ್ತನ್ನು ಹೊಂದಿದೆ. ಅವರ ಆಧಾರದ ಮೇಲೆ ಮಾತ್ರ ಎಲ್ಲಾ ನಿರ್ಧಾರಗಳು ತೆಗೆದುಕೊಳ್ಳಲಾಗುತ್ತದೆ.

ಹಾಗಾದರೆ ಮಲಾನಾ ಗ್ರಾಮದ ಕಾನೂನು ಯಾವುದು?

PC: Rohansandhu

ಈ ಗ್ರಾಮವು ತನ್ನದೇ ಆದ ವಿಭಿನ್ನ ಸಂವಿಧಾನವನ್ನು ಹೊಂದಿದೆ. ಗ್ರಾಮವು ಎರಡು ಸದನಗಳನ್ನು ಹೊಂದಿದೆ. ಅವುಗಳೆಂದರೆ, ಮೇಲ್ಮನೆ ಮತ್ತು ಕೆಳಮನೆ. ಮೇಲ್ಮನೆಯಲ್ಲಿ 11 ಸದಸ್ಯರಿದ್ದಾರೆ. ಇವರಲ್ಲಿ ಮೂವರು ಕಾರದಾರ, ಗುರು ಹಾಗು ಪೂಜಾರಿ. ಅವರು ಖಾಯಂ ಸದಸ್ಯರು ಎಂಬುದನ್ನು ನಾವು ನಿಮಗೆ ಹೇಳಬೇಕು.

ಉಳಿದ 8 ಸದಸ್ಯರನ್ನು ಗ್ರಾಮಸ್ಥರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಅಚ್ಚರಿ ಏನಪ್ಪ ಅಂದರೆ, ಸದನದ ಪ್ರತಿ ಮನೆಯಿಂದ ಒಬ್ಬ ಸದಸ್ಯರು ಪ್ರತಿನಿಧಿಯಾಗಿರುತ್ತಾರೆ. ಸಂಸತ್ ಭವನವಾಗಿ ಇಲ್ಲಿ ಚೌಪಲ್ ಇದೆ. ಅಲ್ಲಿ ಎಲ್ಲಾ ವಿವಾದಗಳನ್ನು ಮತ್ತು ಎಲ್ಲಾ ನಿರ್ಧಾರಗಳು ಇತ್ಯರ್ಥವಾಗುತ್ತದೆ.


ಈ ಹಳ್ಳಿಯಲ್ಲಿ ಹೀಗೆ ಮಾಡಿದರೆ ಅಪರಾಧ

PC:Accesscrawl

ಜೊತೆಗೆ ಈ ಹಳ್ಳಿಯು ಕೆಲವು ನಿಯಮಗಳನ್ನು ಹೊಂದಿದೆ. ಅದೇನೆಂದರೆ, ಗ್ರಾಮದಲ್ಲಿರುವ ಗೋಡೆಗಳನ್ನು ಯಾರು ಮುಟ್ಟುವಂತಿಲ್ಲ. ಇದೇನಿದು? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು. ಗ್ರಾಮದ ಗೋಡೆಗಳನ್ನು ಹೊರಗಿನ ಜನರು ಸ್ಪರ್ಶಿಸುವಂತಿಲ್ಲ. ಒಂದು ವೇಳೆ ಗೋಡೆಯನ್ನು ಮುಟ್ಟಿದ್ದೆ ಆದರೆ ಅವರಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಮಲಾನಾ ಗ್ರಾಮದಲ್ಲಿ ಪ್ರವಾಸೋದ್ಯಮ

PC:Shepi003

ಈ ಗ್ರಾಮದ ಜನರು ಕನಾಶಿ ಎಂಬ ವಿಭಿನ್ನವಾದ ಭಾಷೆಯನ್ನಾಡುತ್ತಾರೆ. ಈ ಭಾಷೆಯನ್ನು ಹೊರಗಿನವರು ಕಲಿಯಲು ನಿಷೇಧಿಸಲಾಗಿದೆ. ಪ್ರವಾಸಿಗರು ಗ್ರಾಮದಲ್ಲಿ ಉಳಿಯಲು ಸಾಧ್ಯವಿಲ್ಲದಿದ್ದರೂ, ಟೆಂಟ್‌ಗಳನ್ನು ಹಾಕಿಕೊಳ್ಳುವ ಮೂಲಕ ಉಳಿಯಬಹುದು.

ಇದನ್ನೂ ಓದಿ: ನಿಮ್ಮ ನೆಚ್ಚಿನ ಆಟಗಾರ ಹಾರ್ದಿಕ್‌ ಪಾಂಡ್ಯ ವಿವಾಹವಾದ ಈ ಐಷಾರಾಮಿ ಹೋಟೆಲ್‌ನ ಬಾಡಿಗೆ ಎಷ್ಟು ಗೊತ್ತಾ?

ಮಲಾನಾ ಗ್ರಾಮವನ್ನು ತಲುಪುವ ಬಗೆ ಹೇಗೆ?

PC:Rohit Roy

ಮಲಾನಾ ಗ್ರಾಮವು ಕುಲುವಿನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ರೈಲು ನಿಲ್ದಾಣವು ಹಳ್ಳಿಯಿಂದ ಹೆಚ್ಚು ದೂರದಲ್ಲಿರುವ ಕಾರಣ ಬಸ್ಸುಗಳ ಮೂಲಕ ಗ್ರಾಮಕ್ಕೆ ತಲುಪುವುದು ಉತ್ತಮ.

ಬಸ್‌ ನಿಲ್ದಾಣದಿಂದ ಸುಮಾರು 3 ರಿಂದ 4 ಕಿ.ಮೀ ಕಾಲ್ನಡಿಗೆಯ ಮೂಲಕ ಗ್ರಾಮವನ್ನು ತಲುಪಬೇಕು. ಇನ್ನು, ಗ್ರಾಮವು ಪಾರ್ಕಿಂಗ್‌ ಸೌಲಭ್ಯವನ್ನು ಹೊಂದಿಲ್ಲ.

ಇದನ್ನೂ ಓದಿ: ತಾಜ್‌ ಮಹಲ್‌: ಫೆಬ್ರವರಿ ತಿಂಗಳ ಈ 3 ದಿನಗಳು ಉಚಿತ ಪ್ರವೇಶ ಪಡೆಯಬಹುದು

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ