ಆ್ಯಪ್ನಗರ

ಸ್ನೇಹಿತರ ಜೊತೆ ಥ್ರಿಲ್ಲಿಂಗ್‌ ಟ್ರಿಪ್‌ ಮಾಡಲು ಕರ್ನಾಟಕದ ಈ ತಾಣಗಳು ಸೂಪರ್



Authored by ಸೌಮ್ಯ ಟೇಮ್ಕರ್ | Vijaya Karnataka Web 14 Jun 2023, 2:17 pm

PC: Pixabay

ಸ್ನೇಹಿತರೊಟ್ಟಿಗೆ ಪ್ರವಾಸ ನಿಜಕ್ಕೂ ಮರೆಯಲಾಗದಂತಹ ಅನುಭವವನ್ನು ಉಂಟು ಮಾಡುತ್ತದೆ. ಜೀವನದ ಕೊನೆಯವರೆವಿಗೂ ಆ ಸವಿ ನೆನಪುಗಳು ನಮ್ಮನ್ನು ಸಿಹಿಯಾಗಿಸುತ್ತದೆ. ಜೂನ್‌ ತಿಂಗಳ ರಜೆಯಲ್ಲಿ ನೀವು ಸಾಕಷ್ಟು ಕರ್ನಾಟಕದ ತಾಣಗಳನ್ನು ಸಂದರ್ಶಿಸಬಹುದು.

ನಮ್ಮ ಕರ್ನಾಟಕದಲ್ಲಿ ಅಸಂಖ್ಯಾತ ಪ್ರವಾಸಿ ಆಕರ್ಷಣೆಗಳಿವೆ. ಒಂದೊಂದು ತಾಣವು ತನ್ನದೇ ಆದ ಅನನ್ಯವಾದ ಅನುಭವಗಳನ್ನು ಉಂಟು ಮಾಡುತ್ತವೆ. ಸಾಹಸಗಳನ್ನು ಆನಂದಿಸುವ ಮಂದಿ ನಿಸ್ಸಂದೇಹವಾಗಿ ಲೇಖನದಲ್ಲಿ ಹೇಳಲಾಗಿರುವ ಸ್ಥಳಗಳಿಗೆ ಹೋಗಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ.

Vijaya Karnataka Web best places to visit with friends in karnataka
ಸ್ನೇಹಿತರ ಜೊತೆ ಥ್ರಿಲ್ಲಿಂಗ್‌ ಟ್ರಿಪ್‌ ಮಾಡಲು ಕರ್ನಾಟಕದ ಈ ತಾಣಗಳು ಸೂಪರ್


ಶ್ರವಣಬೆಳಗೊಳ

PC: Ananth H V

ವಿಂಧ್ಯಗಿರಿ ಬೆಟ್ಟ ಹಾಗು ಕಲ್ಲಿನ ಶಿಖರಗಳಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಜೈನ ಯಾತ್ರಿಕ ಸ್ಥಳವೇ ಶ್ರವಣಬೆಳಗೊಳವಾಗಿದೆ. ಇದು ಕೇವಲ ಜೈನ ಧರ್ಮದ ಜನರನ್ನು ಮಾತ್ರ ಆಕರ್ಷಿಸುವುದಿಲ್ಲ ಬದಲಾಗಿ ಇತರೆ ಧರ್ಮದ ಜನರು ಕೂಡ ಶ್ರವಣಬೆಳಗೊಳದ ಬಾಹುಬಲಿಯನ್ನು ದರ್ಶಿಸಲು ಭೇಟಿ ನೀಡುತ್ತಾರೆ.

ಏಕಶಿಲಾ ಗೊಮ್ಮಟೇಶ್ವರ ವಿಗ್ರಹ ಸೇರಿದಂತೆ ಇಲ್ಲಿ ಸಾಕಷ್ಟು ಪುರಾತನ ಆಲಯಗಳು, ಜೈನ ಮಠಗಳಿವೆ. ಪಟ್ಟಣದ ವಿಹಂಗಮ ನೋಟವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

ದುಬಾರೆ ಆನೆ ಶಿಬಿರ

PC: Pixabay

ಕೂರ್ಗ್‌ ಪ್ರವಾಸದಲ್ಲಿ ನೀವು ಮಿಸ್ ಮಾಡಿಕೊಳ್ಳಬಾರದ ತಾಣವೆಂದರೆ ಅದು ದುಬಾರೆ ಆನೆ ಶಿಬಿರ. ನಿಸರ್ಗ ಪ್ರೇಮಿಗಳಿಗೆ ಬಹುಶಃ ಈ ತಾಣ ತುಂಬಾನೇ ಇಷ್ಟವಾಗುತ್ತದೆ. ಬೃಹತ್‌ ವನ್ಯಜೀವಿಗಳ ಅಭಯಾರಣ್ಯ ಇಲ್ಲಿದೆ. ಆನೆಗಳಿಗೆ ಸ್ನಾನ ಮಾಡಿಸುವ ದೃಶ್ಯಗಳನ್ನು ನೀವು ಇಲ್ಲಿ ನೋಡಬಹುದು.

ಆನೆ ಸವಾರಿ, ನಿಚ್ಚಳವಾಗಿರುವ ನೀರಿನಲ್ಲಿ ದೋಣಿ ಸವಾರಿಯನ್ನು ಜನರು ಇಲ್ಲಿ ಕೈಗೊಳ್ಳುತ್ತಾರೆ. ಸ್ಪಟಿಕ ಸ್ಪಷ್ಟವಾದ ನೀರಿನಲ್ಲಿ ಜನರು ಜಲಕ್ರೀಡೆಯಾಡುತ್ತಾರೆ. ಶಿಬಿರದ ಸಮೀಪದಲ್ಲಿ ಕೊರಾಕಲ್ ರೈಡಿಂಗ್, ಮೀನುಗಾರಿಕೆ, ಆನೆ ಸವಾರಿ, ಟ್ರೆಕ್ಕಿಂಗ್ ಮತ್ತು ರಿವರ್ ರಾಫ್ಟಿಂಗ್‌ನಂತಹ ಕೆಲವು ಸಾಹಸಮಯ ಮೋಜಿನ ಚಟುವಟಿಕೆಗಳನ್ನು ಆನಂದಿಸಬಹುದು.

ಹೊರನಾಡು

PC: Gnanapiti

ಶ್ರೀ ಶಾರದಾ ಪೀಠ, ಸಿರಿಮನೆ ಜಲಪಾತ, ವಿದ್ಯಾಶಂಕರ ದೇವಸ್ಥಾನ, ಲಕ್ಯಾ ಅಣೆಕಟ್ಟು ಸೇರಿದಂತೆ ಇನ್ನು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಹೊರನಾಡಿನಲ್ಲಿದೆ. ಹೊರನಾಡು ಗ್ರಾಮಕ್ಕೆ ಹೋಗುವ ದಾರಿಯು ಹಚ್ಚ ಹಸಿರಿನಿಂದ ಕೂಡಿದ ಚಹಾದ ತೋಟಗಳಿಗೆ ಹೆಸರುವಾಸಿಯಾಗಿದೆ. ಸ್ನೇಹಿತರೊಟ್ಟಿಗೆ ಹೋದಾಗ ಸಿರಿಮನೆ ಜಲಪಾತದಲ್ಲಿ ಮಿಂದೇಳುವುದನ್ನು ಮರೆಯದಿರಿ.

​​ಆಗುಂಬೆ​

PC: Pixabay

ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲಾಗುವ ಆಗುಂಬೆಯಲ್ಲಿ ಬರ್ಕಾನ ಜಲಪಾತ, ಜೋಗಿ ಗುಂಡಿ ಜಲಪಾತ, ಒನಕೆ ಅಬ್ಬಿ ಜಲಪಾತ ಮತ್ತು ಕೂಡ್ಲು ತೀರ್ಥ ಜಲಪಾತಗಳಂತಹ ರಮಣೀಯ ಜಲಧಾರೆಗಳಿವೆ.

ಅಷ್ಟೇ ಅಲ್ಲ, ಚುಮು ಚುಮು ಚಳಿಯನ್ನು ನೀಡುವ ಆಗುಂಬೆಯಲ್ಲಿ ಸನ್ಸೆಟ್ ಪಾಯಿಂಟ್ ತುಂಬಾನೇ ಜನಪ್ರಿಯವಾಗಿದೆ. ಮೋಜು-ಮಸ್ತಿ ಮಾಡಲು ಸ್ನೇಹಿತರು ಇಲ್ಲಿಗೆ ತಪ್ಪದೇ ಭೇಟಿ ನೀಡಬೇಕು.

ಇದನ್ನೂ ಓದಿ: ಕೂರ್ಗ್‌ನಿಂದ 20 ಕಿ.ಮೀ ದೂರದ ದುಬಾರೆ ಆನೆ ಶಿಬಿರದಲ್ಲಿ ಅಬ್ಬಬ್ಬಾ…ಹೀಗೆಲ್ಲಾ ಎಂಜಾಯ್‌ ಮಾಡಬಹುದಾ?

​​ಕೊಡಚಾದ್ರಿ​

PC: Pixabay

ಕರ್ನಾಟಕದ ಸಾಹಸಿಗರು ಹಾಗು ಸ್ನೇಹಿತರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಸ್ಥಳಗಳಲ್ಲಿ ಕೊಡಚಾದ್ರಿ ಕೂಡ ಒಂದಾಗಿದೆ. ಸಮುದ್ರಮಟ್ಟದಿಂದ ಸುಮಾರು 1343 ಮೀಟರ್ ಎತ್ತರದಲ್ಲಿರುವ ಕೊಡಚಾದ್ರಿ ಟ್ರೆಕ್ಕಿಂಗ್‌ ಪ್ರೇಮಿಗಳಿಗೆ ಅತ್ಯುತ್ತಮ ಅನುಭವ ನೀಡುತ್ತದೆ.

ಪರ್ವತ ಶಿಖರವು ಹಲವಾರು ದಟ್ಟವಾದ ಅರಣ್ಯದಿಂದ ಆವೃತವಾಗಿದೆ. ಇನ್ನು, ಅಳಿವಿನಂಚಿನಲ್ಲಿರುವ ಅನೇಕ ಸಸ್ಯ ಹಾಗು ಪ್ರಾಣಿಗಳನ್ನು ಕೊಡಚಾದ್ರಿಯಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ: ಶಂಕರಾಚಾರ್ಯರು ಧ್ಯಾನ ಮಾಡಿದ ಈ ಬೆಟ್ಟಕ್ಕೆ ಭೇಟಿ ನೀಡಿದ್ದೀರಾ?

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ