ಗೋವಾ ಕೇವಲ ಕಡಲತೀರಗಳು ಮತ್ತು ಮಸಾಲೆ ತೋಟಗಳಿಗೆ ಸೀಮಿತವಾಗಿಲ್ಲ, ಏಕೆಂದರೆ ಇದು ಬಹುಕಾಂತೀಯ ದೂಧ್ ಸಾಗರ್ ಜಲಪಾತಕ್ಕೂ ನೆಲೆಯಾಗಿದೆ. ಈಗ ಗೋವಾದಲ್ಲಿನ ಪ್ರಯಾಣದ ನಿರ್ಬಂಧಗಳನ್ನು ಹೆಚ್ಚಾಗಿ ತೆಗೆದುಹಾಕಲಾಗಿದೆ, ಪ್ರವಾಸಿಗರು ಈ ಸ್ಥಳವನ್ನು ಶೀಘ್ರದಲ್ಲಿಯೇ ಭೇಟಿ ನೀಡಬಹುದು. ನೀವೂ ಕೂಡಾ ಈ ಲಾಕ್ಡೌನ್ ನಿಂದಾಗಿ ಬೇಸತ್ತಿದ್ದು, ಹೊರಗಡೆ ಸುತ್ತಾಡಲು ಯೋಚಿಸಿದ್ದರೆ ಗೋವಾಕ್ಕೆ ಪ್ಲ್ಯಾನ್ ಹಾಕಿಕೊಳ್ಳಬಹುದು.
ವಾರಾಂತ್ಯ ಚಾರಣ
ಕರ್ನಾಟಕ, ಗೋವಾ ರಾಜ್ಯದ ಗಡಿಯಲ್ಲಿರುವ ದೂಧ್ಸಾಗರ್ ಜಲಪಾತ 306 ಅಡಿಗಳ ಎತ್ತರದಿಂದ ಹಂತ ಹಂತವಾಗಿ ಧುಮುಕುತ್ತ ಮುಂದೆ ಗೋವಾ ರಾಜ್ಯದಲ್ಲಿ ಹರಿಯುತ್ತದೆ. ವರದಿಗಳ ಪ್ರಕಾರ, ಕರ್ನಾಟಕ ಮತ್ತು ಇತರ ಸ್ಥಳಗಳ ಸಾಹಸ ಸಂಸ್ಥೆಗಳು ಈ ವಾರಾಂತ್ಯದಲ್ಲಿ ಜಲಪಾತಗಳಿಗೆ ಚಾರಣವನ್ನು ಕಾಯ್ದಿರಿಸಿವೆ. ಇದಲ್ಲದೆ, ಜಲಪಾತಗಳಿಗೆ ಜೀಪ್ ಸಫಾರಿಗಳು ಕೂಡ ಶೀಘ್ರದಲ್ಲೇ ತೆರೆಯಲ್ಪಡುತ್ತವೆ.
ಚಾರಣದ ಮೂಲಕ
ಗೋವಾದ ದೂಧ್ ಸಾಗರ್ ಜಲಪಾತವನ್ನು ಚಾರಣದ ಮೂಲಕ ರೈಲ್ವೆ ಹಳಿಗಳ ಮೂಲಕ ಪ್ರವೇಶಿಸಬಹುದು. ಇದು ಕಾಡಿನಲ್ಲಿನ ಶುದ್ಧ ನೀರಿನ ತೊರೆಗಳ ಮೂಲಕ ನೈಸರ್ಗಿಕ ಸೌಂದರ್ಯವನ್ನುಕಣ್ತುಂಬಿಸಿಕೊಳ್ಳಲು ಸುಂದರವಾದ ಪ್ರಯಾಣವಾಗಿದೆ. ಕೊಲೆಮ್ನ ಚಾರಣ ಗುಂಪುಗಳು ಮತ್ತು ಹೋಟೆಲ್ಗಳು ಸಹ ದೂಧ್ ಸಾಗರ್ ಜಲಪಾತಕ್ಕೆ ವಿಶೇಷ ಚಾರಣ ಪ್ಯಾಕೇಜ್ಗಳನ್ನು ನೀಡಲು ಪ್ರಾರಂಭಿಸಿವೆ ಮತ್ತು ಅಕ್ಟೋಬರ್ ಮೊದಲ ವಾರದವರೆಗೆ ತಮ್ಡಿ ಸುರ್ಲಾ ಜಲಪಾತಗಳಿಗೆ ಕಾಡಿನ ಮೂಲಕ ಚಾರಣಗಳನ್ನು ನೀಡುತ್ತವೆ.
ಜೀಪ್ ಸಫಾರಿ
ಸರ್ಕಾರದ ನಿಯಮಗಳ ಪ್ರಕಾರ, ಅಕ್ಟೋಬರ್ 2 ರಿಂದ ಜೀಪ್ ಸಫಾರಿ ಪ್ರಾರಂಭವಾದ ನಂತರ, ಚಾರಣ ಪ್ಯಾಕೇಜ್ಗಳನ್ನು ತಡೆಹಿಡಿಯಲಾಗುತ್ತದೆ. ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಸುಮಾರು 10000 ಪ್ರವಾಸಿಗರು ಕೆಲವೇ ವಾರಗಳಲ್ಲಿ ದುಧ್ಸಾಗರ್ ಜಲಪಾತಕ್ಕೆ ಭೇಟಿ ನೀಡಿದ್ದರು. ಇಲ್ಲಿಗೆ ಭೇಟಿ ನೀಡಿದವರಲ್ಲಿ ಹೆಚ್ಚಿನ ಪ್ರವಾಸಿಗರು ಬೆಂಗಳೂರು ಮತ್ತು ಮುಂಬೈನಿಂದ ಬಂದಿದ್ದರು.
ತಲುಪುವುದು ಹೇಗೆ?
PC: Istock
ನೀವು ರೈಲಿನಲ್ಲಿದೂಧ್ ಸಾಗರ್ಗೆ ಪ್ರಯಾಣಿಸುತ್ತಿದ್ದರೆ, ಯಾವುದೇ ಮೂರು ಆಯ್ಕೆಗಳನ್ನು ಆರಿಸಿ. ಮೊದಲ ಆಯ್ಕೆ ಗೋವಾದ ಮಡ್ಗಾಂವ್ನಿಂದ ಕುಲೆಮ್ಗೆ ಬೆಳಿಗ್ಗೆ ರೈಲು ತೆಗೆದುಕೊಳ್ಳುವುದು .
ಪರ್ಯಾಯವಾಗಿ, ಕ್ಯಾಸಲ್ ರಾಕ್ ನಿಲ್ದಾಣಕ್ಕೆ ರೈಲಿನ ಮೂಲಕ ಪ್ರಯಾಣಿಸಿ ಹತ್ತಿರದ ಸುರಂಗದಲ್ಲಿ ದೂಧ್ ಸಾಗರ್ ಜಲಪಾತಕ್ಕೆ ಇಳಿಯಿರಿ. ದೂಧ್ಸಾಗರ್ ಫಾಲ್ಸ್ಗೆ ಹೋಗಲು ರೈಲ್ವೆ ದರ ಅಗ್ಗವಾಗಿದ್ದರೂ, ಜಲಪಾತ ವೀಕ್ಷಣೆ ಮಾತ್ರ ತೀರಾ ದುಬಾರಿ. ರೈಲ್ವೆ ಹಳಿ ಮೇಲೆ ಸಾರ್ವಜನಿಕರಿಗೆ ಸಂಚಾರ ನಿಷೇಧಿಸಿದ ಬಳಿಕ ಜಲಪಾತದ ಕೆಳ ತುದಿಗೆ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಹಾರ ಚುರುಕಾಗಿದೆ.
To read in English click: Goa’s Dudhsagar waterfalls opens to trekkers