ಆ್ಯಪ್ನಗರ

ಹೋಳಿ ಹಬ್ಬದ ರಜೆಗೆ ಬೆಂಗಳೂರಿನಿಂದ ಇಂತಹ ತಾಣಗಳ ಪ್ರವಾಸ ಮಾಡಿ

 ಹೋಳಿ ಹಬ್ಬದ ರಜೆಯನ್ನು ಸ್ನೇಹಿತರೊಟ್ಟಿಗೆ ಎಂಜಾಯ್‌ ಮಾಡಲು ಬೆಂಗಳೂರಿನಿಂದ ಇಂತಹ ತಾಣಗಳ ಪ್ರವಾಸ ಯೋಜಿಸಿ.

Authored by ಸೌಮ್ಯ ಟೇಮ್ಕರ್ | Vijaya Karnataka Web 28 Feb 2023, 12:38 pm

PC: iStock

ಹೋಳಿ ಹಬ್ಬದ ರಜೆಯನ್ನು ಸ್ವಲ್ಪ ಡಿಫರೆಂಟ್‌ ಆಗಿ ಕಳೆಯಬೇಕು ಎಂದು ನಿಮಗನಿಸಿದರೆ ಕೆಲವು ರಮಣೀಯವಾದ ತಾಣಗಳ ಪ್ರವಾಸ ಯೋಜಿಸಿ. ಬೆಂಗಳೂರು ಸುತ್ತಮುತ್ತ ಆಫ್‌ಬೀಟ್ ಗೆಟ್‌ವೇಗಳು ಸಾಕಷ್ಟಿವೆ. ಅವುಗಳು ನಿಮ್ಮ ಪ್ರವಾಸದ ಸಾರ್ಥಕತೆಯನ್ನು ಉಂಟು ಮಾಡಬಹುದು.

ಸ್ನೇಹಿತರು, ಕುಟುಂಬದವರೊಂದಿಗೆ ಲೇಖನದಲ್ಲಿ ಹೇಳಲಾಗಿರುವ ತಾಣಕ್ಕೆ ಎರಡು ದಿನದ ಪ್ರವಾಸಕ್ಕೆ ಹೋಗಬಹುದು.

Vijaya Karnataka Web explore these scenic places near bangalore for holi vacation
ಹೋಳಿ ಹಬ್ಬದ ರಜೆಗೆ ಬೆಂಗಳೂರಿನಿಂದ ಇಂತಹ ತಾಣಗಳ ಪ್ರವಾಸ ಮಾಡಿ


ಬೈಲಕುಪ್ಪೆ

PC:VASANTH S.N.


ಬೆಂಗಳೂರಿನಿಂದ ಬೈಲಕುಪ್ಪೆಗೆ ಸುಮಾರು 220 ಕಿಮೀ ದೂರದಲ್ಲಿದೆ. ವಾರಾಂತ್ಯದ ಸಮಯದಲ್ಲಿ ಬೆಂಗಳೂರು ಮಂದಿ ಹೆಚ್ಚಾಗಿ ಪ್ರವಾಸ ಯೋಜಿಸುವ ತಾಣಗಳಲ್ಲಿ ಬೈಲಕುಪ್ಪೆ ಕೂಡ ಒಂದು. ಅಲ್ಲದೆ, ಇದು ಆಸಕ್ತಿದಾಯಕ ಮತ್ತು ಆಫ್‌ಬೀಟ್ ವಿಹಾರ ತಾಣವಾಗಿದೆ.

ಇದು ವಿಶ್ವದ ಎರಡನೇ ಅತಿದೊಡ್ಡ ಟಿಬೆಟಿಯನ್ ವಸಾಹತು ನೆಲೆಯಾಗಿದೆ ಮತ್ತು ನೀವು ಇಲ್ಲಿ ಕೆಲವು ಸುಂದರವಾದ ಬೌದ್ಧ ಮಠಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಬಹುದು. ಈ ಸ್ಥಳವು ಲಿಟಲ್ ಟಿಬೆಟ್ ಎಂದೂ ಪ್ರಸಿದ್ಧವಾಗಿದೆ. ಕುಶಾಲನಗರವು ಬೈಲಕುಪ್ಪೆಯಿಂದ ಕೇವಲ 6 ಕಿ.ಮೀ ದೂರದಲ್ಲಿದೆ.

ಕಬಿನಿ

PC:Gnissah

ಬೆಂಗಳೂರಿನಿಂದ ಕಬಿನಿ ಸುಮಾರು 203 ಕಿ.ಮೀ ದೂರದಲ್ಲಿದೆ. ಇದು

ಪ್ರಸಿದ್ಧ ಅರಣ್ಯ ಮೀಸಲು ಪ್ರದೇಶವಾಗಿದೆ. ಅರಣ್ಯ ಪ್ರವಾಸದ ಮೂಲಕ ಪ್ರಕೃತಿಗೆ ಹತ್ತಿರವಾಗಬಹುದು. ಇಲ್ಲಿ ನೀವು ಉಳಿಯಲು ಕ್ಯಾಂಪಿಂಗ್ ಅಥವಾ ಐಷಾರಾಮಿ ಜಂಗಲ್ ಲಾಡ್ಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಅರಣ್ಯ ಸಫಾರಿಯನ್ನು ಆನಂದಿಸಬಹುದು. ಕಬಿನಿಯಲ್ಲಿ ಹುಲಿಗಳು, ಚಿರತೆಗಳು, ಸೋಮಾರಿ ಕರಡಿಗಳು, ವಿವಿಧ ಜಿಂಕೆಗಳು, ಭಾರತೀಯ ಕಾಡೆಮ್ಮೆ ಹಾಗು ವೈವಿಧ್ಯಮಯ ಪಕ್ಷಿಗಳನ್ನು ನೀವು ವೀಕ್ಷಿಸಬಹುದು.

ಗಂಡಿಕೋಟ

PC:Sudhakarbichali

ಆಂಧ್ರಪ್ರದೇಶ ರಾಜ್ಯದ ಹೆಗ್ಗುರುತುಗಳಲ್ಲಿ ಗಂಡಿಕೋಟೆ ಕೂಡ ಒಂದು. ಇದು ಬೆಂಗಳುರಿನಿಂದ ಸುಮಾರು 280 ಕಿಮೀ ದೂರದಲ್ಲಿದೆ. ಕೋಟೆಯ ರಮಣೀಯವಾದ ನೋಟ ನಿಜಕ್ಕೂ ನಿಮ್ಮನ್ನು ಬೆಕ್ಕಸ ಬೆರಗಾಗಿಸುವಂತೆ ಮಾಡುತ್ತದೆ. ರೋಡ್ ಟ್ರಿಪ್ ಕೈಗೊಳ್ಳುವ ಮೂಲಕವು ಕೂಡ ನೀವು ಗಂಡಿಕೋಟೆಗೆ ಹೋಗಬಹುದು.

ಗಂಡಿಕೋಟಾ ಕೋಟೆಯು ಭಾರತದ ಅತ್ಯಂತ ಸುರಕ್ಷಿತ ಕೋಟೆಗಳಲ್ಲಿ ಒಂದಾಗಿದೆ. ಇಲ್ಲಿ ಆಳವಾದ ಕಣಿವೆಗಳು, ಬೆಟ್ಟಗಳು ಮತ್ತು ಬೃಹತ್ ಬಂಡೆಗಳನ್ನು ನೋಡಬಹುದು. ಸ್ನೇಹಿತರೊಟ್ಟಿಗೆ ರೋಡ್ ಟ್ರಿಪ್‌ ಹಾಗು ಪ್ರಾಚೀನ ಕೋಟೆಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯಲು ಬಯಸುವವರಿಗೆ ಇದು ಸ್ವರ್ಗವಾಗಿದೆ.

ಗೋಕರ್ಣ

PC:Axis of eran

ಕರ್ನಾಟಕದ ಪವಿತ್ರವಾದ ಪುಣ್ಯಕ್ಷೇತ್ರಗಳಲ್ಲಿ ಗೋಕರ್ಣ ಕೂಡ ಒಂದು. ಗೋಕರ್ಣ ಶೈವಭಕ್ತರ ನೆಚ್ಚಿನ ತಾಣ. ಜಲಕ್ರೀಡೆ ಚಟುವಟಿಕೆಗಳನ್ನು ಆನಂದಿಸುವವರಿಗೂ ಗೋಕರ್ಣ ಬೆಸ್ಟ್ ಎಂದೇ ಹೇಳಬಹುದು.

ಬೀಚ್ ವಿಹಾರ, ಉತ್ತಮ ಕೆಫೆಗಳು ಮತ್ತು ಸಮುದ್ರಾಹಾರದ ಸ್ವಾದಿಷ್ಟವಾದ ರುಚಿಗೆ ಮರುಳಾಗದೇ ಇರಲಾರರು. ಈ ಕಾರಣದಿಂದಲೇ ಗೋಕರ್ಣ ಕನ್ನಡಿಗರ ಹೃದಯವನ್ನು ಸ್ಪರ್ಶಿಸಿದೆ. ಗೋವಾಕ್ಕಿಂತ ಅತ್ಯುತ್ತಮವಾದ ಅನುಭವವನ್ನು ಗೋಕರ್ಣದಲ್ಲಿ ಪಡೆಯಬಹುದಾಗಿದೆ.

ಇದನ್ನೂ ಓದಿ:

ವಾವ್..! ಕೆಮ್ಮಣ್ಣುಗುಂಡಿಯ ಅಂದವನ್ನು ಕಂಡೀರಾ?

ನಂದಿ ಬೆಟ್ಟ ಹಾಗು ಸಾವನದುರ್ಗ

PC:Shyamal

ನಂದಿ ಹಿಲ್ಸ್: ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿ ಈ ರಮಣೀಯವಾದ ತಾಣವಿದೆ. ಬೇಸಿಗೆಯನ್ನು ಹಿಮ್ಮೆಟ್ಟಿಸಲು ನೀವು ಇಲ್ಲಿಗೆ ಭೇಟಿ ನೀಡಬಹುದು. ಪಟ್ಟಣದ ಪಕ್ಷಿ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಸಾವನದುರ್ಗ: ಇದು ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದ್ದು, ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟಗಳಲ್ಲಿ ಒಂದಾಗಿದೆ. ಸಾಹಸ ಮಾಡಲು ಬಯಸುವ ಉತ್ಸಾಹಿಗಳಿಗೆ ಈ ಬೆಟ್ಟ ಸ್ವರ್ಗಕ್ಕೆ ಸಮಾನ.

ಇದನ್ನೂ ಓದಿ: ಮನೆಯಲ್ಲಿಯೇ ಕಾಲ ಕಳೆಯುವ ಬದಲು ಬೆಂಗಳೂರು ಸಮೀಪದಲ್ಲಿರುವ ಈ ತಾಣಗಳ ಪ್ರವಾಸ ಮಾಡಿ

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ