ಆ್ಯಪ್ನಗರ

ಈ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವಾಗ ಎಚ್ಚರವಹಿಸಿ

ಕರ್ನಾಟಕ, ಕೇರಳದಲ್ಲಿ ಮಹಾ ಚಂಡಮಾರುತದ ಕಾರಣದಿಂದಾಗಿ ವಿಪರೀತ ಮಳೆಯಾಗುತ್ತಿದ್ದು, ಕರಾವಳಿ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳಬೇಕೆಂದಿರುವವರು ಎಚ್ಚರದಿಂದಿರುವುದು ಸೂಕ್ತ.

Vijaya Karnataka Web 31 Oct 2019, 6:00 pm
ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗೋದನ್ನು ಬಹುತೇಕರು ಇಷ್ಟಪಡೋದಿಲ್ಲ. ಅದರಲ್ಲೂ ಮಳೆಯಿಂದಾಗಿ ಪ್ರಾಣಹಾನಿ ಸಂಭವಿಸುವಂತಹ ಪರಿಸ್ಥಿತಿ ಬಂದಾಗ ಯಾರು ತಾನೇ ಪ್ರವಾಸ ಕೈಗೊಳ್ಳಲು ಇಷ್ಟ ಪಡುತ್ತಾರೆ. ಅದರಲ್ಲೂ ಈಗ ಕೆಲವು ಕಡೆಗಳಲ್ಲಿ ಬಾರೀ ಮಳೆಯಾಗುತ್ತಿದೆ. ಹೀಗಿರುವಾಗ ಅಪ್ಪಿ ತಪ್ಪಿಯೂ ಈ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವ ದುಸ್ಸಾಹಸವೇ ಬೇಡ.
Vijaya Karnataka Web rain


ಅರೇಬಿಯನ್ ಸಮುದ್ರದಲ್ಲಿ ಈ ವರ್ಷ ನಾಲ್ಕನೇ ಚಂಡಮಾರುತವಾದ ಮಹಾ ಚಂಡಮಾರುತವು ಮುಂದಿನ ಆರು ಗಂಟೆಗಳಲ್ಲಿ 'ತೀವ್ರ ಚಂಡಮಾರುತದ ಬಿರುಗಾಳಿ'ಯಾಗಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಈಗಾಗಲೇ ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಲಿದ್ದು, ಈ ಭಾಗಗಳಿಗೆ ಪ್ರವಾಸ ಹೋಗುವವರು ಪ್ರವಾಸ ಕೈಗೊಳ್ಳದೇ ಇರುವುದು ಒಳ್ಳೆಯದು.

ಕೇರಳದ ಕೆಲವು ಭಾಗಗಳು, ಕರಾವಳಿ ಕರ್ನಾಟಕ ಮತ್ತು ತಮಿಳುನಾಡಿನ ದಕ್ಷಿಣ ಭಾಗವು ಮುಂದಿನ 24 ಗಂಟೆಗಳಲ್ಲಿ "ಭಾರೀ ಭಾರೀ ಮಳೆಯಾಗುವ" ಸಾಧ್ಯತೆಯಿದೆ. ಕೇರಳದ ನಾಲ್ಕು ಜಿಲ್ಲೆಗಳಾದ ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ ಮತ್ತು ಕೋಜಿ ಕೋಡ್‌ನಲ್ಲಿ ಈಗಾಗಲೇ ಆರೆಂಜ್ ಅಲರ್ಟ್ ಹಾಕಲಾಗಿದೆ. ಈ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ. ಕರಾವಳಿ ಪ್ರದೇಶದಲ್ಲಿ ಈಗಾಗಲೇ ಹಲವಾರು ದಿನಗಳಿಂದ ತೀವೃ ಮಳೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಕೇರಳ, ತಮಿಳುನಾಡು , ಕರ್ನಾಟಕ ಪ್ರವಾಸ ಕೈಗೊಳ್ಳದೇ ಇದ್ದರೆ ಒಳಿತು.

ಮಂಗಳೂರು: ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಸಮಯದಲ್ಲಂತೂ ಬೀಚ್‌ಗಳತ್ತ ತಲೆಹಾಕದೆ ಇರುವುದೇ ಸೂಕ್ತ. ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ನೌಕೆ ವಿಕ್ರಮ್, ಅಮರ್ಥ್ಯ, ಅಪೂರ್ವ, ರಾಜ್ ದೂತ್, ಸಾವಿತ್ರಿ ಪುಲೆ ನೌಕೆ ಸನ್ನದ್ಧವಾಗಿದೆ. ಮಹಾ ಚಂಡಮಾರುತದ ಕಾರಣ, ನವೆಂಬರ್ 4ರವರೆಗೂ ಮೀನುಗಾರಿಕೆಗೆ ತೆರಳದಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೊಡಗು: ಈಗಷ್ಟೇ ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಕೊಡಗು, ಮಡಿಕೇರಿಯಲ್ಲೂ ಭಾರೀ ಮಳೆಯಾಗಲಿದೆ. ಹಾಗಾಗಿ ನೀವು ಮಡಿಕೇರಿ, ಕೂರ್ಗ್‌, ಮಂಡಲಪಟ್ಟಿ, ದುಬಾರೆ ಕ್ಯಾಂಪ್‌ಗೆಲ್ಲಾ ಭೇಟಿ ನೀಡುವ ಪ್ಲ್ಯಾನ್ ಹಾಕಿಕೊಂಡಿದ್ದರೆ , ಆ ಪ್ಲ್ಯಾನ್‌ನ್ನು ಕೈ ಬಿಡುವುದು ಸೂಕ್ತ.

ಕೇರಳ: ಮಹಾ ಚಂಡಮಾರುತದ ಎಫೆಕ್ಟ್ ಕೇರಳದಲ್ಲೂ ಬೀಳಲಿದೆ. ಕೊಚ್ಚಿ, ತ್ರಿಶೂರು, ಮುಂತಾದ ಸ್ಥಳಗಳಲ್ಲಿ ಪ್ರವಾಸ ನಿಷೇಧಿಸಲಾಗಿದೆ. ಒಂದು ವೇಳೆ ಮಳೆಗೆ ಈ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವುದಾದರೆ ನೀವು ಮುಂಚಿತವಾಗಿ ಸಿದ್ಧತೆಯನ್ನು ನಡೆಸಿ ಹೋಗಬೇಕು. ಬೀಚ್‌ಗಳನ್ನು ಹೊರತುಪಡಿಸಿ ನೀವು ಧಾರ್ಮಿಕ ತಾಣಗಳಿಗೆ ಭೇಟಿ ನೀಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ