ಆ್ಯಪ್ನಗರ

ಅಬ್ಬಬ್ಬಾ…! ಸೋಮವಾರಪೇಟೆಯಲ್ಲಿ ಇಷ್ಟೇಲ್ಲಾ ಪ್ರೇಕ್ಷಣೀಯ ಸ್ಥಳಗಳಿವೆಯೇ?

ಕರ್ನಾಟಕದ ಸೋಮವಾರಪೇಟೆಯಲ್ಲಿ ಎಷ್ಟೊಂದು ಸುಂದರವಾದ ಪ್ರವಾಸಿ ಸ್ಥಳಗಳಿವೆ ಗೊತ್ತಾ? ಒಮ್ಮೆ ಪ್ರವಾಸ ಮಾಡಿ.

Authored by ಸೌಮ್ಯ ಟೇಮ್ಕರ್ | Vijaya Karnataka Web 24 Nov 2022, 12:45 pm
PC: istock
Vijaya Karnataka Web tourist attractions in somwarpet
ಅಬ್ಬಬ್ಬಾ…! ಸೋಮವಾರಪೇಟೆಯಲ್ಲಿ ಇಷ್ಟೇಲ್ಲಾ ಪ್ರೇಕ್ಷಣೀಯ ಸ್ಥಳಗಳಿವೆಯೇ?


ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಕಣ್ಮನ ತಣಿಸುವ ಪ್ರವಾಸಿ ಆಕರ್ಷಣೆಗಳಿವೆ. ಬೆಂಗಳೂರಿನಿಂದ 217 ಕಿ.ಮೀ ಮತ್ತು ಮಡಿಕೇರಿಯಿಂದ 52 ಕಿ.ಮೀ ದೂರದಲ್ಲಿ ಸೋಮವಾರಪೇಟೆ ಇದೆ. ಇಲ್ಲಿ ಬಿಳಿ ನೊರೆಯಿಂದ ಧರೆಗೆ ಇಳಿಯುವ ಜಲಪಾತಗಳ ನೋಟವನ್ನು ನೋಡುವುದೇ ಸೋಜಿಗ.

ಎತ್ತರದವಾದ ಪರ್ವತ ಶ್ರೇಣಿಗಳು ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತದೆ. ಜೊತೆಗೆ ಪಾರಂಪರಿಕ ಸ್ಥಳಗಳು, ದೇವಾಲಯಗಳು ಇಲ್ಲಿವೆ. ವಾರಾಂತ್ಯ ಸಮಯದಲ್ಲಿ ಸ್ನೇಹಿತರೊಂದಿಗೆ ಸೋಮವಾರಪೇಟೆಯ ಪ್ರವಾಸ ಮಾಡುವುದು ಮರೆಯದಿರಿ.

​ಗೋಲ್ಡನ್‌ ಟೆಂಪಲ್‌

PC: Rajib.hyderabad

ಗೋಲ್ಡನ್‌ ಟೆಂಪಲ್‌ ಎಂದೇ ಜನಪ್ರಿಯವಾಗಿರುವ ನಾಮ್ಡ್ರೋಲಿಂಗ್‌ ಮಠವು ಸೋಮವಾರಪೇಟೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಮಠವು ಟಿಬೆಟಿಯನ್‌ ಬೌದ್ಧಧರ್ಮ ಕೇಂದ್ರವಾಗಿದೆ. ಸುಮಾರು 80 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ಮಠವು ನಿಸರ್ಗಧಾಮದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ.

ಕೂರ್ಗ್‌ಗೆ ಭೇಟಿ ನೀಡುವ ಬಹುತೇಕರು ಈ ಗೋಲ್ಡನ್ ಟೆಂಪಲ್‌ಗೆ ಹೋಗುವುದನ್ನು ತಪ್ಪಿಸುವುದಿಲ್ಲ.

​ನಾಗರಹೊಳೆ ನ್ಯಾಷನಲ್‌ ಪಾರ್ಕ್‌

ಸೋಮವಾರಪೇಟೆಯಿಂದ ನಾಗರಹೊಳೆ ನ್ಯಾಷನಲ್‌ ಪಾರ್ಕ್‌ 104 ಕಿ.ಮೀ ದೂರದಲ್ಲಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಈ ರಾಷ್ಟ್ರೀಯ ಉದ್ಯಾನವು ಅನೇಕ ವನ್ಯಜೀವಿಗಳ ವಾಸಸ್ಥಾನವಾಗಿದೆ. ಇದನ್ನು ‘ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ’ ಎಂದೂ ಸಹ ಕರೆಯುತ್ತಾರೆ. ಇದು ದೇಶದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶವು ಹೌದು.

ಇಲ್ಲಿ ಕಾಡೆಮ್ಮೆ, ಕರಡಿಗಳು, ಕಾಡು ಹಂದಿ, ಜಿಂಕೆ, ಕೃಷ್ಣ ಮೃಗ, ಚುಕ್ಕೆ ಜಿಂಕೆಗಳು ಸೇರಿದಂತೆ ಇನ್ನು ಅನೇಕ ವನ್ಯಜೀವಿಗಳಿವೆ. ನಾಗರಹೊಳೆ ಅರಣ್ಯದಲ್ಲಿ ಸ್ನೇಹಿತರೊಂದಿಗೆ ರೋಮಾಂಚಕ ಸಫಾರಿ ಕೂಡ ಮಾಡಬಹುದು.

​ದುಬಾರೆ ಎಲಿಫೆಂಟ್ ಕ್ಯಾಂಪ್

ದುಬಾರೆ ಎಲಿಫೆಂಟ್ ಕ್ಯಾಂಪ್ ಕೊಡಗು ಜಿಲ್ಲೆಯ ಕಾವೇರಿ ನದಿಯ ದಡದಲ್ಲಿರುವ ಆನೆ ಶಿಬಿರವಾಗಿದೆ. ಪ್ರಶಾಂತವಾಗಿ ಹರಿಯುತ್ತಿರುವ ನದಿಯಲ್ಲಿ ಪ್ರವಾಸಿಗರು ಮಿಂದೇಳಲು ಬಯಸುತ್ತಾರೆ. ಅಷ್ಟೇ ಅಲ್ಲ, ಸಾಹಸ ಚಟುವಟಿಕೆಗಳನ್ನು ಅಂತ್ಯವಿಲ್ಲದೆ ಇಲ್ಲಿ ಎಂಜಾಯ್‌ ಮಾಡಬಹುದು. ಮುಖ್ಯವಾಗಿ ಮೀನುಗಾರಿಕೆ, ರಿವರ್ ರಾಫ್ಟಿಂಗ್‌, ಆನೆ ಸವಾರಿಗಳಲ್ಲಿ ತೊಡಗಿಸಿಕೊಳ್ಳಬಹುದು.

ಆನೆಗಳು ಸ್ನಾನ ಮಾಡುವ ಅಪರೂಪದ ದೃಶ್ಯಗಳನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು. ಆನೆ ಸವಾರಿ ಇಲ್ಲಿನ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಈ ಅರಣ್ಯಗಳಿಗೆ ಒಮ್ಮೆ ಹೋದರೆ ವಾಪಸ್‌ ಬರೋದೇ ಡೌಟ್

​ಕೋಟೆ ಬೆಟ್ಟ ಟ್ರೆಕ್ಕಿಂಗ್‌

ಪ್ರಕೃತಿಯಿಂದ ಆಶೀರ್ವದಿಸಲ್ಪಟ್ಟಿರುವ ಕೊಡಗಿನ ಸೋಮವಾರ ಪೇಟೆಯಲ್ಲಿ ಕೋಟೆ ಬೆಟ್ಟ ಎಂಬ ಆಹ್ಲಾದಕರವಾದ ತಾಣವಿದೆ. ನೀವು ಸಾಹಸಿಗಳಾಗಿದ್ದರೆ ಇಲ್ಲಿಗೆ ಪ್ರಕೃತಿ ಚಾರಣವನ್ನು ಕೈಗೊಳ್ಳಬಹುದು. ಬ್ರಹ್ಮಗಿರಿ ಮತ್ತು ತಡಿಯಂಡಮೋಳ್‌ ಶಿಖರಗಳ ನಂತರ ಈ ಕೋಟೆ ಬೆಟ್ಟವು ಎತ್ತರದಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.

ದಂತಕಥೆಯ ಪ್ರಕಾರ, ಮಹಾಭಾರತದ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಸ್ಥಳದಲ್ಲಿ ಕೆಲವು ದಿನಗಳು ಉಳಿದಿದ್ದರು ಎನ್ನಲಾಗುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಇಲ್ಲಿ ಅನೇಕ ಹಳೆಯ ಕಲ್ಲಿನ ಮನೆಗಳನ್ನು ಕಾಣಬಹುದು. ಬೆಟ್ಟದ ಮೇಲೆ ಪರಮಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿರುವ ಆಲಯವು ಇದೆ.

ಇದನ್ನೂ ಓದಿ: ಊಟಿಯ ಹಾಂಟೆಡ್‌ ಹೋಟೆಲ್‌ಗಳಿವು… ಪ್ರವಾಸದ ಸಮಯದಲ್ಲಿ ಈ ತಾಣಗಳನ್ನು ತಪ್ಪಿಸಿ

​ಮಲ್ಲಳ್ಳಿ ಜಲಪಾತ

PC: Shreeharisp

ಸೋಮವಾರಪೇಟೆಯಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಮಲ್ಲಳ್ಳಿ ಜಲಪಾತವು ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಹಾತೊರೆಯುತ್ತಾರೆ. ಇದನ್ನು ಹೊರತು ಪಡಿಸಿ ಪುಷ್ಪಗಿರಿ ತಪ್ಪಲಿನಲ್ಲಿ ಅನೇಕ ತೊರೆಗಳು, ಮಂಜು ಜಲಪಾತಗಳಿವೆ.

ಮಕ್ಕಳಗುಡಿ ಬೆಟ್ಟ, ರಾಜಾ ಸೀಟ್, ಹಾರಂಗಿ ಅಣೆಕಟ್ಟು, ಬೀಳೂರು ಗಾಲ್ಫ್ ಕೋರ್ಸ್ ಸೋಮವಾರಪೇಟೆಯ ಪ್ರಮುಖ ಆಕರ್ಷಣೆಗಳಾಗಿವೆ.

ಇದನ್ನೂ ಓದಿ: 1 ದಿನದ ಪ್ರವಾಸದಲ್ಲಿ ಕೂರ್ಗ್‌ನಲ್ಲಿ ಇಷ್ಟೇಲ್ಲಾ ತಾಣಗಳನ್ನು ನೋಡಬಹುದಂತೆ…

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ