ಆ್ಯಪ್ನಗರ

ಕರ್ನಾಟಕದ ಕೊಪ್ಪಳದಲ್ಲಿ ಮನಸೋರೆಗೊಳ್ಳುವ ಪ್ರವಾಸಿ ಸ್ಥಳಗಳಿವೆ…!

ಬೆಂಗಳೂರಿನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಕೊಪ್ಪಳದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ. ವಾರಾಂತ್ಯದ ಸಮಯದಲ್ಲಿ ಭೇಟಿ ನೀಡಿ. 

Authored by ಸೌಮ್ಯ ಟೇಮ್ಕರ್ | Vijaya Karnataka Web 18 Feb 2023, 3:30 pm

PC: Pixabay

ಬೆಂಗಳೂರಿನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಕೊಪ್ಪಳದಲ್ಲಿ ಅನೇಕ ಅದ್ಭುತವಾದ ಪ್ರವಾಸಿ ಸ್ಥಳಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಈ ಪಟ್ಟಣವು ಅನೇಕ ಸುಂದರವಾದ ದೇವಾಲಯಗಳು, ಮನರಂಜನಾ ಹಾಗು ಪಿಕ್ನಿಕ್‌ ತಾಣಗಳನ್ನು ಒಳಗೊಂಡಿದೆ.

ಗಂಗ, ಹೊಯ್ಸಳ, ಚಾಲುಕ್ಯ ರಾಜವಂಶಿಕರ ಕೊಡುಗೆಗಳಿಗೆ ಕೊಪ್ಪಳ ಸಾಕ್ಷಿಯಾಗಿದೆ. ಕೊಪ್ಪಳದ ಮಹಾದೇವ ದೇವಾಲಯವು ಬಹು ದೊಡ್ಡ ಆಕರ್ಷಣೆಯಾಗಿದೆ. ಅಷ್ಟಕ್ಕೂ ಕೊಪ್ಪಳದಲ್ಲಿರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಯಾವುವು ಎಂಬುದನ್ನು ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ.

Vijaya Karnataka Web tourist places near koppal
ಕರ್ನಾಟಕದ ಕೊಪ್ಪಳದಲ್ಲಿ ಮನಸೋರೆಗೊಳ್ಳುವ ಪ್ರವಾಸಿ ಸ್ಥಳಗಳಿವೆ…!


ಕೊಪ್ಪಳ ಕೋಟೆ

PC:SWE-Yaatrik


ಕೊಪ್ಪಳದಲ್ಲಿ ಐತಿಹಾಸಿಕ ಕೊಪ್ಪಳ ಕೋಟೆ ಇದೆ. ಇದು ದೇಶದಲ್ಲಿರುವ ಪ್ರಬಲವಾದ ಕೋಟೆಗಳಲ್ಲಿ ಒಂದು ಎಂದು ಪರಿಗಣಿಸ್ಪಟ್ಟಿದೆ. ಈ ಭದ್ರವಾದ ಕೋಟೆ ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಇನ್ನು ಗೊಂದಲವಿದೆ. ಆದಾಗ್ಯೂ, 1786 ರ ಸಮಯದಲ್ಲಿ ಟಿಪ್ಪು ಸುಲ್ತಾನ್‌ ಸ್ವಾಧೀನಪಡಿಸಿಕೊಂಡರು. ಅಷ್ಟೇ ಅಲ್ಲ, ಫ್ರೆಂಚ್‌ ಇಂಜಿನಿಯರ್‌ಗಳ ಸಹಾಯದಿಂದ ಕೋಟೆಯನ್ನು ಪುನರ್ ನಿರ್ಮಿಸಿದರು ಎನ್ನಲಾಗಿದೆ. ಕೊಪ್ಪಳ ಪ್ರವಾಸ ಯೋಜಿಸುವವರು ತಪ್ಪದೇ ಈ ಕೋಟೆಗೆ ಭೇಟಿ ನೀಡಿ.

ಆನೆಗುಂದಿ

PC:User:Indiancorrector

ಆನೆಗುಂದಿಯನ್ನು ಹಂಪಿಗಿಂತ ಹೆಚ್ಚು ಪುರಾತನವಾದುದು ಎಂದು ಹೇಳಲಾಗುತ್ತದೆ. ಪೌರಾಣಿಕ ಕಥೆಗಳಲ್ಲಿಯು ಈ ಆನೆಗುಂಡಿ ಅಥವಾ ಆನೆಗುಂದಿಯ ಬಗ್ಗೆ ಉಲ್ಲೇಖವಿದೆ. ಇಲ್ಲಿ ಕೂಡ ಅನೇಕ ಪುರಾತನವಾದ ದೇವಾಲಯ ಹಾಗು ಕೋಟೆಗಳನ್ನು ನೋಡಬಹುದು. ಆನೆಗುಂದಿಯಲ್ಲಿ ಪಂಪಾ ಸರೋವರ, ಚಿಂತಾಮಣಿ ದೇವಾಲಯ ಹಾಗು ರಂಗನಾಥ ದೇವಾಲಯ ತುಂಬಾನೇ ಜನಪ್ರಿಯವಾಗಿದೆ.

ಪಿಕ್ನಿಕ್‌ ತಾಣಗಳು

PC:User:Indiancorrector

ಪಂಪಾ ಸರೋವರ: ಆನೆಗುಂದಿಯಲ್ಲಿರುವ ಅಹ್ಲಾದಕರವಾದ ಸರೋವರ ಇದಾಗಿದೆ. ಭಾರತದ ಪವಿತ್ರವಾದ 5 ಸರೋವರಗಳಲ್ಲಿ ಇದು ಕೂಡ ಒಂದು. ಕೊಪ್ಪಳಕ್ಕೆ ಹೋಗುವ ಮಂದಿ ಈ ಪಂಪಾ ಸರೋವರದಂತಹ ನಿರ್ಮಲವಾದ ತಾಣಕ್ಕೆ ಹೋಗಬಹುದು.

ಸಣಾಪುರ ಕೆರೆ: ಹಂಪಿಯ ಬಳಿ ಇರುವ ಈ ಕೆರೆಯು ಸುತ್ತಮುತ್ತಲಿನ ಅದ್ಭುತವಾದ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದೆ. ತೆಪ್ಪದಲ್ಲಿ ಸವಾರಿ ಮಾಡಲು ನೀವು ಬಯಸಿದರೆ ಖಂಡಿತವಾಗಿಯು ಸಣಾಪುರ ಕೆರೆಯಲ್ಲಿ ಕೈಗೊಳ್ಳಿ.

ಇದನ್ನೂ ಓದಿ:ಬಿಡದಿಯ ಸಮೀಪದಲ್ಲಿ 5 ಪ್ರವಾಸಿ ಆಕರ್ಷಣೆಗಳಿವೆ ಗೊತ್ತಾ?

ಮೋಜಿನ ತಾಣ

PC:Pixabay

ಕೊಪ್ಪಳದಲ್ಲಿ ಸಾಕಷ್ಟು ಮೋಜಿನ ತಾಣಗಳಿವೆ. ಹಂಪಿಯ ಸಮೀಪದಲ್ಲಿರುವ ಕಿಷ್ಕಿಂದಾ ವಾಟರ್‌ ಪಾರ್ಕ್‌ಗೆ ನೀವು ಹೋಗಬಹುದು. ಈ ಉದ್ಯಾನವು ಸುಮಾರು 8 ಎಕರೆ ಪ್ರದೇಶದಲ್ಲಿ ಹರಡಿದೆ. ಸಾಕಷ್ಟು ನೀರಿನ ಸ್ಲೈಡ್‌ಗಳು, ಈಜುಕೊಳಗಳು, ಮಕ್ಕಳ ಉದ್ಯಾನವನ, ಆಟದ ಮೈದಾನ, ಪೆಡಲ್‌ ಬೋಟಿಂಗ್‌ ಸೇರಿದಂತೆ ಇನ್ನು ಅನೇಕ ರೋಮಾಂಚಕ ಆಯ್ಕೆಗಳಿವೆ.

ಜಪಾನೀಸ್‌ ಮಾದರಿಯ ಅಲಂಕಾರಿಕ ಉದ್ಯಾನಕ್ಕೆ ಹೋಗಲು ಮುನಿರಾಬಾದ್‌ ಬಳಿ ಪಿಕ್ನಿಕ್‌ ಯೋಜಿಸಿ. ಕುಟುಂಬ ಸಮೇತ ಪ್ರವಾಸ ಮಾಡಲು ಇದು ಸೂಕ್ತವಾದ ತಾಣವಾಗಿದೆ.

ಇದನ್ನೂ ಓದಿ:​ಮಕ್ಕಳಿಗೆ ಖುಷಿ ನೀಡುತ್ತವೆ ಬೆಂಗಳೂರಿನ ಈ ತಾಣಗಳು

ಕೊಪ್ಪಳದಲ್ಲಿ ಆಧ್ಯಾತ್ಮಿಕ ತಾಣ

PC:User:Indiancorrector -

ಕೊಪ್ಪಳದಲ್ಲಿ ಮಹಾಮಾಯ ದೇವಾಲಯ, ನವಲಿಂಗ ಸ್ವಾಮಿ ದೇವಾಲಯ, ಕನಕಗಿರಿಯ ಕನಕ ಮುನಿ ಸ್ಥಳ, ಹುಲಿಗೆಮ್ಮ ದೇವಿ ದೇವಾಲಯ, ಗವಿಮಠ ಮತ್ತು ಪಾಲ್ಕಿಗುಂಡು ಅಶೋಕನ ಶಾಸನ, ಚಿಂತಾಮಣಿ ದೇವಸ್ಥಾನ ಸೇರಿದಂತೆ ಇನ್ನು ಅನೇಕ ಧಾರ್ಮಿಕ ತಾಣಗಳಿವೆ.

ಇದನ್ನೂ ಓದಿ: ಒಂದೇ ರಾತ್ರಿ…ಭೂತಗಳು ನಿರ್ಮಿಸಿದ ಹಾಗು ಭಯಾನಕ ದೇವಾಲಯಗಳು ನಮ್ಮ ಭಾರತದಲ್ಲಿವೆ

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ