ಆ್ಯಪ್ನಗರ

ವಾರಂತ್ಯಕ್ಕೆ ಬೆಂಗಳೂರಿನ ಈ ಸ್ಥಳಗಳು ಬೆಸ್ಟ್

ನಮ್ಮದೇ ಬೆಂಗಳೂರಿನ ಅಸು-ಪಾಸಿನಲ್ಲಿ ಕಾಲ ಕಳೆದು ತಮ್ಮ ವಿಶ್ರಾಂತಿರಹಿತ ಜೀವನಕ್ಕೆ ಸ್ವಲ್ಪ ಬ್ರೇಕ್ ಕೊಡಬೇಕಾದರೆ, ಲೇಖನದಲ್ಲಿದೆ ಅತ್ಯುತ್ತಮವಾದ ತಾಣಗಳು.

Authored by ಸೌಮ್ಯ ಟೇಮ್ಕರ್ | Vijaya Karnataka Web 24 Nov 2022, 4:29 pm
photo courtesy: jarmoluk
Vijaya Karnataka Web weekend plans in bangalore
ವಾರಂತ್ಯಕ್ಕೆ ಬೆಂಗಳೂರಿನ ಈ ಸ್ಥಳಗಳು ಬೆಸ್ಟ್


ಕೋವಿಡ್ ನಿಂದಾಗಿ ಬೇರೊಂದು ಸ್ಥಳಗಳಿಗೆ ಭೇಟಿ ನೀಡುವುದಕ್ಕೆ ಜನರು ಭಯ ಪಡುತ್ತಿದ್ದಾರೆ. ಆದರೆ ಕೆಲಸದ ಒತ್ತಡದಿಂದ ನಮ್ಮದೇ ಬೆಂಗಳೂರಿನ ಅಸು-ಪಾಸಿನಲ್ಲಿ ಕಾಲ ಕಳೆದು ತಮ್ಮ ವಿಶ್ರಾಂತಿರಹಿತ ಜೀವನಕ್ಕೆ ಸ್ವಲ್ಪ ಬ್ರೇಕ್ ಕೊಡಬೇಕಾದರೆ, ಲೇಖನದಲ್ಲಿದೆ ಅತ್ಯುತ್ತಮವಾದ ತಾಣಗಳು. ಹೊರ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಅದರಲ್ಲೂ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿಯೇ ವಾರಾಂತ್ಯದ ತಾಣಗಳಿವೆ. ಉದ್ಯಾನನಗರಿ ಎಂದೇ ಖ್ಯಾತಿ ಹೊಂದಿರುವ ಬೆಂಗಳೂರು ಭಾರತದ ಮೂರನೇ ಅತಿ ದೊಡ್ಡ ನಗರವಾಗಿದೆ. ಬೆಂಗಳೂರು ತನ್ನದೇ ಆದ ಆಹ್ಲಾದಕರ ವಾತಾವರಣ ಹಾಗು ಸುಂದರವಾದ ಉದ್ಯಾನವನಗಳನ್ನು ಹೊಂದಿದೆ.

ಸುಂದರವಾದ ಉದ್ಯಾನವನಗಳು, ಷಾಪಿಂಗ್ ಮಾಲ್ ಗಳು, ವಸ್ತು ಸಂಗ್ರಹಾಲಯಗಳು, ಅರಮನೆಗಳು, ದೇವಾಲಯಗಳು, ವಿಧಾನ ಸೌಧ ಹಾಗು ಬೆಂಗಳೂರಿನ ಹಲಸೂರು ಸರೋವರ. ಹೀಗೆ ಹತ್ತಾರು ಸುಂದರ ಸ್ಥಳಗಳನ್ನು ಹೊಂದಿರುವ “ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ” ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿದೆ.

​ಷಾಪಿಂಗ್ ಮಾಲ್ ಗಳು

courtesy: jarmoluk

ಬೆಂಗಳೂರು ಒಂದು ರೋಮಾಂಚನಕಾರಿ ನಗರವಾಗಿದ್ದು, ಅದು ಸದಾ ಜನಸಂದಣಿಯಿಂದ ಕೂಡಿರುತ್ತದೆ. ಮುಗಿಲೆತ್ತರದ ಷಾಪಿಂಗ್ ಮಾಲ್ ಗಳು ಎಂಥವರನ್ನು ಕೈಬೀಸಿ ಕರೆಯುತ್ತದೆ. ಬೆಂಗಳೂರು ನಗರದಲ್ಲಿ ಹಲವಾರು ಷಾಪಿಂಗ್ ಕಾಂಪ್ಲೆಕ್ಸ್ ಗಳು ಇದ್ದು, ಪ್ರಸಿದ್ಧಿಯನ್ನು ಪಡೆದಿದೆ. ಚಿಕ್ಕವರಿಂದ ದೊಡ್ಡವರ ತನಕ ಷಾಪಿಂಗ್ ಮಾಲ್ ಗಳಿಗೆ ಭೇಟಿ ನೀಡಿ ತಮ್ಮ ದಿನನಿತ್ಯದ ಸರಕುಗಳನ್ನು ಕೊಂಡುಕೊಳ್ಳುತ್ತಾರೆ. ಸಿನಿಮಾ, ಮನರಂಜನೆ, ಷಾಪಿಂಗ್ ಎಂದೆಲ್ಲಾ ವಾರಾಂತ್ಯದಲ್ಲಿ ಕಾಲ ಕಳೆಯಲು ಅತ್ಯುತ್ತಮವಾದ ಸ್ಥಳವೆಂದರೆ ಅದು ಶಾಪಿಂಗ್ ಮಾಲ್. ಇಲ್ಲಿ ಓರಿಯಾನ್ ಮಾಲ್, ಫೋನಿಕ್ಸ್ ಮಾರ್ಕೆಟ್ ಸಿಟಿ, ಮಂತ್ರಿ ಮಾಲ್, ಯು.ಬಿ ಸಿಟಿ, ರಾಯಲ್ ಮೀನಾಕ್ಷಿ ಮಾಲ್, ಬೆಂಗಳೂರು ಸೆಂಟ್ರಲ್ ಮಾಲ್, ಗರುಡ ಮಾಲ್, ಜಿ.ಟಿ ಮಾಲ್ ಹೀಗೆ ಇನ್ನು ಹಲವಾರು ಮಾಲ್ ಗಳಿಗೆ ಭೇಟಿ ನೀಡಿ ಸಮಯವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಬಹುದು.

​ಉದ್ಯಾನವನಗಳು

courtesy: Tama66

ಬೆಂಗಳೂರಿನಲ್ಲಿರುವ ಅದ್ಭುತವಾದ ಉದ್ಯಾನವನವು ಎಲ್ಲಾ ವಯಸ್ಸಿನವರಿಗೂ ಅಚ್ಚು ಮೆಚ್ಚಿನ ಸ್ಥಳ. ಲಾಲ್ ಬಾಗ್ ನಲ್ಲಿ ಪ್ರತೀ ವರ್ಷಕ್ಕೊಮ್ಮೆ ನಡೆಯುವ ಗಣರಾಜ್ಯ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಗಳಲ್ಲಿ ವಿಶೇಷವಾದ ಹೂವಿನ ಪ್ರದರ್ಶನಗಳು ನಡೆಯುತ್ತವೆ. ಹಾಗೆಯೇ ಕಬ್ಬನ್ ಪಾರ್ಕ್ ನಗರದ ಹೃದಯ ಭಾಗದಲ್ಲಿದೆ. ಇದೊಂದು ಆಹ್ಲಾದಕರವಾದ ತಾಣವು ಹೌದು. ಸುಮಾರು ೬೦೦೦ ಕ್ಕೂ ಹೆಚ್ಚಿನ ವೃಕ್ಷಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಬುದ್ಧ ಶಾಂತಿ ಕನೈವ್, ಚಿಟ್ಟೆಗಳ ಉದ್ಯಾನವನ, ಫ್ರೀಡಂ ಪಾರ್ಕ್ಇನ್ನು ಹಲವಾರು ಉದ್ಯಾನವನಗಳನ್ನು ಕಾಣಬಹುದು.

ಬೆಂಗಳೂರಿನ ವಾಹನದ ಹೊಗೆಯಿಂದ ಹೊರಬರಲು ಈ ಮೇಲಿನ ಉದ್ಯಾನವನಗಳು ಮನಸ್ಸಿಗೆ ಹಿತವೆನಿಸುತ್ತದೆ.

​ಬೆಂಗಳೂರಿನಲ್ಲಿವೆ ಅದ್ಭುತವಾದ ದೇವಾಲಯಗಳು

courtesy: demmonscreation

ನಮ್ಮ ಬೆಂಗಳೂರಿನಲ್ಲಿ ದೇವಾಲಯಗಳಿಗೇನೂ ಕಡಿಮೆ ಇಲ್ಲ. ದೇವಾಲಯಕ್ಕೆ ಹೋಗುವುದರಿಂದ ಮನಸ್ಸಿಗೆ ಶಾಂತಿ ಉಂಟಾಗುತ್ತದೆ. ಹಾಗಾಗಿ ನಿಮ್ಮ ವಾರಾಂತ್ಯಕ್ಕೆ ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ನೀಡಬಹುದು. ಅನೇಕ ಪ್ರಸಿದ್ಧವಾದ ದೇವಾಲಯಗಳು ಬೆಂಗಳೂರು ಮಹಾನಗರದಲ್ಲಿದ್ದು, ದಿನನಿತ್ಯವು ನೂರಾರು ಸಂಖ್ಯೆಯಲ್ಲಿ ಹೊರ ನಗರದ, ಹೊರ ರಾಜ್ಯದ ಜನರು ಕೂಡ ಭೇಟಿ ನೀಡುತ್ತಾರೆ. ಅವುಗಳಲ್ಲಿ, ಗವಿಗಂಗಾಧರೇಶ್ವರ ದೇವಾಲಯ, ವೀರಾಂಜನೆಯ ದೇವಾಲಯ, ಅಣ್ಣಮ್ಮ ದೇವಿ ದೇವಾಲಯ, ಇಸ್ಕಾನ್, ದೊಡ್ಡ ಗಣಪತಿ ದೇವಾಲಯ ಇನ್ನು ಹಲವಾರು.

​ವಿಧಾನಸೌಧ

courtesy: sarangib

ವಿಧಾನಸೌಧ ಬೆಂಗಳೂರಿನ ಆಕರ್ಷಕವಾದ ಪ್ರವಾಸಿ ತಾಣ. ಬೆಂಗಳೂರಿಗೆ ಭೇಟಿ ನೀಡುವವರು ಒಮ್ಮೆಯಾದರು ವಿಧಾನಸೌಧ ತಪ್ಪಿಸಲಾರರು. ೧೯೫೬ ರಲ್ಲಿ ಕೆಂಗಲ್ ಹನುಮಂತಯ್ಯನವರ ಆಡಳಿತ ಅವಧಿಯಲ್ಲಿ ದ್ರಾವಿಡ ಹಾಗು ಇಂಡೋ ಸಾರ್ಸೆನಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಯಿತು. ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಅಂತಸ್ತಿನಲ್ಲಿ ವಿಭಿನ್ನವಾದ ಪ್ರವೇಶದ್ವಾರಗಳನ್ನು ಹೊಂದಿದೆ. ವಿಧಾನ ಸೌಧವನ್ನು “ದಕ್ಷಿಣ ಭಾರತದ ತಾಜ್ ಮಹಲ್” ಎಂದು ಸಹ ಜನಪ್ರಿಯವಾಗಿದೆ. ೬೦ ಎಕರೆ ವಿಸ್ತಾರದಲ್ಲಿ ಹರಡಿರುವ ಈ ಬೆಳ್ಳನೆಯ ಕಟ್ಟಡವು ಅನೇಕ ಸುಂದರ ಕೆತ್ತನೆಯ ಕಂಬಗಳಿಂದ ಕಂಗೊಳಿಸುತ್ತದೆ.

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ