ಆ್ಯಪ್ನಗರ

ಅಧಿಕಾರಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಬಿಜೆಪಿ ರಾಜಕಾರಣಿ, ನಟಿ ಸೊನಾಲಿ ಈಗ ಬಿಗ್‌ ಬಾಸ್‌ ಸ್ಪರ್ಧಿ!

ವಿವಾದಾತ್ಮಕ ವ್ಯಕ್ತಿಗಳಿಗೆ ಬಿಗ್‌ ಬಾಸ್‌ ಮನೆಯಲ್ಲಿ ವಿಶೇಷ ಸ್ಥಾನಮಾನ ಸಿಗುವುದುಂಟು. ಹಿಂದಿ ಬಿಗ್ ಬಾಸ್‌ 14ನೇ ಸೀಸನ್‌ನಲ್ಲಿ ಅಂತಹ ನಟಿಯೊಬ್ಬರಿಗೆ ಈಗ ವೈಲ್ಡ್‌ ಕಾರ್ಡ್‌ ಎಂಟ್ರಿ ಸಿಕ್ಕಿದೆ. ಹಲವು ಕಾರಣಗಳಿಗಾಗಿ ಅವರು ಈ ಹಿಂದೆ ಸುದ್ದಿ ಆಗಿದ್ದರು.

Authored byಟೀನಾ | Vijaya Karnataka Web 24 Dec 2020, 11:17 am
'ಬಿಗ್‌ ಬಾಸ್‌ ಹಿಂದಿ ಸೀಸನ್‌ 14' ಕೊನೇ ಹಂತವನ್ನು ತಲುಪುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ಎದುರಾಗಲಿದೆ. ಈ ವೇಳೆಗೆ ವಿಶೇಷ ವ್ಯಕ್ತಿಯೊಬ್ಬರು ದೊಡ್ಮನೆ ಪ್ರವೇಶಿಸಿದ್ದಾರೆ. ಯಾರದು? ಸೊನಾಲಿ ಪೋಗಟ್‌! ವಿವಾದಗಳಿಂದಲೇ ಸದ್ದು ಮಾಡಿರುವ ಸೊನಾಲಿ ಪೋಗಟ್‌ ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅವರು ಅಧಿಕಾರಿಯೊಬ್ಬರಿಗೆ ಚಪ್ಪಲಿಯಲ್ಲಿ ಥಳಿಸಿದ್ದರು!
Vijaya Karnataka Web ಸೊನಾಲಿ ಪೋಗಟ್‌


ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಗೆ ಸೊನಾಲಿ ಪೊಗಟ್‌ ಎಂಟ್ರಿ ನೀಡಿದ್ದಾರೆ. ಮನೆಯೊಳಗಿರುವ ಸ್ಪರ್ಧಿಗಳೆಲ್ಲರೂ ಸೊನಾಲಿಗೆ ಸ್ವಾಗತ ಕೋರಿದ್ದಾರೆ. ಈ ರಿಯಾಲಿಟಿ ಶೋ ಮತ್ತು ಇದರ ಸ್ಪರ್ಧಿಗಳ ಬಗ್ಗೆ ತಮಗಿರುವ ಅಭಿಪ್ರಾಯ ಏನು ಎಂಬುದನ್ನು ಸೊನಾಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಖಾಸಗಿ ಬದುಕಿನ ಕೆಲವು ವಿವರಗಳನ್ನೂ ಅವರು ತೆರೆದಿಟ್ಟಿದ್ದಾರೆ.

ಕೆಲವು ವರ್ಷಗಳ ಹಿಂದೆ ಸೊನಾಲಿ ಅವರ ಪತಿ ನಿಧನರಾದರು. ಅವರನ್ನು ನೆನಪಿಸಿಕೊಂಡು ಬಿಗ್‌ ಬಾಸ್‌ ಮನೆಯೊಳಗೆ ಸೊನಾಲಿ ಕಣ್ಣೀರು ಹಾಕಿದ್ದಾರೆ. 'ಅವರ ನಿಧನದ ನಂತರ ನಾನು ವರ್ಷಗಟ್ಟಲೆ ಅಳುತ್ತಲೇ ಇದ್ದೆ. ಅದರಿಂದ ನನ್ನ ಕಣ್ಣುಗಳಿಗೆ ತೊಂದರೆ ಆಯಿತು. ಯಾವುದೇ ಕೆಲಸಗಳಲ್ಲಿ ಮುಂದುವರಿಯಲು ನನಗೆ ಇಷ್ಟ ಇರಲಿಲ್ಲ. ಆದರೆ ನನ್ನ ಅತ್ತೆ ನನಗೆ ಬೆಂಬಲ ನೀಡಿದರು. ರಾಜಕೀಯಕ್ಕೆ ಎಂಟ್ರಿ ನೀಡಲು ಪ್ರೇರೇಪಿಸಿದರು' ಎಂದಿದ್ದಾರೆ ಸೊನಾಲಿ.

also read: ಕಿಡ್ನಾಪ್‌, ಕಿರುಕುಳ, ದ್ರೋಹ, ಬ್ರೇಕಪ್‌ ಇತ್ಯಾದಿ! ಬಿಗ್‌ ಬಾಸ್‌ ಸ್ಪರ್ಧಿಗಳು ಬಾಯಿಬಿಟ್ಟ ಕಹಿ ಸತ್ಯಗಳಿವು!

2020ರ ಜೂನ್‌ ತಿಂಗಳಲ್ಲಿ ಹರಿಯಾಣದ ರೈತರ ಮಾರುಕಟ್ಟೆಯೊಂದಕ್ಕೆ ಸೊನಾಲಿ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿನ ಕಮಿಟಿಯ ಅಧಿಕಾರಿಯೊಬ್ಬರ ಜೊತೆ ಅವರು ಕಿರಿಕ್‌ ಮಾಡಿಕೊಂಡರು. ಆ ಅಧಿಕಾರಿಯು ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡಿದ ಎಂದು ಆರೋಪಿಸಿ ಆತನಿಗೆ ಚಪ್ಪಲಿಯಲ್ಲಿ ಥಳಿಸಿದ್ದರು ಸೊನಾಲಿ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

also read: ಪರಪುರುಷರ ಸಹವಾಸದ ಕಾರಣಕ್ಕಾಗಿ ಪದೇಪದೇ ಸುದ್ದಿ ಆಗುತ್ತಿರುವ ಬಿಗ್‌ ಬಾಸ್‌ ಸ್ಪರ್ಧಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ