ಆ್ಯಪ್ನಗರ

ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜೈ ಜಗದೀಶ್, ಭೂಮಿ ಶೆಟ್ಟಿ

ಬಿಗ್ ಬಾಸ್ ಮನೆಯಲ್ಲಿ ಪ್ರತಿನಿತ್ಯ ವಿಶಿಷ್ಟವಾದ ಟಾಸ್ಕ್ ನೀಡುತ್ತಾರೆ. ಅಂತೆಯೇ ಇಂದು ಸ್ಪರ್ಧಿಗಳು ತಾವು ಯಾರಿಗೆ ಬೇಸರ ಮಾಡಿದ್ದಾರೋ ಅವರ ಹತ್ತಿರ ಕ್ಷಮೆ ಕೇಳಬೇಕು. ತಪ್ಪನ್ನು ಒಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Vijaya Karnataka Web 23 Oct 2019, 5:21 pm
ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಟಾಸ್ಕ್ ನೀಡಲಾಗುತ್ತದೆ. ದೈಹಿಕವಾಗಿ, ಬೌದ್ಧಿಕವಾಗಿ ಟಾಸ್ಕ್‌ ನೀಡಲಾಗುತ್ತದೆ. ಇಲ್ಲಿ ಪರ್ಫಾಮೆನ್ಸ್ ಡಲ್ ಆದರೆ ಸ್ಪರ್ಧಿ ಎಲಿಮಿನೇಶನ್‌ಗೆ ನೇರವಾಗಿ ನಾಮಿನೇಟ್ ಮಾಡುತ್ತಾರೆ.
Vijaya Karnataka Web big boss


ಕಪ್ಪುಚುಕ್ಕೆ ಯಾರು ಅಂತ ಬಿಗ್ ಬಾಸ್ ಮನೆಯಲ್ಲಿ ಕಂಡುಹಿಡಿಯಬೇಕಾಗಿತ್ತು. ಈ ಬಗ್ಗೆ ಮನೆಯವರು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದರು. ಆದರೂ ಕಪ್ಪುಚುಕ್ಕೆಯನ್ನು ಕಂಡುಹಿಡಿಯಲಾಗಲಿಲ್ಲ. ಕಪ್ಪುಚುಕ್ಕೆ ತನ್ನ ಕೆಲಸ ಮುಗಿಸುವ ಮುಂಚೆ ಆ ಕಪ್ಪುಚುಕ್ಕೆ ಯಾರು ಎಂದು ಕಂಡುಹಿಡಿಯಬೇಕಾಗಿತ್ತು.

Episode 9 Highlights: ಬಿಗ್ ಬಾಸ್ ಮನೆಯಲ್ಲಿ ಯಾರು ಕಪ್ಪು ಚುಕ್ಕಿ?

ಇಂದು ಕ್ಷಮೆ ಕೇಳುವ ಟಾಸ್ಕ್‌ ಬಿಗ್ ಬಾಸ್ ಮನೆಯಲ್ಲಿ ನಡೆಯಲಿದೆ. "ಕ್ಷಮೆಗಿರುವ ಶಕ್ತಿಯೇ ಅದು, ನಿನ್ನೆಯನ್ನು ಬದಲಾಯಿಸದಿದ್ದರೂ, ನಮ್ಮನ್ನೇ ಬದಲಾಗೊಹಾಗೆ ಮಾಡುತ್ತೆ!" ಎಂಬ ಕ್ಯಾಪ್ಶನ್ ನೀಡಿ ವಾಹಿನಿಯವರು ಸ್ಪರ್ಧಿಗಳು ಕ್ಷಮೆ ಕೇಳಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.
ವೀಕ್ಷಕರ ಕಣ್ಣಲ್ಲಿ ದೊಡ್ಡವನೆನಿಸಿಕೊಂಡ ಕಿಶನ್; ಕ್ಷಮಿಸಲಿಲ್ಲ ಜೈ ಜಗದೀಶ್

ಜೈ ಜಗದೀಶ್, ರಾಜು ತಾಳಿಕೋಟೆ, ಹರೀಶ್ ರಾಜ್, ಭೂಮಿ ಶೆಟ್ಟಿ ತಾವು ಯಾರಿಗೆ ಬೇಸರ ಆಗುವಂತೆ ನಡೆದುಕೊಂಡಿದ್ದೇವೆಯೋ ಅವರ ಹೆಸರನ್ನು ಪ್ರಸ್ತಾಪಿಸಿ, ಕಾರಣ ತಿಳಿಸಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆದರೆ ವಿಚಾರ ಯಾವುದೇ ಇರಲಿ ತಪ್ಪು ನಡೆದು ಹೋಗಿದೆ. ಈಗ ಆಗಿ ಹೋದ ತಪ್ಪಿಗೆ ಚಿಂತಿಸಿ ಫಲವಿಲ್ಲ. ಭೂಮಿ ಶೆಟ್ಟಿ ಇನ್ಮುಂದೆ ಹರ್ಟ್ ಮಾಡೋದಿಲ್ಲ ಎಂದು ಹೇಳಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ಯಾವ ವಿಚಾರಕ್ಕೆ ಯಾರಿಗೆ ಬೇಸರವಾಗುವಂತೆ ನಡೆದುಕೊಂಡಿದ್ದಾರೆ ಎಂದು ತಿಳಿದುಕೊಳ್ಳಲು ಇಂದಿನ ಎಪಿಸೋಡ್‌ನ್ನು ಮಿಸ್ ಮಾಡದೇ ನೋಡಿ.

ಕಿಶನ್‌ಗೆ "ಬಚ್ಚಾ.. ನೀನು ನನಗೆ ಅಡ್ವೈಸ್ ಮಾಡೋದಿಕ್ಕೆ ಬರಬೇಡ" ಎಂದ ಜೈ ಜಗದೀಶ್ ; ಕಣ್ಣೀರಿಟ್ಟ ಚೈತ್ರಾ ವಾಸುದೇವನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ