ಆ್ಯಪ್ನಗರ

BBK OTT: ‘ನಿನ್ನ ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮೆ ಕೇಳ್ತೀನಿ’: ಎರಡನೇ ಮದುವೆ ವಿಚಾರಕ್ಕೆ ಮೊದಲ ಪತ್ನಿ ಬಗ್ಗೆ ನಟ ಅರ್ಜುನ್ ರಮೇಶ್ ಮಾತು!

‘ಬಿಗ್ ಬಾಸ್’ (Bigg Boss Kannada OTT 1) ಮನೆಯಲ್ಲಿ ತಮ್ಮ ಎರಡು ಮದುವೆ, ಇಬ್ಬರು ಹೆಂಡತಿಯರ ಬಗ್ಗೆ ಅರ್ಜುನ್ ರಮೇಶ್ (Arjun Ramesh) ಮಾತನಾಡಿದ್ದಾರೆ. ಎರಡನೇ ಮದುವೆ ಆಗಿರುವ ಅರ್ಜುನ್ ರಮೇಶ್, ತಮ್ಮ ಮೊದಲ ಪತ್ನಿ ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮೆ ಕೇಳ್ತೀನಿ ಎಂದಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 9 Aug 2022, 11:22 am

ಹೈಲೈಟ್ಸ್‌:

  • ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾರೆ ಕಿರುತೆರೆ ನಟ ಅರ್ಜುನ್ ರಮೇಶ್
  • ತಮ್ಮ ಎರಡು ಮದುವೆ, ಇಬ್ಬರು ಹೆಂಡತಿಯರ ಬಗ್ಗೆ ಅರ್ಜುನ್ ರಮೇಶ್ ಮಾತು
  • ಮೊದಲ ಪತ್ನಿ ಮಿಲನ್ ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದ ಅರ್ಜುನ್ ರಮೇಶ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web arjun ramesh speaks about his two wives in bigg boss kannada ott 1
BBK OTT: ‘ನಿನ್ನ ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮೆ ಕೇಳ್ತೀನಿ’: ಎರಡನೇ ಮದುವೆ ವಿಚಾರಕ್ಕೆ ಮೊದಲ ಪತ್ನಿ ಬಗ್ಗೆ ನಟ ಅರ್ಜುನ್ ರಮೇಶ್ ಮಾತು!
‘ಬಿಗ್ ಬಾಸ್ ಕನ್ನಡ ಓಟಿಟಿ 1’ (Bigg Boss Kannada OTT 1) ಕಾರ್ಯಕ್ರಮ ಆರಂಭವಾಗಿದ್ದು, ಕಿರುತೆರೆ ನಟ ಅರ್ಜುನ್ ರಮೇಶ್ ಸ್ಪರ್ಧಿಸುತ್ತಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ತಮ್ಮ ಎರಡು ಮದುವೆ, ಇಬ್ಬರು ಹೆಂಡತಿಯರ ಬಗ್ಗೆ ಅರ್ಜುನ್ ರಮೇಶ್ (Arjun Ramesh) ಮಾತನಾಡಿದ್ದಾರೆ. ಎರಡನೇ ಮದುವೆ ಆಗಿರುವ ಅರ್ಜುನ್ ರಮೇಶ್, ತಮ್ಮ ಮೊದಲ ಪತ್ನಿ ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮೆ ಕೇಳ್ತೀನಿ ಎಂದಿದ್ದಾರೆ.
‘ನಾನು ಯಾರು’ ಟಾಸ್ಕ್
ಸ್ಪರ್ಧಿಗಳ ಜೀವನವನ್ನು ಪರಿಚಯಿಸಲು ‘ಬಿಗ್ ಬಾಸ್’ ಚಟುವಟಿಕೆಯೊಂದನ್ನು ನೀಡಿದ್ದರು. ಅದೇ ‘ನಾನು ಯಾರು?’. ಇದರ ಅನುಸಾರ ಸ್ಪರ್ಧಿಗಳು ತಮ್ಮ ತಮ್ಮ ಜೀವನದ ಕುರಿತು ಮಾತನಾಡಬೇಕಿತ್ತು. ಇದೇ ಟಾಸ್ಕ್‌ನಲ್ಲಿ ಅರ್ಜುನ್ ರಮೇಶ್ ತಮ್ಮ ಮೊದಲ ಪತ್ನಿ ಮಿಲನ್ ಹಾಗೂ ಎರಡನೇ ಪತ್ನಿ ರವಿಕಾ ಬಗ್ಗೆ ಮಾತನಾಡಿದರು.

Saanya Iyer: ಮಲತಂದೆ ಮಾಡಿದ ಕೀಳು ಕೆಲಸದ ಬಗ್ಗೆ ಕಣ್ಣೀರು ಹಾಕುತ್ತಾ ಬಾಯ್ಬಿಟ್ಟ ಸಾನ್ಯ ಅಯ್ಯರ್

ಅರ್ಜುನ್ ರಮೇಶ್ ಹೇಳಿದ್ದೇನು?
‘’ನಾನು ಜನರಿಗೆ ಪ್ರತಿಕ್ರಿಯೆ ಕೊಡಲ್ಲ. ಯಾಕಂದ್ರೆ, ನನ್ನ ಸಂಸಾರದ ನೋವು, ಕಷ್ಟ, ಸುಖಗಳನ್ನ ನಾನೇ ನಿಭಾಯಿಸಿಕೊಳ್ಳಬೇಕೇ ಹೊರತು ಬೇರೆ ಯಾರೂ ಸರಿಪಡಿಸಲು ಸಾಧ್ಯವಿಲ್ಲ. ಅದು ನಾನೇ ಮಾಡಿರುವ ತಪ್ಪು. ಅದನ್ನ ನಾನೇ ಸರಿಪಡಿಸಿಕೊಳ್ಳಬೇಕು. ನಾನು ತುಂಬಾ ಎಮೋಷನಲ್. ಆದರೆ, ನನ್ನ ಜೀವನ ನನ್ನನ್ನ ಗಟ್ಟಿ ಮಾಡಿದೆ’’

Rakesh Adiga: ಹುಡುಗಿ ಮೇಲಿನ ಕೋಪಕ್ಕೆ ನೋಟೀಸ್‌ ಬೋರ್ಡ್‌ ಮೇಲೆ ಬೆತ್ತಲೆ ಫೋಟೋ ಅಂಟಿಸಿದ್ದ ರಾಕೇಶ್ ಅಡಿಗ!

‘’ನಾನು ಗಾರೆ ಕೆಲಸ ಮಾಡೋರ ಮಗ. ನನ್ನ ತಂದೆ ಕೂಡ ಕಷ್ಟ ಪಟ್ಟು ಆ ಮಟ್ಟಕ್ಕೆ ಬಂದಿದ್ದಾರೆ. ನನ್ನ ತಂದೆ- ತಾಯಿಗೆ ನಾನು ತುಂಬಾ ಬೇಜಾರು ಮಾಡಿರೋದು ಮದುವೆ ವಿಚಾರದಲ್ಲಿ. ಹೀಗಾಗಿ, ನಾನು ಅವರಿಗೆ ಸಾರಿ ಕೇಳುತ್ತೇನೆ. ಅದರಲ್ಲೂ ನನ್ನ ಮೊದಲನೇ ಹೆಂಡತಿ.. ಮಿಲನ್‌ಗೆ ನಾನು ರವಿಕಾ (ಎರಡನೇ ಹೆಂಡತಿ) ಪರವಾಗಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಬಹಿರಂಗವಾಗಿ ಕ್ಷಮೆ ಕೇಳಬೇಕು. ಯಾಕಂದ್ರೆ, ಮಿಲನ್ ಎಲ್ಲರನ್ನೂ ಬಿಟ್ಟು ನನ್ನ ಬಳಿ ಬಂದಿದ್ದಳು. ಅವಳು ತೆಗೆದುಕೊಂಡ ನಿರ್ಧಾರ ಎಂಥದ್ದು ಅಂದ್ರೆ… ದೇವರನ್ನಂತೂ ನಾನು ನೋಡಿಲ್ಲ. ಬಹುಶಃ ದೇವರು ಅಂತ ಏನಾದರೂ ಇದ್ದರೆ ಅದು ಮಿಲನ್ ಅಂತ ನಾನು ಹೆಮ್ಮೆಯಿಂದ ಹೇಳ್ತೀನಿ’’

‘’ನನ್ನ ಮೇಲೆ ಕೇಸ್‌ ಹಾಕಿ ಇನ್ನೊಂದು ಹಂತಕ್ಕೆ ಹೋಗಬಹುದಿತ್ತು. ಆದರೆ, ಅದ್ಯಾವುದನ್ನೂ ಮಿಲನ್ ಮಾಡಿಲ್ಲ. ನನ್ನ ಜೀವನಕ್ಕೆ ಮಿಲನ್ ದೇವರಾಗಿದ್ದಾಳೆ. ಮಿಲನ್‌ಗೊಂದು ಪ್ರಾಮಿಸ್.. ಯಾವತ್ತೂ ಕೂಡ ಬಿಟ್ಟುಕೊಡಲ್ಲ. ಯಾವತ್ತೂ ಯಾರೂ ಬೆರಳೆತ್ತಿ ತೋರಿಸಬಾರದು.. ಆ ತರಹ ನಾನು ಮಿಲನ್ ಹಾಗೂ ರವಿಕಾರನ್ನ ನೋಡಿಕೊಳ್ತೀನಿ. ಇದನ್ನ ಪ್ರಾಮಿಸ್ ಮಾಡಿ ಹೇಳ್ತೀನಿ. ಶಿವಿನ್ ಮತ್ತು ಧನ್ವಿಗೆ ಉತ್ತಮ ತಂದೆಯಾಗಿರುತ್ತೇನೆ’’ ಎಂದಿದ್ದಾರೆ ನಟ ಅರ್ಜುನ್ ರಮೇಶ್.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ