ಆ್ಯಪ್ನಗರ

ಶಾಕಿಂಗ್‌! ಬಿಗ್‌ ಬಾಸ್‌ ಮನೆಯಲ್ಲಿ ಅತ್ಯಾಚಾರ ಯತ್ನದ ಬಗ್ಗೆ ಬಾಯಿ ಬಿಟ್ಟ ಸ್ಪರ್ಧಿ!

ಇತ್ತೀಚೆಗೆ ಬಿಗ್‌ ಬಾಸ್‌ ಮನೆಯೊಳಗಿರುವ ನಟಿ ಆರತಿ ಸಿಂಗ್‌, ತಮ್ಮ ಮೇಲೆ ನಡೆದ ರೇಪ್‌ ಯತ್ನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

Vijaya Karnataka Web 13 Jan 2020, 2:05 pm
ಬಿಗ್‌ ಬಾಸ್‌ನ ಪ್ರತಿ ಎಪಿಸೋಡ್‌ನಲ್ಲೂ ಒಂದಿಲ್ಲೊಂದು ಅಚ್ಚರಿಯ ವಿಚಾರಗಳು ಹೊರಬರುತ್ತಲೇ ಇರುತ್ತವೆ. ಟಾಸ್ಕ್‌ಗಾಗಿ ಜಗಳ ಮಾಡುವುದು, ಸಣ್ಣ ಸಣ್ಣ ವಿಷಯಕ್ಕಾಗಿ ಕಿತ್ತಾಡುವುದು ಸಹಜ. ಅವುಗಳ ಜತೆಗೆ ಒಂದಷ್ಟು ಗಂಭೀರ ಮಾತುಕತೆಗಳೂ ಜರುಗುತ್ತವೆ. ಇತ್ತೀಚೆಗೆ ಬಿಗ್‌ ಬಾಸ್‌ ಮನೆಯೊಳಗಿರುವ ನಟಿ ಆರತಿ ಸಿಂಗ್‌, ತಮ್ಮ ಮೇಲೆ ನಡೆದ ರೇಪ್‌ ಯತ್ನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಅದರ ಬೆನ್ನಲ್ಲೇ ಮನೆಯೊಳಗಿರುವ ಇತರ ಸದಸ್ಯರು ಕೂಡ ತಮಗೆ ಆಗಿರುವ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ!
Vijaya Karnataka Web arti singh reveals rape attempt was made on her at the age of 13
ಶಾಕಿಂಗ್‌! ಬಿಗ್‌ ಬಾಸ್‌ ಮನೆಯಲ್ಲಿ ಅತ್ಯಾಚಾರ ಯತ್ನದ ಬಗ್ಗೆ ಬಾಯಿ ಬಿಟ್ಟ ಸ್ಪರ್ಧಿ!


ಮನೆ ಕೆಲಸದವನಿಂದಲೇ ಹೀನಾಯ ಕೃತ್ಯ!

'ನನಗೆ ಆಗ ಕೇವಲ 13 ವರ್ಷ. ನನ್ನನ್ನು ಮನೆಯೊಳಗೆ ಕೂಡಿಹಾಕಿ ರೇಪ್‌ ಮಾಡಲು ಪ್ರಯತ್ನಿಸಲಾಯಿತು. ನಮ್ಮ ಮನೆ ಕೆಲಸದವನೇ ಇಂಥ ಹೀನಾಯ ಕೆಲಸ ಮಾಡಿದ. ಅದನ್ನು ನೆನಪಿಸಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ' ಎಂದು ಹಿಂದಿ ಬಿಗ್‌ ಬಾಸ್‌ ಸೀಸನ್‌ 13ರಲ್ಲಿ ಸ್ಪರ್ಧಿಸುತ್ತಿರುವ ನಟಿ ಆರತಿ ಸಿಂಗ್‌ ಹೇಳಿದ್ದಾರೆ. ಆ ಘಟನೆ ನಡೆದ ಬಳಿಕ ಅವರು ಮಾನಸಿಕವಾಗಿ ಕುಗ್ಗಿಹೋದರಂತೆ. ಅವರು ನೆನಪಿಸಿಕೊಂಡ ಈ ಸಂಗತಿಯನ್ನು ಕೇಳಿದ ಬಳಿಕ ಬಿಗ್‌ ಬಾಸ್‌ ಮನೆಯ ಇನ್ನುಳಿದ ಸದಸ್ಯರು ಕಣ್ಣೀರು ಹಾಕಿದ್ದಾರೆ.

ದೀಪಿಕಾ ಪಡುಕೋಣೆ ಎದುರಲ್ಲಿ ಕಹಿ ಘಟನೆ ಮೆಲುಕು

ಅಂದಹಾಗೆ, ಅವರು ಈ ಘಟನೆ ನೆನಪಿಸಿಕೊಂಡಿದ್ದು ಖ್ಯಾತ ನಟಿ ದೀಪಿಕಾ ಪಡುಕೋಣೆ ಎದುರಿನಲ್ಲಿ. ಇತ್ತೀಚೆಗೆ ತೆರೆಕಂಡ 'ಛಪಾಕ್‌' ಸಿನಿಮಾದ ಪ್ರಚಾರದ ಸಲುವಾಗಿ ದೀಪಿಕಾ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟರು. ಆ ವೇಳೆ ಅವರ ಜತೆ ನಟ ವಿಕ್ರಾಂತ್‌ ಮೆಸ್ಸಿ, ಆ್ಯಸಿಡ್‌ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್‌ ಕೂಡ ಭಾಗವಹಿಸಿದ್ದರು. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆ ನೆನಪಿಸಿಕೊಳ್ಳುವಂತೆ ದೀಪಿಕಾ ಹೇಳಿದ್ದಕ್ಕಾಗಿ ಬಿಗ್‌ ಬಾಸ್‌ ಮನೆಯೊಳಗಿನ ಸ್ಪರ್ಧಿಗಳು ಕೆಲವು ಸಂಗತಿಗಳನ್ನು ಹಂಚಿಕೊಂಡರು.

ಹಿಂದಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಆರತಿ

ಬಾಲ್ಯದಲ್ಲಿ ತಮಗಾದ ಕಹಿ ಅನುಭವವನ್ನು ಬಿಗ್ ಬಾಸ್‌ ಮನೆಯಲ್ಲಿ ಹಂಚಿಕೊಂಡಿರುವ ನಟಿ ಆರತಿಗೆ ಹಿಂದಿ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಇದೆ. 2007ರಿಂದಲೂ ಅನೇಕ ಧಾರಾವಾಹಿಗಳಲ್ಲಿ ನಟಿಸುತ್ತ, ಕೆಲವು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಪ್ರಸ್ತುತ ಹಿಂದಿ ಬಿಗ್‌ ಬಾಸ್‌ 13ನೇ ಸೀಸನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಿರುತೆರೆಯಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಅವರು ಅವಕಾಶಗಳ ಕೊರತೆಯಿಂದಾಗಿ ಎರಡು ವರ್ಷ ಡಿಪ್ರೆಷನ್‌ನಲ್ಲಿ ಇದ್ದೆ ಎಂಬುದನ್ನೂ ಬಿಗ್‌ ಬಾಸ್‌ ಅಂಗಳದಲ್ಲೇ ಕೇಳಿಕೊಂಡಿದ್ದರು.

ದೀಪಿಕಾ ಕಡೆಯಿಂದ ಸ್ಪರ್ಧಿಗಳಿಗೆ ಬಂಪರ್‌ ಚಾನ್ಸ್‌

ಸಾಮಾನ್ಯವಾಗಿ ಸ್ಪರ್ಧಿಗಳು ಒಮ್ಮೆ ಬಿಗ್‌ ಬಾಸ್‌ ಮನೆ ಸೇರಿಕೊಂಡ ಮೇಲೆ ಮತ್ತೆ ಹೊರಬರುವುದು ಎಲಿಮಿನೇಷನ್‌ ಆದ ನಂತರ ಮಾತ್ರ. ಆದರೆ ದೀಪಿಕಾ ಪಡುಕೋಣೆ ಕಡೆಯಿಂದ ಈ ಬಾರಿಯ ಸ್ಪರ್ಧಿಗಳಿಗೆ ಒಂದು ಬಂಪರ್‌ ಚಾನ್ಸ್‌ ಸಿಕ್ಕಿದೆ. ಕೆಲವು ಸಮಯದ ಮಟ್ಟಿಗೆ ಎಲ್ಲ ಸ್ಪರ್ಧಿಗಳನ್ನೂ ಅವರು ಹೊರಗೆ ಕರೆದುಕೊಂಡು ಹೋಗಿ ಸುತ್ತಾಡಿಸಿ ಬಂದಿದ್ದಾರೆ. ಹಲವು ದಿನಗಳಿಂದ ಮನೆಯೊಳಗೆ ಇದ್ದು ಬೋರ್‌ ಆಗಿದ್ದ ಸದಸ್ಯರೆಲ್ಲ ಈ ಅವಕಾಶದಿಂದಾಗಿ ಸಖತ್‌ ಎಂಜಾಯ್‌ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ