ಆ್ಯಪ್ನಗರ

BBK 10: ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನಿಂದ ಹೊರಬಂದ ನೀತು, ತುಕಾಲಿ ಸಂತು: ವಿನಯ್ ಗೇಮ್ ಪ್ಲಾನ್ ಬಯಲು!

Bigg Boss Kannada 10 Day 33: ವಿನಯ್ ಗೌಡ ಗುಂಪಿನಿಂದ ನೀತು ಮತ್ತು ತುಕಾಲಿ ಸಂತು ಹೊರಗೆ ಬಂದಿದ್ದಾರೆ. ವಿನಯ್ ಗೌಡ ಅವರ ಗ್ರೂಪಿಸಂ ವಿರುದ್ಧ ನೀತು ಸಿಡಿದೆದ್ದಿದ್ದಾರೆ. ವಿನಯ್ ಗೇಮ್ ಪ್ಲಾನ್ ಮತ್ತು ಸ್ಟ್ರಾಟೆಜಿಯನ್ನ ತುಕಾಲಿ ಸಂತು ಬಟಾ ಬಯಲು ಮಾಡಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 11 Nov 2023, 3:31 pm

ಹೈಲೈಟ್ಸ್‌:

  • ಪಾಪರೆಡ್ಡಿಪಾಳ್ಯ ಗ್ಯಾಂಗ್‌ನಲ್ಲಿ ಬಿರುಕು
  • ವಿನಯ್ ಗೌಡ ಗುಂಪಿನಿಂದ ಹೊರಬಂದ ತುಕಾಲಿ ಸಂತು, ನೀತು
  • ವಿನಯ್ ಗೇಮ್‌ ಪ್ಲಾನ್‌ ಬಗ್ಗೆ ತುಕಾಲಿ ಸಂತು ಮಾತು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bbk 10 day 33 tukali santhu and neethu moves out of vinay gowda s group
BBK 10: ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನಿಂದ ಹೊರಬಂದ ನೀತು, ತುಕಾಲಿ ಸಂತು: ವಿನಯ್ ಗೇಮ್ ಪ್ಲಾನ್ ಬಯಲು!
‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ವಿನಯ್ ಗೌಡ ಗ್ರೂಪಿಸಂ ಮಾಡುತ್ತಿದ್ದಾರೆ. ವಿನಯ್ ಗೌಡ ಅವರ ಗ್ರೂಪ್‌ನಲ್ಲಿ ತುಕಾಲಿ ಸಂತು ಮತ್ತು ನೀತು ಇದ್ದರು. ಆದ್ರೀಗ, ಗುಂಪಿನಿಂದ ತುಕಾಲಿ ಸಂತು ಮತ್ತು ನೀತು ಹೊರಬಂದಿದ್ದಾರೆ. ವಿನಯ್ ಗೌಡ ಗ್ರೂಪಿಗೆ ಮೈಕಲ್ ಸೇರಿಕೊಂಡಿದ್ದಾರೆ. ವಿನಯ್ ಗೌಡ ಅವರ ಗೇಮ್‌ ಪ್ಲೇ, ಸ್ಟ್ರಾಟೆಜಿಯನ್ನ ವರ್ತೂರು ಸಂತೋಷ್ ಜೊತೆಗೆ ಮಾತನಾಡುತ್ತಾ ತುಕಾಲಿ ಸಂತು ಬಯಲು ಮಾಡಿದ್ದಾರೆ.

ನೀತುಗೆ ಬೇಸರ

ಗ್ರೂಪ್‌ನಲ್ಲಿ ತಮಗಾಗುತ್ತಿರುವ ಬೇಸರವನ್ನ ತನಿಷಾ ಬಳಿ ನೀತು ಹೊರಹಾಕಿದರು.
ನೀತು - ನಾನು ಚಿಕನ್ ಮಾಡಿಕೊಟ್ಟೆ, ವೆರೈಟಿ ವೆರೈಟಿ ಮಾಡಿಕೊಟ್ಟೆ. ಆದರೆ, ನನಗೆ ಏನೂ ಹೇಳಲಿಲ್ಲ. ನನಗೆ ಸಪೋರ್ಟ್ ಸಿಗಲಿಲ್ಲ. ನೀವು ಹೇಳುವ ತರಹ ನನಗೆ ಬೇರೆ ಯಾರೂ ಹೇಳಲಿಲ್ಲ.
ತನಿಷಾ - ಅವರಲ್ಲಿ ಮೂರು ಜನ ಮಾಡಿದರೆ ಮಾತ್ರ ಅಪ್ರೀಸಿಯೇಷನ್ ಸಿಗುತ್ತೆ.
ನೀತು - ನಾವು ಹೋದರೂ ಮಾತಾಡ್ತಾರೆ, ಹೋಗಲಿಲ್ಲ ಅಂದರೂ ಮಾತಾಡ್ತಾರೆ. ಅದಕ್ಕೆ ನನಗೆ ಇಂಟ್ರೆಸ್ಟ್ ಹೋಗಿಬಿಡ್ತು. ಎಲ್ಲಾ ವಿಷಯದಲ್ಲೂ..


ಗ್ರೂಪಿಸಂ, ಫಿಕ್ಸಿಂಗ್ ಗೇಮ್ ಆಡಿದವರಿಗೆ ‘ಬಿಗ್ ಬಾಸ್’ ಮಾಸ್ಟರ್‌ ಸ್ಟ್ರೋಕ್! ಇದಿನ್ನೂ ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ಗೆ ಅರ್ಥವಾಗಿಲ್ವಾ?

ವಿನಯ್ ಗೇಮ್‌ ಪ್ಲಾನ್‌, ಸ್ಟ್ರಾಟೆಜಿ ಬಗ್ಗೆ ತುಕಾಲಿ ಸಂತು ಮಾತು

ತುಕಾಲಿ ಸಂತು - ಅವನ ಪ್ಲಾನಿಂಗ್‌ ಹೇಗಿದೆ ಗೊತ್ತಾ? ಅವನ ಕೈಯಲ್ಲಿ ಒಂದಷ್ಟು ಜನರನ್ನ ಇಟ್ಟುಕೊಂಡು ಟೀಮ್ ಮಾಡಿಕೊಳ್ಳಬೇಕು ಅಂತ. ಟೀಮ್‌ ಮಾಡಿಕೊಂಡು ಅವರುಗಳನ್ನೆಲ್ಲಾ ದಾಳವಾಗಿ ಬಳಸಿಕೊಂಡು..
ವರ್ತೂರು ಸಂತೋಷ್ - ಫೈನಲ್‌ಗೆ ಹೋಗಿಬಿಡೋಣ ಅಂತ..
ತುಕಾಲಿ ಸಂತು - ಗೊಂಬೆ ತರಹ ಆಡಿಸಿಕೊಂಡು ಅವನು ಟಾಪ್‌ನಲ್ಲಿ ಹೋಗಿ ಕೂತುಕೊಳ್ಳಬೇಕು.
ನೀತು - ಯಾರು ಠುಸ್‌ ಇದ್ದಾರೆ, ಫಸ್ಟ್ ಅವರನ್ನೇ ಇವನು ಇಟ್ಟುಕೊಳ್ಳೋದು.
ತುಕಾಲಿ ಸಂತು - ನನಗೆ ನಿನ್ನೆಯೇ ಬಿಡುಗಡೆ ಸಿಕ್ಕಿದೆ. ಮಾಡಿದ ತಪ್ಪನ್ನ ಮತ್ತೆ ಇನ್ನೊಮ್ಮೆ ಮಾಡಲ್ಲ.
ವರ್ತೂರು ಸಂತೋಷ್ - ಥೂ.. ಇನ್ನೊಂದ್ಸಲಿ ಮಾಡಿದ್ರೆ ನೀನು ಮನುಷ್ಯನೇ ಅಲ್ಲ
ತುಕಾಲಿ ಸಂತು - ಅವತ್ತೇ ಹೋಗಿಬಿಡ್ತೀನಿ ನಾನು.
ನೀತು - ಈ ವೀಕ್ ಬುದ್ಧಿವಂತರಾದ್ರಿ
ತುಕಾಲಿ ಸಂತು - ಹೌದು.. ಅಲ್ಲಿ ಹೋಗಿ ಯಾಕೆ ಸಾಯಬೇಕು ನಾನು? ನಾನು ನಗಿಸಿಕೊಂಡು.. ನಾನು ಮುಖಕ್ಕೆ ಉಗಿಸಿಕೊಳ್ಳಬೇಕಾ?
ನೀತು - ಒಂದು ರೀತಿ ತನಿಷಾ ಬೆಸ್ಟ್. ಜೋರು ವಾಯ್ಸ್ ಇದ್ದರೂ..
ತುಕಾಲಿ ಸಂತು - ಇಲ್ಲಿ ಯಾರೂ ಒಳ್ಳೆಯವರಲ್ಲ.

ತುಕಾಲಿ ಸಂತು - ಏನು ಸಂತು ನಮ್ಮ ಜೊತೆ ಸೇರುತ್ತಿಲ್ಲವಲ್ಲ ಅಂದುಕೊಂಡಿರ್ತಾರೆ
ನೀತು - ಇರಲಿ ಬಿಡ್ರಿ. ಐದು ದಿನ ಇದ್ದರೂ ನೀವು ರಾಜರಾಗಿ ಹೋಗಬೇಕು ಅಷ್ಟೇ. ಗುಂಡಿ ತೋಡುವವರ ಜೊತೆಗಿದ್ದು, ನಾವೂ ಗುಂಡಿ ತೋಡುವವರು ಆಗಿಬಿಟ್ಟರೆ..
ತುಕಾಲಿ ಸಂತು - ಮುಚ್ಚಿ ಹಾಕಿಬಿಡ್ತಾರೆ.

ಆಟದಲ್ಲಿ ಗೆಲ್ಲಲು ಆಗದೆ ಮ್ಯಾಚ್ ಫಿಕ್ಸಿಂಗ್ ಪ್ಲಾನ್: ಮೋಸದಿಂದ ಗೆಲುವು ಪಡೆದರೆ ವೀಕ್ಷಕರು ಮೆಚ್ಚುತ್ತಾರಾ?

ಗುಂಪುಗಳ ಬಗ್ಗೆ ವಿನಯ್, ಸ್ನೇಹಿತ್ ಚರ್ಚೆ

ಸ್ನೇಹಿತ್ - ಹೊಸ ಗ್ಯಾಂಗ್ ಫಾರ್ಮ್ ಆಗ್ತಿದೆ
ವಿನಯ್ - ನೀತು & ಗ್ಯಾಂಗ್
ಸ್ನೇಹಿತ್ - ಇಲ್ಲಿ ಸಲ್ಲದವರು, ಅಲ್ಲಿ ಸಲ್ಲುತ್ತಾರೆ ಅಂತಾರಲ್ಲ ಹಾಗೆ..
ವಿನಯ್ - ಇಲ್ಲೂ ಇಲ್ಲ, ಅಲ್ಲೂ ಇಲ್ಲ.. ಅಲ್ಲಿ ಇದ್ದಾರೆ
ಸ್ನೇಹಿತ್ - ಲೇಡೀಸ್ ಕ್ಲಬ್, ನೀತು, ವರ್ತೂರು, ತುಕಾಲಿ
ವಿನಯ್ - ಆಗಲಿ..
ಸ್ನೇಹಿತ್ - ಅವರೇನು ನಮಗೆ ಥ್ರೆಟ್ ಅಲ್ಲ..
ವಿನಯ್ - ಹಾಗೆ ಅಂದುಕೊಳ್ಳಬೇಡ. ಒಂದು ಇರುವೆ ಆನೆಯನ್ನ ಉರುಳಿಸಬಹುದು.
ಸ್ನೇಹಿತ್ - ಅಂಡರ್‌ ಎಸ್ಟಿಮೇಟ್ ಮಾಡೋದು ಬೇಡ.
ವಿನಯ್ - ಈಗ ವರ್ತೂರು ಒಂದು ಗ್ಯಾಂಗ್ ಫಾರ್ಮ್ ಮಾಡಿಕೊಳ್ಳುತ್ತಿದ್ದಾರೆ. ಅವರದ್ದೇ ಗ್ಯಾಂಗ್..
ಶಾನಿ - ನಾನು ಎಲ್ಲಿ
ವಿನಯ್ - ನೀನು, ಮೈಕಲ್ ನಮ್ಮ ಗ್ರೂಪ್‌ನಲ್ಲೇ ಇರೋದು.

‘ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನಲ್ಲಿ ಬಿರುಕು: ಡ್ರೋನ್ ಪ್ರತಾಪ್ ಮಾಡಿದ್ದು ಸರಿ ಎಂದ ತುಕಾಲಿ ಸಂತು!

ಪಾಪರೆಡ್ಡಿಪಾಳ್ಯ ಗ್ಯಾಂಗ್ ಮಾತು

ಸ್ನೇಹಿತ್ - ಮೈಕಲ್ ಲಾಯಲ್ಟಿ ಗೆಲ್ಲಬೇಕು ಅಂತ ಆ ಟೀಮ್‌ (ಸಂಗೀತಾ, ಕಾರ್ತಿಕ್, ತನಿಷಾ) ಏನೇನೋ ಟ್ರೈ ಮಾಡ್ತಿದ್ದಾರೆ.
ವಿನಯ್ - ಅವರ ಅಟೆಂಪ್ಟ್ ಫೇಕ್‌ ಅಂತ ನೀಟ್ ಆಗಿ ಗೊತ್ತಾಗುತ್ತಿದೆ.
ಸ್ನೇಹಿತ್ - ಹೆವಿ ಟ್ರೈ ಮಾಡ್ತಿದ್ದಾರೆ.
ಮೈಕಲ್ - ಈಗ ರೂಮ್‌ ನೀಟ್‌ ಆಗಿ ಭಾಗ ಆಗಿದೆ ಟೀಮ್ಸ್. ಲೇಡೀಸ್ ಗ್ರೂಪ್, ಇಂಕಿ-ಮಂಕಿ-ಬೆಂಕಿ.
ಸ್ನೇಹಿತ್ - ತುಕಾಲಿ ಏನ್ಮಾಡ್ತಾರೆ ಅನ್ನೋದು ನನಗೆ ಇಂಟ್ರೆಸ್ಟಿಂಗ್ ಆಗಿದೆ.
ನಮ್ರತಾ - ಅವರಿಬ್ಬರು ಮನೆಗೆ ಹೋದರೆ, ತುಕಾಲಿ ನಮ್ಮ ಹತ್ತಿರವೇ ಬರೋದು.
ಸ್ನೇಹಿತ್ - 100%
ವಿನಯ್ - ವರ್ತೂರು ಹೋದರೆ ತುಕಾಲಿ ಕ್ಲೋಸ್. ನಮ್ಮ ಟೀಮ್‌ ಡಿಸ್ಟ್ರಕ್ಷನ್ ಫೇಲ್ಯೂರ್‌ಗೆ ಹೋಯ್ತು. ಒಂದೂ ಗೆಲ್ಲೋಕೆ ಆಗಲಿಲ್ಲ ನಮ್ಮ ಕೈಯಲ್ಲಿ. ನೀತು ಮೇಲೆ ಒಂದು ಗೌರವ ಇತ್ತು, ಲಾಯಲ್ಟಿ ಇತ್ತು. ನಿನ್ನೆ ಆದ್ಮೇಲೆ ಐ ಆಮ್ ಡನ್..
ನಮ್ರತಾ - ಎಲ್ಲರೂ ಸುಮ್ಮನೆ ಟಾರ್ಗೆಟ್ ಮಾಡ್ತಿದ್ದಾರೆ ಅಂದುಕೊಂಡಿದ್ದೆ. ಆದರೆ, ಈಗ ಹಾಗಿಲ್ಲ.

BBK 10: ನಾಮಿನೇಟ್ ಮಾಡುವಂತಿಲ್ಲ ಎಂಬ ಓಪನ್ ಕಂಡೀಷನ್! ಹೀಗೆ ಮಾಡಬಹುದಾ ‘ಬಿಗ್ ಬಾಸ್‌’?

ಪ್ಲಾನ್ ಮಾಡಿ ಆಡೋಣ

ವಿನಯ್ - ಈ ಶನಿವಾರ ಅವರು ಆಡಿರುವ ಆಟಗಳಿಗೆಲ್ಲಾ ಒಂದು ಕಥೆ ಹಾಡೋದಕ್ಕೆ ಬಿಗ್ ಬಾಸ್ ಬರ್ತಾರೆ. ಅದನ್ನಿಟ್ಟುಕೊಂಡು ನಾವು ಮತ್ತೆ ಹೊಡೆಯಬೇಕು. ಎದ್ದೇಳಲು ಬಿಡಬಾರದು.
ಸ್ನೇಹಿತ್ - ಮುಂದಿನ ವಾರ ನಮ್ಮ ವಾರ.
ವಿನಯ್ - ಮುಂದಿನ ವಾರ ನಾವು ಹೊಡೆಯಲೇಬೇಕು. ಹೊಡೆದು ಮಲಗಿಸಿದರೆ ಒಂದ್ಸಲಿ.. ಸುಧಾರಿಸಿಕೊಳ್ಳಲು ಎರಡು ವಾರ ಬೇಕು. ಅಷ್ಟರಲ್ಲಿ ನಾವು 2 ವಿಕೆಟ್ ಎಗಿರಿಸಿಬೇಕು. ಕರೆಕ್ಟ್ ಆಗಿ ಪ್ಲಾನ್ ಮಾಡಿಕೊಂಡು ಆಡೋಣ.

‘ಏಯ್ ತಿಕ್ಲಾ.. ತಲೆ ಸರಿಗಿದ್ಯಾ’ ಅಂತ ಕೇಳಿದವರೇ ಇಂದು ‘ಡ್ರೋನ್’ ಆಟ ಮೆಚ್ಚಿದರು! ಪ್ರತಾಪ್‌ಗೆ ವಿನಯ್‌ ಬ್ರೇನ್ ವಾಶ್‌?

ಡ್ರೋನ್‌ ಪ್ರತಾಪ್‌ನ ಸೆಳೆಯಲು ಸ್ಟ್ರಾಟೆಜಿ

ಸ್ನೇಹಿತ್ - ನನಗೆ ಯಾಕೋ ಪ್ರತಾಪ್ ಆ ರೇಂಜಿನ ಸ್ಟ್ರಾಟೆಜಿ ಮಾಡ್ತಿಲ್ಲ ಅನ್ಸುತ್ತೆ. ಅಂದ್ರೆ ನಾವು ಅಂದುಕೊಂಡಷ್ಟು…
ವಿನಯ್ - ಅವನು ಕ್ಲೆವರ್ ಇದ್ದಾನೆ
ಸ್ನೇಹಿತ್ - ಹೌದು.. ಜೀನಿಯೆಸ್ ಲೆವೆಲ್ ಸ್ಟ್ರಾಟೆಲಿ ಅಲ್ಲ.
ವಿನಯ್ - ಸ್ಟ್ರಾಟೆಜಿ.. ಸ್ಟ್ರಾಟೆಜಿನೇ.. ಜೀನಿಯಸ್‌ ಲೆವೆಲ್ ಇರಲಿ. ಬಿಡಲಿ.. ಅವನು ಸಿಂಗಲ್ ಆಗಿ ಆಡ್ತಿದ್ದಾನೆ. ಈ ಶನಿವಾರ ಅವನಿಗೆ ಸಪೋರ್ಟ್ ಬೇಕಾಗಿದೆ. ಆ ಸಪೋರ್ಟ್‌ಗೆ ನಾವು ಬ್ಯಾಕಿಂಗ್ ಇದ್ದೀವಿ ಅಂತ ಗೊತ್ತಾದರೆ, ಅವನಿನ್ನೂ ಓಪನ್ ಅಪ್ ಆಗ್ತಾನೆ. ಓಪನ್ ಅಪ್ ಆದಾಗ.. ಆ ಕಡೆಯಿಂದ ಬಾಂಬ್ ಬೀಳುತ್ತೆ. ಆ ಕಡೆಗೆ ಬಾಂಬ್ ಬಿದ್ದಾಗ.. ಈ ಕಡೆ ಬರ್ತಾನೆ.

BBK 10: ಐದನೇ ವಾರ ಡ್ರೋನ್ ಪ್ರತಾಪ್ ಬೆಸ್ಟ್: ನೀತು, ಇಶಾನಿ ವರ್ಸ್ಟ್!

ಕಳಪೆಯಲ್ಲಿ ನೀತು ಟಾರ್ಗೆಟ್

‘’ಸಿರಿ’ ಪಕ್ಷಪಾತ ಮಾಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ’’ ಅಂತ ತಂಡದಲ್ಲಿ ಆದ ಮಾತುಕತೆಯನ್ನ ಸಿರಿ ಬಳಿ ನೀತು ಹೇಳಿಬಿಟ್ಟರು. ಹೀಗಾಗಿ, ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್ ನೀತು ಅವರನ್ನ ‘ಕಳಪೆ’ ಪಟ್ಟಕ್ಕೆ ಟಾರ್ಗೆಟ್ ಮಾಡಿತು. ನೀತುಗೆ ವಿನಯ್, ನಮ್ರತಾ, ಸ್ನೇಹಿತ್, ಇಶಾನಿ, ತುಕಾಲಿ ಸಂತು, ಸಿರಿ, ಮೈಕಲ್ ‘ಕಳಪೆ’ ಎಂದರು. ನೀತುಗೆ ಕಳಪೆ ಸಿಕ್ಕ ಬಳಿಕ…

ನೀತು - ವಿನಯ್.. ಥ್ಯಾಂಕ್ಯು.. ಫುಲ್ ಚರ್ಚೆ ಮಾಡಿ ಕಳಪೆ ಕೊಟ್ಟಿದ್ದಕ್ಕೆ
ನಮ್ರತಾ - ಚರ್ಚೆ ಮಾಡೋದು ನೀವು.. ನಾವಲ್ಲ
ನೀತು - ಯಾವಾಗಲೂ ಆಗತ್ತಲ್ವಾ? ನೀವು ಲಾಯಲ್ ಆಗಿದ್ದರೆ, ನಾವೂ ಆಗಿರ್ತೀವಿ
ನಮ್ರತಾ - ನಿನ್ನೆ ನೀವು ಪ್ರೂವ್ ಮಾಡಿದ್ರಿ
ನೀತು - ಮ್ಯಾಚ್ ಫಿಕ್ಸಿಂಗ್ ಅಂತ ಹೇಳಿದ್ದು ನೀವೇ
ನಮ್ರತಾ - ಬಾಯಿಗೆ ಬಂದ ಹಾಗೆ ಮಾತಾಡಬೇಡಿ. ಇಲ್ಲಿ ಏನೂ ಚೇಂಜ್ ಆಗಲ್ಲ
ನೀತು - ಚಮಚಾಗಿರಿ, ದಾದಾಗಿರಿ.. ಮಾಡಿದವರು ಹೊರಗೆ

BBK 10:ತಳ್ಳೋದು ತಳ್ಳಿ.. ‘ಏನೀಗ’ ಎಂದ ವಿನಯ್! ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಕಾರ್ತಿಕ್! ಇದೆಲ್ಲಾ ಸರಿನಾ?

ಸಂಗೀತಾ - ಕಾರ್ತಿಕ್ ಮಧ್ಯೆ ಮುನಿಸು

ಇತ್ತ ಸಂಗೀತಾ - ಕಾರ್ತಿಕ್ - ತನಿಷಾ ಮಧ್ಯೆಯೂ ಮನಸ್ತಾಪ, ಭಿನ್ನಾಭಿಪ್ರಾಯಗಳಿವೆ.

ಟಾಸ್ಕ್‌ ವೇಳೆ, ‘’ನಾನೂ ಬಂದಿದ್ದೆ. ನೀವು ಸೈಡ್‌ಗೆ ಹೋಗಿ ಅಂದಿದ್ದು ಚೆನ್ನಾಗಿ ಅನಿಸಲಿಲ್ಲ’’ ಎಂದು ಸಂಗೀತಾ ಹೇಳಿದರು. ಆಗ, ‘’ನಾನು ನಿನಗೆ ಹೇಳಲಿಲ್ಲ’’ ಎಂದರು ಕಾರ್ತಿಕ್. ಅದಕ್ಕೆ, ‘’ಕ್ಯಾಮರಾಗೆ ಅಡ್ಡ ಆಗ್ತಿದ್ದೀರಾ ಅಂತ ಹೇಳಿದ್ರಿ’’ ಎಂದು ಸಂಗೀತಾ ಹೇಳಿದಾಗ ಕೈಯಲ್ಲಿದ್ದ ಬಜ್ಜಿಯನ್ನ ಎಸೆದು ಸಿಟ್ಟಿನಿಂದ ಕಾರ್ತಿಕ್ ಹೊರಟರು.

BBK 10: ಐದನೇ ವಾರ ಕ್ಯಾಪ್ಟನ್ ಆದ ಮೈಕಲ್: ಕಳಪೆಯಾಗಿ ಆಟವಾಡಿ ಕಣ್ಣೀರಿಟ್ಟ ಸಂಗೀತಾ!

ಸಂಗೀತಾ ಬಗ್ಗೆ ಕಾರ್ತಿಕ್ - ತನಿಷಾ ಮಧ್ಯೆ ಮಾತುಕತೆ

ಕಾರ್ತಿಕ್ - ನನ್ನನ್ನ ಹರ್ಟ್ ಮಾಡಿಕೊಂಡು ನಾನು ಇರೋಕೆ ಆಗಲ್ಲ. ನಾನು ಸುಮ್ಮನೆ ಇದ್ದೆ, ಜಾಸ್ತಿ ಕೇರ್ ಮಾಡದೆ. ಮೇಲಿಂದ ಮೇಲೆ ಮಾತನಾಡಿಸಿಕೊಂಡು ಬಂದಿದ್ದೇ ಅವಳು.
ತನಿಷಾ - ಯಾಕೆ ಓವರ್ ಆಗಿ ಮಾಡ್ತಿದ್ದಾಳೆ ಅಂತ ಅಂದುಕೊಂಡೆ. ಅಷ್ಟರಲ್ಲಿ.. ಇವತ್ತು ಆಯ್ತು. ನೀವೇನು ಕಮ್ಮಿ ಜಗಳ ಮಾಡ್ತಿದ್ದೀರಾ?
ಕಾರ್ತಿಕ್ - ಈಗ ನೋಡು ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಿದ್ದಾಳೆ.
ತನಿಷಾ - ನಾನೂ ನೋಟಿಸ್ ಮಾಡಿದೆ
ಕಾರ್ತಿಕ್ - ವಿನಯ್ ಜೊತೆ ನೋಡು ಎಷ್ಟು ಚೆನ್ನಾಗಿ ಮಾತಾಡ್ತಿದ್ಳು
ತನಿಷಾ - ಒಂದೊಂದು ಬಾರಿ ನೋಡ್ತಾ ನೋಡ್ತಾ..ಇವಳು ಸಮಯ ಸಾಧಕಿ ಅಲ್ವಾ ಅನಿಸಿಬಿಡುತ್ತೆ. ಆದರೆ, ನೆಕ್ಸ್ಟ್‌ ಮೊಮೆಂಟ್‌ನಲ್ಲಿ ಅವಳೇ ಚೆನ್ನಾಗಿ ಮಾತನಾಡಿ ಮರೆಸಿಬಿಡ್ತಾಳೆ.

ಎಂಟನೇ ಅದ್ಭುತ

ಕಳೆದ ವಾರ ವಿನಯ್ ಮತ್ತು ಸಂಗೀತಾ ಮಧ್ಯೆ ಜೋರು ಗಲಾಟೆ ನಡೆದಿತ್ತು. ಇಬ್ಬರ ಮಧ್ಯೆ ಎಲ್ಲವೂ ಸರಿಗಿರಲಿಲ್ಲ. ಈ ವಾರವೂ ಟಾಸ್ಕ್‌ ವೇಳೆ ಜಿದ್ದಾಜಿದ್ದಿ ನಡೆದಿತ್ತು. ಆದರೂ, ವಿನಯ್ ಜೊತೆಗೆ ಸಂಗೀತಾ ಖುಷಿಯಿಂದಲೇ ಮಾತನಾಡಿದ್ದರು. ಇದು ತನಿಷಾ ಮತ್ತು ಕಾರ್ತಿಕ್ ಮನಸ್ಸಿನಲ್ಲಿ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ