ಆ್ಯಪ್ನಗರ

ಸ್ನೇಹಿತರಾಗಿದ್ದ ಭೂಮಿ ಮತ್ತು ಶೈನ್‌ ಶೆಟ್ಟಿ ನಡುವೆ ಬಿರುಕು ಮೂಡುವಂತೆ ಮಾಡಿದ ಆ ಬಿಗ್ ಬಾಸ್ ಸ್ಪರ್ಧಿ ಯಾರು?

ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಸಾಮಾನ್ಯವಾಗಿ ತಮಾಷೆಯಿಂದಿರುತ್ತಾರೆ, ಯಾವಾಗಲೂ ಹೊಡೆದಾಡಿಕೊಳ್ಳುತ್ತ, ತರಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹವಿದೆ, ಬಾಂಧವ್ಯವಿದೆ. ಈ ವಿಚಾರ ಬಿಗ್ ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಇದರ ಬಗ್ಗೆ ಆಯಾ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈಗ ಶೈನ್ ಮತ್ತು ಭೂಮಿ ನಡುವೆ ಬಿರುಕು ಉಂಟಾಗಿದೆ, ಕಾರಣ ಏನು?

Vijaya Karnataka Web 30 Jan 2020, 6:29 pm
ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಸಾಮಾನ್ಯವಾಗಿ ತಮಾಷೆಯಿಂದಿರುತ್ತಾರೆ, ಯಾವಾಗಲೂ ಹೊಡೆದಾಡಿಕೊಳ್ಳುತ್ತ, ತರಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹವಿದೆ, ಬಾಂಧವ್ಯವಿದೆ. ಈ ವಿಚಾರ ಬಿಗ್ ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಇದರ ಬಗ್ಗೆ ಆಯಾ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈಗ ಶೈನ್ ಮತ್ತು ಭೂಮಿ ನಡುವೆ ಬಿರುಕು ಉಂಟಾಗಿದೆ, ಕಾರಣ ಏನು?
Vijaya Karnataka Web bhoomi shetty and shine shetty argument in bigg boss kannada season 7 house
ಸ್ನೇಹಿತರಾಗಿದ್ದ ಭೂಮಿ ಮತ್ತು ಶೈನ್‌ ಶೆಟ್ಟಿ ನಡುವೆ ಬಿರುಕು ಮೂಡುವಂತೆ ಮಾಡಿದ ಆ ಬಿಗ್ ಬಾಸ್ ಸ್ಪರ್ಧಿ ಯಾರು?


ಭೂಮಿ ಮತ್ತು ಶೈನ್ ಮದುವೆಯಾಗ್ತಾರಾ ಎಂದು ಕೇಳಿದ್ದ ಹರೀಶ್ ರಾಜ್

ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಸ್ನೇಹ ನೋಡಿ ಹರೀಶ್ ರಾಜ್ ಇವರಿಬ್ಬರು ಮದುವೆಯಾಗುತ್ತಾರಾ ಹೇಗೆ ಎಂದು ಆಶ್ಚರ್ಯದಿಂದ ಒಮ್ಮೆ ಹೇಳಿದ್ದರು. ಇದನ್ನು ಕೇಳಿದ ವಾಸುಕಿ ಮತ್ತು ಕುರಿ ಪ್ರತಾಪ್ ಗೊಳ್ಳನೆ ನಕ್ಕಿದ್ದರು. ಇವರಿಬ್ಬರ ತರಲೆಗಳನ್ನು ಬಿಗ್ ಬಾಸ್ ಮನೆ ಹಲವು ಬಾರಿ ನೋಡಿದೆ. ದೀಪಿಕಾರನ್ನು ತೋರಿಸಿ ನೀನು ಈ ರೀತಿ ಡ್ರೆಸ್ ಮಾಡಿಕೋ, ಹೊರಗಡೆ ಹೋದಮೇಲೆ ನಿನಗೆ ದೀಪಿಕಾ ರೀತಿ ಡ್ರೆಸ್ ಕೊಡಿಸುತ್ತೇನೆ ಎಂದು ಶೈನ್ ಶೆಟ್ಟಿ ಅವರು ಭೂಮಿಗೆ ಹೇಳಿದ್ದರು.

ಭೂಮಿ ಮತ್ತು ಶೈನ್ ನಡುವೆ ತಂದಿಟ್ಟಿದ್ದು ವಾಸುಕಿಯಂತೆ!

ಚಂದನಾ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋದಮೇಲೆ ಶೈನ್ ಶೆಟ್ಟಿ , ವಾಸುಕಿ, ಭೂಮಿ ಈ ಮೂವರು ಹೆಚ್ಚಾಗಿ ಒಟ್ಟಿಗೆ ಕಾಲ ಕಳೆಯುತ್ತಿದ್ದರು. ಜೊತೆಗೆ ಶೈನ್ ಮತ್ತು ನನ್ನ ನಡುವೆ ವಾಸುಕಿ ತಂದಿಡುತ್ತಿದ್ದಾನೆ ಎಂಬ ಆರೋಪ ಮಾಡಿದ್ದರು ಭೂಮಿ. ಇದನ್ನು ಶೈನ್ ಬಳಿಯೂ ಹೇಳಿಕೊಂಡಿದ್ದರು ಭೂಮಿ. ಇದನ್ನು ನೋಡಿದ ಕೆಲ ವೀಕ್ಷಕರು ವಾಸುಕಿ ವೈಭವ್ ಅವರು ಕುತಂತ್ರಿ, ಡಬಲ್ ಗೇಮ್ ಆಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಒಟ್ಟಾರೆಯಾಗಿ ವಾಸುಕಿ ವೈಭವ್‌ಗೆ ಎರಡು ಮುಖವಿದೆ ಎಂದು ಹರೀಶ್ ರಾಜ್ ಕೂಡ ಸುದೀಪ್ ಮುಂದೆಯೇ ಹೇಳಿದ್ದರು.

ಭೂಮಿ ಮತ್ತು ಶೈನ್ ನಡುವೆ ಶುರುವಾಯ್ತು ಮಾತಿನ ವಾರ್

ಈಗ ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ನಡುವೆ ಮನಸ್ತಾಪ ಜಾಸ್ತಿಯಾಗಿದೆ. ಬಾತ್‌ರೂಮ್‌ನಿಂದ ಸ್ನಾನ ಆದ ನಂತರ ಯಾಕೆ ಬಟ್ಟೆಯನ್ನು ತೆಗೆದುಕೊಂಡು ಹೋಗಿಲ್ಲ ಎಂದು ಶೈನ್ ಅವರು ಭೂಮಿಯನ್ನು ಪ್ರಶ್ನಿಸಿದ್ದಾರೆ. ಆಗ ಭೂಮಿ ನಾನೇ ನಿನಗೆ ಹೇಳಿದ್ದೆ ಬಟ್ಟೆ ತೆಗೆದುಕೊಂಡು ಹೋಗು ಎಂದು ಹೇಳಿದ್ದಾರೆ. ಆಗ ಶೈನ್ ಅವರು ಯಾವಾಗ ಹೇಳಿದ್ದೆ? ಯಾರಿಗೆ ಹೇಳಿದ್ದೆ ಎಂದು ಮತ್ತೆ ಪ್ರಶ್ನೆ ಮಾಡಿದ್ದಾರೆ. ಆನಂತರದಲ್ಲಿ ಭೂಮಿ ಸುಮ್ಮನಾಗಿದ್ದಾರೆ. ಇದ್ದಕ್ಕಿದ್ದಂತೆ ಶೈನ್ ಅವರು ಭೂಮಿ ಮೇಲೆ ಯಾಕೆ ಈ ರೀತಿ ರೇಗಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಅದಕ್ಕೆ ಕಾರಣವನ್ನು ಅವರೇ ಹೇಳಬೇಕು. ಈ ಎಪಿಸೋಡ್‌ ಇಂದು ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್ ವಾಹಿನಿ ಈ ಕುರಿತು ಪ್ರೋಮೋ ರಿಲೀಸ್ ಮಾಡಿದೆ.

Twitter-Colors Kannada

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ