ಮಗನನ್ನು ಕಳೆದುಕೊಂಡ ದುಃಖದಲ್ಲೂ, ಮಕ್ಕಳ ಜೊತೆ ಆಶ್ರಮದಲ್ಲಿ ಸಮಯ ಕಳೆದ ಸ್ಟಾರ್ ನಟನ ತಾಯಿ
ಬಿಗ್ ಬಾಸ್ 13 ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಿಧನರಾಗಿದ್ದರು. ಅವರ ತಾಯಿ ರೀತಾ ಅಮ್ಮ ಇತ್ತೀಚೆಗೆ ಬ್ರಹ್ಮ ಕುಮಾರೀಸ್ ಲೋಖಂಡವಾಲಾ ಸಮರ್ ಕ್ಯಾಂಪ್ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಅನೇಕರು ರೀತಾ ಅಮ್ಮನನ್ನು 'ಸ್ಟ್ರಾಂಗ್ ಮಹಿಳೆ', 'ಇಷ್ಟೊಂದು ನೋವಿರುವಾಗ ಖುಷಿ, ಪ್ರೀತಿ ಹಂಚುತ್ತಿರುವ ತಾಯಿ. ನಾವು ನಿಮ್ಮನ್ನು ತುಂಬ ಪ್ರೀತಿ ಮಾಡುತ್ತೇವೆ' ಎಂದು ಹೇಳಿದ್ದಾರೆ. ಆ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಹೈಲೈಟ್ಸ್:
- ಕಳೆದ ಸೆಪ್ಟೆಂಬರ್ನಲ್ಲಿ ಬಿಗ್ ಬಾಸ್ 13 ವಿಜೇತ ಸಿದ್ದಾರ್ಥ್ ಶುಕ್ಲಾ ನಿಧನ
- ಮಕ್ಕಳ ಜೊತೆ ಸಮಯ ಕಳೆದ ಸಿದ್ದಾರ್ಥ್ ಶುಕ್ಲಾ ತಾಯಿ ರೀತಾ
- ರೀತಾ ಸ್ಟ್ರಾಂಗ್ ಆಗಿರೋದನ್ನು ಕಂಡು ಖುಷಿವ್ಯಕ್ತಪಡಿಸಿದ ನೆಟ್ಟಿಗರು
ಬಿಗ್ ಬಾಸ್ 13 ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ನಿಧನರಾಗಿ ಏಳು ತಿಂಗಳು ಕಳೆದಿವೆ. ಹೃದಯಾಘಾತದಿಂದ ನಿಧನರಾದ ಸಿದ್ ಸಾವಿನ ದುಃಖದಿಂದ ಅವರ ಕುಟುಂಬಸ್ಥರು, ಅಭಿಮಾನಿಗಳು ಹೊರಬಂದಿಲ್ಲ. ಈ ನಡುವೆ ಸಿದ್ ತಾಯಿ ರೀತಾ ಅವರು ಆಶ್ರಮದಲ್ಲಿ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಸಿದ್ದಾರ್ಥ್ ಶುಕ್ಲಾ ( Sidharth Shukla ) ಅವರ ತಾಯಿ ರೀತಾ ಶುಕ್ಲಾ ಅವರು ಬ್ರಹ್ಮ ಕುಮಾರೀಸ್ ಲೋಖಂಡವಾಲಾ ಸಮರ್ ಕ್ಯಾಂಪ್ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆ ವೇಳೆ ಅವರು ಮಕ್ಕಳ ಜೊತೆಗೆ ಸಮಯ ಕಳೆದಿದ್ದಾರೆ. ಮಗನ ಕಳೆದುಕೊಂಡ ನಂತರ ಆ ದುಃಖ ಇದ್ದರೂ ಕೂಡ, ಅದನ್ನು ಮರೆತು ಮಕ್ಕಳ ಜೊತೆ ಬೆರೆಯುತ್ತಿರುವುದನ್ನು ಕಂಡು ಅವರ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.
'ಬಿಗ್ ಬಾಸ್' ಮನೆಯ ಪ್ರೇಮ್ ಕಹಾನಿ; ಒಂದು ಲವ್ ಕೈಜಾರಿತು, ಮತ್ತೊಂದು ಕೈಹಿಡಿಯಿತು!
ಸಿದ್ದಾರ್ಥ್ ಶುಕ್ಲಾ ಹಾಗೂ ಅವರ ತಾಯಿ ಬ್ರಹ್ಮಕುಮಾರೀಸ್ ಸಂಸ್ಥೆಯ ಆದರ್ಶಗಳನ್ನು ಸಿಕ್ಕಾಪಟ್ಟೆ ಪಾಲಿಸುತ್ತಿದ್ದರು, ಅಲ್ಲಿನ ಕಾರ್ಯಕ್ರಮಗಳಿಗೆ ಅವರು ಸದಾ ಹೋಗುತ್ತಿದ್ದರು, ಇದರಿಂದಲೇ ರೀತಾ ಅವರು ಬೆಳೆದು ನಿಂತ ಮಗನನ್ನು ಕಳೆದುಕೊಂಡರೂ ಕೂಡ ಇಷ್ಟು ಗಟ್ಟಿಯಾಗಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ( 2021ರ ಸೆ. 2 ) ನಿಧನರಾದರು. ಬೆಳಗ್ಗೆಯಾದರೂ ಏಳದ ಮಗನನ್ನು ನೋಡಿ ಸಿದ್ದಾರ್ಥ್ ತಾಯಿ, ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಗೆ ಬರುವ ಮುನ್ನವೇ ಸಿದ್ದಾರ್ಥ್ ಪ್ರಾಣ ಬಿಟ್ಟಿದ್ದರು. ಹೊರಗಡೆ ಹೋಗಿ ರಾತ್ರಿ ಮನೆಗೆ ಬಂದಿದ್ದ ಮಗನಿಗೆ ತಾಯಿ ಕುಡಿಯಲು ನೀರು ಕೊಟ್ಟಿದ್ದರು. ನೀರು ಕುಡಿದು ಸಿದ್ದಾರ್ಥ್ ಮಲಗಿದ್ದರು. ಬಿಗ್ ಬಾಸ್ನಲ್ಲಿ ಸಹಸ್ಪರ್ಧಿಯಾಗಿದ್ದ ಶೆಹನಾಜ್ ಗಿಲ್ ಅಂದು ಸಿದ್ರನ್ನು ಅವರ ಮಡಿಲ ಮೇಲೆ ಮಲಗಿಸಿಕೊಂಡಿದ್ದರು ಎಂದು ಕೂಡ ಹೇಳಲಾಗಿತ್ತು.
'ಬಿಗ್ ಬಾಸ್' ಮನೆಯ ಪ್ರೇಮ್ ಕಹಾನಿ; ಒಂದು ಲವ್ ಕೈಜಾರಿತು, ಮತ್ತೊಂದು ಕೈಹಿಡಿಯಿತು!
- ಮಕ್ಕಳ ಜೊತೆ ಮಾತನಾಡಿ, ರೀತಾ ಅಮ್ಮ ಅವರಿಗೆ ಚಾಕೋಲೆಟ್ ನೀಡಿದ್ದಾರೆ. ಅನೇಕರು ರೀತಾ ಅಮ್ಮನನ್ನು 'ಸ್ಟ್ರಾಂಗ್ ಮಹಿಳೆ', 'ಇಷ್ಟೊಂದು ನೋವಿರುವಾಗ ಖುಷಿ, ಪ್ರೀತಿ ಹಂಚುತ್ತಿರುವ ತಾಯಿ. ನಾವು ನಿಮ್ಮನ್ನು ತುಂಬ ಪ್ರೀತಿ ಮಾಡುತ್ತೇವೆ' ಎಂದು ಹೇಳಿದ್ದಾರೆ.
- ಇನ್ನೂ ದೇವರಲ್ಲಿ ನಂಬಿಕೆ ಇಟ್ಟು, ಪ್ರೀತಿ ಹಂಚುತ್ತಿರುವ ತಾಯಿ ಎಂದು ಕೂಡ ಅನೇಕರು ರೀತಾ ಅವರನ್ನು ಹಾಡಿ ಹೊಗಳಿದ್ದಾರೆ.
- ರೀತಾ ಅಮ್ಮನಿಗಾಗಿ ಪ್ರಾರ್ಥನೆ ಮಾಡಿ, ಅವರು ಎಲ್ಲ ಕಳೆದುಕೊಂಡಿದ್ದರೂ ನಗುತ್ತಲೇ ಇದ್ದಾರೆ. ಈ ರೀತಿ ಅವರನ್ನು ನೋಡಲು ಖುಷಿಯಾಗುತ್ತದೆ. ತಾಯಿ ನೋಡಿ ಸಿದ್ದಾರ್ಥ್ ಖುಷಿಪಡುತ್ತಿರಬೇಕು, ಹೆಮ್ಮೆಪಟ್ಟುಕೊಳ್ಳುತ್ತಲಿರಬೇಕು. ಅವರಿಗೆ ದೇವರು ಖುಷಿ, ಶಾಂತಿ ನೀಡಲಿ, ಅವರ ಜೊತೆ ಇರಿ
- ಸಿದ್ದಾರ್ಥ್ ಶುಕ್ಲಾರನ್ನು ಈ ತಾಯಿ ಬೆಳೆಸಿದ್ದಾರೆ ಎನ್ನೋದರಲ್ಲಿ ಯಾವುದೇ ಸಂದೇಹ ಇಲ್ಲ
- ರೀತಾ ಅಮ್ಮ ಮಾದರಿಯಾಗಿದ್ದಾರೆ. ಈಗಿನ ತಾಯಂದಿರಿಗೆ ರೀತಾ ಅಮ್ಮ ಸ್ವಲ್ಪ ಬೋಧನೆ ಮಾಡಬೇಕು.
ಸಿದ್ದಾರ್ಥ್ ಶುಕ್ಲಾ ಹಾಗೂ ಅವರ ತಾಯಿ ಬ್ರಹ್ಮಕುಮಾರೀಸ್ ಸಂಸ್ಥೆಯ ಆದರ್ಶಗಳನ್ನು ಸಿಕ್ಕಾಪಟ್ಟೆ ಪಾಲಿಸುತ್ತಿದ್ದರು, ಅಲ್ಲಿನ ಕಾರ್ಯಕ್ರಮಗಳಿಗೆ ಅವರು ಸದಾ ಹೋಗುತ್ತಿದ್ದರು, ಇದರಿಂದಲೇ ರೀತಾ ಅವರು ಬೆಳೆದು ನಿಂತ ಮಗನನ್ನು ಕಳೆದುಕೊಂಡರೂ ಕೂಡ ಇಷ್ಟು ಗಟ್ಟಿಯಾಗಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ( 2021ರ ಸೆ. 2 ) ನಿಧನರಾದರು. ಬೆಳಗ್ಗೆಯಾದರೂ ಏಳದ ಮಗನನ್ನು ನೋಡಿ ಸಿದ್ದಾರ್ಥ್ ತಾಯಿ, ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಗೆ ಬರುವ ಮುನ್ನವೇ ಸಿದ್ದಾರ್ಥ್ ಪ್ರಾಣ ಬಿಟ್ಟಿದ್ದರು. ಹೊರಗಡೆ ಹೋಗಿ ರಾತ್ರಿ ಮನೆಗೆ ಬಂದಿದ್ದ ಮಗನಿಗೆ ತಾಯಿ ಕುಡಿಯಲು ನೀರು ಕೊಟ್ಟಿದ್ದರು. ನೀರು ಕುಡಿದು ಸಿದ್ದಾರ್ಥ್ ಮಲಗಿದ್ದರು. ಬಿಗ್ ಬಾಸ್ನಲ್ಲಿ ಸಹಸ್ಪರ್ಧಿಯಾಗಿದ್ದ ಶೆಹನಾಜ್ ಗಿಲ್ ಅಂದು ಸಿದ್ರನ್ನು ಅವರ ಮಡಿಲ ಮೇಲೆ ಮಲಗಿಸಿಕೊಂಡಿದ್ದರು ಎಂದು ಕೂಡ ಹೇಳಲಾಗಿತ್ತು.