ಆ್ಯಪ್ನಗರ

ಪರಪುರುಷರ ಸಹವಾಸದ ಕಾರಣಕ್ಕಾಗಿ ಪದೇಪದೇ ಸುದ್ದಿ ಆಗುತ್ತಿರುವ ಬಿಗ್‌ ಬಾಸ್‌ ಸ್ಪರ್ಧಿ ಪವಿತ್ರಾ!

ಬಿಗ್‌ ಬಾಸ್‌ ಎಂದರೆ ವಿವಾದಗಳು ಸಹಜ. ಒಮ್ಮೆ ಮನೆಯೊಳಗೆ ಕಾಲಿಟ್ಟ ಬಳಿಕ ಬೇಡವೆಂದರೂ ಕಿರಿಕ್‌ಗಳು ಆಗುತ್ತವೆ. ಅದೇ ರೀತಿ ಪ್ರೀತಿ-ಪ್ರೇಮ ಚಿಗುರೊಡೆದ ಉದಾಹರಣೆಗಳೂ ಇವೆ. ಹಿಂದಿ ಬಿಗ್‌ ಬಾಸ್‌ 14ನೇ ಸೀಸನ್‌ನಲ್ಲಿಯೂ ಅಂಥ ಸಂಗತಿ ನಡೆದಿದೆ.

Vijaya Karnataka Web 14 Dec 2020, 3:36 pm
ಕಿರುತೆರೆ ನಟಿ ಪವಿತ್ರಾ ಪೂನಿಯಾ ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಿದ್ದಾರೆ. ಹಿಂದಿ ಬಿಗ್‌ ಬಾಸ್‌ 14ನೇ ಸೀಸನ್‌ನಲ್ಲಿ ಸ್ಪರ್ಧಿಸಿರುವ ಅವರ ಮೇಲೆ ಅನೇಕ ಆರೋಪಗಳಿವೆ. ಹೋಟೆಲ್‌ ಉದ್ಯಮಿಯೊಬ್ಬರ ಜೊತೆ ಪವಿತ್ರಾ ಗುಟ್ಟಾಗಿ ಮದುವೆ ಆಗಿದ್ದೂ ಅಲ್ಲದೆ, ಆ ಬಳಿಕ ಬೇರೆ ಗಂಡಸರ ಜೊತೆ ಫ್ಲರ್ಟ್‌ ಮಾಡಿದ್ದಾರೆ ಎಂಬ ಆರೋಪವೂ ಇದೆ. ಈ ನಡುವೆ ಅವರು ಬಿಗ್‌ ಬಾಸ್‌ ಮನೆಯೊಳಗೆ ಪರಪುರುಷರ ಜೊತೆ ಸಲುಗೆ ಬೆಳೆಸಿಕೊಂಡ ಕಾರಣಕ್ಕಾಗಿ ವಿವಾದ ಮಾಡಿಕೊಂಡರು.
Vijaya Karnataka Web ಪವಿತ್ರಾ ಪೂನಿಯಾ


'ಅವರು ನನಗೆ ಆಪ್ತವಾಗಿರುವುದು ನಿಜ'
ಬಿಗ್‌ ಬಾಸ್‌ ಮನೆಯೊಳಗೆ ಸಹ ಸ್ಪರ್ಧಿ ಇಜಾಜ್‌ ಖಾನ್‌ ಜೊತೆ ಹೆಚ್ಚು ಆಪ್ತವಾಗಿದ್ದರು ಪವಿತ್ರಾ. ಅದು ಎಲ್ಲರ ಕಣ್ಣು ಕುಕ್ಕಿದೆ. ಅಷ್ಟಕ್ಕೂ ಇಜಾಜ್‌ ಬಗ್ಗೆ ಪವಿತ್ರಾಗೆ ಯಾವ ರೀತಿಯ ಫೀಲಿಂಗ್‌ ಇದೆ? ಈ ಪ್ರಶ್ನೆಗೆ ಅವರೀಗ ಉತ್ತರ ನೀಡಿದ್ದಾರೆ. 'ಇಜಾಜ್‌ ಬಗ್ಗೆ ನನಗೆ ಇರುವ ಭಾವನೆ ನಿಜ. ಅವರು ನನ್ನೊಂದಿಗೆ ಆಪ್ತವಾಗಿದ್ದಾರೆ. ಮುಂದೆಯೂ ಅದೇ ರೀತಿ ಇರುತ್ತಾರೆ ಎಂಬ ನಂಬಿಕೆ ಇದೆ' ಎಂದಿದ್ದಾರೆ ಪವಿತ್ರಾ. ಆದರೆ ಇದನ್ನು ಲವ್‌ ಎಂದು ಅವರು ಒಪ್ಪಿಕೊಂಡಿಲ್ಲ.

ಆದರೆ ಇದು ಲವ್‌ ಅಲ್ಲ!
'ನನಗೆ ಇಜಾಜ್‌ ಎಂದರೆ ಇಷ್ಟ. ರಿಯಾಲಿಟಿ ಶೋನಲ್ಲಿ ನಮ್ಮಿಬ್ಬರ ಭೇಟಿ ಆಯಿತು. ಮುಂದೆ ಆ ಸಂಬಂಧ ಯಾವ ರೀತಿ ಸಾಗಲಿದೆ ಎಂಬುದು ಕೂಡ ನಮಗೆ ಗೊತ್ತಾಗುವುದಿಲ್ಲ. ಪ್ರತಿ ದಿನ ಗೇಮ್‌ ಚೇಂಚ್‌ ಆಗುತ್ತದೆ. ನನ್ನ ಹೃದಯದಲ್ಲಿ ಇಜಾಜ್‌ಗೆ ವಿಶೇಷ ಸ್ಥಾನ ನೀಡಿದ್ದೇನೆ. ಅವರೂ ಕೂಡ ನನಗೆ ಅದೇ ಸ್ಥಾನ ನೀಡಿದ್ದಾರೆ. ಆದರೆ ನಮ್ಮಿಬ್ಬರ ನಡುವೆ ಇರುವುದು ಪ್ರೀತಿ ಅಲ್ಲ' ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪವಿತ್ರಾ ಮಾತನಾಡಿದ್ದಾರೆ.

also read: ಮದುವೆ ಬಳಿಕ ಬೇರೆಯವರ ಜೊತೆ ಡೇಟಿಂಗ್‌! ಗಂಡನಿಗೆ 4 ಬಾರಿ ಮೋಸ ಮಾಡಿದ ಬಿಗ್‌ ಬಾಸ್‌ ಸ್ಪರ್ಧಿ!

'ನಾನು ಆಟಕ್ಕಾಗಿ ಅವರನ್ನು ಬಳಸಿಕೊಂಡಿಲ್ಲ'
ಬಿಗ್‌ ಬಾಸ್‌ನಲ್ಲಿ ಜನರ ಗಮನ ಸೆಳೆಯಲು, ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಳ್ಳಲು ಸ್ಪರ್ಧಿಗಳು ಇಲ್ಲಸಲ್ಲದ ಗಿಮಿಕ್‌ ಮಾಡುತ್ತಾರೆ. ಪ್ರೀತಿ-ಪ್ರೇಮದ ನಾಟಕವನ್ನೂ ಆಡುತ್ತಾರೆ. ಆದರೆ ತಾವು ಇಜಾಜ್‌ ವಿಚಾರದಲ್ಲಿ ಆ ರೀತಿ ಮಾಡಿಲ್ಲ ಎಂದು ಪವಿತ್ರಾ ಹೇಳಿದ್ದಾರೆ. 'ಪ್ರೀತಿ ಬೇಕು ಎಂಬ ಸಲುವಾಗಿ ನಾನು ಬಿಗ್‌ ಬಾಸ್‌ಗೆ ಹೋಗಿಲ್ಲ. ಆಟಕ್ಕಾಗಿ ನಾನು ಇಜಾಜ್‌ ಅವರನ್ನು ಬಳಸಿಕೊಂಡಿಲ್ಲ. ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಕೂಡ ಹೇಳಿಲ್ಲ' ಎಂದಿದ್ದಾರೆ ಪವಿತ್ರಾ.

also read: ಕಿಡ್ನಾಪ್‌, ಕಿರುಕುಳ, ದ್ರೋಹ, ಬ್ರೇಕಪ್‌ ಇತ್ಯಾದಿ! ಬಿಗ್‌ ಬಾಸ್‌ ಸ್ಪರ್ಧಿಗಳು ಬಾಯಿಬಿಟ್ಟ ಕಹಿ ಸತ್ಯಗಳಿವು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ