ಆ್ಯಪ್ನಗರ

ಗಂಡನಿಗೆ ಅವಮಾನ ಮಾಡಿದ್ದಕ್ಕಾಗಿ ಸಲ್ಮಾನ್‌ ಖಾನ್ ವಿರುದ್ಧವೇ ತಿರುಗಿ ಬಿದ್ದ ಬಿಗ್‌ ಬಾಸ್‌ ಸ್ಪರ್ಧಿ!

ಬಿಗ್‌ ಬಾಸ್‌ ನಿರೂಪಣೆ ಮಾಡುವ ಸಲ್ಮಾನ್‌ ಖಾನ್‌ಗೆ ಸ್ಪರ್ಧಿಗಳು ತುಂಬ ಗೌರವ ನೀಡುತ್ತಾರೆ. ಆದರೆ ಅವರ ವಿರುದ್ಧವೇ ಸ್ಪರ್ಧಿಯೊಬ್ಬರು ತಿರುಗಿ ಬಿದ್ದಿದ್ದಾರೆ. ಈ ಬೆಳವಣಿಗೆಯಿಂದ ಪ್ರೇಕ್ಷಕರಿಗೆ ನಿಜಕ್ಕೂ ಅಚ್ಚರಿ ಆಗಿದೆ.

Vijaya Karnataka Web 21 Oct 2020, 12:18 pm
ಕೊರೊನಾ ಕಾಟದ ನಡುವೆಯೂ ಬಿಗ್‌ ಬಾಸ್‌ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಿಂದಿಯಲ್ಲಿ 14ನೇ ಸೀಸನ್‌ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ನಿರೂಪಕ ಸಲ್ಮಾನ್‌ ಖಾನ್‌ ಎಂದಿನ ಜೋಷ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಆಡಿದ ಒಂದೇ ಒಂದು ಮಾತಿನಿಂದಾಗಿ ಈಗ ಬಿಗ್‌ ಬಾಸ್‌ ಮನೆಯೊಳಗೆ ಅಸಮಾಧಾನದ ಕಿಡಿ ಹೊತ್ತಿಕೊಳ್ಳುವಂತಾಗಿದೆ!
Vijaya Karnataka Web ರುಬಿನಾ ದಿಲೈಕ್‌ ಸಲ್ಮಾನ್‌ ಖಾನ್


ಅಷ್ಟಕ್ಕೂ ಸಲ್ಮಾನ್‌ ಖಾನ್‌ ಹೇಳಿದ್ದು ಏನು? ಈ ಸೀಸನ್‌ನಲ್ಲಿ ಸ್ಪರ್ಧಿಗಳಾಗಿ ರುಬಿನಾ ದಿಲೈಕ್‌ ಮತ್ತು ಅಭಿನವ್‌ ಶುಕ್ಲಾ ಭಾಗಿ ಆಗಿದ್ದಾರೆ. ರಿಯಲ್‌ ಲೈಫ್‌ನಲ್ಲಿ ಪತಿ-ಪತ್ನಿ ಆಗಿರುವ ಈ ಜೋಡಿ ಈಗ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಗಳಾಗಿದ್ದಾರೆ. ಅಭಿನವ್‌ ಬಗ್ಗೆ ಸಲ್ಮಾನ್ ಇತ್ತೀಚೆಗೆ ಒಂದು ತಮಾಷೆ ಮಾಡಿದರು. 'ಈ ಸಾಮಾನನ್ನು ನೀವು ತೆಗೆದುಕೊಂಡು ಬಂದಿದ್ದೀರಿ' ಎಂದು ಸಲ್ಮಾನ್‌ ಖಾನ್‌ ಅವರು ರುಬಿನಾಗೆ ಹೇಳಿದ್ದಾರೆ. ತಮ್ಮ ಗಂಡನನ್ನು 'ಲಗೇಜ್‌' ಎಂಬ ಅರ್ಥದಲ್ಲಿ ಕರೆದಿದ್ದಕ್ಕೆ ರುಬಿನಾಗೆ ಸಖತ್‌ ಬೇಸರ ಆಗಿದೆ.

ಆ ನಂತರ ರುಬಿನಾ ಯಾಕೋ ಮಂಕಾಗಿರುವುದು ಬಿಗ್‌ ಬಾಸ್‌ ಗಮನಕ್ಕೆ ಬಂದಿದೆ. ಹಾಗಾಗಿ ಅವರನ್ನು ಕನ್ಫೆಷನ್‌ ರೂಮ್‌ಗೆ ಕರೆಸಿ ಬಿಗ್‌ ಬಾಸ್‌ ವಿಚಾರಿಸಿದರು. 'ಸಲ್ಮಾನ್‌ ಹೇಳಿದ ಆ ಮಾತಿನಿಂದ ನನಗೆ ನೋವಾಗಿದೆ. ಪತಿಯನ್ನು 'ಸಾಮಾನು' ಎಂದು ಲೇವಡಿ ಮಾಡಿರುವುದು ಸರಿಯಲ್ಲ. ಗೌರವ ಇಲ್ಲದ ಕಡೆ ಇರಲು ನಮಗೆ ಇಷ್ಟವಿಲ್ಲ' ಎಂದು ರುಬಿನಾ ಬಿಗ್‌ ಬಾಸ್‌ ಎದುರು ಹೇಳಿದ್ದಾರೆ. ಶೋನಿಂದ ಹೊರಹೋಗುವುದಾಗಿಯೂ ಅವರು ತಿಳಿಸಿದ್ದಾರೆ.

also read: ಬೆಂಗಳೂರಿನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನಟನಿಗೆ ಸಲ್ಮಾನ್‌ ಖಾನ್‌ ಸಹಾಯ!

ಪತಿಯ ಮೇಲಿನ ಗೌರವಕ್ಕಾಗಿ ಸಲ್ಮಾನ್‌ ಖಾನ್‌ ಅವರನ್ನೂ ಖಂಡಿಸಿರುವ ರುಬಿನಾ ಅವರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಲು-ಗೆಲುವನ್ನೂ ಲೆಕ್ಕಿಸಿದೇ, ಸಲ್ಮಾನ್‌ ಖಾನ್‌ ಒಬ್ಬ ಪ್ರಭಾವಿ ವ್ಯಕ್ತಿ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳದೇ ಹೀಗೆ ರೆಬೆಲ್‌ ಆಗಿರುವ ರುಬಿನಾ ಅವರ ಧೈರ್ಯಕ್ಕೆ ಎಲ್ಲರೂ ಶಹಭಾಷ್‌ ಎನ್ನುತ್ತಿದ್ದಾರೆ. ಇದಕ್ಕೆ ಸಲ್ಮಾನ್‌ ಖಾನ್‌ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಈಗ ಎಲ್ಲರಲ್ಲೂ ಮೂಡಿದೆ.

also read: ಮಗಳನ್ನು ಕಳೆದುಕೊಂಡ ಬಿಗ್‌ ಬಾಸ್‌ ಸ್ಪರ್ಧಿ ಗಂಗವ್ವನ ನೋವಿನ ಕಥೆ ಕೇಳಿ ಎಲ್ಲರೂ ಕಣ್ಣೀರಿಟ್ಟರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ