ಆ್ಯಪ್ನಗರ

ನವರಾತ್ರಿಗೆ ರಿಲೀಸ್ ಮಾಡಿದ ಹಾಡಿನಲ್ಲಿ ದೇವಿ ಪದ ಬಳಕೆ; ಬಿಗ್ ಬಾಸ್ ಸ್ಪರ್ಧಿಗೆ ಪ್ರಾಣ ಬೆದರಿಕೆ

ಗಾಯಕ ಹಾಗೂ ಬಿಗ್ ಬಾಸ್ 14 ಸ್ಪರ್ಧಿ ರಾಹುಲ್ ವೈದ್ಯ ಅವರು ನವರಾತ್ರಿ ಪ್ರಯುಕ್ತ ಹಾಡೊಂದನ್ನು ರಿಲೀಸ್ ಮಾಡಿದ್ದರು. ಈ ಹಾಡು ಈಗ ವಿವಾದಕ್ಕೆ ಗುರಿಯಾಗಿದೆ. ಏಕೆ? ಏನಾಯ್ತು? ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

TIMESOFINDIA.COM 15 Oct 2021, 5:16 pm

ಹೈಲೈಟ್ಸ್‌:


  • ಗಾಯಕ ಬಿಗ್ ಬಾಸ್ 14 ರನ್ನರ್ ಅಪ್ ಆಗಿರುವ ರಾಹುಲ್ ವೈದ್ಯ
  • ನವರಾತ್ರಿ ಪ್ರಯುಕ್ತ ಹಾಡು ರಿಲೀಸ್ ಮಾಡಿದ್ದ ರಾಹುಲ್ ವೈದ್ಯ
  • ರಾಹುಲ್ ವೈದ್ಯ ಹಾಡಿನಲ್ಲಿ ನಿಯಾ ಶರ್ಮಾ ಹೆಜ್ಜೆ ಹಾಕಿದ್ದರು
  • ಈಗ ರಾಹುಲ್ ವೈದ್ಯ ಅವರಿಗೆ ಬೆದರಿಕೆ ಕರೆ ಬರುತ್ತಿದೆಯಂತೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Rahul Vaidya
ಗಾಯಕ ರಾಹುಲ್ ವೈದ್ಯ ಅವರ Garbe Ki Raat ಹಾಡು ನವರಾತ್ರಿ ಪ್ರಯುಕ್ತ ರಿಲೀಸ್ ಆಗಿತ್ತು. ಈ ಹಾಡಿನಲ್ಲಿ ಗುಜರಾತಿನ ಶ್ರೀ ಮೊಘಲ್ ಮಾ ಹೆಸರನ್ನು ಸೇರಿಸಿರೋದು ಕೆಲವರಿಗೆ ಬೇಸರ ತಂದಿದೆ. ಹೀಗಾಗಿ ರಾಹುಲ್‌ಗೆ ಪ್ರಾಣ ಬೆದರಿಕೆ ಹಾಕುವ ಫೋನ್ ಕರೆ, ಮೆಸೇಜ್ ಬರುತ್ತಿದೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ವೈದ್ಯ ಅವರನ್ನು ಮನಬಂದಂತೆ ನಿಂದಿಸಲಾಗುತ್ತಿದೆ. ಶೀಘ್ರದಲ್ಲಿಯೇ ಈ ಸಮಸ್ಯೆ ಬಗೆಹರಿಸುವುದಾಗಿ ರಾಹುಲ್ ವೈದ್ಯ ಹೇಳಿದ್ದಾರೆ.
"ಕಳೆದ ಒಂದು ದಿನದಿಂದ ರಾಹುಲ್ ಅವರಿಗೆ ಪ್ರಾಣ ಬೆದರಿಕೆ ಕರೆ ಬರುತ್ತಿದೆ. ರಾಹುಲ್ ವೈದ್ಯರನ್ನು ಹೊಡೆದು ಹಾಕುತ್ತೇವೆ, ಕೊಲೆ ಮಾಡುತ್ತೇವೆ. ಎಫ್‌ಐಆರ್ ದಾಖಲು ಮಾಡಿ ಬಂಧಿಸುತ್ತೇವೆ. ಯಾರ ಭಾವನೆಗಳಿಗೂ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಈ ಹಾಡು ಮಾಡಿಲ್ಲ. ಗೌರವಯುತವಾಗಿ ಹಾಡು ಮಾಡಿದ್ದೇವೆ. ಕೆಲ ವರ್ಗದ ಜನರು ಈ ಹಾಡನ್ನು ಕೇಳಿ ಬೇಸರ ಮಾಡಿಕೊಂಡಿದ್ದಾರೆ. ನಾವು ಅದನ್ನು ಗೌರವಿಸಿ, ಸಮಸ್ಯೆ ಬಗೆಹರಿಸುತ್ತೇವೆ" ಎಂದು ಗಾಯಕ ರಾಹುಲ್ ವೈದ್ಯ ಅವರ ಟೀಂ ಹೇಳಿಕೆ ನೀಡಿದೆ.

ಹಣೆಗಿಟ್ಟಿಲ್ಲ ಅಂತ ಅಂತ ನನ್ನ ಗಂಡನೇ ಪ್ರಶ್ನಿಸಿಲ್ಲ, ನೀವು ಯಾಕೆ ಸಿಟ್ಟಾಗ್ತೀರಿ ; ಖ್ಯಾತ ಧಾರಾವಾಹಿ ನಟಿ ಪ್ರಶ್ನೆ

"ಈ ಸಮಸ್ಯೆ ಪರಿಹಾರ ಮಾಡಲು ನಮಗೆ ಒಂದಷ್ಟು ಸಮಯ ಕೊಡಿ. ಈಗ ತಾನೇ ಹಾಡು ಅಪ್‌ಲೋಡ್ ಮಾಡಿರೋದರಿಂದ ಒಂದಷ್ಟು ಸಮಯ ಬೇಕು. ನಾವು ಎಲ್ಲರ ಭಾವನೆ-ಧಾರ್ಮಿಕತೆಯನ್ನು ಗೌರವಿಸುತ್ತೇವೆ" ಎಂದು ಗಾಯಕ ರಾಹುಲ್ ವೈದ್ಯ ಹೇಳಿದ್ದಾರೆ.

ಎಲ್ಲ ಸೋಶಿಯಲ್ ಮೀಡಿಯಾ ವೇದಿಕೆಗಳಿಂದ ಹಾಡನ್ನು ತೆಗೆದುಹಾಕಿ, ಇಲ್ಲವಾದರೆ ಮುಂಬರುವುದನ್ನು ಎದುರಿಸಲು ಸಿದ್ಧರಾಗಿ ಅಂತ ರಾಹುಲ್‌ಗೆ ಕೆಲವರು ಧಮ್ಕಿ ಹಾಕುತ್ತಿದ್ದಾರೆ. ದೇವಿಯ ಹೆಸರು ಹೇಳಿ ಕೆಲ ಧಾರ್ಮಿಕ ಜಾನಪದ ಪದಗಳನ್ನು ಬಳಸಿರೋದು ಕೆಲವರಿಗೆ ಇಷ್ಟ ಆಗಿಲ್ಲ. ಈ ಆಲ್ಬಂ ಹಾಡಿನಲ್ಲಿ ನಿಯಾ ಶರ್ಮಾ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಈ ಹಾಡು 5 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಆಲ್ಬಂನಲ್ಲಿ ಭೂಮಿ ತ್ರಿವೇದಿ ಕೂಡ ಹಾಡಿದ್ದರು. ಅಕ್ಟೋಬರ್ 8ರಂದು ಈ ಹಾಡು ರಿಲೀಸ್ ಆಗಿತ್ತು. ಬಿಗ್ ಬಾಸ್ 14 ಶೋನಲ್ಲಿ ರಾಹುಲ್ ವೈದ್ಯ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು.

Video: ಲಾಕ್‌ಡೌನ್‌ನಲ್ಲೂ ಲಾಭ ಮಾಡಿಕೊಂಡ 'ಬಿಗ್ ಬಾಸ್' ಸ್ಪರ್ಧಿ ರಾಹುಲ್ ವೈದ್ಯ!

ನಿರ್ದೇಶಕ ರೋಹಿತ್ ಶೆಟ್ಟಿ ನಿರೂಪಣೆಯ 'ಖತ್ರೋನ್ ಕೆ ಖಿಲಾಡಿ 11' ಶೋನಲ್ಲಿ ಭಾಗವಹಿಸಿದ ರಾಹುಲ್‌ಗೆ ಒಂದು ಎಪಿಸೋಡ್‌ಗೆ ಬರೋಬ್ಬರಿ 15 ಲಕ್ಷ ರೂ. ಸಿಕ್ಕಿತ್ತು ಅನ್ನೋದು ವಿಶೇಷ. ಕಳೆದ ಜುಲೈ ತಿಂಗಳಲ್ಲಿ ರಾಹುಲ್ ವೈದ್ಯ ಅವರು ದಿಶಾ ಪಾರ್ಮರ್ ಜೊತೆ ಮದುವೆಯಾಗಿದ್ದರು. ಕೆಲ ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡಿ ಮದುವೆ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿಯೇ ದಿಶಾ ಪ್ರೀತಿ ಮಾಡುತ್ತಿರುವ ವಿಚಾರವನ್ನು ಅವರು ಹೇಳಿದ್ದರು.

ಇನ್ನು ದಿಶಾ ಅವರು ಹಿಂದಿ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಕೂಡ ಅವರು ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಒಟ್ಟಿಗೆ ಫೋಟೋ, ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಮಾಲ್ಡೀವ್ಸ್‌ಗೆ ಹೋಗಿದ್ದ ದಿಶಾ ಹಾಗೂ ರಾಹುಲ್ ವೈದ್ಯ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗ ದಿಶಾ ಹಾಕಿದ್ದ ಬಿಕಿನಿ ಡ್ರೆಸ್ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್, ಟ್ರೋಲ್‌ಗೆ ಒಳಪಟ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ