ಆ್ಯಪ್ನಗರ

Bigg Boss 6 Episode 14: ಸೂಪರ್ ಸಂಡೆ ವಿತ್ ಸುದೀಪ್

ಭಾನುವಾರದ ವಿಶೇಷ ಸಂಚಿಕೆಯಲ್ಲಿ ನವರಸ ನಾಯಕ ಜಗ್ಗೇಶ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದು ವಿಶೇಷವಾಗಿದೆ

Vijaya Karnataka Web 4 Nov 2018, 10:19 pm
ಡಿಬಿಗ್ ಬಾಸ್ ಆರನೇ ಆವೃತ್ತಿ ಎರಡು ವಾರ ಪೂರೈಸಿದ್ದು, ಮೂರನೇ ವಾರಕ್ಕೆ ಪದಾರ್ಪಣೆ ಮಾಡಿದೆ. ಶನಿವಾರದ ಎಲಿಮಿನೇಷನ್ ರೌಂಡ್‌ನಲ್ಲಿ ಬಿಗ್‌ ಬಾಸ್ ಮನೆಯಿಂದ ಎರಡನೇ ಎಲಿಮಿನೇಟರ್ ಆಗಿ ರೀಮಾ ಹೊರ ಹೋಗಿದ್ದಾರೆ.
Vijaya Karnataka Web jaggesh


ಭಾನುವಾರದ ಸಂಚಿಕೆ ಸೋನು ಮತ್ತು ಕವಿತಾ ನಡುವಿನ ವಾಗ್ದಾದದೊಂದಿಗೆ ಆರಂಭವಾಯಿತು. ನಂತರ ಸೋನು, ಆಂಡಿ ಮತ್ತು ಆನಂದ್‌ ನಡುವೆಯೂ ಸಂಭಾಷಣೆ ನಡೆಯಿತು.

ಉತ್ತರ ಕರ್ನಾಟಕವನ್ನು ಪ್ರತಿನಿಧಿಸಲು ಆಗಮಿಸಿದ್ದೀರಾ ಎಂದು ಸೋನು ಪಟೇಲ್‌ಗೆ ರಾಕೇಶ್‌ ತಿಳಿ ಹೇಳಲು ಪ್ರಯತ್ನಿಸಿದ್ದು, ನಂತರ ಇಬ್ಬರೂ ತಮ್ಮ ನಡುವಿನ ಮನಸ್ತಾಪ ದೂರ ಮಾಡಿಕೊಳ್ಳಲು ಮುಂದಾದರು. ನಂತರ ಇಬ್ಬರೂ ಪರಸ್ಪರ ಸಾರಿ ಹೇಳಿಕೊಂಡು ಒಂದಾದರು.

ಚಾಕೋಲೇಟ್‌ ಕದ್ದಿದ್ದಕ್ಕೆ ಊಟ ಮಿಸ್‌ ಮಾಡಿಕೊಂಡ ಆಂಡಿ ಪಶ್ಚಾತ್ತಾಪಪಟ್ಟರು. ಇದೇ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಟಿವಿ ಪರದೆಯ ಮೇಲೆ ಆಗಮಿಸಿ ಎಲ್ಲರಿಗೂ ಶುಭಾಶಯ ಕೋರಿ, ಊಟ ಚೆನ್ನಾಗಿದೆಯಾ ಎಂದು ಕೇಳಿದರು. ನಂತರ ಶಿವಣ್ಣಗೆ ಜಯ್‌ ಎಂದು ಮನೆಯವರೆಲ್ಲರೂ ಘೋಷಣೆ ಕೂಗಿದರು.

ನಂತರ ವೇದಿಕೆಗೆ ಬಂದ ಸುದೀಪ್‌, ನವರಸಗಳನ್ನು ಕಂಡಿರುವ ಬಿಗ್‌ ಬಾಸ್‌ ಮನೆಗೆ ಖುದ್ದಾಗಿ ನವರಸ ನಾಯಕ ಎಂಟ್ರಿ ಕೊಡುತ್ತಾರೆ ಎಂದರು. ಬಿಗ್‌ ಬಾಸ್‌ ಮನೆಲ್ಲಿರುವವರನ್ನು ಎಬ್ಬಿಸುವ 'ಎದ್ದೇಳು, ಮಂಜುನಾಥ' ಹಾಡು ಇವರ ಮೇಲೆ ಇರುವುದು ಎಂದು ಕಿಚ್ಚ ಹೇಳಿದರು.

ಎದ್ದೇಳು ಮಂಜುನಾಥ ಹಾಡಿನೊಂದಿಗೆ ನಟ ಜಗ್ಗೇಶ್‌ ಮುಸುಕು ಹಾಕಿಕೊಂಡು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟೇ ಬಟ್ಟರು. ಆದರೆ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಗೊತ್ತಾಗಲಿಲ್ಲ. ಆದರೆ ಮುಸುಕು ತೆಯುವ ಮುನ್ನ ಎಲ್ಲರಿಗೂ ಜಗ್ಗೇಶ್‌ ಎಂಬುದು ತಿಳಿಯಿತು.

ನಂತರ ಜಗ್ಗೇಶ್‌ ಜತೆ ಸ್ಪರ್ಧಿಗಳು ಕುಶಲೋಪರಿ ನಡೆಸಿದರು. ಜಗ್ಗೇಶ್‌ ಅವರು ಎವಿ ರವಿಗೆ ಕೋಲು ಕೊಟ್ಟು ಪಿಟಿ ಮಾಸ್ಟರ್‌ ಆಗಿ ನಿಭಾಯಿಸುವಂತೆ ಸೂಚಿಸಿದರು.

ನಂತರ ಸ್ಪರ್ಧಿಗಳಿಗೆ ಒಂದೊಂದು ವಿಶೇಷ ಗಿಫ್ಟ್‌ ನೀಡಿದರು. ರಾಜ್‌ಕುಮಾರ್‌ ಪಕ್ಕಾ ಫ್ಯಾನ್‌ ಆಗಿರುವ ನಾನು ಅವರಂತೆ ನಟಿಸಬೇಕೆಂಬ ಆಸೆ ಇತ್ತು ಅದರಂತೆ 8 ಎಂ ಎಂ ಚಿತ್ರದಲ್ಲಿ ನಟಿಸಿರುವ ಬಗ್ಗೆ ಜಗ್ಗೇಶ್‌ ಹೇಳಿಕೊಂಡರು. ಒಮ್ಮೆ 5 ನಿಮಿಷ ಹಾಗೂ ಮತ್ತೊಂದು ದೃಶ್ಯವನ್ನು ನಾಲ್ಕು ಮುಕ್ಕಾಲು ನಿಮಿಷ ನಟಿಸಿದ್ದೇ ಎಂದರು.


ಒಳಿತು ಮಾಡು ಮನುಸ ಗೀತೆಯನ್ನು ಹಾಡುವ ಮೂಲಕ ನವೀನ್‌ ಕೆಲ ಕ್ಷಣ ಬಿಗ್‌ ಬಾಸ್‌ ಮನೆಯನ್ನು ಭಾವುಕ ಲೋಕಕ್ಕೆ ಕೊಂಡೊಯ್ದುರು. ಜಗ್ಗೇಶ್‌ ಕೂಡ ಇದಕ್ಕೆ ತಮ್ಮ ಅಕ್ಷರಗಳನ್ನು ಸೇರಿಸಿ ಇನ್ನಷ್ಟು ಭಾವ ಮೂಡಿಸಿದರು.

ನಂತರ ಬಿಗ್‌ ಬಾಸ್‌ ವೇದಿಕೆಗೆ ಸುದೀಪ್‌ ಜತೆ ಮಾತುಕತೆ ಆರಂಭಿಸಿದರು ಜಗ್ಗೇಶ್‌. ತಮ್ಮ ಮಾತಿನ ವರಸೆಯನ್ನು ತೋರಿಸಿದರು. ಸುದೀಪ್‌ ಅವರ ಅವರ ಗುಣಗಾನ ಕೂಡ ಮಾಡಿದರು.

ಜಗ್ಗೇಶ್‌ ತಮ್ಮ ಜೀವನದಲ್ಲಿ ಕೆಲವು ಘಟನೆಗಳನ್ನು ಮೆಲುಕು ಹಾಕಿದರು. ಸುದೀಪ್‌ ಕೊನೆಯಲ್ಲಿ ಜಗ್ಗೇಶ್‌ಗೆ ಕೆಲವು ರ‍್ಯಾಪಿಡ್‌ ಫೈರ್‌ ಪ್ರಶ್ನೆಗಳನ್ನು ಎಸೆದರು. ಇದಕ್ಕೆ ಅಷ್ಟೇ ವೇಗವಾಗಿ ಜಗ್ಗೇಶ್‌ ಉತ್ತರಿಸಿ ತಾವು ನವರಸನಾಯಕ ಏಕೆ ಎಂಬುದನ್ನು ತೋರಿಸಿಕೊಟ್ಟರು.

ಜಗ್ಗೇಶ್‌ ವೇದಿಕೆ ಹೊರಟ ನಂತರ ಶನಿವಾರ ಎಲಿಮಿನೇಟ್‌ ಆದ ರೀಮಾ ಬಂದರು. ಬಿಗ್‌ ಬಾಸ್‌ ಮನೆಯಲ್ಲಿನ ಅನುಭವಗಳನ್ನು ಹಂಚಿಕೊಂಡರು.

ಭಾನುವಾರದ ವಿಶೇಷ ಸಂಚಿಕೆಯಲ್ಲಿ ನವರಸ ನಾಯಕ ಜಗ್ಗೇಶ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದು ವಿಶೇಷವಾಗಿದೆ. 8mm ಚಿತ್ರದ ಪ್ರಮೋಷನ್‌ಗಾಗಿ ಇವರು ಬಿಗ್ ಬಾಸ್ ಮನೆಗೆ ಆಗಮಿಸುತ್ತಿದ್ದಾರೆ. ಕಳೆದ ವಾರ ದಿ ವಿಲನ್ ಚಿತ್ರದ ನಿರ್ದೇಶಕ ಪ್ರೇಮ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಿಗ್ ಬಾಸ್ ಮನೆಗೆ ಆಗಮಿಸಿದ್ದರು.

ನವೀನ್‌ ಜತೆ ಕೆಲವು ವಿಷಯದ ಬಗ್ಗೆ ಮಾತನಾಡಿದ ಸೋನು ಪಟೇಲ್‌, ಲವ್‌ ಮಾಡಿದರೆ ನಿನ್ನನ್ನೇ ಮಾಡುತ್ತೇನೆ ಎಂದು ಧೈರ್ಯವಾಗಿಯೇ ಘೋಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ