ಆ್ಯಪ್ನಗರ

Episode 22 Highlights: ಮನೆಯಲ್ಲಿ ನಡೀತು ಕಿಸ್ಸಿಂಗ್ ಸೀನ್!

ಮನೆಯ ಹೊಸ ನಾಯಕಿಯಾಗಿ ಸೋನು ಪಾಟೀಲ್ ಆಯ್ಕೆಯಾಗಿದ್ದಾರೆ. ಹಾಗಾಗಿ ಈ ಸಲ ಅವರನ್ನು ಯಾರೂ ನಾಮಿನೇಟ್ ಮಾಡುವಂತಿಲ್ಲ.

Vijaya Karnataka Web 13 Nov 2018, 11:21 am
ಈ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭಿಸಿದರು ಬಿಗ್ ಬಾಸ್. ಮನೆಯ ಹೊಸ ಕ್ಯಾಪ್ಟನ್ ಆಗಿ ಸೋನು ಪಾಟೀಲ್ ಆಯ್ಕೆಯಾಗಿದ್ದಾರೆ. ಹಾಗಾಗಿ ಈ ಸಲ ಅವರನ್ನು ಯಾರೂ ನಾಮಿನೇಟ್ ಮಾಡುವಂತಿಲ್ಲ. ಒಂದು ವಾರದ ಮಟ್ಟಿಗೆ ಅವರು ನಾಮಿನೇಷನ್‌ನಿಂದ ಬಚಾವ್.
Vijaya Karnataka Web bigg-boss


ಒಬ್ಬೊಬ್ಬರು ಒಂದೊಂದು ಕಾರಣ ನೀಡಿ ಇಬ್ಬಿಬ್ಬರನ್ನು ನಾಮಿನೇಟ್ ಮಾಡಿದರು. ಕೆಲವರು ಪರ್ಸನಲ್ ಆಗಿ ತಗೊಳ್ಳುತ್ತಾರೆ. ಆಂಡಿ ಮಾತನಾಡುವುದು ಶೈಲಿ ಸರಿಯಿಲ್ಲ. ಹುಚ್ಚು ನಾಯಿ ಎಂದಿದ್ದಾನೆ ಎಂದು ಕೆಲವರು. ಇನ್ನೂ ಕೆಲವರು ಟಾಸ್ಕ್ ಚೆನ್ನಾಗಿ ಆಡುತ್ತಿಲ್ಲ ಎಂದು ಏನೇನೋ ಕಾರಣಗಳನ್ನು ನೀಡಿ ನಾಮಿನೇಟ್ ಮಾಡಿದರು.

ಒಟ್ಟಾರೆ ಈ ವಾರ ನಾಮಿನೇಟ್ ಆಗಿರುವ ಸದಸ್ಯರ ಪಟ್ಟಿ ಈ ರೀತಿ ಇದೆ. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರು ಆಂಡಿ, ರಾಕೇಶ್, ರಶ್ಮಿ, ಶಶಿ, ಕವಿತಾ, ಆನಂದ್, ಧನರಾಜ್, ನಯನಾ ಮತ್ತು ಆದಮ್.


ಇಬ್ಬರನ್ನು ಮನೆಯ ಕ್ಯಾಪ್ಟನ್ ಆಗಿರುವ ಸೋನು ಪಾಟೀಲ್ ನೇರವಾಗಿ ನಾಮಿನೇಟ್ ಮಾಡಬಹುದು ಎಂದಾಗ, ನಯನಾ ಮತ್ತು ಆದಮ್‌ರನ್ನು ನಾಮಿನೇಟ್ ಮಾಡಿದರು. ನಯನಾಗೆ ಎಲ್ಲರಿಗಿಂತಲೂ ಶಕ್ತಿ ಇದ್ದರೂ ಟಾಸ್ಕ್‌ಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿಲ್ಲ ಎಂಬ ಕಾರಣ ನೀಡಿದರೆ, ಆದಮ್ ತಮಾಷೆ ಮಾಡುತ್ತಾನೆ, ಆದರೆ ಬೇರೆ ಟಾಸ್ಕ್‌ಗಳಲ್ಲಿ ಅಷ್ಟಾಗಿ ಭಾಗಿಯಾಗುತ್ತಿಲ್ಲ ಎಂಬ ಕಾರಣ ನೀಡಿದರು.

"ಇದು ಯಾರು ಬರೆದ ಕಥೆಯೋ" ಎಂಬ ಟಾಸ್ಕ್ ನೀಡಿದರು ಬಿಗ್ ಬಾಸ್. ಸದಸ್ಯರು ಕಥೆ ಹೇಳಬೇಕು. ಅದು ಕಟ್ಟುಕಥೆಯಾದರೆ ಮನೆಯ ಸದಸ್ಯರು ಶೇವಿಂಗ್ ಫಾಮ್ ಹಚ್ಚುತ್ತಾರೆ. ಮೊದಲು ಕಥೆ ಹೇಳಿದ್ದು ಸೋನು ಪಾಟೀಲ್. ದೇವರಾಯನ ದುರ್ಗದಲ್ಲಿ ಇದ್ದ ಕರಡಿ ಕಥೆ ಹೇಳಿದರು. ಕರಡಿ ಹೆಂಗಸನ್ನು ಎತ್ತಿಕೊಂಡು ಹೋಗಿ ಗುಹೆಯಲ್ಲಿ ಬಂಧಿಸಿದ್ದು, ಆಹಾರ ತರುತ್ತಿದ್ದದ್ದು ಎಂದು ಹೇಳಿದಾಗ ಆ ಕಥೆ ಕಟ್ಟುಕಥೆ ಎಂದು ಹೇಳಿ ಅವರ ಮುಖಕ್ಕೆ ಶೇವಿಂಗ್ ಫಾಮ್ ಹಚ್ಚಿದರು. ಆದರೆ ಸೋನು ಮಾತ್ರ ಅದು ನಿಜ ಎಂದೇ ವಾದಿಸಿದರು.


ತನ್ನ ಗೆಳೆಯನೊಬ್ಬನ ಮೈಮೇಲೆ ದೆವ್ವ ಬಂದ ಕಥೆ ಹೇಳಿದ ನವೀನ್ ಸಜ್ಜು. ದೆವ್ವ ಬಂದವ ಎರಡು ಬಕೆಟ್ ಅನ್ನ, ಒಂದು ಬಕೆಟ್ ಸಾಂಬಾರ್ ತಿಂದ ಎಂದು ಹೇಳಿದ. ಆದರೆ ಅದನ್ನು ಯಾರೂ ನಂಬಲಿಲ್ಲ. ಅವರ ಮುಖಕ್ಕೂ ಶೇವಿಂಗ್ ಫಾಮ್ ಹಚ್ಚಿದರು. ಕಡೆಗೆ ಅದು ಕಟ್ಟುಕಥೆ ಎಂದು ಒಪ್ಪಿಕೊಂಡ ನವೀನ್.

ಮ್ಯೂಸಿಕಲ್ ಚೇರ್ ಆಟದಲ್ಲಿ ಸೋತ ಪ್ರತಿಯೊಬ್ಬರಿಗೂ ಬಿಗ್ ಬಾಸ್ ಒಂದೊಂದು ತಮಾಷೆಯ ಶಿಕ್ಷೆ ನೀಡಿದರು. ನವೀನ್ ಸಜ್ಜುಗೆ ಈಜುಕೊಳಕ್ಕೆ ಧುಮುಕುವ, ಶಶಿ ತಲೆಗೆ ಕೋಳಿಮೊಟ್ಟೆ ಹೊಡೆಯುವ, ಬಲೂನ್‍ಗಳನ್ನು ಕಾಲಿನ ನಡುವೆ ಸಿಕ್ಕಿಸಿಕೊಂಡು ಹೋಗುವ ಶಿಕ್ಷೆಗಳನ್ನು ನೀಡಿದರು.

ತುಟಿಗೆ ಲಿಪ್‌ಸ್ಟಿಕ್ ಹಾಕಿಕೊಂಡು ಎಲ್ಲರಿಗೂ ಮುತ್ತು ನೀಡಬೇಕು ಎಂದು ಸೋನುಗೆ ಹೇಳಿದರು. ಅದರಂತೆ ಎಲ್ಲರಿಗೂ ಕಿಸ್ ನೀಡಿದರು ಸೋನು. ಕೆಲವರಿಗೆ ಅಣ್ಣ ಎಂದು ಹೇಳಿ ಕಿಸ್ ನೀಡಿದರು. ನವೀನ್ ಸಜ್ಜುಗೆ ಮಾತ್ರ ಏನೂ ಹೇಳದೆ ನೀಡಿದ್ದು ಮನೆಯ ಸದಸ್ಯರು ಇನ್ನಷ್ಟು ಆಡಿಕೊಳ್ಳುವಂತೆ ಆಗಿದೆ. ಮ್ಯೂಸಿಕಲ್ ಚೇರ್ ಆಟದಲ್ಲಿ ಕೊನೆಗೆ ಉಳಿದಿದ್ದು ಮಾತ್ರ ಮುರಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ