ಬಿಗ್ ಬಾಸ್ ಆರನೇ ಆವೃತ್ತಿ ಒಂದು ವಾರ ಪೂರೈಸಿದ್ದು, ಶನಿವಾರದ ಎಲಿಮಿನೇಷನ್ ರೌಂಡ್ನಲ್ಲಿ ಬಿಗ್ ಬಾಸ್ ಮನೆಯಿಂದ ಮೊದಲ ಎಲಿಮಿನೇಟರ್ ಆಗಿ ಕ್ರಿಕೆಟರ್ ರಕ್ಷಿತಾ ಹೊರಹೋಗಿದ್ದಾರೆ.
ಭಾನುವಾರದ ವಿಶೇಷ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಗೆ ದಿ ವಿಲನ್ ಚಿತ್ರ ತಂಡ ವಿಶೇಷ ಅತಿಥಿಗಳಾಗಿದ್ದು, ವಿಲನ್ ನಿರ್ದೇಶಕ ಪ್ರೇಮ್ ಮತ್ತು ನಟ ಹ್ಯಾಟ್ರಿಕ್ ಸ್ಟಾರ್ ಶಿವರಾಜ್ ಕುಮಾರ್ ಆಗಮಿಸಿದ್ದಾರೆ.
ಪ್ರೇಮ್ ಆಗಮನಬಿಗ್ ಬಾಸ್ ಮನೆಗೆ ಮೊದಲಿಗೆ ಪ್ರವೇಶಿಸಿದ ನಿರ್ದೇಶಕ ಮತ್ತು ಚಿತ್ರ ನಿರ್ಮಾಪಕ ಪ್ರೇಮ್ ಮನೆಯ ಎಲ್ಲ ಸದಸ್ಯರನ್ನು ಪರಿಚಯ ಮಾಡಿಕೊಂಡರು. ಮನೆಯ ಸದಸ್ಯರು ಸಂಭ್ರಮದಿಂದ ಪ್ರೇಮ್ ಅವರನ್ನು ಬರಮಾಡಿಕೊಂಡಿರು. ಬಿಗ್ ಬಾಸ್ ಮನೆಗೆ ಆಗಮಿಸಬೇಕು, ಮನೆ ನೋಡಬೇಕು ಎಂಬ ಬಹುದಿನಗಳ ಕನಸು ಇಂದು ನನಸಾಯಿತು ಎಂದು ಪ್ರೇಮ್ ಹೇಳಿದರು. ಮನೆಯ ವಿವಿಧ ಸ್ಥಳಗಳಿಗೆ ತೆರಳಿದ ಪ್ರೇಮ್, ಮನೆ ತುಂಬಾ ಅಚ್ಚುಕಟ್ಟಾಗಿದೆ ಎಂದರು.ಶಿವಣ್ಣ ಎಂಟ್ರಿ ಇದೇ ಸಂದರ್ಭದಲ್ಲಿ ಸೋನು ಅವರು ಕನ್ಫೆಶನ್ ರೂಮ್ಗೆ ಬರಬೇಕೆಂದು ಬಿಗ್ ಬಾಸ್ ಆದೇಶಿಸಿದರು. ರೂಮ್ಗೆ ತೆರಳಿದಾಗ ಅಲ್ಲಿ ಶಿವಣ್ಣ ಇದ್ದುದ್ದನ್ನು ಕಂಡು ಅವರು ಸಂಭ್ರಮಪಟ್ಟರು. ನಂತರ ಶಿವಣ್ಣನನ್ನು ಕರೆದುಕೊಂಡು ಬಿಗ್ ಬಾಸ್ ಮನೆಗೆ ಪ್ರವೇಶಿಸಿದರು. ಶಿವಣ್ಣ ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಲೇ ಮನೆಯ ಸದಸ್ಯರ ಸಂಭ್ರಮ ದುಪ್ಪಟ್ಟಾಯಿತು. ಜಿಮ್ ರವಿ ಪ್ರೇಮ್ ಜತೆಗೆ ವಿಲನ್ ಚಿತ್ರ ನೋಡಿ ಎಂದು ವೀಕ್ಷಕರಲ್ಲಿ ಮನವಿ ಮಾಡಿಕೊಂಡರು. ಶಿವಣ್ಣ ಮನೆಯ ಸದಸ್ಯರಿಗೆ ಹಂಚಲು ಸಿಹಿ ತಂದಿದ್ದೇನೆ, ಬಿಗ್ ಬಾಸ್ ಆದೇಶದ ಬಳಿಕ ಅದನ್ನು ತೆರೆಯುತ್ತೇನೆ ಎಂದರು.
ಬಿಗ್ ಬಾಸ್ ಮನೆಗೆ ಇದೇ ಮೊದಲ ಬಾರಿಗೆ ಬಂದಿದ್ದೇನೆ, ಮನೆ ನಿಜಕ್ಕೂ ಅದ್ಭುತವಾಗಿದೆ. ಮನೆಯ ಸದಸ್ಯರನ್ನು ಭೇಟಿಯಾಗಿದ್ದು ನಿಜಕ್ಕೂ ತುಂಬ ಖುಷಿ ಕೊಟ್ಟಿತು ಎಂದರು. ಮೊದಲ ವಾರದಲ್ಲಿ ಶಶಿ, ರೀಮಾ, ಆಂಡಿ, ರವಿ, ಸೋನು, ಆಡಮ್, ಆನಂದ್, ನಯನಾ, ಮುರಳಿ, ರಕ್ಷಿತಾ ಮತ್ತು ಅಕ್ಷತಾ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ರಕ್ಷಿತಾ ಹೊರತುಪಡಿಸಿ ಉಳಿದವರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಭಾನುವಾರದ ವಿಶೇಷ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಗೆ ದಿ ವಿಲನ್ ಚಿತ್ರ ತಂಡ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದು, ವಿಲನ್ ನಿರ್ದೇಶಕ ಪ್ರೇಮ್ ಮತ್ತು ನಟ ಹ್ಯಾಟ್ರಿಕ್ ಸ್ಟಾರ್ ಶಿವರಾಜ್ ಕುಮಾರ್ ಆಗಮಿಸುತ್ತಿದ್ದಾರೆ. ಮನೆಯ ಸದಸ್ಯರೊಂದಿಗೆ ಅವರು ಸಮಯ ಕಳೆಯಲಿದ್ದು, ಬಿಗ್ ಬಾಸ್ ಸೀಸನ್ 6ರ ಮೊದಲ ಅತಿಥಿಯಾಗಿದ್ದುಕೊಂಡು ಸದಸ್ಯರ ಜತೆ ಡ್ಯಾನ್ಸ್ಗೆ ಸ್ಟೆಪ್ ಕೂಡ ಹಾಕಲಿದ್ದಾರೆ.
ಮನೆಯ ಯಾವುದೇ ಟಾಸ್ಕ್ ಇರಲಿ, ಅಲ್ಲಿ ನೀವು ಎನ್ನುವ ಈಗೋ ಬಿಟ್ಟು, ಆಟ ಆಡಿ, ಟಾಸ್ಕ್ನಲ್ಲಿ ಪಾಲ್ಗೊಳ್ಳಿ ಎಂದು ಶಿವಣ್ಣ ಸದಸ್ಯರಿಗೆ ಕಿವಿಮಾತು ಹೇಳಿದರು.
ಮನೆಯ ಸದಸ್ಯರ ವಿಶೇಷತೆಗಳು, ಅವರ ಗುಣ ಲಕ್ಷಣಗಳ ಬಗ್ಗೆ ಪ್ರತಿ ಸದಸ್ಯರು ಶಿವಣ್ಣ ಮತ್ತು ಪ್ರೇಮ್ಗೆ ಹೇಳಿಕೊಟ್ಟರು. ವಿಲನ್ ಚಿತ್ರದ ಬಗ್ಗೆಯೂ ಸದಸ್ಯರ ಮಧ್ಯೆ ಚರ್ಚೆ ನಡೆಯಿತು.
ಮನೆಯ ಪ್ರತಿ ಸದಸ್ಯರು ಯಾರು ತಮ್ಮ ಪಾಲಿಗೆ ವಿಲನ್ ಮತ್ತು ಯಾಕೆ ಅವರು ವಿಲನ್ ಆಗಿದ್ದಾರೆ ಎಂದು ವಿವರಿಸಿದರು, ನಂತರ ತಮ್ಮ ಪಾಲಿಗೆ ವಿಲನ್ ಆಗಿರುವ ಸದಸ್ಯರ ಹಣೆಗೆ ವಿಲನ್ ಸ್ಟಿಕರ್ ಅಂಟಿಸಿದರು.
ಸದಸ್ಯರ ಜತೆ ಮಾತನಾಡುತ್ತಾ ಶಿವಣ್ಣ ಜತೆ ಬಿಟ್ ಬಿಡ್ತೀವಾ? ಓಹ್ ಭ್ರಮೆ... ಎನ್ನುವ ಫೇಮಸ್ ಡಯಲಾಗ್ ಹೇಳಿ ರಂಜಿಸಿದರು.
ಮನೆಯ ಸದಸ್ಯರಿಗೆ ತಾನು ವಿಶೇಷವಾಗಿ ಹೇಳಿ ಮುಂದಿನ ವಾರ ಮಟನ್, ಚಿಕನ್ ಊಟ ಹಾಕಿಸುತ್ತೇನೆ, ಲಕ್ಷುರಿ ಬಜೆಟ್ ಬಗ್ಗೆ ಚಿಂತಿಸಬೇಡಿ, ಆ ವರೆಗೂ ಕಾಯಬೇಡಿ ಎಂದು ಶಿವಣ್ಣ ಹೇಳಿದಾಗ ಎಲ್ಲರ ಚಪ್ಪಾಳೆ ಕೇಳಿಬಂತು.
ಜತೆಗೆ ಜೋಗಿ ಚಿತ್ರದ ಜನಪ್ರಿಯ ಗೀತೆಯನ್ನು ಹೇಳಿ ಶಿವಣ್ಣ ಸದಸ್ಯರನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ವಿಶೇಷ ಅಧಿಕಾರ ಪಡೆದ ಶಿವಣ್ಣ ಆಂಡಿಗೆ ಉಡುಗೊರೆ ನೀಡಲು ಅನುಮತಿ ಪಡೆದರು. ಶಿವಣ್ಣ ನೀಡಿದ ಕವರ್ ಬಿಚ್ಚಿದಾಗ ಅದರೊಳಗೆ ಸುರಕ್ಷಾ ಕವಚ ಇದ್ದದ್ದು ಕಂಡು ಆಂಡಿ ಸಂತಸ ಪಟ್ಟರು.
ಗಾರ್ಡನ್ ಏರಿಯಾಗೆ ಬಂದ ಶಿವಣ್ಣ, ಅಲ್ಲಿ ವಿಲನ್ ಚಿತ್ರದ ಜನಪ್ರಿಯ ಗೀತೆ ರಾವಣ... ಹಾಡಿಗೆ ಹೆಜ್ಜೆ ಹಾಕಿದರು. ಸದಸ್ಯರು ಕೂಡ ನೃತ್ಯಕ್ಕೆ ಜತೆಯಾದರು...
ಬಳಿಕ ಶಿವಣ್ಣ ಮತ್ತು ಪ್ರೇಮ್ ಅವರನ್ನು ಮನೆಯ ಮುಖ್ಯದ್ವಾರದ ಮೂಲಕ ಬೀಳ್ಕೊಡಬೇಕು ಎಂದು ಬಿಗ್ ಬಾಸ್ ಆದೇಶಿಸಿದ ನಂತರ ಸದಸ್ಯರು ಅವರನ್ನು ಕಳುಹಿಸಿಕೊಟ್ಟರು.
ಬಿಗ್ ಬಾಸ್ ಮನೆಯಲ್ಲಿ ವಿಲನ್ ಚಿತ್ರದ ಸಂಭ್ರಮ ಆಚರಿಸಿದ ಬಳಿಕ ಸುದೀಪ್ ಆಗಮಿಸಿ, ವಿಲನ್ ನಿರ್ದೇಶಕ ಪ್ರೇಮ್ ಮತ್ತು ನಟ ಶಿವರಾಜ್ ಕುಮಾರ್ ಅವರನ್ನು ವೇದಿಕೆಗೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ವಿಲನ್ ನಿರ್ಮಾಪಕ ಮನೋಹರ್ ಕೂಡ ವೇದಿಕೆಗೆ ಆಗಮಿಸಿದರು.
ವಿಲನ್ ಚಿತ್ರದ ಕಲೆಕ್ಷನ್ ತುಂಬಾ ಚೆನ್ನಾಗಿದೆ, ನಮ್ಮ ನಿರೀಕ್ಷೆಗೂ ಮೀರಿದ ಉತ್ತಮ ಗಳಿಕೆ ಕಂಡಿದೆ ಎಂದು ನಿರ್ಮಾಪಕ ಮನೋಹರ್ ಅಭಿಪ್ರಾಯಪಟ್ಟರು. ಶ್ರೀಕಾಂತ್ ಕೂಡ ಅವರಿಗೆ ಜತೆಯಾದರು. ಶ್ರೀಕಾಂತ್ ಆನೆ ಬಂತು ಆನೆ ಡಯಲಾಗ್ ಹೇಳಿ ಸಭಿಕರನ್ನು ರಂಜಿಸಿದರು.
ಬಿಗ್ ಬಾಸ್ ಒಂದು ಬ್ರ್ಯಾಂಡ್ ಆಗಿದ್ದು, ಜನರು ಎಂಟು ಗಂಟೆಯಾಗುತ್ತಿದ್ದಂತೆ ಟಿವಿ ಮುಂದೆ ಕೂರುತ್ತಾರೆ. ವಿಶೇಷವೆಂದರೆ, ಕ್ರಿಕೆಟ್ ಪಂದ್ಯಗಳಂತೆ ಬಿಗ್ ಬಾಸ್ ಸಂದರ್ಭದಲ್ಲಿ ಜನರು ಸೆಕೆಂಡ್ ಶೋ ಸಿನಿಮಾ ನೋಡಲು ಕೂಡ ಹೋಗುತ್ತಿಲ್ಲ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟರು.
ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಹೋಗಿ ಬಂದ ಶಿವಣ್ಣ, ಮನೆ ತುಂಬಾ ಖುಷಿಕೊಟ್ಟಿತು. ಮನೆಯಿಂದ ಹೊರಬರಲು ಮನಸ್ಸೇ ಆಗಲಿಲ್ಲ ಎಂದರು. ಮನೆಯ ಸದಸ್ಯರ ಒಡನಾಟ ಖುಷಿ ಕೊಟ್ಟಿತು. ಬಿಗ್ ಬಾಸ್ ಕಾರ್ಯಕ್ರಮವನ್ನು ದಿನವೂ ನೋಡುತ್ತೇನೆ. ಮುಂದಿನ ವಾರ ನನ್ನ ಕಡೆಯಿಂದ ಊಟ ಹಾಕಿಸುವುದಾಗಿ ಮನೆಯ ಸದಸ್ಯರಿಗೆ ಮಾತು ಕೊಟ್ಟು ಬಂದಿದ್ದೇನೆ ಎಂದು ಹೇಳಿದರು.
ಮನೆಯ ಸದಸ್ಯರ ಬೇಡಿಕೆಯಂತೆ ವಿಶೇಷ ಊಟ ಹಾಕಿಸಲು ಸುದೀಪ್ ಶಿವಣ್ಣಗೆ ಒಪ್ಪಿಗೆ ನೀಡಿದರು. ಮನೆಯ ಸದಸ್ಯರಿಗೆ ಚಿಕನ್ ಬಿರಿಯಾನಿ, ಮಟನ್ ಫ್ರೈ, ಡೆಸರ್ಸ್ಟ್, ವೆಜ್ ಐಟಂ ಕಳುಹಿಸಲು ಶಿವಣ್ಣ ಸುದೀಪ್ಗೆ ಮನವಿ ಮಾಡಿಕೊಂಡರು.
ಯೆಸ್ ಆರ್ ನೋ ಎಂಬ ಸುದೀಪ್ ಕೇಳಿದ ಹಲವು ಪ್ರಶ್ನೆಗಳಿಗೆ ಶಿವಣ್ಣ ಒಹ್ ಭ್ರಮೆ ಎಂದು ಉತ್ತರಿಸಿದರು. ಅದು ತಮ್ಮ ಅತ್ಯಂತ ನೆಚ್ಚಿನ ಡಯಲಾಗ್ ಆಗಿದ್ದು, ಅದಕ್ಕೆ ಅದನ್ನು ಆಗಾಗ ಹೇಳುತ್ತಿದ್ದೇನೆ ಎಂದು ಶಿವಣ್ಣ ಉತ್ತರಿಸಿದರು. ಬಿಗ್ ಬಾಸ್ಗೆ ಸ್ಪರ್ಧಿಯಾಗಿ ಹೋಗಿದ್ದರೆ ನಾನೇ ಗೆಲ್ಲುತ್ತಿದ್ದೆ ಎಂದು ಶಿವಣ್ಣ ಅಭಿಪ್ರಾಯಪಟ್ಟರು.
ಬಳಿಕ ವಿಲನ್ ಚಿತ್ರದ ವಿಶೇಷತೆಗಳ ಬಗ್ಗೆ ನಿರ್ದೇಶಕ ಪ್ರೇಮ್, ನಟ ಶಿವಣ್ಣ ಮತ್ತು ನಿರ್ಮಾಪಕರು ಸುದೀಪ್ ಜತೆ ವೇದಿಕೆಯಲ್ಲಿ ಹೇಳಿದರು. ಇದೇ ಸಂದರ್ಭದಲ್ಲಿ ವಿಲನ್ ಡಯಲಾಗ್ಗಳ ಬಗ್ಗೆಯೂ ಚರ್ಚೆ ನಡೆಯಿತು. ಹಲವು ಡಯಲಾಗ್ಗಳನ್ನು ಪ್ರೇಮ್, ಶಿವಣ್ಣ ಮತ್ತು ಸುದೀಪ್ ಹೇಳಿ ರಂಜಿಸಿದರು. ಬಳಿಕ ವಿಲನ್ ತಂಡವನ್ನು ಸುದೀಪ್ ಬೀಳ್ಕೊಟ್ಟರು.
ಕೊನೆಯದಾಗಿ ಮನೆಯಿಂದ ಮೊದಲ ವಾರದಲ್ಲೇ ಹೊರಬಂದ ಧೋನಿ ಫ್ಯಾನ್ ರಕ್ಷಿತಾ, ಸುದೀಪ್ ಜತೆ ಬಿಗ್ಬಾಸ್ ಮನೆಯಲ್ಲಿನ ಅನುಭವ ಹೊಂದಿಕೊಂಡರು. ಮನೆಯಲ್ಲಿ ಕಳೆದ ಒಂದು ವಾರ ಹಲವು ನೆನಪುಗಳು, ಅನುಭವ ನೀಡಿತು ಎಂದು ರಕ್ಷಿತಾ ಹೇಳಿದರು. ರಕ್ಷಿತಾ ಅವರಿಗೆ ಸುದೀಪ್ ಗಿಫ್ಟ್ ನೀಡಿ ವೇದಿಕೆಯಿಂದ ಬೀಳ್ಕೊಟ್ಟರು. ಅದರೊಂದಿಗೆ ಬಿಗ್ ಬಾಸ್ ಆರನೇ ಆವೃತ್ತಿಯ ಮೊದಲ ವಾರ ಸಮಾಪ್ತಿಗೊಂಡಿತು. [ಬಿಗ್ ಬಾಸ್ ಎಂಟನೇ ದಿನದ ಹೈಲೈಟ್ಸ್]
ಭಾನುವಾರದ ವಿಶೇಷ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಗೆ ದಿ ವಿಲನ್ ಚಿತ್ರ ತಂಡ ವಿಶೇಷ ಅತಿಥಿಗಳಾಗಿದ್ದು, ವಿಲನ್ ನಿರ್ದೇಶಕ ಪ್ರೇಮ್ ಮತ್ತು ನಟ ಹ್ಯಾಟ್ರಿಕ್ ಸ್ಟಾರ್ ಶಿವರಾಜ್ ಕುಮಾರ್ ಆಗಮಿಸಿದ್ದಾರೆ.
ಪ್ರೇಮ್ ಆಗಮನಬಿಗ್ ಬಾಸ್ ಮನೆಗೆ ಮೊದಲಿಗೆ ಪ್ರವೇಶಿಸಿದ ನಿರ್ದೇಶಕ ಮತ್ತು ಚಿತ್ರ ನಿರ್ಮಾಪಕ ಪ್ರೇಮ್ ಮನೆಯ ಎಲ್ಲ ಸದಸ್ಯರನ್ನು ಪರಿಚಯ ಮಾಡಿಕೊಂಡರು. ಮನೆಯ ಸದಸ್ಯರು ಸಂಭ್ರಮದಿಂದ ಪ್ರೇಮ್ ಅವರನ್ನು ಬರಮಾಡಿಕೊಂಡಿರು.
ಬಿಗ್ ಬಾಸ್ ಮನೆಗೆ ಇದೇ ಮೊದಲ ಬಾರಿಗೆ ಬಂದಿದ್ದೇನೆ, ಮನೆ ನಿಜಕ್ಕೂ ಅದ್ಭುತವಾಗಿದೆ. ಮನೆಯ ಸದಸ್ಯರನ್ನು ಭೇಟಿಯಾಗಿದ್ದು ನಿಜಕ್ಕೂ ತುಂಬ ಖುಷಿ ಕೊಟ್ಟಿತು ಎಂದರು.
ಮನೆಯ ಪ್ರತಿ ಸದಸ್ಯರು ಯಾರು ತಮ್ಮ ಪಾಲಿಗೆ ವಿಲನ್ ಮತ್ತು ಯಾಕೆ ಅವರು ವಿಲನ್ ಆಗಿದ್ದಾರೆ ಎಂದು ವಿವರಿಸಿದರು, ನಂತರ ತಮ್ಮ ಪಾಲಿಗೆ ವಿಲನ್ ಆಗಿರುವ ಸದಸ್ಯರ ಹಣೆಗೆ ವಿಲನ್ ಸ್ಟಿಕರ್ ಅಂಟಿಸಿದರು.
ಸದಸ್ಯರ ಜತೆ ಮಾತನಾಡುತ್ತಾ ಶಿವಣ್ಣ ಜತೆ ಬಿಟ್ ಬಿಡ್ತೀವಾ? ಓಹ್ ಭ್ರಮೆ... ಎನ್ನುವ ಫೇಮಸ್ ಡಯಲಾಗ್ ಹೇಳಿ ರಂಜಿಸಿದರು.
ಮನೆಯ ಸದಸ್ಯರಿಗೆ ತಾನು ವಿಶೇಷವಾಗಿ ಹೇಳಿ ಮುಂದಿನ ವಾರ ಮಟನ್, ಚಿಕನ್ ಊಟ ಹಾಕಿಸುತ್ತೇನೆ, ಲಕ್ಷುರಿ ಬಜೆಟ್ ಬಗ್ಗೆ ಚಿಂತಿಸಬೇಡಿ, ಆ ವರೆಗೂ ಕಾಯಬೇಡಿ ಎಂದು ಶಿವಣ್ಣ ಹೇಳಿದಾಗ ಎಲ್ಲರ ಚಪ್ಪಾಳೆ ಕೇಳಿಬಂತು.
ಜತೆಗೆ ಜೋಗಿ ಚಿತ್ರದ ಜನಪ್ರಿಯ ಗೀತೆಯನ್ನು ಹೇಳಿ ಶಿವಣ್ಣ ಸದಸ್ಯರನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ವಿಶೇಷ ಅಧಿಕಾರ ಪಡೆದ ಶಿವಣ್ಣ ಆಂಡಿಗೆ ಉಡುಗೊರೆ ನೀಡಲು ಅನುಮತಿ ಪಡೆದರು. ಶಿವಣ್ಣ ನೀಡಿದ ಕವರ್ ಬಿಚ್ಚಿದಾಗ ಅದರೊಳಗೆ ಸುರಕ್ಷಾ ಕವಚ ಇದ್ದದ್ದು ಕಂಡು ಆಂಡಿ ಸಂತಸ ಪಟ್ಟರು.
ಗಾರ್ಡನ್ ಏರಿಯಾಗೆ ಬಂದ ಶಿವಣ್ಣ, ಅಲ್ಲಿ ವಿಲನ್ ಚಿತ್ರದ ಜನಪ್ರಿಯ ಗೀತೆ ರಾವಣ... ಹಾಡಿಗೆ ಹೆಜ್ಜೆ ಹಾಕಿದರು. ಸದಸ್ಯರು ಕೂಡ ನೃತ್ಯಕ್ಕೆ ಜತೆಯಾದರು...
ಬಳಿಕ ಶಿವಣ್ಣ ಮತ್ತು ಪ್ರೇಮ್ ಅವರನ್ನು ಮನೆಯ ಮುಖ್ಯದ್ವಾರದ ಮೂಲಕ ಬೀಳ್ಕೊಡಬೇಕು ಎಂದು ಬಿಗ್ ಬಾಸ್ ಆದೇಶಿಸಿದ ನಂತರ ಸದಸ್ಯರು ಅವರನ್ನು ಕಳುಹಿಸಿಕೊಟ್ಟರು.
ವಿಲನ್ ಚಿತ್ರದ ಕಲೆಕ್ಷನ್ ತುಂಬಾ ಚೆನ್ನಾಗಿದೆ, ನಮ್ಮ ನಿರೀಕ್ಷೆಗೂ ಮೀರಿದ ಉತ್ತಮ ಗಳಿಕೆ ಕಂಡಿದೆ ಎಂದು ನಿರ್ಮಾಪಕ ಮನೋಹರ್ ಅಭಿಪ್ರಾಯಪಟ್ಟರು. ಶ್ರೀಕಾಂತ್ ಕೂಡ ಅವರಿಗೆ ಜತೆಯಾದರು. ಶ್ರೀಕಾಂತ್ ಆನೆ ಬಂತು ಆನೆ ಡಯಲಾಗ್ ಹೇಳಿ ಸಭಿಕರನ್ನು ರಂಜಿಸಿದರು.
ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಹೋಗಿ ಬಂದ ಶಿವಣ್ಣ, ಮನೆ ತುಂಬಾ ಖುಷಿಕೊಟ್ಟಿತು. ಮನೆಯಿಂದ ಹೊರಬರಲು ಮನಸ್ಸೇ ಆಗಲಿಲ್ಲ ಎಂದರು. ಮನೆಯ ಸದಸ್ಯರ ಒಡನಾಟ ಖುಷಿ ಕೊಟ್ಟಿತು. ಬಿಗ್ ಬಾಸ್ ಕಾರ್ಯಕ್ರಮವನ್ನು ದಿನವೂ ನೋಡುತ್ತೇನೆ. ಮುಂದಿನ ವಾರ ನನ್ನ ಕಡೆಯಿಂದ ಊಟ ಹಾಕಿಸುವುದಾಗಿ ಮನೆಯ ಸದಸ್ಯರಿಗೆ ಮಾತು ಕೊಟ್ಟು ಬಂದಿದ್ದೇನೆ ಎಂದು ಹೇಳಿದರು.
ಮನೆಯ ಸದಸ್ಯರ ಬೇಡಿಕೆಯಂತೆ ವಿಶೇಷ ಊಟ ಹಾಕಿಸಲು ಸುದೀಪ್ ಶಿವಣ್ಣಗೆ ಒಪ್ಪಿಗೆ ನೀಡಿದರು. ಮನೆಯ ಸದಸ್ಯರಿಗೆ ಚಿಕನ್ ಬಿರಿಯಾನಿ, ಮಟನ್ ಫ್ರೈ, ಡೆಸರ್ಸ್ಟ್, ವೆಜ್ ಐಟಂ ಕಳುಹಿಸಲು ಶಿವಣ್ಣ ಸುದೀಪ್ಗೆ ಮನವಿ ಮಾಡಿಕೊಂಡರು.
ಬಳಿಕ ವಿಲನ್ ಚಿತ್ರದ ವಿಶೇಷತೆಗಳ ಬಗ್ಗೆ ನಿರ್ದೇಶಕ ಪ್ರೇಮ್, ನಟ ಶಿವಣ್ಣ ಮತ್ತು ನಿರ್ಮಾಪಕರು ಸುದೀಪ್ ಜತೆ ವೇದಿಕೆಯಲ್ಲಿ ಹೇಳಿದರು. ಇದೇ ಸಂದರ್ಭದಲ್ಲಿ ವಿಲನ್ ಡಯಲಾಗ್ಗಳ ಬಗ್ಗೆಯೂ ಚರ್ಚೆ ನಡೆಯಿತು. ಹಲವು ಡಯಲಾಗ್ಗಳನ್ನು ಪ್ರೇಮ್, ಶಿವಣ್ಣ ಮತ್ತು ಸುದೀಪ್ ಹೇಳಿ ರಂಜಿಸಿದರು. ಬಳಿಕ ವಿಲನ್ ತಂಡವನ್ನು ಸುದೀಪ್ ಬೀಳ್ಕೊಟ್ಟರು.