ಆ್ಯಪ್ನಗರ

Episode 21 Highlights: ಸೂಪರ್ ಸಂಡೆನಲ್ಲಿ ಶರಣ್ ಗಾಯನಕ್ಕೆ ಸುದೀಪ್‌ ಶರಣು

ಭಾನುವಾರದ ವಿಶೇಷ ಸಂಚಿಕೆಯಲ್ಲಿ ಬಿಗ್‌ ಬಾಸ್ ಮನೆಗೆ ಶರಣ್ ಆಗಮಿಸುತ್ತಿರುವುದು ವಿಶೇಷವಾಗಿದೆ.

Vijaya Karnataka Web 12 Nov 2018, 1:04 pm
ಲ್ಬಿಲಗ್ ಬಾಸ್ ಆರನೇ ಆವೃತ್ತಿ ಮೂರು ವಾರ ಪೂರೈಸಿದ್ದು, 2ನೇ ವಾರಕ್ಕೆ ಪದಾರ್ಪಣೆ ಮಾಡಿದೆ. ಶನಿವಾರದ ಎಲಿಮಿನೇಷನ್ ರೌಂಡ್‌ನಲ್ಲಿ ಬಿಗ್‌ ಬಾಸ್ ಮನೆಯಿಂದ ಮೂರನೇ ಎಲಿಮಿನೇಟರ್ ಆಗಿ ಸ್ನೇಹಾ ಹೊರ ಹೋಗಿದ್ದಾರೆ.
Vijaya Karnataka Web sharan


ಭಾನುವಾರದ ವಿಶೇಷ ಸಂಚಿಕೆಯಲ್ಲಿ ಬಿಗ್‌ ಬಾಸ್ ಮನೆಗೆ ಶರಣ್ ಆಗಮಿಸುತ್ತಿರುವುದು ವಿಶೇಷವಾಗಿದೆ.

ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಶರಣ್‌ ಅವರನ್ನು ಸ್ಪರ್ಧಿಗಳು ಬರಮಾಡಿಕೊಂಡರು. ಆತ್ಮೀಯವಾಗಿ ಸ್ವಾಗತ ಕೋರಿ ಎಲ್ಲರೂ ಶರಣ್‌ ಜತೆ ಕುಶಲೋಪರಿ ನಡೆಸಿದರು.

ನಂತರ ರಶ್ಮಿ ನಿರೂಪಣೆಯಲ್ಲಿ ಶರಣ್‌ ಮುಂದೆ ಸ್ಪರ್ಧಿಗಳ ಪ್ರತಿಭಾ ಪ್ರದರ್ಶನ ನಡೆಯಿತು. ಮೊದಲಿಗೆ ಎವಿ ರವಿ ತಮ್ಮ ದೇಹದಾರ್ಢ್ಯ ಪ್ರದರ್ಶಿಸಿದರು.

ನಂತರ ನವೀನ್‌, ನಯನಾ ಅವರ ಸಾಂಗ್‌, ಧನಂಜಯ್‌, ರಾಕೇಶ್‌, ಅಕ್ಷತಾ ಅವರ ಪ್ರತಿಭಾ ಪ್ರದರ್ಶನ ಎಲ್ಲರ ಮೆಚ್ಚುಗೆ ಗಳಿಸಿತು.

ಆದರೆ ಆಡಮ್‌ ಪಾಷಾ ಮತ್ತು ಶಶಿ ಜಂಟಿಯಾಗಿ ನಡೆಸಿದ ಸಾಲ್ಸಾ ಮಿಶ್ರಿತ ನೃತ್ಯಕ್ಕೆ ಶರಣ್‌ ಶರಣಾದರು. ಇವರಿಬ್ಬರನ್ನು ಬಂದು ತಬ್ಬಿಕೊಂಡು ಮೆಚ್ಚುಗೆ ಸೂಚಿಸಿದರು.


ಮುರಳಿ ಅವರು ಕನ್ನಡದಲ್ಲಿ ಹೇಳಿದ ಸಂಭಾಷಣೆಗೆ ಶರಣ್‌ ಚಪ್ಪಾಳೆ ತಟ್ಟಿ ಹುರಿಬುಂಬಿಸಿದರು. ಆಂಡಿ ಎಲ್ಲರ ಬಗ್ಗೆ ಮಾಡಿದ ಪ್ರಶ್ನೆಗಳು ಹಾಗೂ ಉತ್ತರಗಳಿಗೆ ಚಪ್ಪಾಳೆಯ ಸುರಿಮಳೆಯಾಯಿತು.

ಶರಣ್‌ ಮುಂದೆ ನಡೆದ ಪ್ರದರ್ಶನದಲ್ಲಿ ಆಡಮ್‌, ಶಶಿ ಗೆದ್ದಿದ್ದಾರೆ ಎಂದು ಶರಣ್‌ ಘೋಷಿಸಿದರು. ಇಬ್ಬರಿಗೂ ಪ್ರಶಸ್ತಿ ನೀಡಿದ ನಂತರ ಡ್ಯಾನ್ಸ್‌ ಮಾಡಿದ ನಂತರ ಶರಣ್‌ ಬಿಗ್‌ ಮನೆಯಿಂದ ಹೊರ ನಡೆದರು.

ನಂತರ ಬಿಗ್‌ ವೇದಿಕೆಗೆ ಬಂದ ಶರಣ್‌ ಜತೆ ಸುದೀಪ್‌ ಸಂಭಾಷಣೆ ನಡೆಸಿದರು. ಶರಣ್‌ ಅವರ ವಿಕ್ಟರಿ 2 ಸಿನಿಮಾದ ಬಗ್ಗೆ ಉಭಯರು ಚರ್ಚಿಸಿದರು.

ನಂತರ ಗಾಯಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಗಾನ ವಿದ್ಯಾ ಬಢೀ ಕಠಿಣ ಹೈ ಗೀತೆಯನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ಶರಣ್ ಕಂಡು ಸುದೀಪ ಶರಣಾದರು. ಇಡೀ ಬಿಗ್‌ ವೇದಿಕೆಯೇ ಶರಣ್‌ ಗಾಯನಕ್ಕೆ ಮಂತ್ರಮುಗ್ಧವಾಯಿತು.

ಶನಿವಾರ ಎಲಿಮಿನೇಟ್‌ ಆದ ಸೇಹಾ ಜತೆ ಸುದೀಪ್‌ ಚಿಟ್ ಚಾಟ್‌ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ