ಆ್ಯಪ್ನಗರ

Episode 107 Highlights: ಕೈ ಬಿಡಕ್ಕೇ ರೆಡಿ ಇಲ್ಲ ಅಣ್ಣ ಎಂದ ದೀಪಿಕಾ ದಾಸ್

ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಟಾಸ್ಕ್‌ಗಳು ಮುಗಿದಿದ್ದು ಇನ್ನೇನು ಒಂದೇ ಒಂದು ವಾರದಲ್ಲಿ ಯಾರಿಗೆ ಬಿಗ್ ಬಾಸ್ ಕಿರೀಟ ಸಿಗಲಿದೆ, ಯಾರು 50 ಲಕ್ಷ ರೂಪಾಯಿ ಒಡೆಯರಾಗುತ್ತಾರೆ ಎಂಬುದು ಗೊತ್ತಾಗಲಿದೆ. ನೂರ ಆರನೇ ದಿನ ಎಲಿಮಿನೇಟ್ ಆಗಿ ಹೋಗಿದ್ದ ಸುಜಾತಾ ಹಾಗೂ ದುನಿಯಾ ರಶ್ಮಿ ಆಗಮಿಸಿದರು. ಇವರು ಮನೆಯ ಸದಸ್ಯರ ಜೊತೆಗೆ ಸ್ವಲ್ಪ ಹೊತ್ತು ಚರ್ಚಿಸಿದರು.

Vijaya Karnataka Web 28 Jan 2020, 12:49 am
ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಟಾಸ್ಕ್‌ಗಳು ಮುಗಿದಿದ್ದು ಇನ್ನೇನು ಒಂದೇ ಒಂದು ವಾರದಲ್ಲಿ ಯಾರಿಗೆ ಬಿಗ್ ಬಾಸ್ ಕಿರೀಟ ಸಿಗಲಿದೆ, ಯಾರು 50 ಲಕ್ಷ ರೂಪಾಯಿ ಒಡೆಯರಾಗುತ್ತಾರೆ ಎಂಬುದು ಗೊತ್ತಾಗಲಿದೆ. ನೂರ ಆರನೇ ದಿನ ಎಲಿಮಿನೇಟ್ ಆಗಿ ಹೋಗಿದ್ದ ಸುಜಾತಾ ಹಾಗೂ ದುನಿಯಾ ರಶ್ಮಿ ಆಗಮಿಸಿದರು. ಇವರು ಮನೆಯ ಸದಸ್ಯರ ಜೊತೆಗೆ ಸ್ವಲ್ಪ ಹೊತ್ತು ಚರ್ಚಿಸಿದರು.
Vijaya Karnataka Web bigg boss 7 episode 107 day 106 written updates deepika das takes class to vasuki vaibhav
Episode 107 Highlights: ಕೈ ಬಿಡಕ್ಕೇ ರೆಡಿ ಇಲ್ಲ ಅಣ್ಣ ಎಂದ ದೀಪಿಕಾ ದಾಸ್


ಶೇಷಮ್ಮನಾಗಿ ಹರೀಶ್ ರಾಜ್ ಮಾಡಿದ್ದು ನಮ್ಮ ಅಮ್ಮನಿಗೆ ತುಂಬಾ ಇಷ್ಟವಾಗಿದೆ ಎಂದು ದುನಿಯಾ ರಶ್ಮಿ ಹೇಳಿದಾಗ, ಮತ್ತೊಮ್ಮೆ ಅದೇ ರೀತಿ ಮಾಡಿ ರಂಜಿಸಿದರು ಹರೀಶ್. ಮನೆಮಂದಿಗೆ ಅಡುಗೆಯನ್ನೂ ಮಾಡಿ ಟೀಯನ್ನೂ ಮಾಡಿಕೊಟ್ಟರು ಸುಜಾತಾ ಹಾಗೂ ರಶ್ಮಿ. ಹೊರಡುವಾಗ ಸುಜಾತಾ ಹಾಗೂ ರಶ್ಮಿ ನೀರಿನ ಬಾಟಲಿಯನ್ನು ಕೊಂಡೊಯ್ದರು.

ಇದಾದ ಬಳಿಕ ಮನೆಯ ಸದ್ಯರಿಗೆ ಚಟುವಟಿಕೆಯನ್ನು ನೀಡಿದರು ಬಿಗ್ ಬಾಸ್ ಅದುವೇ ಡ್ಯಾನ್ಸ್ ಮಗ ಡ್ಯಾನ್ಸ್. ಸದಸ್ಯರು ಏನೇ ಕೆಲಸ ಮಾಡುತ್ತಿದ್ದರೂ ಅವರಿಗೆ ಮೀಸಲಾದ ಹಾಡು ಬಂದಾಗ ಲಿವಿಂಗ್ ಏರಿಯಾದಲ್ಲಿ ಹಾಕಿರುವ ವೇದಿಕೆ ಮೇಲೆ ಡ್ಯಾನ್ಸ್ ಮಾಡಬೇಕು. ಅದರಂತೆ ಶೈನ್ ಶೆಟ್ಟಿಗೆ ಲಕ್ಕಿ ಚಿತ್ರದ ಗೌರಮ್ಮ ಬಾರಮ್ಮ ಹಾಡು ಹಾಕಲಾಯಿತು. ಅದಕ್ಕೆ ಶೈನ್ ನರ್ತಿಸಿದರು. ಇದಾದ ಬಳಿಕ ಕೋಳಿನೆ ಕೂಗೂದಿಲ್ಲ ಹಾಡಿಗೆ ದೀಪಿಕಾ ನೃತ್ಯ ಮಾಡಿದರು.

ಇಲ್ಲಿಂದ ಹೋದ ಬಳಿಕ ನನ್ನ ಅದೃಷ್ಟವೇ ಬದಲಾಗಿದೆ ಎಂದ ಗುರುಲಿಂಗ ಸ್ವಾಮಿ

ಗುರುಲಿಂಗ ಸ್ವಾಮಿಜಿಗಳು ಬಿಗ್ ಬಾಸ್‌ಗೆ ಆಗಮಿಸಿದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡುತ್ತಾ ಭೂಮಿ ಸಿಸ್ಟರ್ ಹೇಗಿದ್ದೀರಾ ಎಂದು. ಕೆಲವರನ್ನು ಸಾರ್ ಅಂತ ಕರೆದರು, ದೀಪಿಕಾ ದಾಸ್ ಅವರನ್ನು ಮೇಡಂ ಎಂದು ಸಂಬೋಧಿಸಿದರು. ಸ್ವಾಮಿಜಿಗಳೇ ಗುಂಡು ಗುಂಡಗೆ ಆಗಿದ್ದೀರಾ ಎಂದು ಪದೇಪದೇ ಮನೆಯ ಸದಸ್ಯರು ಹೇಳಿದರು. ಟಿವಿ, ಪೇಪರ್, ಮೊಬೈಲ್ ಇಲ್ಲ ಏನೂ ಇಲ್ಲದೆ ಇರೋದು ತುಂಬಾ ಕಷ್ಟದ ಕೆಲಸ ಎಂದರು. ಅಕ್ಕಿ ಮಠ ಎಂಬ ಸಣ್ಣ ಹಳ್ಳಿಯಲ್ಲಿ ಇದ್ದೆ, ಆ ಮಠದಲ್ಲಿ ಒಂದು ಸಣ್ಣ ಪೇಪರ್ ಆಗಿದ್ದೆ ನಾನು, ಬಿಗ್ ಬಾಸ್ ಮನೆಗೆ ಬಂದ ಬಳಿಕ ಅದೇ ಪೇಪರ್ ಈಗ ಗಾಳಿಪಟ ಆಗಿದೆ. ಎಲ್ಲರೂ ತಲೆಯೆತ್ತಿ ನೋಡುವಂತಾಗಿದೆ ಎಂದರು.

ಬಿಗ್ ಬಾಸ್ ಮನೆಯಲ್ಲಿ ಕಿಶನ್ ಪ್ರತ್ಯಕ್ಷ; ದೀಪಿಕಾ ದಾಸ್ ಜೊತೆ ಸ್ವಿಮ್ಮಿಂಗ್!

ಇಲ್ಲಿಯ ಅನುಭವ ಬೇರೆ ಯಾರಿಗೂ ಸಿಗಲ್ಲ ಎಂದ ಜೈ ಜಗದೀಶ್

ಬಳಿಕ ಚೈತ್ರಾ ವಾಸುದೇವನ್‍ ಆಗಮನವಾಯಿತು. ತುಂಬಾ ಸಣ್ಣ ಆಗಿದ್ದೀರಾ ಎಂದರು. ನಿಮ್ಮನ್ನು ನೋಡಿದರೆ ನನ್ನದೇ ದೃಷ್ಟಿ ತಾಗೋತರ ಇದೆ ಅಂತ ಹೇಳಿ ದೃಷ್ಟಿ ತೆಗೆದರು. ಇದೇ ಸಂದರ್ಭದಲ್ಲಿ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಯಿ ಹಾಯಿ ರೋ... ಹಾಡನ್ನು ಹಾಕಲಾಯಿತು. ಬಿಗ್ ಬಾಸ್ ಮನೆಗೆ ಜೈ ಜಗದೀಶ್ ಆಗಮನವಾಯಿತು. ಯಾರ್ ದುಡ್ಡು ತಗೊಂಡು ಹೋಗ್ತೀರಪ್ಪಾ, ನಮ್ಮ ದುಡ್ಡು ಎಂದು ತಮಾಷೆಗೆ ಮಾತನಾಡಿದರು. ಬಿಗ್ ಬಾಸ್ ಚೆನ್ನಾಗಿದೆ ಅಂತ ಹೇಳ್ತಿದ್ದಾರೆ ಜನ. ಇಲ್ಲಿಯ ಒಂದು ಅನುಭವ ಬೇರೆ ಯಾರಿಗೂ ಸಿಗಲ್ಲ. ನೀವು 15-16 ಜನ ತುಂಬಾ ಲಕ್ಕಿ ಎಂದರು. ನೂರು ದಿನ ಹೇಗೆಲ್ಲಾ ಕಳೆದು ಹೋಯಿತು ನೋಡ್ರಪ್ಪಾ ಎಂದೆಲ್ಲಾ ಹೇಳಿದರು.

ರಕ್ಷಾ ಜೊತೆ ಸಲುಗೆಯಿಂದ ಇದ್ದದ್ದಕ್ಕೆ ಭೂಮಿ, ದೀಪಿಕಾ ಕ್ಲಾಸ್

ರಕ್ಷಾ ಅವರು ಮನೆಗೆ ಆಗಮಿಸಿದ್ದಾಗ ಶೈನ್ ಶೆಟ್ಟಿ, ವಾಸುಕಿ ವೈಭವ್ ಹಾಗೂ ಹರೀಶ್ ರಾಜ್, ಕುರಿ ಪ್ರತಾಪ್ ನಡೆದುಕೊಂಡ ರೀತಿ ಬಗ್ಗೆ ಭೂಮಿ ಶೆಟ್ಟಿ ಹಾಗೂ ದೀಪಿಕಾ ದಾಸ್ ತರಾಟೆಗೆ ತೆಗೆದುಕೊಂಡರು. ವಾಸುಕಿ ಅವರಂತೂ ಹ್ಯಾಪಿ ನ್ಯೂ ಇಯರ್, ಹ್ಯಾಪಿ ಸಂಕ್ರಾಂತಿ, ಹ್ಯಾಪಿ ವ್ಯಾಲೆಂಟೇನ್ಸ್ ಡೇ ಅಂತ ಹೇಳಿಕೊಂಡು ಅವರ ಕೈ ಬಿಡಕ್ಕೇ ರೆಡಿ ಇಲ್ಲ ಅಣ್ಣ ಎಂದು ತರಾಟೆಗೆ ತೆಗೆದುಕೊಂಡರು ದೀಪಿಕಾ ದಾಸ್. ಬಳಿಕ ಬಂದ ಕಿಶನ್ ಬಿಳಗಲಿಯಂತೂ ಸಿಕ್ಕ ಕೊನೆ ಕ್ಷಣದಲ್ಲಿ ದೀಪಿಕಾ ಜೊತೆಗೆ ಸ್ವಿಮ್ಮಿಂಗ್ ಪೂಲ್‍‌ಗೆ ಹಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ