ಆ್ಯಪ್ನಗರ

Episode 11 Highlights: ಒಂದೇ ಒಂದು ಆ್ಯಪಲ್‍ಗಾಗಿ ರಣರಂಗವಾದ ಮನೆ

ಬಿಗ್ ಬಾಸ್ ಮನೆಯ ಅಡುಗೆ ಮನೆಯಲ್ಲಿ ಸಣ್ಣಗೆ ಶುರುವಾದ ಜಗಳ ಈಗ ಮನೆ ಒಳಗೆಲ್ಲಾ ಆವರಿಸಿಕೊಂಡಿದೆ. ಚೈತ್ರಾ ಕೋಟೂರ್ ಅಡುಗೆ ಮನೆಯ ಜವಾಬ್ದಾರಿ ಹೊತ್ತಿರುವ ಸುಜಾತಾ ಅವರನ್ನು ಒಂದೇ ಒಂದು ಮಾತು ಆಡದೆ ಆ್ಯಪಲ್‍ ತಿಂದದ್ದು ದೊಡ್ಡ ತಪ್ಪಾಗಿ ಹೋಗಿದೆ.

Vijaya Karnataka Web 24 Oct 2019, 11:37 pm
ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತಂಗೊಡ್ರು ಅಂತಾರಲ್ಲ ಅದೇ ರೀತಿ ಆಯಿತು ಬಿಗ್ ಬಾಸ್ ಮನೆಯಲ್ಲಿ. ಕಳೆದ ಹತ್ತುದಿನಗಳಿಂದ ಏನೋ ಒಂಥರಾ ಸಾಗುತ್ತಿದ್ದ ಬಿಗ್ ಬಾಸ್ ಮನೆಯಲ್ಲಿ 11ನೇ ದಿನ ಇದ್ದಕ್ಕಿದ್ದಂತೆ ಕಿಡಿ ಹೊತ್ತಿಕೊಂಡಿದೆ. ಅದೂ ಒಂದೇ ಒಂದು ಆ್ಯಪಲ್‍ಗಾಗಿ ಮನೆ ರಣರಂಗವಾಗಿ ಬದಲಾಯಿತು.
Vijaya Karnataka Web chaitra-kottor1


ಅಡುಗೆ ಮನೆಯ ವಿಚಾರಕ್ಕೆ ಯಾರೂ ಬರಬಾರದು ಎಂದು ಪದೇಪದೇ ಸುಜಾತಾ ಹೇಳುತ್ತಲೇ ಇದ್ದರು. ಅದೇ ರೀತಿ ರಾತ್ರಿ ಆ್ಯಪಲ್‍ ಅಲ್ಲಿ ಕಟ್ ಮಾಡಿ ಇಟ್ಟಿದ್ದು ಯಾರು? ಎಂಬ ಕಾರಣಕ್ಕೆ ಶುರುವಾದ ಜಗಳ ಕೊನೆಗೆ ಮನೆ ರಣರಂಗವಾಗುವಂತೆ ಮಾಡಿತು.

ಆ್ಯಪಲ್‍ನ್ನು ಚೈತ್ರಾ ಕೋಟೂರ್ ತೆಗೆದುಕೊಂಡಿದ್ದರು. ಅದನ್ನು ಚಂದನ್, ಕುರಿ ಪ್ರತಾಪ್ ಹಾಗೂ ರಾಜು ತಾಳಿಕೋಟಿ ಅವರಿಗೂ ಕೊಟ್ಟಿದ್ದಾಗಿ ಹೇಳಿದ್ದರು. ಮಧ್ಯರಾತ್ರಿ ಕಳ್ಳರ ತೆಗೆಯುವುದು, ತಿನ್ನುವುದು ಮಾಡಬಾರದು ಎಂದರು.

ಈ ಮನೆಯಲ್ಲಿ ನನಗಿರೋದಿಕ್ಕೆ ಇಷ್ಟ ಇಲ್ಲ. ಕಳುಹಿಸಿ ಬಿಡಿ ಎಂದು ಚೈತ್ರಾ ಕಣ್ಣೀರಿಟ್ಟರು. ಚೈತ್ರಾ ಕೋಟೂರ್ ಅವರಿಗೆ ಇಷ್ಟೆಲ್ಲಾ ಕೊಬ್ಬಿರಬಾರದು, ಅಹಂಕಾರ ಸಲ್ಲದು ಎಂಬ ಮಾತುಗಳಿಂದ ಅವರು ಇನ್ನಷ್ಟು ಕುಸಿದರು. ಚೈತ್ರಾ ಕೋಟೂರ್ ಅವರಿಗೆ ಡೀಸೆನ್ಸಿ ಇಲ್ಲ ಎಂದು ಹೇಳಿದ, ಚಂದನ್ ಡಬಲ್ ಗೇಮ್ ಆಡ್ತಿದ್ದಾನೆ ಎಂದು ಮನೆಯವರು ಚರ್ಚಿಸಿಕೊಂಡರು.

ನನ್ನನ್ನು ಟ್ರಿಗರ್ ಮಾಡ್ಬೇಡ, ಏನಾದ್ರೂ ಎತ್ತಿ ಹಾಕಿ ಬಿಡ್ತೀನಿ ಎಂದು ಚಂದನ್ ಮೇಲೆ ಕಿರುಚಾಡಿದರು. ಒಟ್ಟಾರೆ ಒಂದೇ ಒಂದು ಆ್ಯಪಲ್‍ ಈ ಜಗಳ ನಡೆಯಿತಾ ಅಥವಾ ಚೈತ್ರಾ ಕೋಟೂರ್ ಅವರನ್ನು ಸುಜಾತಾ, ಚಂದನ್ ಆಚಾರ್ ಹಾಗೂ ಜೈ ಜಗದೀಶ್ ಸೇರಿ ಟಾರ್ಗೆಟ್ ಮಾಡಿದ್ರಾ ಎಂಬ ಅನುಮಾನವೂ ವೀಕ್ಷಕರನ್ನು ಕಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ