ಆ್ಯಪ್ನಗರ

Episode 19 highlights: ಬಿಗ್ ಬಾಸ್ ಮನೆಯ ಮೂರನೇ ಅಧಿಪತಿಯಾಗಿ ಪ್ರಿಯಾಂಕಾ ಆಯ್ಕೆ

ಬಿಗ್ ಬಾಸ್ ಮನೆಯ ಹೊಸ ಟಾಸ್ಕ್ 'ಅಧಿಪತಿ'ಯಾಗಿ ಪ್ರಿಯಾಂಕಾ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಜೈ ಜಗದೀಶ್ ಹಾಗೂ ವಾಸುಕಿ ವೈಭವ್ ಸಿಂಹಾಸನ ಅಲಂಕರಿಸಿದ್ದಾರೆ. ಇದೇ ಮೊದಲ ಸಲ ಮಹಿಳೆ ಗೆದ್ದಿದ್ದು ಪುರುಷರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.

Vijaya Karnataka Web 1 Nov 2019, 1:54 pm
ಬಿಗ್ ಬಾಸ್ ಮನೆಯ ಮೂರನೆ ಅಧಿಪತಿಯಾಗಿ ಪ್ರಿಯಾಂಕಾ ಆಯ್ಕೆಯಾಗಿದ್ದು ಮನೆಯ ಸದಸ್ಯರ ಮೇಲೆ ಸೇಡಿ ತೀರಿಸಿಕೊಳ್ಳಲು ಹೊರಟಿದ್ದಾರೆ. ಮುಖ್ಯವಾಗಿ ಪುರುಷರ ಮೇಲೆ ತಮ್ಮ ಅಧಿಕಾರ ಚಲಾಯಿಸಲು ತೀರ್ಮಾನಿಸಿದ್ದಾರೆ.
Vijaya Karnataka Web bbk7-priyanka


ಇದಕ್ಕೂ ಮುನ್ನ ಬಿಗ್ ಬಾಸ್ ಒಂದು ಪತ್ರ ಕಳುಹಿಸಿದ್ದು ಅದರಲ್ಲಿ ಮೈಕ್‌ ಆಫ್ ಮಾಡಿಕೊಂಡಿದ್ದ ಜೈ ಜಗದೀಶ್ ಹಾಗೂ ಶೈನ್ ಶೆಟ್ಟಿ ಅವರಿಗೆ ವಾಸುಕಿ ವೈಭವ್ ಶಿಕ್ಷೆ ಘೋಷಿಸಿದರು. "ರಾಜ್ಯ ದ್ರೋಹ ಮಾಡಿದ್ದೇನೆ. ನನ್ನಿಂದ ತಪ್ಪಾಗಿ ಎಂದು ಹೇಳಿ ಎಲ್ಲರ ಬಳಿ ಕೆನ್ನೆಗೆ ಹೊಡೆದುಕೊಳ್ಳಬೇಕೆಂದು" ಆಜ್ಞೆ ಮಾಡಿದರು.

ಇದಕ್ಕೆ ಜೈ ಜಗದೀಶ್ ಸ್ವಲ್ಪ ವಿರೋಧ ವ್ಯಕ್ತಪಡಿಸಿದರು. ರಾಜ್ಯ ದ್ರೋಹ ಎಂದು ಹೇಳುವುದು ಸರಿಯಲ್ಲ. ಬೇರೆ ಏನಾದರೂ ಪದ ಬಳಸುವಂತೆ ಸಲಹೆ ನೀಡಿದರು. ಇದಕ್ಕೆ ವಾಸುಕಿ ವೈಭವ್, ಇದನ್ನು ಗಂಭೀರವಾಗಿ ಪರಿಗಣಿಸದೆ ತಮಾಷೆಯಾಗಿ ತೆಗೆದುಕೊಳ್ಳಬೇಕೆಂದು ಹೇಳಿದರು.

ಹೊಸ ಅಧಿಪತಿಯಾಗಿ ಆಯ್ಕೆಯಾದ ಪ್ರಿಯಾಂಕಾ ಅವರು ಮನೆಯಲ್ಲಿನ ಮಹಿಳಾ ಸ್ಪರ್ಧಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅದರಂತೆ ಮಂತ್ರಿಯನ್ನಾಗಿ ರಶ್ಮಿ ಹಾಗೂ ಸೇನಾಧಿಪತಿಗಳಾಗಿ ಹರೀಶ್ ರಾಜ್ ಮತ್ತು ಶೈನ್ ಶೆಟ್ಟಿಯನ್ನು ಆಯ್ಕೆ ಮಾಡಿಕೊಂಡರು.

ತಾನು ರಾಣಿಯಾಗಿದ್ದರೂ ರಶ್ಮಿ ಅವರೇ ಹೆಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಹೇಳಿದ ಕಾರಣ ಬೇಸರಿಸಿಕೊಂಡ ರಶ್ಮಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಒಟ್ಟಾರೆ ಮನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಪ್ರಿಯಾಂಕಾ. ಆದಷ್ಟೂ ತಮಾಷೆಯಾಗಿಯೇ ಟಾಸ್ಕ್ ಮುಂದುವರೆಸಬೇಕು ಎಂಬುದು ಅವರ ಇಚ್ಛೆ. ಸ್ಪರ್ಧಿಗಳು ಗಂಭೀರವಾಗಿ ಪರಿಗಣಿಸಿದರೆ ನಾನೂ ಟಾಸ್ಕ್‌ನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ